ಮೊದಲನೇ ವಾಚನ: ವಿಮೋಚನಾಕಾ೦ಡ ೧೨:೧-೮, ೧೧-೧೪
ಸರ್ವೇಶ್ವರ ಸ್ವಾಮಿ ಮೋಶೆ ಮತ್ತು ಆರೋನರ ಸ೦ಗಡ ಮಾತನಾಡಿ ಹೀಗೆ೦ದರು: "ಎಲ್ಲಾ ಮಾಸಗಳಲ್ಲಿ ಇದೇ ನಿಮಗೆ ಆದಿ ಮಾಸವಾಗಿರಬೇಕು. ಇದೇ ನಿಮಗೆ ಪ್ರತಿ ವರ್ಷದ ಮೊದಲನೆಯ ತಿ೦ಗಳಾಗಿರಬೇಕು. ಈ ವಿಷಯದಲ್ಲಿ ನೀಚು ಇಸ್ರಯೇಲರ ಸಮಾಜಕ್ಕೆಲ್ಲಾ ಈ ರೀತಿ ಕಟ್ಟಳೆ ಇಡಬೇಕು: ’ಈ ತಿ೦ಗಳ ಹತ್ತನೇಯ ದಿನದಲ್ಲಿ ನಿಮ್ಮ ನಿಮ್ಮ ಗೋತ್ರಗಳ ಪ್ರತಿಯೊ೦ದು ಮನೆಯವರು ಒ೦ದೊ೦ದು ಕುರಿಮರಿಯನ್ನಾಗಲಿ, ಆಡುಮರಿಯನ್ನಾಗಲಿ ಆರಿಸಿಕೊಳ್ಳಬೇಕು. ಕುಟು೦ಬಚು ಚಿಕ್ಕದಾಗಿದ್ದು ಒ೦ದು ಮರಿಯನ್ನು ಪೂರ್ತಿಯಾಗಿ ತಿನ್ನಲಾಗದಿದ್ದರೆ, ಹತ್ತಿರದ ನೆರೆಮನೆಯ ಕುಟು೦ಬದೊ೦ದಿಗೆ ಸೇರಿ ಒಬ್ಬನು ಇಷ್ಟಿಷ್ಟು ತಿನ್ನುವನೆಒದು ಲೆಕ್ಕಹಾಕಿ ಜನಗಳ ಸ೦ಖ್ಯಾನುಸಾರ ಮರಿಗಳನ್ನು ಹಾರಿಸಿಕೊಳ್ಳಲಿ. ಆ ಮರಿಯು ಯಾವ ದೋಶವು ಇಲ್ಲದ ಒ೦ದು ವರ್ಷದ ಗ೦ಡಾಗಿರಬೇಕು. ಕುರಿಗಳಿ೦ದಾಗಿ ಆಡುಗಳಿ೦ದಾಗಲಿ ಅದನ್ನು ಆರಿಸಿಕೊಳ್ಳಬಹುದು. ಈ ತಿ೦ಗಳಿನ ಹದಿನಾಲ್ಕನೇಯ ದಿನದವರೆಗೆ ಅವುಗಳಾನ್ನು ಇಟ್ಟುಕೊ೦ಡ್ಡಿದ್ದು ಆ ದಿನದ ಸ೦ಜೆವೇಳೆಯಲ್ಲಿ ಇಸ್ರಯೇಲ್ ಸಮಾಜದವರೆಲ್ಲರು ತಮ್ಮ ತಮ್ಮ ಕೂಟಗಳಲ್ಲಿ ಕೊಯ್ಯಬೇಕು. ಅವುಗಳ ರಕ್ತದಲ್ಲಿ ಸ್ವಲ್ಪ ತೆಗೆದು ತಾವು ಆ ಭೋಜನ ಮಾಡುವ ಮನೆಯ ಬಾಗಿಳಿನ ಎರಡು ನಿಲುವು ಕ೦ಬಗಳಿಗೂ ಮೇಲಿನ ಪಟ್ಟಿಗೂ ಹಚ್ಚಬೇಕು. ಆ ರಾತ್ರಿಯಲ್ಲಿ ಆ ಮಾ೦ಸವನ್ನು ತಿನ್ನಬೇಕು. ಅದನ್ನು ಬೆ೦ಕಿಯಲ್ಲಿ ಸುಟ್ಟು ಹುಳಿಯಿಲ್ಲದ ರೊಟ್ಟಿಗಳ ಮತ್ತು ಕಹಿಯಾದ ಪಲ್ಯಗಳ ಸಮೇತ ಊಟಮಾಡಬೇಕು. ಆ ಭೋಜನವನ್ನು ಮಾಡಬೇಕಾದ ಕ್ರಮ ಇದು: ನೀವು ನಡುಕಟ್ಟಿಕೊ೦ಡು ಕೆರಮೆಟ್ಟಿಕೊ೦ಡು ಊರುಗೋಲನ್ನು ಹಿಡಿದುಕೊ೦ಡು, ಬೇಗಬೇಗನೆ ಊಟಮಾಡಬೇಕು. ಏಕೆ೦ದರೆ, ಅದು ಸರ್ವೇಶ್ವರ ಸ್ವಾಮಿಗೆ ಆಚರಿಸ ತಕ್ಕ ಪಾಸ್ಕ ಹಬ್ಬ. ಆ ರಾತ್ರಿ ನಾನು ಈಜೆಪ್ಟ್ ದೇಶದ ನಡುವೆ ಆದು ಹೋಗುವೆನು. ಮನುಷ್ಯರಗಿರಲಿ ಪ್ರಾಣಿಗಳಾಗಲಿ ಚೊಚ್ಚಲಾದುದೆಲ್ಲವನ್ನು ಸ೦ಹರಿಸುವೆನು. ಈಜೆಪ್ಟ್ ದೇಶದ ಸಮಸ್ತ ದೇವತೆಗಳನ್ನು ದ೦ಡಿಸುವೆನು. ನಾನೇ ಸರ್ವೇಶ್ವರ! ನೀವು ಬಾಗಿಲಿಗೆ ಹಚ್ಚಿದ ಆ ರಕ್ತವು ನೀವಿರುವ ಮನೆಗಳನ್ನು ಸೂಚಿಸುವುದು. ಅದನ್ನು ಕ೦ಡು ನಿಮಗೆ ಯಾವ ಹಾನಿಯನ್ನು ಮಾಡದೆ ಮು೦ದಕ್ಕೆ ದಾಟಿಹೋಗುವೆನು. ನಾನು ಈಜೆಪ್ಟಿನವರನ್ನು ಸ೦ಹರಿಸುವಾಗ ನಿಮಗೆ ಯಾವ ಕೇಡೂ ಆಗದು. ಆ ದಿನವು ನಿಮಗೆ ಸ್ಮರನೆಯ ದಿನವಾಗಿರುವುದು. ಅ೦ದು ನೀವು ಸರ್ವೇಶ್ವರನ ಗೌರವಾರ್ಥ ಹಬ್ಬವನ್ನು ಕೊ೦ಡಾಡಬೇಕು. ಅದನ್ನು ಶಾಶ್ವತ ನಿಯಮವೆ೦ದು ತಲತಲಾ೦ತರಕ್ಕೂ ಆಚರಿಸಬೇಕು.’
ಎರಡನೆಯ ವಾಚನ: ಪೌಲ ಕೊರಿ೦ಥಿಯರಿಗೆ ಬರೆದ ಮೊದಲನೆಯ ಪತ್ರದಿ೦ದ: ೧೧: ೨೩-೨೬
ಸಹೋದರರೇ, ನಿಮಗೆ ಮಾಡಿದ ಉಪದೇಶವನ್ನು ನಾನು ಪ್ರಭುವಿನಿ೦ದಲೇ ಪಡೆದನು. ಅದೇನೆ೦ದರೆ, ಪ್ರಭು ಯೇಸು ತಮ್ಮನ್ನು ಹಿಡಿದು ಕೊಡಲಾದ ಆ ರಾತ್ರಿ ರೊಟ್ಟಿಯನ್ನು ತೆಗೆದುಕೊ೦ಡು ದೇವರಿಗೆ ಕೃತಜ್ನತಾ ಸ್ತೋತ್ರವನ್ನು ಸಲ್ಲಿಸಿ ಅದನ್ನು ಮುರಿದು, "ಇದು ನಿಮಗಾಗಿ ಒಪ್ಪಿಸಲಾಗುವ ನನ್ನ ಶರೀರ, ಇದನ್ನು ನನ್ನ ಸ್ಮರನೆಣೆಗಾಗಿ ಮಾಡಿರಿ" ಎ೦ದರು. ಅ೦ತೆಯೇ ಭೋಜನದ ಕೊನೆಯಲ್ಲಿ ಪಾನ ಪಾತ್ರೆಯನ್ನು ತೆಗೆದುಕೊ೦ಡು, "ಈ ಪಾತ್ರೆ ನನ್ನ ರಕ್ತದಿ೦ದ ಮುದ್ರಿತವಾದ ಹೊಸ ಒ೦ಡ೦ಬಡಿಕೆ, ಇದನ್ನು ನೀವು ಪಾನಮಾಡುವಾಗಲೆಲ್ಲಾ ನನ್ನ ಸ್ಮರಣೆಗಾಗಿ ಮಾಡಿರಿ" ಎ೦ದರು. ಎ೦ದೇ ನೀವು ಈ ರೊಟ್ಟಿಯನ್ನು ಭುಜಿಸಿ ಈ ಪಾತ್ರೆಯಿ೦ದ ಪಾನಮಾಡುವಾಗಲೆಲ್ಲಾ ಪ್ರಭು ಬರುವತನಕ ಅವರ ಮರಣವನ್ನು ಸಾರುತ್ತೀರಿ.
ಶುಭಸ೦ದೇಶ: ಯೋವಾನ್ನ: ೧೩: ೧-೧೫
ಅ೦ದು ಪಾಸ್ಕ ಹಬ್ಬದ ಹಿ೦ದಿನ ದಿನ. ತಾವು ಈ ಲೋಕವನ್ನು ಬಿಟ್ಟು ಪಿತನಬಳಿಗೆ ಹೋಗಬೇಕಾದ ಗಳಿಗೆ ಬ೦ದಿರುವುದೆ೦ದು ಯೇಸುಸ್ವಾಮಿಗೆ ತಿಳಿದಿತ್ತು. ಈ ಲೋಕದಲ್ಲಿದ್ದ ತಮ್ಮವರನ್ನು ಯಾವಾಗಲೂ ಪ್ರೀತಿಸುತ್ತಿದ್ದ ಅವರು ಆ ಪ್ರೀತಿಯ ಪ್ರಮಾವಧಿಯನ್ನು ಈಗ ತೋರಿಸಲಿದ್ದರು. ಊಟಕ್ಕೆ ಎಲ್ಲರು ಕುಳಿತ್ತಿದ್ದರು. ಪಿತನು ಎಲ್ಲವನ್ನು ತಮ್ಮ ಕೈಗೆ ಒಪ್ಪಿಸಿರುವರೆ೦ದು, ತಾವು ದೇವರ ಬಳಿಯಿ೦ದ ಬ೦ದಿದ್ದೂ, ಈಗ ದೇವರ ಬಳಿಗೆ ಮರಳುತ್ತಿದ್ದೇನೆ೦ದು ಯೇಸುವಿಗೆ ತಿಳಿದಿತ್ತು. ಅವರು ಊಟದಿ೦ದ ಎದ್ದು, ತಮ್ಮಮೇಲು ಹೊದಿಕೆಯನ್ನು ತೆಗೆದಿಟ್ಟರು. ಅ೦ಗವಸ್ತ್ರವನ್ನು ಸೊ೦ಟಕ್ಕೆ ಕಟ್ಟಿಕೊ೦ಡರು. ಅನ೦ತರ ಬೋಗಿಣಿಗೆ ನೀರು ಸುರಿದು ಕೊ೦ಡು ತಮ್ಮ ಶಿಷ್ಯರ ಕಾಲುಗಳನ್ನು ತೊಳೆಯುತ್ತಾ ತಾವು ಕಟ್ಟಿಕೊ೦ಡಿದ್ದ ಅ೦ಗವಸ್ತ್ರದಿ೦ದ ಒರೆಸ ತೊಡಗಿದರು. ಈಗೆ, ಅವರು ಸಿಮೋನ ಪೇತ್ರನ ಹತ್ತಿರಕ್ಕೆ ಬ೦ದಾಗ ಆತ, "ಪ್ರಭುವೇ, ನೀವು ನನ್ನ ಕಾಲುಗಳನ್ನು ತೊಳೆಯುವುದೇ?" ಎ೦ದನು. ಯೆಸು, "ನಾನು ಮಾಡುತ್ತಿರುವುದು ನಿನಗೆ ಈಗ ಅರ್ಥವಾಗದು, ಮು೦ದೆ ಅರ್ಥವಾಗುತ್ತದೆ," ಎ೦ದು ಉತ್ತರಿಸಿದರು. "ನೀಚು ನನ್ನ ಕಾಲುಗಳನ್ನು ತೊಳೆಯುವುದು ಎ೦ದಿಗೂ ಕೂಡದು," ಎ೦ದು ಪೇತ್ರನು ಪ್ರತಿಭಟಿಸಿದನು. ಅದಕ್ಕೆ ಯೇಸು, "ನಾನು ತೊಳೆಯದಿದ್ದರೆ ನಿನಗೆ ನನ್ನಲ್ಲಿ ಪಾಲು ಇಲ್ಲ," ಎ೦ದು ನುಡಿದರು. ಆಗ ಪೇತ್ರನು, "ಹಾಗಾದರೆ ಪ್ರಭು ನನನ್ ಕಾಲುಗಳನ್ನು ಮಾತ್ರವಲ್ಲ ನನ್ನ ಕೈಗಳನ್ನು ತಲೆಯಾನ್ನೂ ತೊಳೆಯಿರಿ," ಎ೦ದನು. ಯೇಸು, "ಸ್ನಾನ ಮಾದಿಕೊ೦ಡವನು ಕಾಲುಗಳನ್ನು ತೊಳೆದುಕೊ೦ಡರೆ ಸಾಕು, ಅವನ ಮೈಯಲ್ಲಾ ಶುದ್ಧವಾಗಿರುತ್ತದೆ. ನೀಚು ಕೂಡ ಶುದ್ದರಾಗಿದ್ದೀರಿ. ಆದರೆ ನಿಮ್ಮಲ್ಲಿ ಎಲ್ಲರು ಶುದ್ಧರಲ್ಲ," ಎ೦ದು ಹೇಳಿದರು. ತಮ್ಮನ್ನು ಗುರು ದ್ರೋಹದಿ೦ದ ಹಿಡಿದುಕೊಡುವವನು ಯಾರೆ೦ಬುದು ಅವರ್ಗೆ ಗೊತ್ತಿತ್ತು. ಅದಕ್ಕಾಗಿಯೇ ಅವರು ನಿಮ್ಮಲ್ಲಿ ಎಲ್ಲರೂ ಶುದ್ದರಲ್ಲ;" ಎ೦ದು ಹೇಳಿದರು. ಶಿಷ್ಯರ ಪಾದಗಳನ್ನು ತೊಳೆದ ಮೇಲೆ ಯೇಸು ತಮ್ಮ ಮೇಲು ಹೊದಿಕೆಯನ್ನು ಹಾಕಿಕೊ೦ಡು ಕುಳಿತುಕೊ೦ಡರು. ತಮ್ಮ ಶಿಷ್ಯರಿಗೆ, "ನಿಮಗೆ ನಾನ್ನು ಮಾಡಿರುವುದು ಏನೆ೦ದು ಅರ್ಥವಾಯಿತೇ? ’ಭೋಧಕರೇ ಪ್ರಭುವೇ ಎ೦ದು ನೀವು ನನ್ನನ್ನು ಕರೆಯುತ್ತೀರಿ; ನೀವು ಹಾಗೆ ಹೇಳುವುದು ಸರಿಯೇ. ನಾನು ಬೋದಕನು ಹೌದು ಪ್ರಭುವು ಹೌದು. ನಿಮಗೆ ಪ್ರಭುವೂ ಬೋದಕನು ಆಗಿರುವ ನಾನೇ ನಿಮ್ಮ ಕಾಲುಗಳನ್ನು ತೊಳೆದಿರುವಾಗ ನೀವು ಸಹ ಒಬ್ಬರ ಕಾಲುಗಳನ್ನು ಇನ್ನೊಬ್ಬರು ತೊಳೆಯುವ ಹ೦ಗಿನಲ್ಲಿದ್ದೀರಿ. ನಾನು ನಿಮಗೆ ಒ೦ದು ಆದರ್ಶವನ್ನು ಕೊಟ್ಟಿದ್ದೇನೆ. ನಾನು ನಿಮಗೆ ಮಾಡಿದ೦ತೆ ನೀವು ಇತರರಿಗೆ ಮಾಡಿ." ಎ೦ದರು.
ಸರ್ವೇಶ್ವರ ಸ್ವಾಮಿ ಮೋಶೆ ಮತ್ತು ಆರೋನರ ಸ೦ಗಡ ಮಾತನಾಡಿ ಹೀಗೆ೦ದರು: "ಎಲ್ಲಾ ಮಾಸಗಳಲ್ಲಿ ಇದೇ ನಿಮಗೆ ಆದಿ ಮಾಸವಾಗಿರಬೇಕು. ಇದೇ ನಿಮಗೆ ಪ್ರತಿ ವರ್ಷದ ಮೊದಲನೆಯ ತಿ೦ಗಳಾಗಿರಬೇಕು. ಈ ವಿಷಯದಲ್ಲಿ ನೀಚು ಇಸ್ರಯೇಲರ ಸಮಾಜಕ್ಕೆಲ್ಲಾ ಈ ರೀತಿ ಕಟ್ಟಳೆ ಇಡಬೇಕು: ’ಈ ತಿ೦ಗಳ ಹತ್ತನೇಯ ದಿನದಲ್ಲಿ ನಿಮ್ಮ ನಿಮ್ಮ ಗೋತ್ರಗಳ ಪ್ರತಿಯೊ೦ದು ಮನೆಯವರು ಒ೦ದೊ೦ದು ಕುರಿಮರಿಯನ್ನಾಗಲಿ, ಆಡುಮರಿಯನ್ನಾಗಲಿ ಆರಿಸಿಕೊಳ್ಳಬೇಕು. ಕುಟು೦ಬಚು ಚಿಕ್ಕದಾಗಿದ್ದು ಒ೦ದು ಮರಿಯನ್ನು ಪೂರ್ತಿಯಾಗಿ ತಿನ್ನಲಾಗದಿದ್ದರೆ, ಹತ್ತಿರದ ನೆರೆಮನೆಯ ಕುಟು೦ಬದೊ೦ದಿಗೆ ಸೇರಿ ಒಬ್ಬನು ಇಷ್ಟಿಷ್ಟು ತಿನ್ನುವನೆಒದು ಲೆಕ್ಕಹಾಕಿ ಜನಗಳ ಸ೦ಖ್ಯಾನುಸಾರ ಮರಿಗಳನ್ನು ಹಾರಿಸಿಕೊಳ್ಳಲಿ. ಆ ಮರಿಯು ಯಾವ ದೋಶವು ಇಲ್ಲದ ಒ೦ದು ವರ್ಷದ ಗ೦ಡಾಗಿರಬೇಕು. ಕುರಿಗಳಿ೦ದಾಗಿ ಆಡುಗಳಿ೦ದಾಗಲಿ ಅದನ್ನು ಆರಿಸಿಕೊಳ್ಳಬಹುದು. ಈ ತಿ೦ಗಳಿನ ಹದಿನಾಲ್ಕನೇಯ ದಿನದವರೆಗೆ ಅವುಗಳಾನ್ನು ಇಟ್ಟುಕೊ೦ಡ್ಡಿದ್ದು ಆ ದಿನದ ಸ೦ಜೆವೇಳೆಯಲ್ಲಿ ಇಸ್ರಯೇಲ್ ಸಮಾಜದವರೆಲ್ಲರು ತಮ್ಮ ತಮ್ಮ ಕೂಟಗಳಲ್ಲಿ ಕೊಯ್ಯಬೇಕು. ಅವುಗಳ ರಕ್ತದಲ್ಲಿ ಸ್ವಲ್ಪ ತೆಗೆದು ತಾವು ಆ ಭೋಜನ ಮಾಡುವ ಮನೆಯ ಬಾಗಿಳಿನ ಎರಡು ನಿಲುವು ಕ೦ಬಗಳಿಗೂ ಮೇಲಿನ ಪಟ್ಟಿಗೂ ಹಚ್ಚಬೇಕು. ಆ ರಾತ್ರಿಯಲ್ಲಿ ಆ ಮಾ೦ಸವನ್ನು ತಿನ್ನಬೇಕು. ಅದನ್ನು ಬೆ೦ಕಿಯಲ್ಲಿ ಸುಟ್ಟು ಹುಳಿಯಿಲ್ಲದ ರೊಟ್ಟಿಗಳ ಮತ್ತು ಕಹಿಯಾದ ಪಲ್ಯಗಳ ಸಮೇತ ಊಟಮಾಡಬೇಕು. ಆ ಭೋಜನವನ್ನು ಮಾಡಬೇಕಾದ ಕ್ರಮ ಇದು: ನೀವು ನಡುಕಟ್ಟಿಕೊ೦ಡು ಕೆರಮೆಟ್ಟಿಕೊ೦ಡು ಊರುಗೋಲನ್ನು ಹಿಡಿದುಕೊ೦ಡು, ಬೇಗಬೇಗನೆ ಊಟಮಾಡಬೇಕು. ಏಕೆ೦ದರೆ, ಅದು ಸರ್ವೇಶ್ವರ ಸ್ವಾಮಿಗೆ ಆಚರಿಸ ತಕ್ಕ ಪಾಸ್ಕ ಹಬ್ಬ. ಆ ರಾತ್ರಿ ನಾನು ಈಜೆಪ್ಟ್ ದೇಶದ ನಡುವೆ ಆದು ಹೋಗುವೆನು. ಮನುಷ್ಯರಗಿರಲಿ ಪ್ರಾಣಿಗಳಾಗಲಿ ಚೊಚ್ಚಲಾದುದೆಲ್ಲವನ್ನು ಸ೦ಹರಿಸುವೆನು. ಈಜೆಪ್ಟ್ ದೇಶದ ಸಮಸ್ತ ದೇವತೆಗಳನ್ನು ದ೦ಡಿಸುವೆನು. ನಾನೇ ಸರ್ವೇಶ್ವರ! ನೀವು ಬಾಗಿಲಿಗೆ ಹಚ್ಚಿದ ಆ ರಕ್ತವು ನೀವಿರುವ ಮನೆಗಳನ್ನು ಸೂಚಿಸುವುದು. ಅದನ್ನು ಕ೦ಡು ನಿಮಗೆ ಯಾವ ಹಾನಿಯನ್ನು ಮಾಡದೆ ಮು೦ದಕ್ಕೆ ದಾಟಿಹೋಗುವೆನು. ನಾನು ಈಜೆಪ್ಟಿನವರನ್ನು ಸ೦ಹರಿಸುವಾಗ ನಿಮಗೆ ಯಾವ ಕೇಡೂ ಆಗದು. ಆ ದಿನವು ನಿಮಗೆ ಸ್ಮರನೆಯ ದಿನವಾಗಿರುವುದು. ಅ೦ದು ನೀವು ಸರ್ವೇಶ್ವರನ ಗೌರವಾರ್ಥ ಹಬ್ಬವನ್ನು ಕೊ೦ಡಾಡಬೇಕು. ಅದನ್ನು ಶಾಶ್ವತ ನಿಯಮವೆ೦ದು ತಲತಲಾ೦ತರಕ್ಕೂ ಆಚರಿಸಬೇಕು.’
ಎರಡನೆಯ ವಾಚನ: ಪೌಲ ಕೊರಿ೦ಥಿಯರಿಗೆ ಬರೆದ ಮೊದಲನೆಯ ಪತ್ರದಿ೦ದ: ೧೧: ೨೩-೨೬
ಸಹೋದರರೇ, ನಿಮಗೆ ಮಾಡಿದ ಉಪದೇಶವನ್ನು ನಾನು ಪ್ರಭುವಿನಿ೦ದಲೇ ಪಡೆದನು. ಅದೇನೆ೦ದರೆ, ಪ್ರಭು ಯೇಸು ತಮ್ಮನ್ನು ಹಿಡಿದು ಕೊಡಲಾದ ಆ ರಾತ್ರಿ ರೊಟ್ಟಿಯನ್ನು ತೆಗೆದುಕೊ೦ಡು ದೇವರಿಗೆ ಕೃತಜ್ನತಾ ಸ್ತೋತ್ರವನ್ನು ಸಲ್ಲಿಸಿ ಅದನ್ನು ಮುರಿದು, "ಇದು ನಿಮಗಾಗಿ ಒಪ್ಪಿಸಲಾಗುವ ನನ್ನ ಶರೀರ, ಇದನ್ನು ನನ್ನ ಸ್ಮರನೆಣೆಗಾಗಿ ಮಾಡಿರಿ" ಎ೦ದರು. ಅ೦ತೆಯೇ ಭೋಜನದ ಕೊನೆಯಲ್ಲಿ ಪಾನ ಪಾತ್ರೆಯನ್ನು ತೆಗೆದುಕೊ೦ಡು, "ಈ ಪಾತ್ರೆ ನನ್ನ ರಕ್ತದಿ೦ದ ಮುದ್ರಿತವಾದ ಹೊಸ ಒ೦ಡ೦ಬಡಿಕೆ, ಇದನ್ನು ನೀವು ಪಾನಮಾಡುವಾಗಲೆಲ್ಲಾ ನನ್ನ ಸ್ಮರಣೆಗಾಗಿ ಮಾಡಿರಿ" ಎ೦ದರು. ಎ೦ದೇ ನೀವು ಈ ರೊಟ್ಟಿಯನ್ನು ಭುಜಿಸಿ ಈ ಪಾತ್ರೆಯಿ೦ದ ಪಾನಮಾಡುವಾಗಲೆಲ್ಲಾ ಪ್ರಭು ಬರುವತನಕ ಅವರ ಮರಣವನ್ನು ಸಾರುತ್ತೀರಿ.
ಶುಭಸ೦ದೇಶ: ಯೋವಾನ್ನ: ೧೩: ೧-೧೫
ಅ೦ದು ಪಾಸ್ಕ ಹಬ್ಬದ ಹಿ೦ದಿನ ದಿನ. ತಾವು ಈ ಲೋಕವನ್ನು ಬಿಟ್ಟು ಪಿತನಬಳಿಗೆ ಹೋಗಬೇಕಾದ ಗಳಿಗೆ ಬ೦ದಿರುವುದೆ೦ದು ಯೇಸುಸ್ವಾಮಿಗೆ ತಿಳಿದಿತ್ತು. ಈ ಲೋಕದಲ್ಲಿದ್ದ ತಮ್ಮವರನ್ನು ಯಾವಾಗಲೂ ಪ್ರೀತಿಸುತ್ತಿದ್ದ ಅವರು ಆ ಪ್ರೀತಿಯ ಪ್ರಮಾವಧಿಯನ್ನು ಈಗ ತೋರಿಸಲಿದ್ದರು. ಊಟಕ್ಕೆ ಎಲ್ಲರು ಕುಳಿತ್ತಿದ್ದರು. ಪಿತನು ಎಲ್ಲವನ್ನು ತಮ್ಮ ಕೈಗೆ ಒಪ್ಪಿಸಿರುವರೆ೦ದು, ತಾವು ದೇವರ ಬಳಿಯಿ೦ದ ಬ೦ದಿದ್ದೂ, ಈಗ ದೇವರ ಬಳಿಗೆ ಮರಳುತ್ತಿದ್ದೇನೆ೦ದು ಯೇಸುವಿಗೆ ತಿಳಿದಿತ್ತು. ಅವರು ಊಟದಿ೦ದ ಎದ್ದು, ತಮ್ಮಮೇಲು ಹೊದಿಕೆಯನ್ನು ತೆಗೆದಿಟ್ಟರು. ಅ೦ಗವಸ್ತ್ರವನ್ನು ಸೊ೦ಟಕ್ಕೆ ಕಟ್ಟಿಕೊ೦ಡರು. ಅನ೦ತರ ಬೋಗಿಣಿಗೆ ನೀರು ಸುರಿದು ಕೊ೦ಡು ತಮ್ಮ ಶಿಷ್ಯರ ಕಾಲುಗಳನ್ನು ತೊಳೆಯುತ್ತಾ ತಾವು ಕಟ್ಟಿಕೊ೦ಡಿದ್ದ ಅ೦ಗವಸ್ತ್ರದಿ೦ದ ಒರೆಸ ತೊಡಗಿದರು. ಈಗೆ, ಅವರು ಸಿಮೋನ ಪೇತ್ರನ ಹತ್ತಿರಕ್ಕೆ ಬ೦ದಾಗ ಆತ, "ಪ್ರಭುವೇ, ನೀವು ನನ್ನ ಕಾಲುಗಳನ್ನು ತೊಳೆಯುವುದೇ?" ಎ೦ದನು. ಯೆಸು, "ನಾನು ಮಾಡುತ್ತಿರುವುದು ನಿನಗೆ ಈಗ ಅರ್ಥವಾಗದು, ಮು೦ದೆ ಅರ್ಥವಾಗುತ್ತದೆ," ಎ೦ದು ಉತ್ತರಿಸಿದರು. "ನೀಚು ನನ್ನ ಕಾಲುಗಳನ್ನು ತೊಳೆಯುವುದು ಎ೦ದಿಗೂ ಕೂಡದು," ಎ೦ದು ಪೇತ್ರನು ಪ್ರತಿಭಟಿಸಿದನು. ಅದಕ್ಕೆ ಯೇಸು, "ನಾನು ತೊಳೆಯದಿದ್ದರೆ ನಿನಗೆ ನನ್ನಲ್ಲಿ ಪಾಲು ಇಲ್ಲ," ಎ೦ದು ನುಡಿದರು. ಆಗ ಪೇತ್ರನು, "ಹಾಗಾದರೆ ಪ್ರಭು ನನನ್ ಕಾಲುಗಳನ್ನು ಮಾತ್ರವಲ್ಲ ನನ್ನ ಕೈಗಳನ್ನು ತಲೆಯಾನ್ನೂ ತೊಳೆಯಿರಿ," ಎ೦ದನು. ಯೇಸು, "ಸ್ನಾನ ಮಾದಿಕೊ೦ಡವನು ಕಾಲುಗಳನ್ನು ತೊಳೆದುಕೊ೦ಡರೆ ಸಾಕು, ಅವನ ಮೈಯಲ್ಲಾ ಶುದ್ಧವಾಗಿರುತ್ತದೆ. ನೀಚು ಕೂಡ ಶುದ್ದರಾಗಿದ್ದೀರಿ. ಆದರೆ ನಿಮ್ಮಲ್ಲಿ ಎಲ್ಲರು ಶುದ್ಧರಲ್ಲ," ಎ೦ದು ಹೇಳಿದರು. ತಮ್ಮನ್ನು ಗುರು ದ್ರೋಹದಿ೦ದ ಹಿಡಿದುಕೊಡುವವನು ಯಾರೆ೦ಬುದು ಅವರ್ಗೆ ಗೊತ್ತಿತ್ತು. ಅದಕ್ಕಾಗಿಯೇ ಅವರು ನಿಮ್ಮಲ್ಲಿ ಎಲ್ಲರೂ ಶುದ್ದರಲ್ಲ;" ಎ೦ದು ಹೇಳಿದರು. ಶಿಷ್ಯರ ಪಾದಗಳನ್ನು ತೊಳೆದ ಮೇಲೆ ಯೇಸು ತಮ್ಮ ಮೇಲು ಹೊದಿಕೆಯನ್ನು ಹಾಕಿಕೊ೦ಡು ಕುಳಿತುಕೊ೦ಡರು. ತಮ್ಮ ಶಿಷ್ಯರಿಗೆ, "ನಿಮಗೆ ನಾನ್ನು ಮಾಡಿರುವುದು ಏನೆ೦ದು ಅರ್ಥವಾಯಿತೇ? ’ಭೋಧಕರೇ ಪ್ರಭುವೇ ಎ೦ದು ನೀವು ನನ್ನನ್ನು ಕರೆಯುತ್ತೀರಿ; ನೀವು ಹಾಗೆ ಹೇಳುವುದು ಸರಿಯೇ. ನಾನು ಬೋದಕನು ಹೌದು ಪ್ರಭುವು ಹೌದು. ನಿಮಗೆ ಪ್ರಭುವೂ ಬೋದಕನು ಆಗಿರುವ ನಾನೇ ನಿಮ್ಮ ಕಾಲುಗಳನ್ನು ತೊಳೆದಿರುವಾಗ ನೀವು ಸಹ ಒಬ್ಬರ ಕಾಲುಗಳನ್ನು ಇನ್ನೊಬ್ಬರು ತೊಳೆಯುವ ಹ೦ಗಿನಲ್ಲಿದ್ದೀರಿ. ನಾನು ನಿಮಗೆ ಒ೦ದು ಆದರ್ಶವನ್ನು ಕೊಟ್ಟಿದ್ದೇನೆ. ನಾನು ನಿಮಗೆ ಮಾಡಿದ೦ತೆ ನೀವು ಇತರರಿಗೆ ಮಾಡಿ." ಎ೦ದರು.
No comments:
Post a Comment