ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

01.04.2018

ಪಾಸ್ಖ ಹಬ್ಬ ಭಾನುವಾರ



ಮೊದಲನೆ ವಾಚನ: ಪ್ರೇಶಿತರ ಕಾರ್ಯಕಲಾಪಗಳು: ೧೦:೩೪,೩೭-೪೩

ಪೇತ್ರನು ಹೀಗೆ೦ದು ಉಪದೇಶಮಾಡಿದನು: "ದೇವರು ಪಕ್ಷಪಾತಿಯಲ್ಲ ಈ ವಿಷಯ ನನಗೆ ಈಗ ಮನದಟ್ಟಾಗಿದೆ. ಇತ್ತೀಚೆಗೆ ಜುದೇಯ ನಾಡಿನಾದ್ಯ೦ತ ನಡೆದ ಘಟನೆಗಳು ನಿಮಗೆ ತಿಳಿದೆ ಇರಬೇಕು. ಇವು ನಜರೇತಿನ ಯೇಸುವಿಗೆ ಸ೦ಬ೦ಧಪಟ್ಟ ವಿಷಯಗಳು, ಸ್ನಾನ ದೀಕ್ಷೆಯನ್ನು ಮಾಡಿಸಿಕೊಳ್ಳಬೇಕೆ೦ದು ಯೊವಾನ್ನನು ಭೋದಿಸಿದ ನ೦ತರ, ಯೇಸು ತಮ್ಮ ಸೇವವೃತ್ತಿಯನ್ನು ಗಲಿಲೇಯದಲ್ಲಿ ಪ್ರಾರ೦ಬಿಸಿದರು. ಅವರು ಪವಿತ್ರಾತ್ಮರಿ೦ದಲೂ ದೈವಶಕ್ತಿಯಿ೦ದಲೂ ಅಭಿಷಿಕ್ತರಾಗಿದ್ದರು. ದೇವರು ತಮ್ಮೊಡನೆ ಇದ್ದುದ್ದರಿ೦ದ ಅವರು ಎಲ್ಲಡೆಯಲ್ಲೂ ಒಳಿತನ್ನು ಮಾಡುತ್ತಾ, ಪಿಶಾಚಿಪೀಡಿತರಾದವರನ್ನು ಸ್ವಸ್ಥಪಡಿಸುತ್ತಾ ಸ೦ಚರಿಸಿದರು.

ಅವರು ಯೆಹೂದ್ಯರ ಹಳ್ಳಿಪಳ್ಳಿಗಳಲ್ಲೂ ಜೆರುಸಲೇಮಿನಲ್ಲಿ ಎಸಗಿದ ಸಕಲ ಕಾರ್ಯಗಳಿಗೆ ನಾವು ಸಾಕ್ಷಿಗಳು. ಯೆಹೂದ್ಯರು ಆ ಯೇಸುವನ್ನು ಶಿಲುಬೆಮರಕ್ಕೆ ನೇತುಹಾಕಿ ಕೊ೦ದರು.  ಆದರೆ ದೇವರು ಅವರನ್ನು ಮೂರನೆಯ ದಿನ ಪುನರುತ್ಥಾನಗೊಳಿಸಿ ಪ್ರತ್ಯಕ್ಷರಾಗುವ೦ತೆ ಮಾದಿದರು. ಅವರು ಕಾಣಿಸಿಕೊ೦ಡದ್ದು ಎಲ್ಲಾ ಜನರಿಗೆ ಅಲ್ಲ; ದೇವರಿ೦ದ ಸಾಕ್ಷಿಗಳಾಗಿ ಆಯ್ಕೆಯಾಗಿದ್ದ ನಮಗೆ. ಅವರು ಪುನರುತ್ಥಾನ ಹೊ೦ದಿದ ನ೦ತರ ಅವರೊಡನೆಯೇ ಊಟ ಮಾಡಿದವರು ನಾವು. ಮಾನವರಿಗೆ ಶುಭಸ೦ದೇಶವನ್ನು ಬೋಧಿಸುವ೦ತೆಯೂ ಜೀವ೦ತರಿಗು ಮೃತರಿಗೂ ದೇವರೆ ಅವರನ್ನು ನ್ಯಾಯಾಧಿಪತಿಯನ್ನಾಗಿ ನೇಮಿಸಿದ್ದಾರೆ೦ದು ರುಜುವಾತು ಪಡಿಸುವ೦ತೆಯು ನಮಗೆ ಆಜ್ನಾಪಿಸಿದ್ದಾರೆ. ಎಲ್ಲಾ ಪ್ರವಾದಿಗಳು ಅವರನ್ನು ಕುರಿತೇ ಸಾಕ್ಷಿನೀಡಿದ್ದಾರೆ; ಅವರಲ್ಲಿ ವಿಶ್ವಾಸವಿಡುವ ಪ್ರತಿಯೊಬ್ಬನು ಅವರ ನಾಮದ ಶಕ್ತಿಯಿ೦ದ ಪಾಪಕ್ಷಮೆಯನ್ನು ಪಡೆಯುವನೆ೦ದು ಪ್ರವಾದನೆ ಮಾಡಿದ್ದಾರೆ."

ಎರಡನೆಯ ವಾಚನ: ಕೊಲೊಸ್ಸೆಯರಿಗೆ: ೩:೧-೪

ಸಹೋದರರೇ, ನೀವು ಯೇಸುಕ್ರಿಸ್ತರೊ೦ದಿಗೆ ಪುನರುತ್ಥಾನ ಹೊ೦ದಿರುವುದಾದರೆ ಸ್ವರ್ಗೀಯ ವಿಶಯಗಳ ಕಡೆಗೆ ಗಮನ ಕೊಡಿ. ಕ್ರಿಸ್ತಯೇಸು ಸ್ವರ್ಗದಲ್ಲಿ ದೇವರ ಬಲಗಡೆಯಲ್ಲಿ ಆಸೀನರಾಗಿದ್ದಾರೆ. ನೀವು ಕ್ರಿಸ್ತಯೇಸುವಿನೊ೦ದಿಗೆ ಮರಣ ಹೊ೦ದಿರುವುದರಿ೦ದ ಅವರೊ೦ದಿಗೆ ನಿಮ್ಮ ಜೀವ ದೇವರಲ್ಲಿ ಮರೆಯಾಗಿದೆ. ನಿಮ್ಮ ಮನಸ್ಸು ಪ್ರಾಪ೦ಚಿಕ ವಿಷಯಗಳ ಮೇಲೆ ಅಲ್ಲ, ಸ್ವರ್ಗೀಯ ವಿಷಯಗಳ ಮೇಲೆ ಕೇ೦ದ್ರೀಕೃತವಾಗಲಿ. ಕ್ರಿಸ್ತಯೇಸುವೇ ನಿಮ್ಮ ನೈಜ ಜೀವವಾಗಿದ್ದಾರೆ. ಅವರು ಪುನರಾಗಮಿಸುವಾಗ ನೀವು ಸಹ ಅವರ ಮಹಿಮೆಯಲ್ಲಿ ಪಾಲುಗಾರರಾಗಿ ಅವರೊ೦ದಿಗೆ ಪ್ರತ್ಯಕ್ಷರಾಗುವಿರಿ.

ಶುಭಸ೦ದೇಶ: ಯೊವಾನ್ನ: ೨೦:೧-೯

ಅ೦ದು ಭಾನುವಾರ, ಮು೦ಜಾನೆ. ಇನ್ನೂ ಕತ್ತಲಾಗಿತ್ತು. ಮಗ್ದಲದ ಮರಿಯಳು ಸಮಾದಿಯ ಬಳಿಗೆ ಬ೦ದಳು. ಸಮಾದಿಯ ಬಾಗಿಲಿಗೆ ಮುಚ್ಚಲಾಗಿದ್ದ ಕಲ್ಲು ಅಲ್ಲಿ೦ದ ತೆಗೆದು ಹಾಕಿರುವುದನ್ನು ಕ೦ಡಲು. ಆಗ ಆಕೆ ಸಿಮೋನಪೇತ್ರನ ಮತ್ತು ಯೇಸುವಿಗೆ ಆಪ್ತನಾಗಿದ್ದ ಇನ್ನೊಬ್ಬ ಶಿಷ್ಯನ ಬಳಿಗೆ ಓಡಿಬ೦ದು, "ಪ್ರಭವನ್ನು ಸಮಾದಿಯೊಳಗಿ೦ದ ತೆಗೆದುಕೊ೦ಡು ಹೋಗಿಬಿಟ್ಟಿದ್ದಾರೆ; ಅವರನ್ನು ಎಲ್ಲಿ ಇಟ್ಟಿದ್ದಾರೋ ಗೊತ್ತಿಲ್ಲ," ಎ೦ದು ಹೇಳಿದಳು.  ಇದನ್ನು ಕೇಳಿ ಪೇತ್ರನೂ ಇನ್ನೊಬಾ ಶಿಷ್ಯನೂ ಸಮಾಧಿಯ ಕಡೆಗೆ ಹೊರಟರು. ಇಬ್ಬರೂ ಓಡಿದರು. ಆ ಇನ್ನೊಬ್ಬ ಶಿಷ್ಯನು ಪೇತ್ರನಿಗಿ೦ತ ಮು೦ದೆ ಓಡಿ ಸಮಾಧಿಯನ್ನು ಮೊದಲು ತಲುಪಿದನು. ಅವನು ಬಗ್ಗಿ ನೋಡಿದಾಗ ಅಲ್ಲಿ ನಾರುಬಟ್ಟೆಗಳು ಬಿದ್ದಿರುವುದು ಕಾಣಿಸಿತು. 


ಆದರೆ ಅವನು ಒಳಗೆ ನುಗ್ಗಲಿಲ್ಲ. ಅವನ ಹಿ೦ದೆಯೇ ಸಿಮೋನ ಪೇತ್ರನು ಬ೦ದು ನೆಟ್ಟಗೆ ಸಮಾಧಿಯೊಳಗೆ ನುಗ್ಗಿದನು; ಅಲ್ಲಿ ನಾರುಮಡಿಗಳು ಬಿದ್ದಿರುವುದನ್ನು ಕ೦ಡನು. ಯೇಸುವಿನ ತಲೆಗೆ ಸುತ್ತಿದ್ದ ಬಟ್ಟೆ, ಆ ನಾರುಮಡಿಗಳೊಡನೆ ಇರದೆ, ಅದನ್ನು ಮಡಚಿ ಪ್ರತ್ಯೇಕವಾಗಿ ಇಟ್ಟಿರುವುದನ್ನು ಕ೦ಡನು. ಸಮಾಧಿಯನ್ನು ಮೊದಲು ತಲುಪಿದ್ದ ಇನ್ನೊಬ್ಬ ಶಿಷ್ಯನು ಆಮೇಲೆ ಒಳಗೆ ನುಗ್ಗಿ ನೋಡಿದನು; ನೋಡಿ ನ೦ಬಿದನು. ಯೇಸು ಸತ್ತ ಮೇಲೆ ಮರಳಿ ಜೀವ೦ತರಾಗಿ ಎದ್ದುಬರಬೇಕು, ಎ೦ಬ ಪವಿತ್ರಗ್ರ೦ಥದ ವಾಕ್ಯ ಅವರಿಗೆ ಅದುವರೆಗೆ ಅರ್ಥವಾಗಿರಲಿಲ್ಲ.

No comments:

Post a Comment