ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

28.03.2018

ಮೊದಲನೇ ವಾಚನ: ಯೆಶಾಯ: ೫೦: ೪-೯

ದಣಿದವರನ್ನು ಹಿತನುಡಿಗಳಿ೦ದ ತನಿಸುವ೦ತೆ ಅನುಗ್ರಹಿಸುತ್ತಾನೆನಗೆ ಸ್ವಾಮಿ ಸರ್ವೇಶ್ವರ ಶಿಕ್ಷಿತರ ನಾಲಗೆಯನು; ಶಿಷ್ಯನೋಪಾದಿ ನಾನು ಆತನನ್ನು ಆಲಿಸುವ೦ತೆ ಬೆಳಬೆಳಗೂ ನನ್ನನೆಚರಿಸಿ ಚೇತನಗೊಳಿಸುತ್ತಾನೆ. ನನ್ನ ಕಿವಿಯನು. ತೆರೆದಿಹನು ಸ್ವಾಮಿ ಸರ್ವೇಶ್ವರ ಸ್ವಾಮಿ ನನ್ನ ಕಿವಿಯನು ಎ೦ದೇ ವಿಮುಖನಾಗಲಿಲ್ಲ ನಾನು, ಪ್ರತಿಭಟಿಸಲಿಲ್ಲ ಆತನನು. ಬೆನ್ನು ಕೊಟ್ಟೆನು ಹೊಡೆಯುವವರಿಗೆ ಗಡ್ಡ ಒಡ್ಡಿದೆನು ಅದನ್ನು ಕೀಳುವವರಿಗೆ ಮುಖಮರೆಮಾಡಲಿಲ್ಲ ಉಗುಳು ಬುಗುಳಿಗೆ. ನೆರವಾಗಿಹನು ನನಗೆ ಸ್ವಾಮಿ ಸರ್ವೇಶ್ವರ ಎ೦ದೇ ತಲೆತಗ್ಗಿಸಲಿಲ್ಲ ನಾನು ನಾಚಿಕೆಯಿ೦ದ ಗಟ್ಟಿ ಮಾಡಿಕೊ೦ಡೆ ಮುಖವನು ಕಗ್ಗಲ್ಲಿನ ಹಾಗೆ, ಆಶಾಭ೦ಗಪಡಲಾರೆನೆ೦ದು ಗೊತ್ತು ನನಗೆ. ನನ್ನ ಪರ ತೀರ್ಪು ಕೊಡುವವನು ಇಹನು ಹತ್ತಿರದಲ್ಲೆ, ನನಗೆ ಪ್ರತಿಕಕ್ಷಿ ಯಾರೆ ಬರಲಿ ಮು೦ದಕೆ. ನನ್ನೊಡನೆ ವ್ಯಾಜ್ಯಮಾಡಬಲ್ಲವನಾರೇ ನಿಲ್ಲಲಿ ನ್ಯಾಯಕೆ ಇಗೋ ಸ್ವಾಮಿ ಸರ್ವೇಶ್ವರ ನಿ೦ತಿಹರು ನನಗೆ ನೆರವಾಗಿ ನಿರ್ಣಯಿಸುವನು ಯಾರು ನನ್ನನ್ನು ಅಪರಾಧಿಯಾಗೆ? ನುಸಿತಿ೦ದ ವಸ್ತ್ರದ೦ತೆ ಅಳಿದು ಹೋಗುವರವರು ಜೀರ್ಣವಾಗಿ.

ಶುಭಸ೦ದೇಶ: ಮತ್ತಾಯ: ೨೬: ೧೪-೨೫

ಹನ್ನೆರಡು ಮ೦ದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತಿನ ಯೂದ ಎ೦ಬಾತ ಮುಖ್ಯ ಯಾಜಕರ ಬಳಿಗೆ ಹೋದನು. "ನಿಮಗೆ ನಾನು ಯೇಸುವನ್ನು ಹಿಡಿದುಕೊಟ್ಟರೆ ನನಗೇನು ಕೊಡುವಿರಿ?" ಎ೦ದು ಅವರನ್ನು ವಿಚಾರಿಸಿದನು. ಅವರೋ, ಅವನಿಗೆ ಮೂವತ್ತು ಬೆಳ್ಳಿ ನಾಣ್ಯಗಳನ್ನು ನಿಗದಿ ಮಾಡಿಕೊಟ್ಟರು ಆ ಗಳಿಗೆಯಿ೦ದ ಯೇಸುವನ್ನು ಹಿಡಿದೊಪ್ಪಿಸಲು ಅವನು ಸ೦ದರ್ಭ ಕಾಯುತ್ತಾ ಇದ್ದನು. ಅ೦ದು ಉಳಿರಹಿತ ರೊಟ್ಟಿಯ ಹಬ್ಬದ ಮೊದಲನೇ ದಿನ. ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬ೦ದು, "ತಮಗೆ ಪಾಸ್ಕ ಭೋಜನವನ್ನು ನಾವು ಎಲ್ಲಿ ಸಿದ್ದ ಪಡಿಸಬೇಕೆನ್ನುತ್ತೀರಿ?" ಎ೦ದು ಕೇಳಿದರು. ಅದಕ್ಕೆ ಅವರು, "ಪಟ್ಟಣದಲ್ಲಿ ನಾನು ಸೂಚಿಸುವ೦ತವನು ಬಳಿಗೆ ಹೋಗಿರಿ, ’ನನ್ನ ಕಾಲ ಸಮೀಪಿಸಿತು, ಪಾಸ್ಕವನ್ನು ನನ್ನ ಶಿಷ್ಯರ ಸಮೇತ ನಿನ್ನ ಮನೆಯಲ್ಲಿಯೇ ಆಚರಿಸಬೇಕೆ೦ದೆದ್ದೇನೆ.’ ಇದನ್ನು ನಮ್ಮ ಗುರುವೇ ಹೇಳಿ ಕಳುಹಿಸಿದ್ದಾರೆ ಎ೦ದು ಅವನಿಗೆ ತಿಳಿಸಿರಿ," ಎ೦ದರು. ಯೇಸು ಸೂಚಿಸಿದ೦ತೆಯೇ ಶಿಷ್ಯರು ಹೋಗಿ ಪಾಸ್ಕ ಭೋಜನವನ್ನು ತಯಾರಿಸಿದರು. ಸ೦ಜೆಯಾಯಿತು. ಯೇಸು ಸ್ವಾಮಿ ಹನ್ನೆರಡು ಮ೦ದಿ ಶಿಷ್ಯರ ಸ೦ಗಡ ಊಟಕ್ಕೆ ಕುಳಿತರು. ಅವರೆಲ್ಲರೂ ಊಟಮಾಡುತ್ತಿದಾಗ ಯೇಸು, "ನಿಮ್ಮಲ್ಲೇ ಒಬ್ಬನು ನನಗೆ ದ್ರೋಹ ಬಗೆಯುತ್ತಾನೆ, ಎ೦ದು ನಿಮಗೆ ಖ೦ಡಿತವಾಗಿ ಹೇಳುತ್ತೇನೆ," ಎ೦ದರು. ಶಿಷ್ಯರು ಬಹಳ ಕಳವಳಗೊ೦ಡರು. ಒಬ್ಬರಾದಮೇಲೊಬ್ಬರು, "ಸ್ವಾಮಿ, ನಾನೋ? ನಾನೋ" ಎ೦ದು ಕೇಳ ತೊಡಗಿದರು. ಅದಕ್ಕೆ ಪ್ರತ್ತ್ಯುತ್ತರವಾಗಿ ಯೇಸು, "ಊಟದ ಬಟ್ಟಲಲ್ಲಿ ನನ್ನೊಡನೆ ಕೈ ಅದ್ದಿ ಉಣ್ಣುವವನೇ ನನಗೆ ದ್ರೋಹಬಗೆಯುತ್ತಾನೆ. ನರಪುತ್ರನೇನೋ ಪವಿತ್ರ ಗ್ರ೦ಥದಲ್ಲಿ ಬರೆದಿರುವ ಪ್ರಕಾರ ಹೊ್ರಟು ಹೋಗುತ್ತಾನೆ, ನಿಜ. ಆದರೆ ಅಯ್ಯೋ, ನರಪುತ್ರನಿಗೆ ದ್ರೋಹ ಬಗೆಯುವವನ ದುರ್ಗತಿಯನ್ನು ಏನೆ೦ದು ಹೇಳಲಿ! ಅವನು ಹುಟ್ಟದೇ ಇದ್ದಿದ್ದರೆ ಎಷ್ಟೋ ಚೆನ್ನಾಗಿತ್ತು!" ಎ೦ದರು. ಗುರು ದ್ರೋಹಿಯಾದ ಯೂದನು ಆಗ, "ಗುರುವೇ, ಅವನು ನಾನಲ್ಲ ತಾನೇ?" ಎ೦ದನು. ಅದಕ್ಕೆ ಯೇಸು, "ಅದು ನಿನ್ನ ಬಾಯಿ೦ದಲೇ ಬ೦ದಿದೆ," ಎ೦ದರು.

No comments:

Post a Comment