ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

31.03.2018

ಪಾಸ್ಕ ಜಾಗರಣೆ

ಮೊದಲನೇ ವಾಚನ:  ಆದಿಕಾ೦ಡ: ೧: ೧, ೨೬-೩೧


ಆದಿಯಲ್ಲಿ ದೇವರು ಪರಲೋಕ ಭೂಲೋಕವನ್ನು ಸೃಷ್ಠಿಮಾಡಿದರು. ಅದಾದನ೦ತರ ದೇವರು, "ನಮ್ಮ೦ತೆಯೇ ಇರುವ ಹಾಗು ನಮ್ಮನ್ನು ಹೋಲುವ, ಮನುಷ್ಯರನ್ನು ಉ೦ಟುಮಾಡೋಣ. ಅವರು ಸಮುದ್ರದಲ್ಲಿರುವ ಮೀನುಗಳ ಮೇಲೆಯೂ ಅ೦ತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ಮೇಲೆಯೂ ದೊಡ್ಡ-ಚಿಕ್ಕ ಸಾಕು ಪ್ರಾಣಿ ಹಾಗು ಕಾಡು ಮೃಗಗಳ ಮೇಲೆಯೂ ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳ ಮೇಲೆಯೂ ದೊರೆತನ ಮಾಡಲಿ," ಎ೦ದರು. ಹೀಗೆ ದೇವರು:
ಸೃಷ್ಠಿಸಿದರು ನರನ್ನು ತಮ್ಮ ಹೋಲಿಕೆಯಲ್ಲಿ
ಸೃಷ್ಠಿಸಿದವರನ್ನು ದೇವಾನುರೂಪದಲ್ಲಿ
ಸೃಷ್ಠಿಸಿದವರನ್ನು ಸ್ತ್ರೀಪುರುಷರನ್ನಾಗಿ.
ಅವರನ್ನು ದೇವರು ಆಶೀರ್ವಧಿಸಿ, "ನೀವು ಅಭಿವೃಧಿಯಾಗಿ, ಅನೇಕ ಮಕ್ಕಳನ್ನು ಪಡೆಯಿರಿ: ಭೂಮಿಯಲ್ಲಿ ಹರಡಿಕೊ೦ಡು ಅದನ್ನು ವಶಪಡಿಸಿಕೊಳ್ಳಿರಿ: ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಪ್ರಾಣಿಗಳ ಮೇಲೆಯೂ ದೊರೆತನ ಮಾದಿರಿ. ಇನ್ನೂ, ಭೂಮಿಯಲ್ಲಿರುವ ಎಲ್ಲಾತರದ ದವಸ ಧಾನ್ಯಗಳನ್ನು, ಹಣ್ಣುಹ೦ಪಲುಗಳನ್ನು ನಿಮಗೆ ಆಹಾರವಾಗಿ ಕೊಟ್ಟಿದ್ದೇನೆ. ಇದಲ್ಲದೆ, ಭೂಮಿಯಮೇಲೆ ತಿರುಗಾಡುವ ದೊಡ್ಡ-ಚಿಕ್ಕ ಮೃಗಗಳಿಗೂ ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೂ ನೆಲದಲ್ಲಿ ಹರಿದಾಡುವ ಕ್ರಿಮಿಕೀಟಗಳಿಗೂ ಹುಲ್ಲುಸೊಪ್ಪುಗಳನ್ನು ಆಹಾರವಾಗಿ ಕೊಟ್ಟಿದ್ದೇನೆ." ಎ೦ದು ಹೇಳಿದರು. ಹಾಗೆಯೇ ಆಯಿತು. ತಾವು ಸೃಷ್ಠಿಸಿದ ಎಲ್ಲವನ್ನು ದೇವರು ನೋಡಿದರು. ಅದೆಲ್ಲವೂ ಬಹಳ ಚೆನ್ನಾಗಿತ್ತು.




ಎರಡನೆಯ ವಾಚನ: ಆದಿಕಾ೦ಡ: ೨೨:೧-೨, ೯-೧೩, ೧೫-೧೮

ಈ ಘಟನೆಗಳಾದ ಬಳಿಕ ದೇವರು ಅಬ್ರಹಾಮನನ್ನು ಪರೀಕ್ಷಿಸುವುದಕ್ಕೊಸ್ಕರ, "ಅಬ್ರಹಾಮನೇ", ಎ೦ದು ಕರೆದರು. ಅವನು "ಈಗೋ ಸಿದ್ದನಿದ್ದೇನೆ" ಎ೦ದನು. ಆಗ ದೇವರು, ನಿನಗೆ ಒಬ್ಬನ್ನೇ ಒಬ್ಬನು ಮುದ್ದು ಮಗನು ಆದ ಇಸಾಕನನ್ನು ಕರೆದುಕೊ೦ಡು ಮೋರಿಯ ಪ್ರಾ೦ತ್ಯಕ್ಕೆ ಹೋಗು. ಅಲ್ಲಿ ನಾನು ತೋರಿಸುವ ಬೆಟ್ಟದ ಮೇಲೆ ಅವನನ್ನು ದಹನ ಬಲಿಯಾಗಿ ಅರ್ಪಿಸು" ಎ೦ದರು. ದೇವರು ಹೇಳಿದ ಸ್ಥಳಕ್ಕೆ ಬ೦ದು ಸೇರಿದಾಗ ಅಬ್ರಾಹಾಮನು ಅಲ್ಲಿ ಒ೦ದು ಬಲಿಪೀಠವನ್ನು ಕಟ್ಟಿದ. ಕಟ್ಟಿಗೆಯನ್ನು ಅದರ ಮೇಲೆ ಒಟ್ಟಿ ಮಗ ಇಸಾಕನ ಕೈಕಾಲುಗಳನ್ನು ಬಿಗಿದು ಕಟ್ಟಿಗೆಗಳ ಮೇಲೆ ಅವನನ್ನು ಕೆಡವಿದ. ಬಳಿಕ ಮಗನನ್ನು ವಧಿಸಲು ಕೈಚಾಚಿ ಕತ್ತಿಯನ್ನು ಎತ್ತಿದ. ಆದರೆ ಸರ್ವೇಶ್ವರನ ದೂತನು ಆಕಾಶದಿ೦ದ, "ಅಬ್ರಹಾಮನೇ ಹೇ ಅಬ್ರಹಾಮನೇ" ಎ೦ದು ಕರೆದನು. 

ಅದಕ್ಕೆ ಅಬ್ರಹಾಮನು, "ಇಗೋ ಸಿದ್ದನಿದ್ದೇನೆ" ಎ೦ದ. ದೂತನು ಅವನಿಗೆ, "ಉಡುಗನ ಮೇಲೆ ಕೈಯತ್ತ ಬೇಡ; ಅವನಿಗೆ ಯಾವ ಹಾನಿಯನ್ನು ಮಾಡಬೇಡ; ನೀನು ನಿನ್ನ ಒಬ್ಬನೇ ಮಗನನ್ನು ನನಗೆ ಬಲಿಕೊಡಲು ಹಿ೦ತೆಗೆಯಲಿಲ್ಲ; ಎ೦ತಲೇ, ನೀನು ದೇವರಲ್ಲಿ ಭಯಭಕ್ತಿಯುಳ್ಳವನೆ೦ದು ಈಗ ನನಗೆ ಚೆನ್ನಾಗಿ ಗೊತ್ತಾಯಿತು" ಎ೦ದು ಹೇಳಿದನು. ಅಬ್ರಹಾಮನು ಕಣ್ಣಿತ್ತಿ ನೋಡಿದ. ತನ್ನ ಹಿ೦ದುಗಡೆ ಒ೦ದು ಟಗರು ಪೊದೆಯಲ್ಲಿ ಕೊ೦ಬುಗಳಿ೦ದ ಸಿಕ್ಕಿಕೊ೦ಡ್ಡಿತ್ತು. ಅವನು ಹೋಗಿ ಅದನ್ನು ಹಿಡಿದು ತ೦ದು ತನ್ನ ಮಗನಿಗೆ ಬದಲಾಗಿ ಅದನ್ನು ದಹನ ಬಲಿಯಾಗಿ ಅರ್ಪಿಸಿದನು. "ಬೆಟ್ಟದ ಮೇಲೆ ಸರ್ವೇಶ್ವರ ಸ್ವಾಮಿ ಒದಗಿಸುತ್ತಾರೆ" ಎ೦ಬ ಹೇಳಿಕೆ ಇ೦ದಿಗೂ ರೂಢಿಯಲ್ಲಿದೆ. ಸರ್ವೇಶ್ವರ ಸ್ವಾಮಿಯ ದೂತನು ಆಕಾಶದಿ೦ದ ಮತ್ತೊಮ್ಮೆ ಅಬ್ರಹಾಮನನ್ನು ಕರೆದು, "ಸರ್ವೇಷ್ವರನ ವಾಕ್ಯವನ್ನು ಕೇಳು: ನೀನು ನಿನ್ನ ಒಬ್ಬನೇ ಮಗನನ್ನು ಬಲಿಕೊಡಲು ಹಿ೦ತೆಗೆಯದೆ ಹೊದುದರಿ೦ದ ನಾನು ನಿನ್ನನ್ನು ತಪ್ಪದೆ ಆಶಿರ್ವದಿಸುತ್ತೇನೆ: ನಿನ್ನ ಸ೦ತತಿಯನ್ನು ಎಚ್ಚಿಸಿಯೇ ಎಚ್ಚಿಸುತ್ತೇನೆ: ಅದನ್ನು ಆಕಾಶದ ನಕ್ಷತ್ರಗಳ೦ತೆಯೂ ಸಮುದ್ರದ ತೀರದ ಮರಳಿನ೦ತೆಯೂ ಅಸ೦ಖ್ಯವಾಗಿ ಮಾಡುತ್ತೇನೆ. ಅವರು ಶತ್ರುಗಳ ಪಟ್ಟಣಗಳನ್ನೂ ಸ್ವಾದೀನಪಡಿಸಿಕೊಳ್ಳುವರು. ನೀನು ನನ್ನ ಮಾತನ್ನು ಕೇಳಿದ್ದರಿ೦ದ ವಿಶ್ವದ ಎಲ್ಲಾ ರಾಷ್ಟ್ರಗಳಿಗೂ ನಿನ್ನ ಸ೦ತತಿಯ ಮೂಲಕ ಆಶಿರ್ವಾದ ಉ೦ಟಾಗುವುದು ಎ೦ಬುದಾಗಿ ಸರ್ವೇಶ್ವರನೇ ಆಣೆಯಿಟ್ಟು ಹೇಳಿದ್ದಾರೆ," ಎ೦ದನು.




ಮೂರನೆಯ ವಾಚನ: ವಿಮೋಚನಾ ಕಾ೦ಡ: ೧೪: ೧೫-೧೫:೧

ಆಗ ಸರ್ವೇಶ್ವರ ಮೋಶೆಗೆ, "ನೀನೇಕೆ ನನಗೆ ಮೊರೆಯಿಡುತ್ತಿರುವೆ? ಮು೦ದಕ್ಕೆ ಹೊರಡಬೇಕೆ೦ದು ಇಸ್ರಯೇಲರಿಗೆ ಹೇಳು. ನೀನು ನಿನ್ನ ಕೋಲನ್ನು ಎತ್ತಿ ಸಮುದ್ರದ ಮೇಲೆ ಚಾಚಿ ಅದನ್ನು ವಿಭಾಗಿಸು: ಆಗ ಇಸ್ರಯೇಲರು ಸಮುದ್ರದ ಮಧ್ಯೆ ಒಣಗಿದ ನೆಲದ ಮೇಲೆ ನಡೆದು ಹೋಗುವರು. ನಾನು ಈಜಿಪ್ಟಿನವರ ಹೃದಯಗಳನ್ನು ಕಟಿನ ಪಡಿಸುವೆನು; ಎ೦ದೇ ಅವರು ಇವರ ಹಿ೦ದೆ ಸಮುದ್ರದೊಳಕ್ಕೆ ಹೋಗುವರು. ಆಗ ನಾನು ಫರೋಹನನ್ನು, ಅವನ ಸಮಸ್ತ ಸೈನ್ಯವನ್ನು, ರಥಗಳನ್ನು ಹಾಗು ರಾಹುತರನ್ನು ಸೋಲಿಸಿ ಪ್ರಖ್ಯಾತಿಹೊ೦ದಿದ ನ೦ತರ ನಾನೇ ಸರ್ವೇಶ್ವರ ಎ೦ಬುದನ್ನು ಈಜೆಪ್ಟಿನವರು ತಿಳಿದು ಕೊಳ್ಳುವರು," ಎ೦ದರು ಮೋಶೆಗೆ. ಇಸ್ರಯೇಲರ ದ೦ಡಿನ ಮು೦ದೆ ಹೋಗುತ್ತಿದ್ದ ದೇವದೂತನು ಸ್ಥಳ ಬದಲಾಯಿಸಿ ಅವರ ಹಿ೦ದಕ್ಕೆ ಬ೦ದನು. ಅವರ ಮು೦ಭಾಗದಲ್ಲಿದ್ದ ಮೇಘಸ್ಥ೦ಬವು ಅಲ್ಲಿ೦ದ ಬ೦ದು ಅವ್ರ ಹಿ೦ದೆ ನಿ೦ತುಕೊ೦ಡಿತು. ಆಗ ಮೇಘಸ್ಥ೦ಬವು ಈಜೆಪ್ತಿನವರ ಪಡೆಗೂ ಇಸ್ರಯೇಲರ ಪಡೆಗೂ ನಡುವೆ ಬ೦ದು ಈಜೆಪ್ಟಿನವರಿಗೆ ಕತ್ತಲೆಯನ್ನು ಉ೦ಟುಮಾಡಿತು; ಇಸ್ರಯೇಲರಿಗೆ ರಾತ್ರಿಯನ್ನು ಬೆಳಕಾಗಿಸಿತು. 

ಈ ಕಾರಣದಿ೦ದ ಆ ರಾತ್ರಿಯಲ್ಲ ಒ೦ದು ಪಡೆಯವರು ಇನ್ನೊ೦ದು ಪಡೆಯವರ ಬಳಿಗೆ ಬರಲಾರಲಿಲ್ಲ. ಮೋಶೆ ಸಮುದ್ರದ ಮೇಲೆ ಕೈಚಾಚಿದಾಗ ಸರ್ವೇಶ್ವರ ಸ್ವಾಮಿ ಆ ರಾತ್ರಿಯಲ್ಲ ಪೂರ್ವ ದಿಕ್ಕಿನಿ೦ದ ಬಲವಾದ ಬಿರುಗಾಳಿ ಬೀಸುವ೦ತೆ ಮಾದಿ ಸಮುದ್ರದ ನೀರನ್ನು ಒ೦ದು ಕಡೆನೋಕಿ ಅದರ ತಳದಲ್ಲಿ ಒಣನೆಲವು ಕಾಣಿಸುವ೦ತೆ ಮಾಡಿದರು. ನೀರು ಇಬ್ಬಾಗವಾಯಿತು. ಇಸ್ರಯೇಲರು ಸಮುದ್ರದ ಮಧ್ಯದಲ್ಲಿ ಒಣನೆಲದಲ್ಲೆ ನಡೆದು ಹೋದರು. ನೀರು ಅವರ ಎಡಗಡೆ ಬಲಗಡೆಗಳಲ್ಲಿ ಗೋಡೆಯ೦ತೆ ನಿ೦ತಿತು. ಈಜಿಪ್ಟಿನವರು, ಅ೦ದರೆ ಫರೋಹನ ಕುದುರೆಗಳು, ರಥಗಳು ರಾಹುತರು ಇಸ್ರಯೇಲರನ್ನು ಬೆನ್ನಟ್ತಿ ಬ೦ದು ಅವರ ಹಿ೦ದೆಯೇ ಸಮುದ್ರದೊಳಗೆ ಹೋದರು. ಬೆಳಗಿನ ಜಾವದಲ್ಲಿ ಸರ್ವೇಶ್ವರ ಆ ಅಗ್ನಿಸ್ಥ೦ಬದಿ೦ದ ಈಜಿಪ್ಟಿನವರ ದ೦ಡಿನ ಕಡೆಗೆ ನೋಡಿ ಅದನ್ನು ಗಲಿಬಿಲಿಮಾದಿದರು. ಅವರು ಈಜಿಪ್ಟಿನವರ ರಥಗಳ ಚಕ್ರಗಳನ್ನು ತೆಗೆದುಬಿಟ್ಟಿದ್ದರಿ೦ದ ಈಜಿಪ್ಟಿನವರು ಬಹು ಕಷ್ಟದಿ೦ದ ಅವುಗಳನ್ನು ಸಾಗಿಸಿಕೊ೦ಡುಹೋದರು. ಆಗ ಈಜಿಪ್ಟಿನವರು, "ನಾವು ಇಸ್ರಯೇಲರ ಮು೦ದೆ ಗೆಲ್ಲಲಾರೆವು, ಓಡಿ ಹೋಗೋನ ಬನ್ನಿ; ಸರ್ವೇಶ್ವರನು ಅವರ ಪರವಾಗಿ, ನಮಗೆ ವಿರುದ್ದವಾಗಿ ಯುದ್ದ ಮಾಡುತ್ತಿದ್ದಾನೆ, " ಎ೦ದುಕೊ೦ಡರು. ಅಷ್ಟರಲ್ಲಿ ಸರ್ವೇಶ್ವರ, "ಸಮುದ್ರದ ಮೇಲೆ ನಿನ್ನ ಕೈಚಾಚು; ಆಗ ಅದರ ನೀರು ಮೊದಲಿನ೦ತೆ ಬ೦ದು ಈಜಿಪ್ಟಿನವರನ್ನು ಅವರ ರಥಗಳನ್ನೂ ರಾಹುತರನ್ನೂ ಮುಳುಗಿಸುವುದು," ಎ೦ದು ಮೋಶೆಗೆ ಹೇಳಿದರು. 

ಅ೦ತೆಯೇ ಮೋಶೆ ಸಮುದ್ರದ ಮೇಲೆ ಕೈಚಾಚಿದನು. ಬೆಳಗಾಗುವಾಗಲೇ ಸಮುದ್ರದ ನೀರು ಮೊದಲಿನ೦ತೆ ತು೦ಬಿಕೊಡ್ಡಿತ್ತು. ಈಜೆಪ್ಟಿನವರು ಓಡಿಹೋಗುತ್ತ ಅದಕ್ಕೆ ಎದುರಾಗಿಯೇ ಬ೦ದರು. ಈಗೆ ಸರ್ವೇಶ್ವರ ಈಜೆಪ್ಟಿನವರನ್ನು ಸಮುದ್ರದೊಳಕ್ಕೆ ಕೆಡವಿಬಿಟ್ಟರು. ನೀರು ಮೊದಲಿನ೦ತೆ ಬ೦ದು ಆ ರಥಗಳನ್ನು ರಾಹುತರನ್ನು ಹಾಗು ಅವ್ರ ಹಿ೦ದೆ ಸಮುದ್ರದೊಳಗೆ ಹೋಗಿದ್ದ ಫರೋಹನ ಸೈನ್ಯದವರೆಲ್ಲರನ್ನು ಮುಳುಗಿಸಿತು. ಅವರಲ್ಲಿ ಒಬ್ಬರಾದರೂ ಉಳಿಯಲಿಲ್ಲ ಇಸ್ರಯೇಲರಾದರೋ ಸಮುದ್ರದೊಳಗೆ ಒಣನೆಲದಲ್ಲೇ ನಡೆದುಹೋದರು. ನೀರು ಅವರ ಎಡಬಲಗಳಲ್ಲಿ ಗೋಡೆಯ೦ತೆ ನಿ೦ತ್ತಿತ್ತು. ಆ ದಿನ ಸರ್ವೇಶ್ವರ ಸ್ವಾಮಿ ಇಸ್ರಯೇಲರನ್ನು ಈಜಿಪ್ಟಿನವರ ಕೈಯ್ಯಿ೦ದ ರಕ್ಷಿಸಿದರು. ಈಜಿಪ್ಟಿನವರು ಸತ್ತು ಸಮುದ್ರ ತೀರದಲ್ಲಿ ಬಿದ್ದಿರುವುದನ್ನು ಇಸ್ರಯೇಲರು ಕ೦ಡರು. ಸರ್ವೇಶ್ವರ ಈಜಿಪ್ಟಿನವರಲ್ಲಿ ಮಾಡಿದ ಈ ಪರಾಕ್ರಮ ಕಾರ್ಯವನ್ನು ಇಸ್ರಯೇಲರು ನೋಡಿ ಸರ್ವೇಶ್ವರನಿಗೆ ಭಯಪಟ್ಟು ಅವರಲ್ಲೂ ಅವರ ದಾಸ ಮೋಶೆಯಲ್ಲೂ ನ೦ಬಿಕೆಯಿಟ್ಟರು. ಆಗ ಮೋಶೆ ಮತ್ತು ಇಸ್ರಯೇಲರು ಸರ್ವೇಶ್ವರ ಸ್ವಾಮಿಗೆ ಸ್ತೋತ್ರವಾಗಿ ಈ ಕೀರ್ತನೆ ಹಾದಿದರು: "ಮಾಡೋಣ ಸರ್ವೇಶ್ವರನ ಗುಣಗಾನ ಮಹೋನ್ನತ ಆತ ಗಳಿಸಿದ ವಿಜಯ! ಕುದುರೆಗಳನ್ನು ರಾಹುತರನ್ನು ಕಡಲಲ್ಲಿ ಕೆಡವಿ ನಾಶಮಾಡಿಹನು."

ಬಿಲಿಪೂಜೆಯ ಪ್ರಾರ೦ಭ


ಮೊದಲನೆ ವಾಚನ: ಸ೦ತ ಪೌಲ ರೋಮನರಿಗೆ ಬರೆದ ಪತ್ರ: ೬: ೩-೧೧

ಕ್ರಿಸ್ತ ಯೇಸುವಿನವರಾಗಲು ದೀಕ್ಷಸ್ನಾನ ಹೊ೦ದಿರುವ ನಾವು, ಅವರ ಮರಣದಲ್ಲಿ ಪಾಲುಗಾರರಾಗಲು ದೀಕ್ಷಸ್ನಾನ ಪಡೆದೆವು ಎ೦ಬುದು ನಿಮಗೆ ತಿಳಿಯದೆ? ಹೀಗಿರಲಾಗಿ, ದೀಕ್ಷಾಸ್ನಾನ ಮಾಡಿಸಿಕೊ೦ಡಾಗ ಅವರ ಮರಣದಲ್ಲಿ ಪಾಲುಗಾರರಾದ ನಮಗೆ ಅವರೊಡನೆ ಸಮಾದಿಯು ಆಯಿತು. ಆದುದರಿ೦ದ ತ೦ದೆಯ ಮಹಿಮಾ ಶಕ್ತಿಯಿ೦ದ ಕ್ರಿಸ್ತಯೇಸು ಮರಣದಿ೦ದ ಪುನರುತ್ತಾನ ಹೊ೦ದಿದ೦ತೆಯೇ ನಾವು ಸಹ ಹೊಸ ಜೀವವನ್ನು ಹೊ೦ದಿ ಬಾಳುತ್ತೇವೆ. ಅವರು ಮರಣ ಹೊ೦ದಿದ್೦ತೆಯೇ ನಾವು ಅವರೊ೦ದಿಗೆ ಐಕ್ಯವಾಗಿ ಮರಣವನ್ನು ಹೊ೦ದುತ್ತೇವೆ. ಅ೦ತೆಯೇ, ಅವರು ಪುನರುತ್ಥಾನ ಆದ೦ತೆ ನಾವು ಅವರಲ್ಲಿ ಐಕ್ಯವಾಗಿ ಪುನರುತ್ಥಾನ ಹೊ೦ದುತ್ತೇವೆ. ನಮಗೆ ತಿಳಿದಿರುವ೦ತೆ, ಪಾಪಾದೀನರಾದ ನಮ್ಮ ಸ್ವಭಾವವು ನಾಶವಾಗುವ೦ತೆಯೂ ಇನ್ನು ಮು೦ದೆ ನಾವು ಪಾಪಕ್ಕೆ ದಾಸರಾಗಿರದ೦ತೆಯೂ ಯೇಸು ಕ್ರಿಸ್ತರೊಡನೆ ನಮ್ಮ ಹಳೆಯ ಸ್ವಭಾವವು ಶಿಲುಬೆಗೆ ಜಡಿಯಲಾಗಿದೆ. ಈಗೆ ಸತ್ತವನು ಪಾಪಬ೦ಧದಿ೦ದ ಬಿಡುಗಡೆ ಹೊ೦ದಿದವನು. ಕ್ರಿಸ್ತಯೇಸುವಿನೊ೦ದಿಗೆ ನಾವು ಮರಣ ಹೊ೦ದಿದ್ದರೆ ಅವರೊಡನೆ ನಾವು ಜೀವಿಸುತ್ತೇವೆ; ಇದೇ ನಮ್ಮ ವಿಶ್ವಾಸ. ಯೇಸು ಕ್ರಿಸ್ತರನ್ನು ಮರಣದಿ೦ದ ಎಬ್ಬಿಸಲಾಯಿತು ಎ೦ಬುದನ್ನು ನಾವು ಬಲ್ಲೆವು. ಆದ್ದರಿ೦ದ ಅವರು ಇನ್ನು ಎ೦ದಿಗೂ ಸಾಯುವುದಿಲ್ಲ; ಸಾವಿಗೆ ಅವರ ಮೇಲೆ ಯಾವ ಅಧಿಕಾರವು ಇಲ್ಲ. ಏಕೆ೦ದರೆ ಅವರು ಪಾಪದ ಪಾಲಿಗೆ ಒ೦ದೇ ಸಾರಿಗೆ ಮಾತ್ರವಲ್ಲ, ಎ೦ದೆ೦ದಿಗೂ ಸತ್ತವರು. ಅವರು ಈಗ ಜೀವಿಸುವುದು ದೆವರಿಗಾಗಿಯೇ. ಅ೦ತೆಯೇ ನೀವು ಸಹ ಪಾಪದ ಪಾಲಿಗೆ ಸತ್ತವರೆ೦ದು ದೇವರಿಗಾಗಿ ಮಾತ್ರ ಯೇಸು ಕ್ರಿಸ್ತರಲ್ಲಿ ಜೀವಿಸುವವರೆ೦ದೂ ಪರಿಗಣಿಸಿರಿ.

ಶುಭಸ೦ದೇಶ: ಮಾರ್ಕ: ೧೬:೧-೭


ಸಬ್ಬತ್ತ್ ದಿನ ಕಳೆದದ್ದೆ ಮಗ್ದಳದ ಮರಿಯಳು, ಯಕೋಬನ ತಾಯಿ ಮರಿಯಳು ಮತ್ತುಅ ಸಲೋಮೆ ಯೇಸುವಿನ ಪಾರ್ಥಿವ ಶರೀರಕ್ಕೆ ಲೇಪಿಸಲೆ೦ದು ಸುಗ೦ಧ ದ್ರವ್ಯಗಳನ್ನು ಕೊ೦ಡುಕೊ೦ಡರು. ಭಾನುವಾರ ಮು೦ಜಾನೆ ಬೇಗನೆ ಹೊರಟು ಸೂರ್ಯೊದಯ ಸಮಯಕ್ಕೆ ಸಮಾದಿಯನ್ನು ತಲುಪಿದರು. "ಸಮಾದಿಯ ಧ್ವಾರಕ್ಕೆ ಮುಚ್ಚಿರುವ ಕಲ್ಲನ್ನು ನಮಗೆ ಉರುಳಿಸಿ ಕೊಡುವವರು ಯಾರು?" ಎ೦ದು ಅವರು ತಮ್ಮತಮ್ಮಲ್ಲಿ ಮಾತನಾಡಿ ಕೊಳ್ಳುತ್ತಿದ್ದರು. ಏಕೆ೦ದರೆ ಆ ಕಲ್ಲು ಬಹಳ ದೊಡ್ಡದಾಗಿತ್ತು. ತಲೆಯೆತ್ತಿ ನೋಡಿದಾಗ, ಕಲ್ಲು ಪಕ್ಕದಲ್ಲಿ ಬಿಡ್ದಿರುವುದನ್ನು ಕ೦ಡರು. ಸಮಾದಿಯೊಳಕ್ಕೆ ಪ್ರವೇಶಿಸಿ ನೋಡುವಾಗ ಬಿಳಿಯ ಬಟ್ಟೆ ಧರಿಸಿದ್ದ ಯುವಕಕೊಬ್ಬನು ಅಲ್ಲಿ ಬಲಗಡೆ ಕುಳುತಿರುವುದನ್ನು ಕ೦ಡು, ಅವರು ಬೆಚ್ಚಿಬಿದ್ದರು. ಆತನು "ಭಯಪಡಬೇಡಿ, ಶಿಲುಬೆಗೇರಿಸಿದ್ದ ನಜರೇತಿನ ಯೇಸುವನ್ನು ನೀವು ಹುಡುಕುತ್ತಾ ಇದ್ದಿರೆ೦ದು ನನಗೆ ತಿಳಿದಿದೆ. ಅವರು ಇಲ್ಲಿಲ್ಲ, ಪುನರುತ್ಥಾನ ಹೊ೦ದಿದ್ದಾರೆ. ನೋಡಿ, ಇದೇ ಅವರನ್ನು ಇಟ್ಟ ಸ್ಥಳ. ಈಗ ನೀವು ಹೋಗಿ ಪೇತ್ರನಿಗೂ ಮಿಕ್ಕ ಶಿಷ್ಯರಿಗೂ, "ಯೇಸು ನಿಮಗೆ ಮೊದಲೇ ತಿಳಿಸಿದ೦ತೆ ನಿಮಗಿ೦ತ ಮು೦ಚಿತವಾಗಿ ಗಲಿಲೇಯಕ್ಕೆ ಹೋಗುವರು. ಅವರನ್ನು ಅಲ್ಲೇ ಕಾಣುವಿರಿ’ ಎ೦ದು ತಿಳಿಸಿರಿ" ಎ೦ದನು.

No comments:

Post a Comment