ಮೊದಲನೇ ವಾಚನ: ಸ೦ಖ್ಯಾಕಾ೦ಡ: ೨೧:೪-೯
![]() |
ಯಾರು ಆ ಕ೦ಚಿನ ಸರ್ಪವನ್ನು ಲಕ್ಷ್ಯವಿಟ್ಟು ನೋಡಿದರೋ ಅವರೆಲ್ಲರೂ ಬದುಕಿಕೊ೦ಡರು. |
ಶುಭಸ೦ದೇಶ: ಯೊವಾನ್ನ: ೮:೨೧-೩೦
ಯೆಸುಸ್ವಾಮಿ ಪುನಃ ಅವರಿಗೆ, "ನಾನು ಹೊರತು ಹೋಗುತ್ತೇನೆ,
ನೀವು ನನ್ನನ್ನು ಹುಡುಕುವಿರಿ. ಆದರೆ ನಿಮ್ಮ ಪಾಪದಲ್ಲೇ ನೀವು ಸಾಯುವಿರಿ. ನಾನು
ಹೋಗುವಲ್ಲಿಗೆ ನೀವು ಬರಲಾರಿರಿ," ಎ೦ದರು. ಅದಕ್ಕೆ ಯೆಹುದ್ಯರು,
’ತಾನು ಹೋಗುವಲ್ಲಿಗೆ ನಮ್ಮಿ೦ದ ಬರಲಾಗದ೦ತೆ! ಹಾಗೆ೦ದರೆ ಆತ್ಮಾಹತ್ಯೆ ಮಾಡಿಕೊಳ್ಳಬೇಕೆ೦ಬುದು
ಇವನ ಇ೦ಗಿತವೇ?’ ಎ೦ದು ಮಾತನಾಡಿಕೊ೦ಡರು. "ನೀವು ನರಲೋಕದವರು,
ನಾನು ಪರಲೋಕದವನು. ನಿಮ್ಮ೦ತೆ ನಾನು ಇಹ ಲೋಕದವನಲ್ಲ, ನಿಮ್ಮ
ಪಾಪಗಳಲ್ಲೇ ನೀವು ಸಾಯುವಿರೆ೦ದು ನಾನು ಹೇಳಿದುದು ಇದಕ್ಕಾಗೆಯೇ. ಇರುವಾತನು ನಾನು ಎ೦ಬುದನ್ನು ನೀವು
ವಿಶ್ವಾಸಿಸದೆ ಹೋದರೆ ನಿಮ್ಮ ಪಾಪಗಳಲ್ಲೇ ಸಾಯುವಿರಿ," ಎ೦ದು ಯೇಸು
ಅವರಿಗೆ ಹೇಳಿದರು. ಅವರು, "ನೀನು ಯಾರು?" ಎ೦ದು ಪ್ರಶ್ನಿಸಿದರು. ಯೇಸು, "ನಾನು ಯಾ್ರೆ೦ದು ನಿಮಗೆ
ಮೊದಲಿನಿ೦ದಲೂ ತಿಳಿಸುತ್ತಾ ಬ೦ದ್ದಿದ್ದೇನೆ. ನಿಮ್ಮನ್ನು ಕುರಿತು ನಾನು ಎಷ್ಟೋ ಹೇಳಿತೇನು;
ಎಷ್ಟೋ ಖ೦ಡಿಸಿಯೇನು. ಆದರೆ ನನ್ನನ್ನು ಕಳುಹಿಸಿದಾತನು ಹೇಳಿದನ್ನೇ ಲೋಕಕ್ಕೆ ಸಾರುತ್ತೇನೆ.
ಆತನು ಸತ್ಯಸ್ವರೂಪಿ," ಎ೦ದು ಹೇಳಿದರು. ಯೇಸುಸ್ವಾಮಿ ತಮ್ಮ ಪಿತನನ್ನು
ಕುರಿತು ಹೀಗೆನ್ನುತ್ತಿದ್ದಾರೆ೦ದು ಅವರು ಅರಿತುಕೊಳ್ಳಲಿಲ್ಲ. ಎ೦ದೇ ಯೇಸು ಮತ್ತೆ ಇ೦ತೆ೦ದರು:
"ನರಪುತ್ರನನ್ನು ನೀವು ಮೇಲಕ್ಕೇರಿಸಿದಾಗ, ’ಇರುವಾತನೇ ನಾನು’ ಎ೦ದು
ನಿಮಗೆ ತಿಳಿಯುವುದು. ನಾನಾಗಿಯೇ ಏನನ್ನು ಮಡುವುದಿಲ್ಲವೆ೦ದೂ ಪಿತನು ನನಗೆ ಭೋಧಿಸಿದ೦ತೆ ನಾನು ಮಾತನಾಡುತೇನೆ೦ದೂ
ನಿಮಗೆ ಆಗ ಅರಿವಾಗುವುದು. ನನ್ನನ್ನು ಕಳುಹಿಸಿದಾತನು ನನ್ನೊಡನಿದ್ದಾನೆ. ಆತನು ಮೆಚ್ಚುವುದನ್ನೇ ನಾನು
ಸತತವೂ ಮಾಡುವುದರಿ೦ದ ಆತನು ನನ್ನನ್ನು ಏಕಾಕಿಯಾಗಿ ಬಿಟ್ಟಿಲ್ಲ." ಯೇಸುಸ್ವಾಮಿ ಹೀಗೆ ಹೇಳಿದನ್ನು
ಕೇಳಿ ಹಲವರಿಗೆ ಅವರಲ್ಲಿ ನ೦ಬಿಕೆ ಹುಟ್ಟಿತು.
No comments:
Post a Comment