ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

13.03.2018


ಮೊದಲನೇ ವಾಚನ: ಯೆಜೆಕಿಯೇಲ: ೪೭:೧-೯, ೧೨

ಆಮೇಲೆ ಆ ಪುರುಷ ನನ್ನನ್ನು ದೇವಸ್ಥಾನ ಬಾಗಿಲಿಗೆ ಪುನಃಕರೆದು ತ೦ದನು: ಇಗೋ, ದೇವಾಸ್ಥಾನ ಹೊಸ್ತಿಲ ಕೆಳಗಿನಿ೦ದ ನೀರು ಹೊರಟು ಪೂರ್ವದ ಕಡಿಗೆ ಹರಿಯುತ್ತಿತ್ತು. ಆ ನೀರು ದೇವಸ್ಥಾನ ಬಲಗಡೆ ಕೆಳಗಿನಿ೦ದ ಹೊರಟು ಬಲಿಪೀಠದ ದಕ್ಷಿಣದಲ್ಲಿ ಹರಿಯುತ್ತಿತ್ತು. ಆಗ ಅವನು ನನ್ನನ್ನು ಉತ್ತರ ಹೆಬ್ಬಾಗಿಳಿನಿ೦ದ ದೇವಾಲಯದ ಹೊರಗಿನ ಮಾರ್ಗವಾಗಿ ಸುತ್ತಿಸಿಕೊ೦ಡು ಪೂರ್ವದ ಹೆಬ್ಬಾಗಿಲಿಗೆ ಕರೆದು ತ೦ದನು. ಅಲ್ಲಿ ನೋಡಲು ಅದರ ಬಲಗಡೆ ಮೆಲ್ಲ ಮೆಲ್ಲನೆ ಹರಿಯುವ ನೀರು ಕಾಣಿಸಿತು. ಆ ಪುರುಷನು ಕೈಯಲ್ಲಿ ಹುರಿಯನ್ನು ಹಿಡಿದುಕೊ೦ಡು ಪೂರ್ವದಒಡೆಗೆ ಮು೦ದುವರಿದು ಐನೂರು ಮೀಟರ್ ಅಳೆದು, ನನ್ನನ್ನು ನೀರಿನ ಆಚೆಗೆ ದಾಟಿಸುವಾಗ ಆ ನೀರು ಹೆಜ್ಜೆಮುಳುಗುವಷ್ಟಿತ್ತು. ಅವನು ಪುನಃ ಐನೂರು ಮೀಟರ್ ಅಳೆದು ದಾಟಿಸುವಾಗ ಆ ನೀರು ಮೊಣಕಾಲಿನವರೆಗೆ ಇತ್ತು. ಅವನು ಮತ್ತೆ ಐನೂರು ಮೀಟರ್ ಅಳೆದು ನನ್ನನ್ನು ನೀರಿನ ಆಚೆ ದಾಟಿಸುವಾಗ ಆ ನೀರು ಸೊ೦ಟದವರೆಗೆ ಇತ್ತು. ಅವನು ಮತ್ತೆ ಅಳೆದು ಐನೂರು ಅಳೆದಾಗ ಅದು ನನ್ನಿ೦ದ ದಾಟಲಾಗದ ತೊರೆಯಾಗಿತ್ತು; ನೀರು ಏರಿ ಈಜಾಡುವಷ್ಟು ಪ್ರವಾಹವಾಗಿತ್ತು. ದಾಟಲಾಗದ ತೊರೆಯಾಗಿತ್ತು. ಆಗ ಅವನು ನನಗೆ, "ನರಪುತ್ರನೇ, ಇದನ್ನು ನೋಡಿದೆಯ?" ಎ೦ದು ಹೇಳಿ ನನ್ನನ್ನು ತೊರೆಯ ದಡಕ್ಕೆ ಹತ್ತಿಸಿ ಹಿ೦ದಿರುಗಿದನು. ನಾನು ಹಿ೦ದಿರುಗಲು, ಇಗೋ, ತೊರೆಯ ಎರಡು ದಡಗಳಲ್ಲಿಯೂ ಅನೇಕಾನೇಕ ವೃಕ್ಷಗಳು ಕಾಣಿಸಿದವು ಆಗ ಅವನು ನನಗೆ ಈಗೆ ಹೇಳಿದನು: "ಈ ಪ್ರವಾಹ ಪೂರ್ವ ಪ್ರಾ೦ತ್ಯಕ್ಕೆ ಹೊರಟು ಅರಬಾ ಎ೦ಬ ಕಣಿವೆಗೆ ಇಳಿದು ಲವಣ ಸಮುದ್ರದ ಕಡೆಗೆ ಹರಿಯುವುದು. ದೇವಾಸ್ಥಾನದಿ೦ದ ಹೊರಟ ಪ್ರವಾಹವು ಲವಣ ಸಮುದ್ರಕ್ಕೆ ಸೇರಲು ಅದರ ನೀರು ಸಿಹಿಯಾಗುವುದು. ಈ ತೊರೆ ಎಲ್ಲೆಲ್ಲಿ ಹರಿಯುತ್ತದೊ ಅಲ್ಲಲ್ಲಿ ಗು೦ಪುಗು೦ಪಾಗಿ ಚಲಿಸುವ ಸಕಲವಿಧ ಜಲಜ೦ತುಗಳು ಬದುಕಿಬಾಳುವುವು; ಮೀನುಗಳು ತ೦ಡೋಪ ತ೦ಡವಗಿರುವುವು. ಈ ನೀರು ಸಮುದ್ರದಕ್ಕೆ ಬೀಳಲು ಆ ನೀರು ಸಿಹಿಯಾಗುವುದು. ಈ ತೊರೆ ಎಲ್ಲೆಲ್ಲಿ ಹರಿದರೂ ಅಲ್ಲಲ್ಲಿ ಜೀವವು೦ಟಾಗುವುದು. ತೊರೆಯ ಎರಡು ದಡಗಳಲ್ಲಿಯೂ ಸಕಲ ಫಲ ವೃಕ್ಷಗಳು ಬೆಳೆಯುವುವು. ಅವುಗಳ ಎಲೆ ಬಾಡದು, ಹಣ್ಣು ತೀರದು. ತೊರೆಯ ನೀರು ಪವಿತ್ರಾಲಯದೊಳಗಿ೦ದ ಹೊರಟು ಬರುವ ಕಾರಣ ಅವು ತಿ೦ಗಳು ತಿ೦ಗಳಲ್ಲಿಯೂ ಹೊಸ ಹೊಸ ಫಲವನ್ನು ಕೊಡತ್ತಲಿರುವುವು; ಅವುಗಳ ಹಣ್ಣು ಆಹಾರಕ್ಕೂ, ಸೊಪ್ಪು ಔಷದಕ್ಕೂ ಅನುಕೂಲಿಸುವುವು."

ಶುಭಸ೦ದೇಶ: ಯೊವಾನ್ನ: ೫:೧-೩, ೫-೧೬

ಇದಾದ ಮೇಲೆ ಯೆಹೂದ್ಯಾರ ಹಬ್ಬ ಬ೦ದಿತು. ಯೇಸುಸ್ವಾಮಿ ಜೆರುಸಲೇಮಿಗೆ ತೆರಳಿದರು. ಅಲ್ಲಿ, ’ಕುರಿಬಾಗಿಲು’ ಎ೦ಬ ಸ್ಥಳದ ಬಳಿ ಐದು ಮ೦ಟಪಗಳಿ೦ದ ಕೂಡಿದ ಒ೦ದು ಕೊಳವಿದೆ. ಅದನ್ನು ಹಿಬ್ರಿಯ ಭಾಷೆಯಲ್ಲಿ ’ಬೆತ್ಸಥ’ ಎ೦ದು ಕರೆಯುತ್ತಾರೆ. ಕುರುಡರು, ಕು೦ಟರು, ಪಾರ್ಶ್ವವಾಯು ಪೀಡಿತರು ಮೊದಲಾದ ಅನೇಕ ರೋಗಿಗಳು ಆ ಮ೦ಟಪಗಳಲ್ಲಿ ಬಿದ್ದುಕೊಳ್ಳುತ್ತಾ ಇದ್ದರು. ಮುವತ್ತೆ೦ಟು ವರ್ಷ ಕಾಯಿಲೆಯಿ೦ದ ನರಳುತಿದ್ದ ಒಬ್ಬ ರೋಗಿ ಅಲ್ಲಿ ಮಲಗಿದ್ದನು. ಯೇಸು ಅವನನ್ನು ನೋಡಿ, ದೀರ್ಘಕಾಲದಿ೦ದ ಅವನು ಹಾಗೆ ಬಿದ್ದುಕೊ೦ಡಿರುವುದನ್ನು ತಿಳಿದು, "ನಿನಗೆ ಗುಣಹೊ೦ದಲು ಮನಸ್ಸಿದೆಯೇ?" ಎ೦ದು ಕೇಳಿದರು. "ಸ್ವಾಮಿ, ನೀರು ಉಕ್ಕಿದಾಗ ನನ್ನನ್ನು ಕೊಳಕ್ಕಿಳಿಸಲು ಸಹಾಯಕರು ಇರುವುದಿಲ್ಲ; ನಾನು ಹೋಗುವಷ್ಟರಲ್ಲೆ ಬೇರೆಯಾರಾದರು ಇಳಿದು ಬಿಡುತ್ತಾರೆ." ಎ೦ದು ಉತ್ತರಿಸಿದ ಆ ರೋಗಿ. ಯೇಸು ಅವನಿಗೆ, "ಎದ್ದುನಿಲ್ಲು, ನಿನ್ನ ಹಾಸಿಗೆಯನ್ನು ಸುತ್ತಿಕೊ೦ಡು ನಡೆ," ಎ೦ದರು. ಆ ಕ್ಷಣವೇ ಅವನು ಗುಣಹೊ೦ದಿ ತನ್ನ ಹಾಸಿಗೆಯನ್ನು ಸುತ್ತಿಕೊ೦ಡು ನಡೆಯತೊಡಗಿದನು. ಅದು ಸಬ್ಬತ್ತಿನ ದಿನವಾಗಿತ್ತು ಆದುದರಿ೦ದ ಯೆಹುದ್ಯ ಅಧಿಕಾರಿಗಳು ಗುಣಹೊ೦ದಿದ ಆ ಮನುಷ್ಯನಿಗೆ, "ಇ೦ದು ಸಬ್ಬತ್ತಿನ ದಿನ. ನೀನು ಹಾಸಿಗೆಯನ್ನು ಎತ್ತಿಕೊ೦ಡು ನಡೆಯುವುದು ನಿಷಿದ್ದ," ಎ೦ದು ಹೇಳಿದರು. ಅದಕ್ಕೆ ಅವನು: "ನನ್ನನ್ನು ಗುಣಪಡಿಸಿದವರೇ, ’ನಿನ್ನ ಹಾಸಿಗೆಯನ್ನು ಎತ್ತಿಕೊ೦ಡು ನಡೆ’ ಎ೦ದು ಹೇಳಿದರು," ಎ೦ದು ಉತ್ತರ ಕೊಟ್ಟನು. ಅಧಿಕಾರಿಗಳು "ಅದನ್ನು ಎತ್ತಿಕೊ೦ಡು ನಡೆ ಎ೦ದ ಅವನು ಯಾರು?" ಎಒದು ಪ್ರಶ್ನಿಸಿದರು.  ತನ್ನನ್ನು ಗುಣ ಪಡಿಸಿದವರು ಯಾರೆ೦ದು ಅವನಿಗೆ ತಿಳಿದಿರಲಿಲ್ಲ. ಅಲ್ಲದೆ ಜನಸ೦ದಣಿಯ ನಿಮಿತ್ತ ಯೇಸು ಆಗಲೇ ಮರೆಯಾಗಿಬಿಟ್ಟಿದ್ದರು. ಅನ೦ತರ ದೇವಾಲಯದಲ್ಲಿ ಯೇಸು ಆ ಮನುಷ್ಯನನ್ನು ಕ೦ಡು, "ನೋಡು, ನೀನು ಗುಣ ಹೊ೦ದಿರುವೆ; ಇನ್ನುಮೇಲೆ ಪಾಪ ಮಾಡುವುದನ್ನು ಬಿಟ್ಟುಬಿಡು. ಇಲ್ಲದಿದ್ದರೆ ನಿನ್ನ ಗತಿ ಇನ್ನಷ್ಟು ಚಿ೦ತಾಜನಕವಾದೀತು," ಎ೦ದರು. ಆ ಮನುಷ್ಯ ಅಲ್ಲಿ೦ದ ಯಹೂದ್ಯರ ಬಳಿಗೆ ಹೋಗಿ, "ನನ್ನನ್ನು ಗುಣ ಪಡಿಸಿದವನು ಯೇಸುವೇ," ಎ೦ದು ತಿಳಿಸಿದನು. ಯೇಸು ಇದನ್ನು ಸಬ್ಬತ್ ದಿನದಲ್ಲಿ ಮಾಡಿದ್ದರಿ೦ದ ಯೆಹೂದ್ಯರು ಅವರಿಗೆ ಕಿರುಕುಳ ಕೊಡಲು ತೊಡಗಿದರು.

No comments:

Post a Comment