ಮೊದಲನೇ ವಾಚನ: ಹೊಶೇಯ: ೬:೧-೬
ಸರ್ವೇಶ್ವರ ಇ೦ತೆನ್ನುತ್ತಾರೆ: ನನ್ನನ್ನು ಜನರು ಮರೆಹೋಗುತ್ತಾ ಹೀಗೆನ್ನುವರು: "ಬನ್ನಿ, ಸರ್ವೇಶ್ವರ ಸ್ವಾಮಿಯ ಬಳಿಗೆ ಹಿ೦ದಿರುಗೋಣ. ಅವರು ನಮ್ಮನ್ನು ಛಿದ್ರಗೊಳಿದುವರು.
ಅವರು ನಮ್ಮನ್ನು ಘಾಯಗೊಳಿಸಿದ್ದಾರೆ; ಅವರೇ ನಮ್ಮ ಘಾಯಗಳನ್ನು ಕಟ್ಟಿಗುಣ
ಪಡಿಸುವರು. ಒ೦ದೆರಡು ದಿನಗಳ ನ೦ತರ ಅವರನ್ನು ನಮ್ಮನ್ನು ಬದುಕಿಸುವರು. ಮೂರನೆಯ ದಿನದಲ್ಲಿ ಅವರು ನಮ್ಮನು
ಎಬ್ಬಿಸುವರು. ಆಗ ನಾವು ಅವರ ಸನ್ನಿಧಿಯಲ್ಲಿ ಬಾಳುವೆವು. ನಿರ೦ತರವಾಗಿ ಹುಡುಕಿ ಅವರನ್ನು ಕ೦ಡುಕೊಳೋಣ;
ಸರ್ವೇಶ್ವರ ಸ್ವಾಮಿಯನ್ನು ಅರಿತುಕೊಳ್ಳೋಣ; ಅವರ ಆಗಮನ
ಸೂರ್ಯೋದಯದ೦ತೆ ನಿಶ್ಚಯ. ಭೂಮಿಯನ್ನು ತಣಿಸುವ ಮು೦ಗಾರು ಹಿ೦ಗಾರು ಮಳೆಗಳ೦ತೆ ಅವರು ನಮ್ಮ ಬಳಿಗೆ ಬ೦ದೇಬರುವರು."
ಆದರೇ ಸರ್ವೇಶ್ವರ ಹೇಳುವುದೇನೆ೦ದರೆ: "ಎಫ್ರಾಯಿಮೆ, ನಾನು ನಿನ್ನನ್ನು
ಹೇಗೆ ತಿದ್ದಲಿ? ಜುದೇಯವೇ, ನಿನ್ನನ್ನು ಹೇಗೆ
ಸರಿಪಡಿಸಲಿ? ನಿಮ್ಮ ಭಕ್ತಿ ಪ್ರಾತಃಕಾಲದ ಮೋಡದ೦ತಿದೆ; ಬೇಗನೆ ಮಾಯವಾಗುವ ಇಬ್ಬನಿಯ೦ತಿದೆ. ಖ೦ಡತು೦ಡವಾದ ತೀರ್ಪುನೀಡುವ, ಕತ್ತಿಯ೦ತೆ ಹರಿತವಾಗಿ ಮಾತನಾಡುವ ನನ್ನ ಪ್ರಾವದಿಗಳನ್ನೂ ನಿಮ್ಮ ಬಳಿಗೆ ಕಳುಹಿಸಿದ್ದೇನೆ.
ನನ್ನ ನ್ಯಾಯದ೦ಡನೆ ಮಿ೦ಚಿನ೦ತೆ ಹೊರಡುವುದು. ನನಗೆ ಬೇಕಾದುದು ಕರುಣೆ, ಬಲಿರ್ಯಪಣೆಯಲ್ಲ;
ನನಗೆ ಬೇಕಾದುದು ದೈವ ಜ್ನಾನ, ದಹನ ಬಲಿ ದಾನವಲ್ಲ.
ಶುಭಸ೦ದೇಶ: ಲೂಕ: ೧೮: ೯-೧೪
ಕೆಲವರು ತಾವೇ ಸತ್ಪುರುಷರು ಎ೦ದುಕೊ೦ಡು ಇತರರನ್ನು ತುಚ್ಛವಾಗಿ ಕಾಣುತ್ತಿದ್ದರು. ಅ೦ತಹವರನ್ನು
ಉದ್ದೇಶಿಸಿ ಯೇಸುಸ್ವಾಮಿ ಈ ಸಾಮತಿಯನ್ನು ಹೇಳಿದರು: "ಒಮ್ಮೆ. ಇಬ್ಬರು ಪ್ರಾರ್ಥನೆ ಮಾಡಲು ದೇವಾಲಯಕ್ಕೆ
ಹೋದರು. ಇವರಲ್ಲಿ ಒಬ್ಬನು ಫರಿಸಾಯನು, ಇನ್ನೊಬ್ಬನು ಸು೦ಕವಸುಲಿಯವನು.
ಫರಿಸಾಯಾನು ಮು೦ದೆ ನಿ೦ತು ತನ್ನಷ್ಟಕ್ಕೆ ಹೀಗೆ ಪ್ರಾರ್ಥನೆ ಮಾಡಿದ: ’ಓ ದೇವರೇ, ನಾನು ಇತರರ ಹಾಗೆ ಅಲ್ಲ. ಅವರೋ ಕೊಳ್ಳೆಗಾರರು, ಅನ್ಯಾಯಗಾರರು,
ವ್ಯಭಿಚಾರಿಗಳು. ನಾನು ಈ ಸು೦ಕವಾಸುಯವನ೦ತೆಯೂ ಅಲ್ಲ. ಇದಕ್ಕಾಗಿ ನಿಮಗೆ ಧನ್ಯವಾದಗಳನ್ನು
ಸಲ್ಲಿಸುತ್ತೇನೆ. ನಾನಾದರೋ ವಾರಕ್ಕೆ ಎರಡು ದಿನ ಉಪವಾಸ ವೃತವನ್ನು ಕೈಗೊಳ್ಳುತ್ತೇನೆ; ನನ್ನ ಆದಾಯದಲ್ಲಿ ಹತ್ತನೆಯ ಒ೦ದು ಪಾಲನ್ನು ನಿಮಗೆ ಸಲ್ಲಿಸುತ್ತೇನೆ.’ "ಸು೦ಕವಸೂಲಿಯವನಾದರೋ
ದೂರದಲ್ಲೇ ನಿ೦ತು ತಲೆಯನ್ನು ಮೇಲಕ್ಕೆ ಎತ್ತದೆ, ’ಓ ದೇವರೇ, ನಾನು ಪಾಪಿ; ನನಗೆ ದಯೆತೋರಿ,; ಎನ್ನುತ್ತಾ
ಎದೆಬಡಿದುಕೊ೦ಡ. "ದೇವರ ದೃಷ್ಠಿಯಲ್ಲಿ ಪಾಪ ಮುಖ್ತನಾಗಿ ಮನೆಗೆ ತೆರಳಿದವನು ಈ ಸು೦ಕವಸೂಲಿಯವನು,
ಆ ಫರಿಸಾಯನಲ್ಲ, ಎ೦ದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ.
ಏಕೆ೦ದರೆ, ತನ್ನನ್ನು ತಾನೇ ಮೇಲಕ್ಕೇರಿಸಿ ಕೊಳ್ಳುವವನನ್ನು, ದೇವರು ಕೆಳಗಿಳಿಸುವರು. ತನ್ನನ್ನು ತಾನೇ ಕೆಳಗಿಳಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು,"
ಎ೦ದರು ಯೇಸು.
No comments:
Post a Comment