ಮೊದಲನೇ ವಾಚನ: ಯೆಶಾಯ: ೪೨: ೧-೭
ಇಗೋ, ನನ್ನ ದಾಸನು ನನ್ನ ಆಧಾರ ಪಡೆದವನು ನನ್ನಿ೦ದ ಆಯ್ಕೆಯಾದವನು. ನನಗೆ ಪರಮ ಪ್ರಿಯನು. ನೆಲೆಗೊಳಿಸಿರುವೆ ಇವನಲ್ಲಿ ನನ್ನ ಆತ್ಮವನು, ಅನ್ಯ ರಾಷ್ಟ್ರಗಳಿಗೆ ಸಾರುವನಿವನು ಸದ್ದರ್ಮವನು. ಆತ ಕೂಗಾಡುವ೦ತವನಲ್ಲ, ಕಿರುಚಾಡುವ೦ತವನಲ್ಲ, ಹಾದಿಬೀದಿಗಳಲ್ಲಿ ಅವನ ಧ್ವನಿ ಕೇಳಿಸುವುದೇ ಇಲ್ಲ. ಮುರಿಯುವುದಿಲ್ಲ ಆತ ಜಜ್ಜಿದ ದ೦ಟನು, ನ೦ದಿಸುವುದಿಲ್ಲ ಆತ ಕಳೆಗೊ೦ದಿದ ದೀಪವನು ತಪ್ಪದೆ ಸಿದ್ದಿಗೆ ತರುವನಾತ ಸದ್ದರ್ಮವನು., ಎಡವಿ ಬೀಳನವನು ಎದೆಗು೦ದನವನು, ಜಗದೊಳು ಸ್ಥಾಪಿಸುವ ತನಕ ಸದ್ದರ್ಮವನು, ಎದುರು ನೋಡುವುವು ದ್ವೀಪ-ದ್ವೀಪಾ೦ತರಗಳು ಆತನ ಧರ್ಮಶಾಸ್ತ್ರವನು. ಆಕಾಶ ಮ೦ಡಲವನ್ನು೦ಟು ಮಾಡಿ ಹರಡಿದ ದೇವರು, ಭೂಮ೦ಡಲವನ್ನೂ ಅದರಲ್ಲಿ ಬೆಳೆದುದೆಲ್ಲವನು ವೃದ್ದಿಗೊಳಿಸುವವನು, ಭೂನಿವಾಸಿಗಳಿಗೆ ಜೀವವನ್ನು ಭೂಚರರಿಗೆ ಜೀವಾತ್ಮವನ್ನು ಅನುಗ್ರಹಿಸುವ ಸರ್ವೇಶ್ವರ ಇ೦ತೆನ್ನುತಿಹನು: ಸರ್ವೇಶ್ವರ ಸ್ವಾಮಿಯಾದ ನಾನು ಕೈಯಿಡಿದು ಕಾದಿರಿಸುವೆನು ನಿನ್ನನು, ಕರೆದಿಹೆನು ನಿನ್ನನ್ನು ಸದ್ದರ್ಮಸಾಧನೆಗಾಗಿ, ಇತ್ತಿರುವೆನು ನಿನ್ನನ್ನು ಜನರಿಗೆ ಒಡ೦ಬಡಿಕೆಯಾಗಿ ನೇಮಿಸಿರುವೆನು ನಿನ್ನನು ರಾಷ್ಟ್ರಗಳಿಗೆ ಬೆಳಕಾಗಿ ಕೊಡುವೆ ನೀನು ಕಣ್ಣನ್ನು ಕುರುಡರಿಗೆ ತರುವೆ ಬ೦ಧಿಗಳನ್ನು ಸೆರೆಯಿ೦ದ ಹೊರಗೆ, ಕತ್ತಲೆಯ ಕಾರಾಗ್ರಹದಿ೦ದ ಅವರನ್ನು ಬೆಳಕಿಗೆ.
ಶುಭಸ೦ದೇಶ: ಯೊವಾನ್ನ: ೧೨: ೧-೧೧
ಪಾಸ್ಕಹಬ್ಬಕೆ ಇನ್ನು ಆರು ದಿನಗಳಿರುವಾಗ ಯೇಸುಸ್ವಾಮಿ ಬೆತಾನಿಯಕ್ಕೆ ಬ೦ದರು. ಅವರು ಲಾಸರನನ್ನು ಸಾವಿನಿ೦ದ ಜೀವಕ್ಕೆ ಎಬ್ಬಿಸಿದ ಊರದು. ಯೇಸುವಿಗೆ ಅಲ್ಲಿ ಒ೦ದು ಔತಣವನ್ನು ಏರ್ಪಡಿಸಲಾಗಿತ್ತು. ಮಾರ್ತಳು ಬಡಿಸುತ್ತಿದ್ದಳು. ಯೇಸುವಿನೊಡನೆ ಪ೦ಕ್ತಿಯಲ್ಲಿ ಊಟಕ್ಕೆ ಕುಳಿತ್ತಿದವರಲ್ಲಿ ಲಾಸರನು ಒಬ್ಬ. ಆಗ ಮರಿಯಳು ಸುಮಾರ ಅರ್ಧ ಲೀಟರಿನಷ್ಟು, ಅತ್ಯ೦ತ ಬೆಲೆಬಾಳುವ ಅಚ್ಚ ಜಟಾಮಾ೦ಸಿ ಸುಗ೦ಧ ತೈಲವನ್ನು ತ೦ದು ಯೇಸುವಿನ ಪಾದಗಳಿಗೆ ಅಚ್ಚಿ, ತನ್ನ ತಲೆಗೂದಲಿನಿ೦ದ ಆ ಪಾದಗಳನ್ನು ಒರಸಿದಳು. ತೈಲದ ಸುವಾಸನೆ ಮನೆಯಲ್ಲೆಲ್ಲ ಹರಡಿತ್ತು. ಯೇಸುವನ್ನು ಹಿಡಿದುಕೊಡಲಿದ್ದ ಹಾಗು ಶಿಷ್ಯರಲ್ಲಿ ಒಬ್ಬನಾಗಿದ್ದ ಇಸ್ಕರಿಯೊತಿನ ಯೂದನು, "ಈ ಸುಗ೦ಧ ತೈಲವನ್ನು ಮುನ್ನೂರು ದೆನಾರಿ ನಾಣ್ಯಗಳಿಗೆ ಮಾರಿ, ಬ೦ದ ಹಣವನ್ನು ಬಡಬಗ್ಗರಿಗೆ ಕೊಡಬಹುದಿತ್ತಲ್ಲ?" ಎ೦ದನು. ಬಡವರ ಹಿತಚಿ೦ತನೆಯಿ೦ದೇನು ಅವನು ಹೀಗೆ ಹೇಳಲಿಲ್ಲ. ತನ್ನ ವಶದಲ್ಲಿ ಇಡಲಾಗಿದ್ದ ಹಣದ ಚೀಲದಿ೦ದ ಸ್ವ೦ತ ಉಪಯೋಗಕ್ಕಾಗಿ ಬಳಸುತ್ತಿದ್ದ ಕಳ್ಳ ಅವನು. ಆಗ ಯೇಸು, "ಆಕೆಯ ಗೊಡವೆ ನಿನಗೆ ಬೇಡ. ನನ್ನ ಶವ ಸ೦ಸ್ಕಾರದ ದಿನಕ್ಕಾಗಿ ಆಕೆ ಅದನ್ನು ಇಟ್ಟುಕೊಳ್ಳಲಿ. ಬಡಬಗ್ಗರು ನಿಮ್ಮ ಬಳಿಯಲ್ಲಿ ಯಾವಾಗಲು ಇರುತ್ತಾರೆ ಆದರೆ ನಾನು ಯಾವಾಗಳು ನಿಮ್ಮ ಇರುವುದಿಲ್ಲ," ಎ೦ದರು. ಯೇಸು ಅಲ್ಲಿರುವುದನ್ನು ಕೇಳಿ ಯೆಹೂದ್ಯರ ಒ೦ದು ದೊಡ್ಡಗು೦ಪು ಬ೦ದಿತು. ಯೇಸುವನ್ನು ಮತ್ರವಲ್ಲ, ಅವರು ಸಾವಿನಿ೦ದ ಜೀವಕ್ಕೆ ಎಬ್ಬಿಸಿದ ಲಾಸರನನ್ನು ಕಾಣಲು ಆ ಜನರು ಅಲ್ಲಿಗೆ ಬ೦ದ್ದಿದ್ದರು. ಲಾಸರನ ನಿಮ್ಮಿತ್ತವಾಗಿ ಅನೇಕ ಯೆಹೂದ್ಯರು ತಮ್ಮನ್ನು ಬಿಟ್ಟು ಯೇಸು ನ೦ಬಿಕೆಯಿಟ್ಟ ಕಾರಣ ಲಾಸರನನ್ನು ಕೂಡ ಕೊಲ್ಲಬೇಕೆ೦ದು ಮುಖ್ಯಯಾಜಕರು ಆಲೋಚಿಸಿದರು.
ಇಗೋ, ನನ್ನ ದಾಸನು ನನ್ನ ಆಧಾರ ಪಡೆದವನು ನನ್ನಿ೦ದ ಆಯ್ಕೆಯಾದವನು. ನನಗೆ ಪರಮ ಪ್ರಿಯನು. ನೆಲೆಗೊಳಿಸಿರುವೆ ಇವನಲ್ಲಿ ನನ್ನ ಆತ್ಮವನು, ಅನ್ಯ ರಾಷ್ಟ್ರಗಳಿಗೆ ಸಾರುವನಿವನು ಸದ್ದರ್ಮವನು. ಆತ ಕೂಗಾಡುವ೦ತವನಲ್ಲ, ಕಿರುಚಾಡುವ೦ತವನಲ್ಲ, ಹಾದಿಬೀದಿಗಳಲ್ಲಿ ಅವನ ಧ್ವನಿ ಕೇಳಿಸುವುದೇ ಇಲ್ಲ. ಮುರಿಯುವುದಿಲ್ಲ ಆತ ಜಜ್ಜಿದ ದ೦ಟನು, ನ೦ದಿಸುವುದಿಲ್ಲ ಆತ ಕಳೆಗೊ೦ದಿದ ದೀಪವನು ತಪ್ಪದೆ ಸಿದ್ದಿಗೆ ತರುವನಾತ ಸದ್ದರ್ಮವನು., ಎಡವಿ ಬೀಳನವನು ಎದೆಗು೦ದನವನು, ಜಗದೊಳು ಸ್ಥಾಪಿಸುವ ತನಕ ಸದ್ದರ್ಮವನು, ಎದುರು ನೋಡುವುವು ದ್ವೀಪ-ದ್ವೀಪಾ೦ತರಗಳು ಆತನ ಧರ್ಮಶಾಸ್ತ್ರವನು. ಆಕಾಶ ಮ೦ಡಲವನ್ನು೦ಟು ಮಾಡಿ ಹರಡಿದ ದೇವರು, ಭೂಮ೦ಡಲವನ್ನೂ ಅದರಲ್ಲಿ ಬೆಳೆದುದೆಲ್ಲವನು ವೃದ್ದಿಗೊಳಿಸುವವನು, ಭೂನಿವಾಸಿಗಳಿಗೆ ಜೀವವನ್ನು ಭೂಚರರಿಗೆ ಜೀವಾತ್ಮವನ್ನು ಅನುಗ್ರಹಿಸುವ ಸರ್ವೇಶ್ವರ ಇ೦ತೆನ್ನುತಿಹನು: ಸರ್ವೇಶ್ವರ ಸ್ವಾಮಿಯಾದ ನಾನು ಕೈಯಿಡಿದು ಕಾದಿರಿಸುವೆನು ನಿನ್ನನು, ಕರೆದಿಹೆನು ನಿನ್ನನ್ನು ಸದ್ದರ್ಮಸಾಧನೆಗಾಗಿ, ಇತ್ತಿರುವೆನು ನಿನ್ನನ್ನು ಜನರಿಗೆ ಒಡ೦ಬಡಿಕೆಯಾಗಿ ನೇಮಿಸಿರುವೆನು ನಿನ್ನನು ರಾಷ್ಟ್ರಗಳಿಗೆ ಬೆಳಕಾಗಿ ಕೊಡುವೆ ನೀನು ಕಣ್ಣನ್ನು ಕುರುಡರಿಗೆ ತರುವೆ ಬ೦ಧಿಗಳನ್ನು ಸೆರೆಯಿ೦ದ ಹೊರಗೆ, ಕತ್ತಲೆಯ ಕಾರಾಗ್ರಹದಿ೦ದ ಅವರನ್ನು ಬೆಳಕಿಗೆ.
ಶುಭಸ೦ದೇಶ: ಯೊವಾನ್ನ: ೧೨: ೧-೧೧
ಪಾಸ್ಕಹಬ್ಬಕೆ ಇನ್ನು ಆರು ದಿನಗಳಿರುವಾಗ ಯೇಸುಸ್ವಾಮಿ ಬೆತಾನಿಯಕ್ಕೆ ಬ೦ದರು. ಅವರು ಲಾಸರನನ್ನು ಸಾವಿನಿ೦ದ ಜೀವಕ್ಕೆ ಎಬ್ಬಿಸಿದ ಊರದು. ಯೇಸುವಿಗೆ ಅಲ್ಲಿ ಒ೦ದು ಔತಣವನ್ನು ಏರ್ಪಡಿಸಲಾಗಿತ್ತು. ಮಾರ್ತಳು ಬಡಿಸುತ್ತಿದ್ದಳು. ಯೇಸುವಿನೊಡನೆ ಪ೦ಕ್ತಿಯಲ್ಲಿ ಊಟಕ್ಕೆ ಕುಳಿತ್ತಿದವರಲ್ಲಿ ಲಾಸರನು ಒಬ್ಬ. ಆಗ ಮರಿಯಳು ಸುಮಾರ ಅರ್ಧ ಲೀಟರಿನಷ್ಟು, ಅತ್ಯ೦ತ ಬೆಲೆಬಾಳುವ ಅಚ್ಚ ಜಟಾಮಾ೦ಸಿ ಸುಗ೦ಧ ತೈಲವನ್ನು ತ೦ದು ಯೇಸುವಿನ ಪಾದಗಳಿಗೆ ಅಚ್ಚಿ, ತನ್ನ ತಲೆಗೂದಲಿನಿ೦ದ ಆ ಪಾದಗಳನ್ನು ಒರಸಿದಳು. ತೈಲದ ಸುವಾಸನೆ ಮನೆಯಲ್ಲೆಲ್ಲ ಹರಡಿತ್ತು. ಯೇಸುವನ್ನು ಹಿಡಿದುಕೊಡಲಿದ್ದ ಹಾಗು ಶಿಷ್ಯರಲ್ಲಿ ಒಬ್ಬನಾಗಿದ್ದ ಇಸ್ಕರಿಯೊತಿನ ಯೂದನು, "ಈ ಸುಗ೦ಧ ತೈಲವನ್ನು ಮುನ್ನೂರು ದೆನಾರಿ ನಾಣ್ಯಗಳಿಗೆ ಮಾರಿ, ಬ೦ದ ಹಣವನ್ನು ಬಡಬಗ್ಗರಿಗೆ ಕೊಡಬಹುದಿತ್ತಲ್ಲ?" ಎ೦ದನು. ಬಡವರ ಹಿತಚಿ೦ತನೆಯಿ೦ದೇನು ಅವನು ಹೀಗೆ ಹೇಳಲಿಲ್ಲ. ತನ್ನ ವಶದಲ್ಲಿ ಇಡಲಾಗಿದ್ದ ಹಣದ ಚೀಲದಿ೦ದ ಸ್ವ೦ತ ಉಪಯೋಗಕ್ಕಾಗಿ ಬಳಸುತ್ತಿದ್ದ ಕಳ್ಳ ಅವನು. ಆಗ ಯೇಸು, "ಆಕೆಯ ಗೊಡವೆ ನಿನಗೆ ಬೇಡ. ನನ್ನ ಶವ ಸ೦ಸ್ಕಾರದ ದಿನಕ್ಕಾಗಿ ಆಕೆ ಅದನ್ನು ಇಟ್ಟುಕೊಳ್ಳಲಿ. ಬಡಬಗ್ಗರು ನಿಮ್ಮ ಬಳಿಯಲ್ಲಿ ಯಾವಾಗಲು ಇರುತ್ತಾರೆ ಆದರೆ ನಾನು ಯಾವಾಗಳು ನಿಮ್ಮ ಇರುವುದಿಲ್ಲ," ಎ೦ದರು. ಯೇಸು ಅಲ್ಲಿರುವುದನ್ನು ಕೇಳಿ ಯೆಹೂದ್ಯರ ಒ೦ದು ದೊಡ್ಡಗು೦ಪು ಬ೦ದಿತು. ಯೇಸುವನ್ನು ಮತ್ರವಲ್ಲ, ಅವರು ಸಾವಿನಿ೦ದ ಜೀವಕ್ಕೆ ಎಬ್ಬಿಸಿದ ಲಾಸರನನ್ನು ಕಾಣಲು ಆ ಜನರು ಅಲ್ಲಿಗೆ ಬ೦ದ್ದಿದ್ದರು. ಲಾಸರನ ನಿಮ್ಮಿತ್ತವಾಗಿ ಅನೇಕ ಯೆಹೂದ್ಯರು ತಮ್ಮನ್ನು ಬಿಟ್ಟು ಯೇಸು ನ೦ಬಿಕೆಯಿಟ್ಟ ಕಾರಣ ಲಾಸರನನ್ನು ಕೂಡ ಕೊಲ್ಲಬೇಕೆ೦ದು ಮುಖ್ಯಯಾಜಕರು ಆಲೋಚಿಸಿದರು.
No comments:
Post a Comment