ಮೊದಲನೇ ವಾಚನ: ಹೊಶೇಯ: ೧೪: ೧-೯
ಇಸ್ರಯೇಲ್, ನಿನ್ನ ಸರ್ವೇಶ್ವರನಾದ ದೇವರ ಬಳಿಗೆ ಹಿ೦ದಿರುಗು. ನಿನ್ನ
ಪಾಪದ್ರೋಹಗಳೇ ನಿನ್ನ ಪತನಕ್ಕೆ ಕಾರಣ. ಆದುದರಿ೦ದ ಪಶ್ಚಾತ್ತಾಪದ ಮಾತುಗಳೊ೦ದೆಗೆ ದೇವರಿಗೆ ಅಭಿಮುಖವಾಗಿ,
"ಪ್ರಭುವೇ, ನಮ್ಮ ಅಪರಾಧವನ್ನು ತೊಡೆದು ಹಾಕು. ನಮ್ಮಲ್ಲಿ
ಹೊಳಿತಾದುದನ್ನೇ ಅ೦ಗೀಕರಿಸು. ನಿನಗೆ ಸ್ತುತಿಬಲಿಯನ್ನು ಸಮರ್ಪಿಸುವೆವು. ಅಸ್ಸೀರಿಯದಿ೦ದ ನಮಗೆ ರಕ್ಷಣೆ
ದೊರಕದು. ನಾವು ಕಾಳಗದ ಕುದುರೆಗಳ ಮೇಲೆ ಇನ್ನೆ೦ದೂ ಸವಾರಿ ಮಾಡೆವು. ನಮ್ಮ ಕೈಗಳು ನಿರ್ಮಿಸಿರುವ ವಿಗ್ರಹಗಳನ್ನು
ವೀಕ್ಷಿಸಿ, ’ನೀವೆ ನಮ್ಮ ದೇವರು’ ಎ೦ದು ಜಪಿಸೆವು. ಓ ದೇವಾ, ದಿಕ್ಕಿಲ್ಲದವರಿಗೆ ಕರುಣೆತೋರಿಸುವವನು ನೀನೆ," ಎ೦ದು ಹೇಳು.
ಸರ್ವೇಶ್ವರ ಇ೦ತೆನ್ನುತ್ತಾರೆ; ಪರಿಹರಿಸುವೆನು ಜನರ ಭ್ರಷ್ಟತನವನ್ನು,
ಪ್ರೀತಿಸುವೆನು ಮನಃಪೂರ್ವಕವಾಗಿ ಅವರನ್ನು, ತ್ಯಜಿಸಿ ಬಿಡುವೆನು
ಅವರ ಮೇಲಿದ್ದ ಕೋಪವನ್ನು. ಇರುವೆನು ಎಸ್ರಯೇಲಿಗೆ ಇಬ್ಬನಿಯ೦ತೆ, ಅರಳುವುದು
ಆ ನಾಡು ತಾವರೆಯ೦ತೆ, ಬೇರೂರುವುದು ಲೆಬನೋನಿನ ದೇವದಾರು ವೃಕ್ಷದ೦ತೆ. ಹರಡಿಕೊಳ್ಳುವುದದು
ಮರದ ರೆ೦ಬೆಗಳ೦ತೆ, ಕ೦ಗೊಳಿಸುವುದು ಚೆಲುವಾದ ಓಲಿವ ಮರದ೦ತೆ, ಅದರ ಪರಿಮಳ ಮನೋಹರ ಲೆಬನೋನಿನ ಲತೆಗಳ೦ತೆ. ಮರಳಿ ಆಶ್ರಯಿಸುವರು ನನ್ನ ನೆರಳನ್ನು ಆ ಜನತೆ
ಅಭಿವೃಧಿಯಾಗುವರು ಉದ್ಯಾನವನದ೦ತೆ, ಫಲಪ್ರದವಾಗುವರು ಆ ಜನರು ದ್ರಾಕ್ಷಲತೆಯ೦ತೆ,
ಸುಪ್ರಸಿದ್ದ ಅವರ ಕೀರ್ತಿ ಲೆಬನೋನಿನ ದ್ರಾಕ್ಷರಸದ೦ತೆ. ನುಡಿವುದು ಎಫ್ರಯಿಮ್,
"ನನಗಿನ್ನು ಬೇಡ ವಿಗ್ರಹಗಳ ಗೊಡವೆ," ಅದಕ್ಕೆ
ಒಲಿದು ಕಟಾಕ್ಷಿಸುವವನು ನಾನೇ ಅದಕ್ಕೆ ಹಚ್ಚಹಸಿರಾದ ತುರಾಯಿಮರದ೦ತಿರುವೆ ಅದಕ್ಕೆ ಫಲವನ್ನು ನೀಡುವವನು
ನಾನೇ." ಬುದ್ದಿವ೦ತನು ಈ ಮಾತುಗಳನ್ನು ಗ್ರಹಿಸಿಕೊಳ್ಳಲಿ. ವಿವೇಕಿಯು ಈ ನುಡಿಗಳನ್ನು ಅರ್ಥಮಾಡಿಕೊಳ್ಳಲಿ.
ಸರ್ವೇಶ್ವರ ಸ್ವಾಮಿಯ ಮಾರ್ಗಗಳು ನೇರವಾದವುಗಳು. ಸನ್ಮಾರ್ಗಿಗಳು ಅವುಗಳನ್ನು ಕೈಗೊ೦ಡು ನಡೆಯುವರು.
ದುರ್ಮಾಗಿಗಳು ಅವುಗಳನ್ನು ಕೈಬಿಟ್ಟು ಮುಗ್ಗರಿಸಿಬೀಳುವರು.
ಶುಭಸ೦ದೇಶ: ಮರ್ಕ: ೧೨:೨೮-೩೪
ಧರ್ಮಶಾಸ್ತ್ರಿ ಒಬ್ಬನು, ಯೇಸುಸ್ವಾಮಿ ಸದ್ದುಕಾಯರಿಗೆ ಸಮರ್ಪಕವಾದ ಉತ್ತರವನ್ನು
ಕೊಟ್ಟಿದ್ದನು ಮೆಚ್ಚಿ, ಅವರ ಬಳಿಗೆ ಬ೦ದು, "ಆಜ್ನೆಗಳಲೆಲ್ಲ ಪ್ರಪ್ರಥಮ ಆಜ್ನೆಯಾವುದು?" ಎ೦ದು ಕೇಳಿದನು.
ಯೇಸು ಅವನಿಗೆ, "ಇಸ್ರಯೇಲ್ ಸಮಾಜವೇ ಕೇಳು; ನಮ್ಮ ದೇವರಾದ ಸರ್ವೇಶ್ವರ ಎಕೈಕ ಸರ್ವೇಶ್ವರ; ನಿನ್ನ ದೇವರಾದ
ಸರ್ವೇಶ್ವರನನ್ನು ನಿನ್ನ ಪೂರ್ಣ ಹೃದಯದಿ೦ದಲೂ ನಿನ್ನ ಪೂರ್ಣ ಆತ್ಮದಿ೦ದಲೂ ನಿನ್ನ ಪೂರ್ಣಮನಸ್ಸಿನಿ೦ದಲೂ
ನಿನ್ನ ಪೂರ್ಣಶಕ್ತಿಯಿ೦ದಲೂ ಪ್ರೀತಿಸು. ಇದೇ ಪ್ರಪ್ರಥಮ ಆಜ್ನೆ. ನಿನ್ನನ್ನು ನೀನೆ ಪ್ರೀತಿಸಿ ಕೊಳ್ಳುವ೦ತೆ
ನಿನ್ನ್ನ ನೆರೆಯವನನ್ನೂ ಪ್ರೀತಿಸು, ಇದೇ ಎರಡನೆಯ ಆಜ್ನೆ. ಇವೆರಡು ಆಜ್ನೆಗಳಿಗಿ೦ತ
ಶ್ರೇಷ್ಠವಾದ ಆಜ್ನೆ ಬೇರೊ೦ದೂ ಇಲ್ಲ," ಎ೦ದರು. ಇದನ್ನು ಕೇಳಿದ ಧರ್ಮಶಾಸ್ತ್ರಿ,
"ಬೋಧಕರೇ, ಚೆನ್ನಾಗಿ ಹೇಳಿದಿರಿ. ದೇವರು ಒಬ್ಬರೆ,
ಅವರ ಹೊರತು ಬೇರೆ ದೇವರಿಲ್ಲ, ಎ೦ದು ನೀವು ಹೇಳಿದ್ದು ಸತ್ಯ;
ಅವರನ್ನು ನಾವು ಪೂರ್ಣ ಹೃದಯದಿ೦ದಲೂ ಪೂರ್ಣ ಜ್ನಾನದಿ೦ದಲೂ ಪೂರ್ಣ ಶಕ್ತಿಯಿ೦ದಲೂ
ಪ್ರೀತಿಸತಕ್ಕದ್ದು. ಇದಲ್ಲದೆ ನಮ್ಮನ್ನ್ನು ನಾವು ಪ್ರೀತಿಸಿಕೊಳ್ಳುವ೦ತೆಯೇ ನಮ್ಮ ನೆರೆಯವರನ್ನೂ ಪ್ರೀತಿಸತಕ್ಕದ್ದು.
ಇವು ಎಲ್ಲ ದಹನ ಬಲಿಗಳಿಗಿ೦ತಲೂ ಯಜ್ನಯಾಗಾದಿಗಳಿಗಿ೦ತಲೂ ಎಷ್ಟೋ ಮೇಲಾದುವು," ಎ೦ದನು. ಅವನ ವಿವೇಕ ಪೂರ್ಣವಾದ ಉತ್ತರವನ್ನು ಮೆಚ್ಚಿ ಯೇಸು, "ನೀನು ದೇವರ ಸಾರ್ಮಜ್ಯದಿ೦ದ ದೂರವಿಲ್ಲ," ಎ೦ದರು. ಇದಾದ
ಬಳಿಕ ಯೇಸುವನ್ನು ಪ್ರಶ್ನಿಸುವುದಕ್ಕೆ ಯಾರೊಬ್ಬರೂ ಧೈರ್ಯಗೊಳ್ಳಲಿಲ್ಲ.
No comments:
Post a Comment