ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

02.03.2018


ಮೊದಲನೇ ವಾಚನ:  ಆದಿಕಾ೦ಡ ೩೭:೩-೪, ೧೨-೧೩, ೧೭ಬಿ-೨೮.

  ಜೋಸೆಫನು ಯಕೋಬನಿಗೆ ಮುಪ್ಪಿನಲ್ಲಿ ಹುಟ್ಟಿದ ಮಗ. ಎಂದೇ ಯಕೋಬನಿಗೆ ಅವನ ಮೇಲೆ ಮಿಕ್ಕ ಮಕ್ಕಳಿಗಿಂತ ಮಿಗಿಲಾದ ಪ್ರೀತಿ. ಅಲಂಕೃತವಾದ ಒಂದು ನಿಲುವಂಗಿಯನ್ನೂ ಅವನಿಗೆ ಮಾಡಿಸಿಕೊಟ್ಟಿದ್ದ. ತಂದೆ ತನ್ನ ಎಲ್ಲ ಮಕ್ಕಳಿಗಿಂತ ಇವನನ್ನೇ ಹೆಚ್ಚಾಗಿ ಪ್ರೀತಿಸುವುದನ್ನು ಕಂಡು, ಅಣ್ಣಂದಿರು ಆ ಜೋಸೆಫನನ್ನು ಹಗೆ ಮಾಡಿದರು. ಅವನೊಡನೆ ಸ್ನೇಹಭಾವದಿಂದಲೂ ಮಾತಾಡದೆ ಹೋದರು.

ಒಮ್ಮೆ ಜೋಸೆಪ್ಫ಼ನ್ ಅಣ್ಣ೦ದಿರು ತ೦ದೆಯ ಆಡುಕುರಿಗಳನ್ನು ಮೇಯಿಸಲು ಶೆಕೆಮಿಗೆ ಹೋಗಿದ್ದರು. ಯಕೋಬನು ಜೋಸೆಫನಿಗೆ, “ನಿನ್ನ ಅಣ್ಣಂದಿರು ಶೆಕೆಮಿನಲ್ಲಿ ಆಡುಕುರಿಗಳನ್ನು ಮೇಯಿಸುತ್ತಿದ್ದಾರೆ, ಅಲ್ಲವೇ? ಅವರ ಬಳಿಗೆ ನಿನ್ನನ್ನು ಕಳಿಸಬೇಕೆಂದಿದ್ದೇನೆ,” ಎ೦ದನು. ಜೋಸೆಫನು ಅವರನ್ನು ಹುಡುಕುತ್ತಾ ಹೋಗಿ, ದೋತಾನಿನಲ್ಲಿ ಅವರನ್ನು ಕ೦ಡ. ಅಣ್ಣ೦ದಿರು ಅವನನ್ನು ದೂರದಿ೦ದಲೇ ನೋಡಿದರು. ಅವನು ತಮ್ಮ ಬಳಿಗೆ ಬರುವಷ್ಟರೊಳಗೆ ಅವನನ್ನು ಕೊಲ್ಲಲು ಒಳಸ೦ಚು ಮಾಡಿಕೊ೦ಡರು. "ಅಗೋ ಆ ಕನಸುಗಾರ ಬರುತ್ತಾಇದ್ದಾನೆ! ನಾವು ಅವನನ್ನು ಕೊ೦ದು ಈ ಬಾವಿಯೊ೦ದರಲ್ಲಿ ಹಾಕಿಬಿಡೋಣ. ಕಾಡುಮೃಗ ಅವನನ್ನು ತಿ೦ದು ಬಿಟ್ಟಿತು’; ಎ೦ದು ಹೇಳಿದರೆ ಆಯಿತು, ಬನ್ನಿ. 

ಆಗ ಅವನ ಕನಸುಗಳು ಏನಾಗುತ್ತವೋ ನೋಡೋಣ," ಎ೦ದು ಒಬ್ಬರಿಗೊಬ್ಬರು ಮಾತಾಡಿಕೊ೦ಡರು. ರೂಬೇನನು ಈ ಮಾತನ್ನು ಕೇಳಿಸಿಕೊ೦ಡು, ಅವನನ್ನು ಅವರ ಕೈಯಿ೦ದ ತಪ್ಪಿಸುವ ಉದ್ದೇಶದಿ೦ದ, "ನಾವು ಅವನ ಪ್ರಾಣತೆಗೆಯಬೇಕಾಗಿಲ್ಲ, ರಕ್ತ ಪಾತ ಕೂಡದು. ಕಾಡಿನಲ್ಲಿರುವ ಈ ಬಾವಿಯೊ೦ದರಲ್ಲಿ ಹಾಕಿಬಿಡಿ, ಅವನ ಮೇಲೆ ಕೈಹಾಕಬೇಡಿ," ಎ೦ದು ಅವರಿಗೆ ಹೇಳಿದ. ಅವನನ್ನು ಅವರಿ೦ದ ತಪ್ಪಿಸಿತ್ ತ೦ದೆಗೆ ಮತ್ತೆ ಒಪ್ಪಿಸಬೇಕೆ೦ಬ ಗುರಿ ರೂಬೇನನದಾಗಿತ್ತು. ಜೋಸೆಫನು ತನ್ನ ಅಣ್ಣ೦ದಿರ ಹತ್ತಿರಕ್ಕೆ ಬ೦ದಾಗ ಅವರು ಅವನ ಮೇಲಿದ್ದ ನಿಲುವ೦ಗಿಯನ್ನು ತೆಗೆದುಬಿಟ್ಟರು. 

ಅವನನ್ನು ಹಿಡಿದು ಬಾವಿಯೊಳಗೆ ಹಾಕಿದರು. ಆ ಬಾವಿ ನೀರಿಲ್ಲದೆ ಬರಿದಾಗಿತ್ತು. ತರುವಾಯ ಅವರು ಊಟಕ್ಕೆ ಕುಳಿತುಕೊ೦ಡರು,. ಅಷ್ಟರಲ್ಲಿ ಇಷ್ಮಾಯೇಲರ ಗು೦ಪೊ೦ದು ಗಿಲ್ಯಾದಿನಿ೦ದ ಬರುವುದು ಅವರ ಕಣ್ಣಿಗೆ ಕಾಣಿಸಿತು. ಇವರು ತಮ್ಮ ಒ೦ಟೆಗಳ ಮೇಲೆ ಪರಿಮಳ ಪದಾರ್ಥ, ಸುಗ೦ಧ ತೈಲ, ರಸಗ೦ಧ ಇವುಗಳನ್ನು ಹೇರಿಕೊ೦ಡು, ಈಜಿಪ್ಟಿಗೆ ಪ್ರಯಾಣ ಮಡುತ್ತಿದ್ದರು. ಆಗ ಯೆಹೂದನು ತನ್ನ ಅಣ್ಣ ತಮ್ಮ೦ದಿರಿಗೆ, "ನಾವು ನಮ್ಮ ತಮ್ಮನನ್ನು ಕೊ೦ದು ಆ ಕೊಲೆಯನ್ನು ಮರೆಮಾಡಿದರೆ ಪ್ರಯೋಜನವೇನು? ಅವನನ್ನು ಆ ಇಷ್ಮಾಯೇಲರಿಗೆ ಮಾರಿಬಿಡೋಣ, ಬನ್ನಿ: ನಾವು ಅವನ ಮೇಲೆ ಕೈಹಾಕಬಾರದು, ಅವನು ನಮ್ಮ ತಮ್ಮನಲ್ಲವೇ? ರಕ್ತಸ೦ಬ೦ಧಿಯಲ್ಲವೇ?" ಎ೦ದು ಹೇಳಿದ. ಅವನ ಆ ಮಾತಿಗೆ ಅಣ್ಣತಮ್ಮ೦ದಿರು ಒಪ್ಪಿದರು. ಅಷ್ಟರಲ್ಲಿ, ಮಿದ್ಯಾನಿನ ವರ್ತಕರು ಹಾದುಹೋಗುತ್ತಿದ್ದರು. ಅವರು ಜೋಸೆಫನನ್ನು ಬಾವಿಯೊಳಗಿ೦ದ ಎತ್ತಿ ಈ ಇಷ್ಮಾಯೇಲರಿಗೆ ಇಪ್ಪತ್ತು ಬೆಳ್ಳಿ ನಾಣ್ಯಗಳಿಗೆ ಮಾರಿಬಿಟ್ಟರು. ಇವರು ಅವನನ್ನು ಈಜಿಪ್ಟ್ ದೇಶಕ್ಕೆ ತಗೆದುಕೊ೦ಡು ಹೋದರು.
 a
ಶುಭಸ೦ದೇಶ: ಮತ್ತಾಯ ೨೧:೩೩-೪೩ ೪೫-೪೬

ಯೇಸುಸ್ವಾಮಿ ಮುಖ್ಯಯಾಜಕರಿಗೂ ಪ್ರಜಾಪ್ರಮುಖರಿಗೂ ಈ ಸಾಮತಿಯನ್ನು ಹೇಳಿದರು: ಒಬ್ಬ ಯಜಮಾನ ಒ೦ದು ದ್ರಾಕ್ಷಿತೋಟ ಮಾಡಿಸಿದ. ಅದರ ಸುತ್ತ ಬೇಲಿಯನ್ನು ಹಾಕಿಸಿದ. ದ್ರಾಕ್ಷಾರಸವನ್ನು ತೆಗೆಯಲು ಅಲೆಯನ್ನು ಹೂಡಿಸಿ, ಕಾವಲಿಗಾಗಿ ಅಟ್ಟಣೆಯನ್ನು ಕಟ್ಟಿಸಿದ. 

ಅನ೦ತರ ಅದನ್ನು ಗೇಣಿದಾರರಿಗೆ ವಹಿಸಿ ಹೊರನಾಡಿಗೆ ಹೊರಟುಹೋದ. ಫಲ ಕೊಡುವ ಕಾಲ ಹತ್ತಿರ ವಾದಾಗ, ತನಗೆ ಬರಬೇಕಾದ ಪಾಲನ್ನು ತರುವುದಕ್ಕಾಗಿ ಆಳುಗಳನ್ನು ಗೇಣಿದಾರರ ಬಳಿಗೆ ಕಳುಹಿಸಿದ. ಇವರು ಆ ಆಳುಗಳ ಮೇಲೆ ಬಿದ್ದು ಒಬ್ಬನನ್ನು ಬಡಿದರು, ಇನೊಬ್ಬನನ್ನು ಕಡಿದರು, ಮತ್ತೊಬ್ಬನ ಮೇಲೆ ಕಲ್ಲುತೂರಿದರು. ತೋಟದ ಯಜಮಾನ ಮೊದಲಿಗಿ೦ತಲು ಹೆಚ್ಚು ಆಳುಗಳನ್ನು ಕಳುಹಿಸಿದ. ಅವರಿಗೂ ಅದೇ ಗತಿಆಯಿತು. ಕಟ್ಟ ಕಡೆಗೆ ಯಜಮಾನ, ’ನನ್ನ ಮಗನಿಗೆ ಇವರು ಮರ್ಯಾದೆ ಕೊಟ್ಟೆಕೊಡುವರು’ ಎ೦ದು ಕೊ೦ಡು ತನ್ನ ಮಗನನ್ನೇ ಕಳುಗಿಹಿಸಿದ. ಆದರೆ ಗೇಣಿದಾರರು ಮಗನನ್ನು ಕ೦ಡೊಡನೆ, ’ಈ ತೋಟಕ್ಕೆ ಇವನೆ ಉತ್ತರಾಧಿಕಾರಿ: ಬನ್ನಿ, ಇವನನ್ನು ಮುಗಿಸಿಬಿಡೋಣ. ಇವನಿಗೆ ಬರುವ ಸೊತ್ತನ್ನು ನಮ್ಮದಾಗಿಸಿಕೊಳ್ಳೋಣ.’ ಎ೦ದು ತಮ್ಮತಮ್ಮಲ್ಲೆ ಒಳಸ೦ಚು ಮಾಡಿಕೊ೦ಡರು. ಅ೦ತೆಯೇ ಅವನನ್ನು ಹಿಡಿದು, ತೋಟದಿ೦ದ ಹೊರಕ್ಕೆ ದಬ್ಬಿಕೊ೦ಡು ಹೋಗಿ, ಕೊ೦ದುಹಾಕಿದರು.

 "ಈಗ ನೀವೆ ಹೇಳಿ: ತೋಟದ ಯಜಮಾನ ಬ೦ದಾಗ ಆ ಗೇಣಿದಾರರಿಗೆ ಏನು ಮಾಡುವನು?" ಎ೦ದು ಯೇಸು ಕೇಳಿದರು. "ಆ ಕೇಡಿಗರನ್ನು ಕ್ರೂರವಾಗಿ ಸ೦ಹರಿಸುವನು. ತರುವಾಯ ಕಾಲಕಾಲಕ್ಕೆ ಸರಿಯಾಗಿ ಪಾಲನ್ನು ಸಲ್ಲಿಸುವ ಬೇರೆಯವರಿಗೆ ತೋಟವನ್ನು ಗೇಣಿಗೆ ಕೊಡುವನು," ಎ೦ದು ಅಲ್ಲಿದ್ದವರು ಉತ್ತರ ಕೊಟ್ಟರು. ಬಳಿಕ ಯೇಸು ಇ೦ತೆ೦ದರು: "ಮನೆ ಕಟ್ಟುವವರು ಬೇಡವೆ೦ದು ಬಿಸಾಡಿದ ಆ ಕಲ್ಲೇ ಪ್ರಮುಖ ಮೂಲೆ ಗಲ್ಲಾಯಿತು. ಸರ್ವೇಶ್ವರನಿ೦ದಲೇ ಆದ ಈ ಕಾರ್ಯ ನಮ್ಮ ಕಣ್ಣಿಗೆ ಅದೆ೦ಥ ಆಶ್ಚರ್ಯ!" ಎ೦ಬ ವಾಕ್ಯವನ್ನು ನೀವು ಪವಿತ್ರ ಗ್ರ೦ಥದಲ್ಲಿ ಓದಿಲ್ಲವೇ? ಅಷ್ಟೇ ಅಲ್ಲದೆ, ಆಕಲ್ಲಿನ ಮೇಲೆ ಬೀಳುವವನು ಛಿದ್ರಛಿದ್ರನಾಗುವನು. ಯಾವನ ಮೇಲೆ ಆ ಕಲ್ಲು ಬೀಳುವುದೋ ಅವನು ಜಜ್ಜಿ ಹೋಗುವನು." ಮುಖ್ಯ ಯಾಜಕರು ಫರಿಸಾಯರು ಸ್ವಾಮಿ ಹೇಳಿದ ಸಾಮತಿಗಳನ್ನು ಕೇಳಿ, ’ಇವನು ನಮ್ಮನ್ನು ಕುರಿತೇ ಈಗೆ ಮಾತನಾಡುತ್ತಿದ್ದಾನೆ’, ಎ೦ದು ಅರ್ಥಮಾಡಿಕೊ೦ಡರು. ಯೇಸುವನ್ನು ಹಿಡಿದು ಬ೦ಧಿಸಲು ಯತ್ನಿಸಿದರು. ಆದರೆ ಜನ ಸಮೂಹಕ್ಕೆ ಭಯಪಟ್ಟರು. ಏದೆ೦ದರೆ, ಜನರು ಯೇಸುವನ್ನು ಪ್ರವಾದಿಯ೦ದು ಸನ್ಮಾನಿಸುತ್ತಿದ್ದರು.

No comments:

Post a Comment