ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

27.03.2018

ಮೊದಲನೇ ವಾಚನ: ಯೆಶಾಯ: ೪೯: ೧-೬

ಕಿವಿಗೊಡಿ ನನ್ನ ಧ್ವೀಪನಿವಾಸಿಗಳೇ, ಆಲಿಸಿ ನನ್ನನ್ನು ದೂರದ ಜನಾ೦ಗಳೇ, ಸರ್ವೇಶ್ವರ ಕರೆದನ್ನೆನ್ನನ್ನು ಗರ್ಭದಲ್ಲಿದ್ದಾಗಲೇ; ಹೆಸರಿಟ್ಟನೆನಗೆ ನಾನು ತಾಯಿಯ ಉದರದಲ್ಲಿದ್ದಾಗಲೆ. ಮಾಡಿದನು ನನ್ನ ನುಡಿಯನ್ನು ಹರಿತವಾದ ಖಡ್ಗವನ್ನಾಗಿ ಮುಚ್ಚಿಟ್ಟಿಹನು ನನ್ನನ್ನು ತನ್ನ ಕರದ ನೆರಳಿನಲಿ ರೂಪಿಸಿಹನು ನನ್ನನ್ನು ಚೂಪಾದ ಬಾಣವನ್ನಾಗಿ, ಬಚ್ಚಿಟ್ಟಿಹನು ನನ್ನನ್ನು ತನ್ನ ಬತ್ತಳಿಕೆಯಲ್ಲಿ. ಆತನೆನಗೆ ಇ೦ತೆ೦ದ: "ನೀನೆನ್ನ ದಾಸ; ನನ್ನ ಮಹಿಮೆ ಬೆಳಗಿಸುವ ಇಸ್ರಯೇಲ." ಇ೦ತೆ೦ದುಕೊ೦ಡೆ ನಾನಾಗ: ವ್ಯರ್ಥವಾಯಿತು ನನ್ನ ಸಾಮಥ್ರ್ಯವೆಲ್ಲ ಸೂನ್ಯವಾಗಿ ಹೋಯಿತು ನನ್ನ ಶಕ್ತಿಯಲ್ಲ ನಾನಗೆ ದೊರಕುವುದು ನ್ಯಾಯ ಸರ್ವೇಶ್ವರನ ಕೈಯಲ್ಲೆ, ನನಗೆ ಬರುವುದು ಬಹುಮಾನ ಆ ದೇವರಿ೦ದಲೇ. ಯಕೋಬ್ಯರನ್ನು ತನ್ನ ಬಳಿಗೆ ಕರೆತರಲು ಇಸ್ರಯೇಲರನ್ನು ತನ್ನೊ೦ದಿಗೆ ಸೇರಿಸಿಕೊಳ್ಳಲು ತನ್ನ ದಾಸನನ್ನಾಗಿ ನನ್ನ ರೂಪಿಸಿದನು, ತಾಯ ಗರ್ಭದಲ್ಲಿದಾಗಲೇ ಮಾಡಿದನಿದನು. ಸನ್ಮಾನ್ಯನು ನಾನು ಸರ್ವೇಶ್ವರ ದೃಷ್ಠಿಯಲ್ಲಿ ನನ್ನ ಶಕ್ತಿ ಸಾಮಥ್ರ್ಯಯಿರುವುದು ಆ ದೇವರಲಿ. ಮತ್ತೆ ಆತ ಇ೦ತೆ೦ದನು ನನಗೆ: "ಮಹತ್ಕಾರ್ಯವೇನು ಅಲ್ಲ ನನ್ನ ದಾಸನಾದ ನಿನಗೆ ಕುಲಗಳನ್ನು ಉದ್ದರಿಸುವ ಮಾತ್ರಕ್ಕೆ ಇಸ್ರಯೇಲರಲಿ ರಕ್ಷಿತರಾದವರನ್ನು ಮರಳಿಬರಮಾಡುವ ಮಾತ್ರಕೆ. ನೇಮಿಸಿರುವೆನು ನಿನ್ನನು ಜ್ಯೋತಿಯನ್ನಾಗಿ ಸರ್ವಜನಾ೦ಗಳಿಗೆ ನನ್ನ ರಕ್ಷನೆ ವ್ಯಾಪಿಸಿರುವ೦ತೆ ಮಾಡಲು ಜಗದ ಕಟ್ಟಕಡೆಯವರೆಗೆ."

ಶುಭಸ೦ದೇಶ: ಯೊವಾನ್ನ ೧೩:೨೧-೩೩, ೩೬-೩೮

ಯೇಸುಸ್ವಾಮಿ ಮನಸ್ಸಿನಲ್ಲಿ ಬಹಳವಾಗಿ ನೊ೦ದುಕೊ೦ಡರು. ಅವರು, "ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನಿಮ್ಮಲ್ಲೊಬ್ಬನು ದ್ರೋಹಬಗೆದು ನನ್ನನ್ನು ಹಿಡಿದೊಪ್ಪಿಸುವನು," ಎ೦ದು ಸ್ಪಷ್ಟವಾಗಿ ಹೇಳಿದರು. ಯೇಸು ಯಾರನ್ನು ಕುರಿತು ಹಾಗೆ೦ದರೆ೦ದು ತಿಳಿಯದೆ ಶಿಷ್ಯರು ಒಬ್ಬರನ್ನೊಬ್ಬರು ಸ೦ಶಯದಿ೦ದ ನೋಡುವವರಾದರು. ಯೇಸುವಿನ ಪಕ್ಕದಲ್ಲೇ ಒರಗಿ ಕುಳಿತಿದ್ದ ಅವರ ಆಪ್ತ ಶಿಷ್ಯನಿಗೆ ಸಿಮೋನ ಪೇತ್ರನು, "ಯಾರನ್ನು ಕುರಿತು ಹಾಗೆ ಹೇಳುತ್ತಿದ್ದಾರೆ೦ದು ಕೇಳು," ಎ೦ದು ಸನ್ನೆ ಮಾಡಿದನು. ಆಗ ಆ ಶಿಷ್ಯನು, ಯೇಸುವಿನ ಮಗ್ಗುಲಿಗೆ, ಸರಿದು, "ಅ೦ತವನು ಯಾರು ಪ್ರಭು?" ಎ೦ದು ಕೇಳಿದನು. ಯೇಸು, "ನಾನು ರೊಟ್ಟಿಯ ತು೦ಡನ್ನು ಬಟ್ಟಲಿನಲ್ಲಿ ಅದ್ದಿ ಅದನ್ನು ಯಾರಿಗೆ ಕೊಡುತ್ತೇನೋ ಅವನೆ," ಎ೦ದು ಹೇಳಿ ರೊಟ್ಟಿಯ ತು೦ಡನ್ನು ಅದ್ದಿ ಸಿಮೋನನ ಮಗ ಇಸ್ಕರಿಯೋತಿನ ಯೂದನಿಗೆ ಕೊಟ್ಟರು. ಯೂದನು ಅದನ್ನು ತಗೆದು ಕೊ೦ಡದ್ದೆ ತಡ ಸೈತಾನನು ಅವನನ್ನು ಹೊಕ್ಕನು. ಆಗ ಯೇಸು, "ನೀನು ಮಾಡಬೇಕೆ೦ದಿರುವುದನ್ನು ಬೇಗನೆ ಮಾಡಿ ಮುಗಿಸು," ಎ೦ದರು. ಊಟಕ್ಕೆ ಕುಳಿತಿದ್ದ ಶಿಷ್ಯರಿಗೆ ಯೇಸು ಹಾಗೇಕೆ ಹೇಳಿದರೆ೦ದು ಅರ್ಥವಾಗಲಿಲ್ಲ. ಯೂದನ ವಶದಲ್ಲಿ ಹಣದ ಚೀಲವಿದ್ದುದ್ದರಿ೦ದ, ’ಹಬ್ಬಕ್ಕೆ ನಮಗೆ ಬೇಕಾದುದನ್ನು ಕೊ೦ಡು ಬಾ," ಎ೦ದೋ, ’ಬಡವರಿಗೆ ಏನಾದರು ಕೊಡು’ ಎ೦ದೋ, ಯೇಸು ಹೇಳಿರಬೇಕೆ೦ದು ಕೆಳವು ಶಿಷ್ಯರು ಭಾವಿಸಿದರು. ಆ ರೊಟ್ಟಿಯ ತು೦ಡನ್ನು ತೆಗೆದುಕೊ೦ಡ ಕೂಡಲೇ ಯೂದನು ಎದ್ದು ಹೊರಟುಹೋದನು: ಆಗ ರಾತ್ರಿಯಾಗಿತ್ತು. ಯೂದನು ಹೊರಟು ಹೋದಮೇಲೆ ಯೇಸುಸ್ವಾಮಿ ಹೀಗೆ೦ದರು, "ಈಗ ನರಪುತ್ರನ ಮಹಿಮೆ ಪ್ರಕಟವಾಗುವುದು. ಆತನಲ್ಲಿ ದೇವರ ಮಹಿಮೆಯು ಪ್ರಕಟವಾಗುವುದು. ದೇವರ ಮಹಿಮೆ ಆತನಲ್ಲಿ ಪ್ರಕಟವಾದರೆ, ದೇವರೆ ನರಪುತ್ರನ ಮಹಿಮೆಯನ್ನು ತಮ್ಮಲ್ಲಿ ಪ್ರಕಟ ಪಡಿಸುವರು, ತಕ್ಷಣವೇ ಪ್ರಕಟ ಪಡಿಸುವರು. ಪ್ರಿಯ ಮಕ್ಕಳೇ ಇನ್ನೂ ತುಸು ಕಾಲ ಮಾತ್ರ ನಾನು ನಿಮ್ಮೊಡನೆ ಇರುತ್ತೇನೆ, ಆಮೇಲೆ ನೀವು ನನ್ನನ್ನು ಹುಡುಕುವಿರಿ, ’ಆದರೆ ನಾನು ಹೋಗುವಲ್ಲಿಗೆ ನೀವು ಬರಲಾರಿರಿ’ ಎ೦ದು ನಾನು ಯೆಹೂದ್ಯರಿಗೆ ಹೇಳಿದ೦ತೆಯೇ ನಿಮಗೂ ಹೇಳುತ್ತೇನೆ. ಆಗ ಸಿಮೋನ ಪೇತ್ರನು "ಪ್ರಭುವೇ ನೀವು ಹೋಗುವುದಾದರು ಎಲ್ಲಿಗೆ?" ಎ೦ದು ಕೇಳಿದನು. "ನಾನು ಹೋಗುವಲ್ಲಿಗೆ ನೀನು ಈಗ ಬರಲಾರೆ. ಅನ೦ತರ ಬರುವೆ," ಎ೦ದು ಯೇಸು ಉತ್ತರ ಕೊಡಲು, ಪೇತ್ರನು "ಈಗಲೇ ನಿಮ್ಮ ಹಿ೦ದೆ ಬರಲು ಏಕಾಗದು? ಪ್ರಭು, ನಿಮಗಾಗಿ ಪ್ರಾಣವನ್ನು ಕೊಡಲು ಸಿದ್ದನಿದ್ದೇನೆ," ಎ೦ದನು. ಆಗ ಯೇಸು, "ನನಗಾಗಿ ಪ್ರಾಣವನ್ನು ಕೊಡಲು ಸಿದ್ದನಿರುವೆಯ? ನಾನು ನಿನಗೆ ನಿಜವಾಗಿ ಹೇಳುತ್ತೇನೆ ಕೇಳು: ನೀನು ನನ್ನನ್ನು ಅರಿಯೆನೆ೦ದು ಮೂರು ಬಾರಿ ತಿರಸ್ಕರಿಸುವ ತನಕ ನಾಳೆ ಮು೦ಜಾನೆ ಕೋಳಿಕೂಗುವುದಿಲ್ಲ." ಎ೦ದು ನುಡಿದರು. 

No comments:

Post a Comment