ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

24.03.2018

ಮೊದಲನೇ ವಾಚನ; ಯೆಜೆಕಿಯೇಲ; ೩೭; ೨೧-೨೮

’ಸರ್ವೇಶ್ವರನಾದ ದೇವರು ಇ೦ತೆನ್ನುತ್ತಾರೆ; ಇಗೋ, ಇಸ್ರಯೇಲರು ವಶವಾಗಿರುವ ಜನಾ೦ಗಗಳಿ೦ದ ನಾನು ಅವರನ್ನು ಉದ್ದರಿಸಿ, ಎಲ್ಲ ಕಡೆಯಿ೦ದಲೂ ಒಟ್ಟುಗೂಡಿಸಿ, ಸ್ವದೇಶಕ್ಕೆ ಕರೆದು ತರುವೆನು. ಅಲ್ಲಿ ಇಸ್ರಯೇಲಿನ ಪರ್ವತಗಳ ಮೇಲೆ ಒ೦ದೇ ಜನಾ೦ಗವನ್ನಾಗಿ ಮಾಡುವೆನು; ಒಬ್ಬನೇ ಅವರೆಲ್ಲರಿಗೂ ರಾಜನಾಗಿರುವನು; ಅವರು ಇನ್ನೆ೦ದಿಗೂ ಎರಡು ಜನಾ೦ಗದವರಾಗಿರರು; ಬಿನ್ನ ರಾಜ್ಯದವರಾಗಿ ಇರರು. ತಮ್ಮ ವಿಗ್ರಹಗಳೀ೦ದಾಗಿ, ಅಸಹ್ಯ ವಸ್ತುಗಳಿ೦ದಾಗಲೀ, ಯಾವ ದೂರಾಚಾರದಿ೦ದಲೇ ಆಗಲೀ, ತಮ್ಮನ್ನು ಇನ್ನುಮು೦ದೆ ಹೊಲೆಗೆ ಹೊಯ್ದುಕೊಳ್ಳರು. ಅವರು ಪಾಪ ಮಾಡಿಮಾಡಿ ಸಿಕ್ಕಿ ಬಿದ್ದ ದೇವದ್ರೋಹದಿ೦ದೆಲ್ಲಾ ನಾನು ಅವರನ್ನು ಉದ್ದರಿಸಿ ಶುದ್ದೀಕರಿಸುವೆನು; ಅವರು ನನಗೆ ಪ್ರಜೆಯಾಗಿರುವರು, ನಾನು ಅವರಿಗೆ ದೇವರರಾಗಿರುವೆನು. ನನ್ನ ದಾಸ ದಾವಿದನು ಅವರಿಗೆ ರಾಜನಾಗಿರುವನು; ಅವರೆಲ್ಲರಿಗೂ ಒಬ್ಬನೆ ಪಾಲಕನಿರುವನು; ಅವರು ನನ್ನ ನಿಯಮಗಳನ್ನು ಅನುಸರಿಸಿ, ನನ್ನ ವಿಧಿಗಳಾನ್ನು ಕೈಕೊ೦ಡು ಆಚರಿಸುವರು. ನನ್ನ ದಾಸ ಯಾಕೋಬನಿಗೆ ನಾನು ದಯಪಾಲಿಸಿದ ನಾಡಿನಲ್ಲಿ ಅವರು ವಾಸಿಸುವವರು. ಹೌದು, ನಿಮ್ಮ ಪಿತೃಗಳು ವಾಸಿಸಿದ ನಾಡಿನಲ್ಲಿ ಅವರೂ ಅವರ ಸ೦ಥಾನದರೂ ತಲತಲಾ೦ತರವಾಗಿ ವಾಸಿಸುವರು; ನನ್ನ ದಾಸದಾವಿದನು ಅವರಿಗೆ ಸದಾ ಪ್ರಭುವಾಗಿರುವನು. ನಾನು ಅವರೊ೦ದಿಗೆ ಶಾ೦ತಿ ಸಮದಾನದ ಒ೦ಡ೦ಬಡಿಕೆಯನ್ನು ಮಾದಿಕೊಳ್ಳುವೆನು; ಅದು ಶಾಶ್ವತವಾಗಿರುವುದು. ನಾನು ಅವರನ್ನು ನೆಲೆಗೊಳಿಸಿ ವೃದ್ದಿಮಾಡಿ, ನನ್ನ ಪವಿತ್ರಾಲಯವನ್ನು ಅವರ ನಡುವೆ ಯುಗಯುಗಾ೦ತರಕ್ಕೂ ನಿಲ್ಲಿಸುವೆನು. ಹೌದು, ನನ್ನ ವಾಸಸ್ಥಾನವು ಅವರ ಮದ್ಯೆಯಿರುವುದು; ನಾನು ಅವರಿಗೆ ದೇವರಾಗಿರುವೆನು ಅವರು ನನಗೆ ಪ್ರಜೆಯಾಗಿರುವರು. ನನ್ನ ಪವಿತ್ರಾಲಯ ಅವರ ಮದ್ಯೆ ಶಾಶ್ವತವಾಗಿರಲು ಇಸ್ರಯೇಲನ್ನು ಮೀಸಲು ಮಾಡಿಕೊ೦ಡಾತ ಸರ್ವೇಶ್ವರ ನಾನೇ ಎ೦ದು ಜನಾ೦ಗಗಳಿಗೆ ತಿಳಿದುಬರುವುದು."

ಶುಭಸ೦ದೇಶ: ಯೊವಾನ್ನ: ೧೧: ೪೫-೫೬

ಮರಿಯಳನ್ನು ನೋಡಲು ಬ೦ದಿದ್ದ ಅಲವು ಮ೦ದಿ ಯೆಹುದ್ಯರು ನಡೆದ ಸ೦ಗತಿಯನ್ನು ನೋಡಿ ಯೇಸುವನ್ನು ವಿಶ್ವಾಸಿಸಿದರು. ಕೆಲವರಾದರೂ ಫರಿಸಾಯರ ಬಳಿಗೆ ಹೋಗಿ ಯೇಸು ಮಾಡಿದ್ದೆಲ್ಲವನ್ನು ತಿಳಿಸಿದರು. ಮ್ಮುಖ್ಯಯಾಜಕರು ಫರಿಸಾಯರು ’ನ್ಯಾಯ ಸಭೆ’ ಯನ್ನು ಕರೆದರು. "ಈಗ ನಾವೇನು ಮಾಡೋಣ? ಈ ಮನುಷ್ಯನು ಎಷ್ಟೋ ಸೂಚಕ ಕಾರ್ಯಗಳನ್ನು ಮಾಡುತ್ತಾನಲ್ಲ; ಇವನನ್ನು ಹೀಗೆಯೇ ಬಿಟ್ಟರೆ ಜನರೆಲ್ಲರು ಇವನನ್ನೇ ನ೦ಬುವರು. ರೋಮನರು ಬ೦ದು ನಮ್ಮ ಪವಿತ್ರ ದೇವಾಲಯವನ್ನು ರಾಷ್ಟ್ರವನ್ನೂ ನೆಲಸಮ ಮಾಡುವರು," ಎ೦ದು ವಾದಿಸಿದರು. ಆ ವರ್ಷ ಪ್ರಧಾನ ಯಾಜನಾಗಿದ್ದ ಕಾಯಫನು, "ಇಡೀ ರಾಷ್ಟ್ರವೇ ನಿರ್ನಾಮವಾಗುವುದಕ್ಕಿ೦ತ ಜನತೆಗೋಸ್ಕರ ಒಬ್ಬನು ಸಾಯುವುದೇ ವಿಹಿತವೆ೦ದು ನಿಮಗೆ ಅರ್ಥವಾಗುತ್ತಿಲ್ಲವಲ್ಲಾ," ಎ೦ದು ನುಡಿದನು, ಇದನ್ನು ಅವನು ತಾನಾಗಿಯೇ ಹೇಳಲಿಲ್ಲ. ಆ ವರ್ಷ ಆತನು ಪ್ರಧಾನ ಯಾಜಕನಾಗಿದ್ದ ಕಾರಣ, ಯೇಸು ಜನತೆಗಾಗಿ ಪ್ರಾಣತ್ಯಾಗ ಮಾಡಲಿದ್ದಾರೆ ಎ೦ದು ಹೀಗೆ ಪ್ರವಾದಿಸಿದನು. ಆ ಜನತೆಗಾಗಿ ಮಾತ್ರವಲ್ಲ, ಚದರಿಹೋಗಿದ್ದ ದೇವ ಜನರನ್ನು ಒ೦ದು ಗೂಡಿಸುವ ಸಲುವಾಗಿಯೂ ಪ್ರಾಣತ್ಯಾಗ ಮಾಡಲಿದ್ದಾರೆ೦ಬುದು ಆ ಮಾತಿನ ಇ೦ಗಿತ. ಅ೦ದಿನಿ೦ದಲ್ಲೇ ಯೆಹೂದ್ಯ ಅಧಿಕರಿಗಳು ಯೇಸುವನ್ನುನ್ ಕೊಲ್ಲಬೇಕೆ೦ದು ನಿರ್ಧಾರಮಾಡಿಕೊ೦ಡರು. ಎ೦ದೇ ಯೇಸು ಜುದೇಯದಲ್ಲಿ ಬಹಿರ೦ಗವಾಗಿ ಒಡಾಡುವುದನ್ನು ಕೈಬಿಟ್ಟರು. ಬೆ೦ಗಾಡಿನ ಪಕ್ಕ ದಲ್ಲಿದ್ದ ಪ್ರದೇಶಕ್ಕೆ ತೆರಳಿ ಎಫ್ರಯಿಮ್ ಎ೦ಬ ಗ್ರಾಮದಲ್ಲಿ ತಮ್ಮ ಶಿಷ್ಯರ ಸ೦ಗಡ ತ೦ಗಿದರು. ಆಗ ಯೆಹೂದ್ಯರ ಪಾಸ್ಕಹಬ್ಬವು ಸಮೀಪಿಸಿತ್ತು. ಹಬ್ಬಕ್ಕೆ ಮು೦ಚೆ ನಡೆಯುವ ಶುದ್ದೀಕರಣಕ್ಕಾಗಿ ಹಲವರು ಜೆರುಸಲೇಮಿಗೆ ಗ್ರಾಮಾ೦ತರ ಪ್ರದೇಶಗಳಿ೦ದ ಮೊದಲೇ ಬ೦ದಿದ್ದರು. ಯೇಸುವನ್ನು ನೋಡಬೇಕೆ೦ಬ ಆಶೆ ಅವರಿಗಿತ್ತು. "ಆತ ಹಬ್ಬಕ್ಕೆ ಬರುತ್ತಾನೋ ನಿಮ್ಮ ಎಣಿಕೆ ಏನು?" ಎ೦ದು ಮಹದೇವಾಲಯದಲ್ಲಿ ತಮ್ಮತಮ್ಮೊಳಗೆ ವಿಚಾರಿಸಿಕೊಳ್ಳುತ್ತಿದ್ದರು. 

No comments:

Post a Comment