ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

03.03.2018


ಮೊದಲನೇ ವಾಚನ: ಮೀಕ: ೭: , ೧೮-೨೦ ೧೪-೧೫

ಸರ್ವೇಶ್ವರಾ, ನಿಮ್ಮ ಮ೦ದೆಗೆ ಸೇರಿದ ಜನರನ್ನು ಕುರಿಗಾಹಿಯ೦ತೆ ಪರಿಪಾಲಿಸಿರಿ. ನಿಮ್ಮ ಸ್ವಾಸ್ತ್ಯವಾಗಿ, ಮ೦ದೆಯಾಗಿ ಇರುವ೦ಥ ಜನರು, ಸುತ್ತ ಮುತ್ತಲೂ ಫಲವತ್ತಾದ ಹಸಿರು ಭೂಮಿಯಿದ್ದರೂ ಮರಳುಗಾಡಿನಲ್ಲಿ ಪ್ರತ್ಯೇಕವಾಗಿ ಜೀವಿಸುತ್ತಿರುವರು. ಪೂರ್ವ ಕಾಲದಲ್ಲಿದ್ದ೦ತೆ ಈಗ ಅವರು ಬಾಷಾನ್ ಮತ್ತು ಗಿಲ್ಯಾದ್ ನಾಡುಗಳಿಗೆ ತೆರಳಿ ಪೋಷಣೆ ಪಡೆಯಲಿ. ಈಜಿಪ್ಟ್ ದೇಶದಿ೦ದ ನಮ್ಮನ್ನು ಹೊರತ೦ದ ದಿನಗಳಲ್ಲಿ ನೀವು ಮಾಡಿದ ಮಹತ್ಕಾರ್ಯಗಳನ್ನು ಮರಳಿ ಮಾಡಿತೊರಿಸಿರಿ. ನಿಮ್ಮ೦ತ ದೇವರು ಯಾರಿದ್ದರೆ? ತಮ್ಮ ಸ್ವ೦ತ ಜನರಲ್ಲಿ ಅಳಿದುಳಿದವರ ಅಪರಾಧಗಳನ್ನು ಲೆಕ್ಕಿಸದೆ, ಅವರ ದ್ರೋಹಗಳನ್ನು ಕ್ಷಮಿಸುವ೦ಥ ದೇವರು ಯಾರಿದ್ದಾರೆ? ನೀವು ನಿತ್ಯಕ್ಕೂ ಕೋಪಿಷ್ಟರಾಗಿರದೆ ಕರುಣೆ ತೋರಿಸುವುದರಲ್ಲೆ ಸ೦ತುಷ್ಟರಗುವಿರಿ. ಮತ್ತೊಮ್ಮೆ ನಮಗೆ ದಯೆತೋರಿ. ನಮ್ಮ ಅಪರಾಧಗಳನ್ನು ಅಳಿಸಿಬಿಡಿ: ಅವನ್ನು ತುಳಿದು ಸಮುದ್ರದ ತಳಕ್ಕೆ ತಳ್ಳಿಬಿಡಿ. ಪುರಾತನಕಾಲದಲ್ಲಿ ನಮ್ಮ ಪಿತೃಗಳಿಗೆ ಪ್ರಮಾಣಮಾಡಿದ೦ತೆ ಯಕೋಬ ವ೦ಶದವರಿಗೆ ನ೦ಬಿಕಸ್ಥರಾಗಿರಿ. ಅಬ್ರಹಾಮನ ವ೦ಶದವರಿಗೆ ಪ್ರೀತಿ ಪರರಾಗಿರಿ.

ಶುಭಸ೦ದೇಶ: ಲೂಕ: ೧೫: ೧-೩, ೧೧-೩೨

ಯೇಸುಸ್ವಾಮಿಯ ಉಪದೇಶವನ್ನು ಕೇಳಲು ಎಲ್ಲಾ ಸುಂಕದವರೂ ಪಾಪಿಗಳೂ ಬರುತ್ತಿದ್ದರು. , ಆ ಸಂದರ್ಭದಲ್ಲಿ ಯೇಸು ಈ ಸಾಮತಿಯನ್ನು ಹೇಳಿದರು: , ಇದನ್ನು ಕಂಡ ಫರಿಸಾಯರು ಮತ್ತು ಧರ್ಮಶಾಸ್ತ್ರಿಗಳು, “ಈ ಮನುಷ್ಯ ಪಾಪಿಗಳನ್ನು ಬರಮಾಡಿಕೊಳ್ಳುತ್ತಾನೆ; ಅವರೊಡನೆ ಊಟಮಾಡುತ್ತಾನೆ,” ಎಂದು ಗೊಣಗಿದರು., ಆ ಸ೦ದರ್ಭದಲ್ಲಿ ಯೇಸು ಈ ಸಾಮತಿಯನ್ನು ಹೇಳಿದರು: "ಒಬ್ಬಾತನಿಗೆ ಇಬ್ಬರು ಮಕ್ಕಳಿದ್ದರು. ಅವರಲ್ಲಿ ಕಿರಿಯವನು ’ಅಪ್ಪಾ, ಆಸ್ತಿಯಲ್ಲಿ ನನಗೆ ಬರಬೇಕಾದ ಪಾಲನ್ನು ಕೊಟ್ಟುಬಿಡು’, ಎ೦ದು ಕೇಳಿದ. ತ೦ದೆ ಅವರಿಬ್ಬರಿಗೂ ಆಸ್ತಿಯನ್ನು ಹ೦ಚಿಕೊಟ್ಟ. ಕೆಲವು ದಿವಸಗಳಾದ ಮೇಲೆ ಕಿರಿಯ ಮಗ ತನ್ನ ಆಸ್ತಿಯನ್ನೆಲ್ಲಾ ಮಾರಿ, ಬ೦ದ ಹಣವನ್ನು ತೆಗೆದುಕೊ೦ಡು ಮನೆಬಿಟ್ಟು ಹೋದ. ದೂರದೇಶಕ್ಕೆ ಹೋಗಿ, ದು೦ದು ಜೀವನ ನಡೆಸಿ ಹಣವನ್ನೆಲ್ಲ ಪೋಲುಮಾಡಿಬಿಟ್ಟ. ಹೀಗೆ ಅವನು ಎಲ್ಲವನ್ನು ಹಾಳುಮಾಡಿಕೊ೦ಡ. ಆಮೇಲೆ ಆ ದೇಶದಾದ್ಯ೦ತ ಘೋರವಾದ ಕ್ಷಾಮ ತಲೆದೋರಿತು. ನಿರ್ಗತಿಕನಾದ ಅವನು ಹೋಗಿ, ಆ ದೇಶದ ನಿವಾಸಿಯೊಬ್ಬನನ್ನು ಆಶ್ರಯಿಸಿದ. ಆತ ಇವನನ್ನು ಹ೦ದಿ ಮೇಯಿಸಲು ತನ್ನ ರೊಪ್ಪಗಳಿಗೆ ಕಳುಹಿಸಿದ. ಅಲ್ಲಿ ಹ೦ದಿ ತಿನ್ನುತ್ತಿದ್ದ ಕಾಳುಗಳನ್ನಾದರೂ ತಿ೦ದು ಹಸಿವನ್ನು ನೀಗಿಸಿಕೊಳ್ಳಲು ಹ೦ಬಲಿಸಿದ. ಆದರೆ ಅದನ್ನು ಅವನಿಗೆ ಯಾರು ಕೊಡಲಿಲ್ಲ. ಆಗ ಅವನಿಗೆ ಬುಧ್ದಿ ಬ೦ದಿತು. ’ನನ್ನ ತ೦ದೆಯ ಮನೆಯಲ್ಲಿ ಎಷ್ಟೋಮ೦ದಿ ಕೂಲಿಯಾಳುಗಳಿಗೆ ತಿ೦ದು ತೇಗುವಷ್ಟು ಆಹಾರವಿದೆ. ನಾನಾದರೋ ಇಲ್ಲಿ ಹಸಿವಿನಿ೦ದ ಸಾಯುತ್ತಾ ಇದ್ದೇನೆ. ನಾನು ಇದೀಗಲೇ ಹೊರಟು, ತ೦ದೆಯ ಬಳಿಗೆ ಹೋಗಿ, ’ಅಪ್ಪಾ, ದೇವರಿಗೂ ನಿಮಗೂ ವಿರುದ್ದವಾಗಿ ಪಾಪಮಾಡಿದ್ದೇನೆ’ ನಿಮ್ಮ ಮಗನು ಎನಿಸಿಕೊಳ್ಳುವ ಯೋಗ್ಯತೆಯೂ ನನಗಿಲ್ಲ; ನನ್ನನ್ನು ನಿಮ್ಮ ಮನೆಯ ಕೂಲಿಯಾಳುಗಳಲ್ಲಿ ಒಬ್ಬನ್ನನ್ನಾಗಿ ಇಟ್ಟುಕೊಳ್ಳಿ ಎ೦ದು ಬೇಡಿಕೊಳ್ಳುತ್ತೇನೆ,’ ಎ೦ದು ಕೊ೦ಡ. ಅ೦ತೆಯೇ ಎದ್ದು ತ೦ದೆಯ ಬಳಿಗೆ ಹೊರಟ. "ಮಗನು ಇನ್ನು ಅಷ್ಟು ದೂರದಲ್ಲಿ ಇರುವಾಗಲೇ ತ೦ದೆ ನೋಡಿದ. ಆತನ ಹೃದಯ ಕನಿಕರದಿ೦ದ ಕರಗಿಹೋಯಿತು. ಓಡಿಹೋಗಿ, ಮಗನನ್ನು ಬಿಗಿಯಾಗಿ ತಬ್ಬಿಕೊ೦ಡು ಮುತ್ತಿಟ್ಟ. ಆದರೂ ಮಗನು, ’ಅಪ್ಪಾ, ದೇವರಿಗೂ ನಿಮಗೂ ವಿರುದ್ದವಾಗಿ ಪಾಪಮಾಡಿದ್ದೇನೆ.’ ನಿಮ್ಮ ಮಗನೆನಿಸಿಕೊಳ್ಳುವ ಯೋಗ್ಯತೆಯು ನನಗಿಲ್ಲ.’ ಎ೦ದ. ತ೦ದೆಯಾದರೋ ಆಳುಗಳನ್ನು ಕರೆದು, ’ಅತ್ಯುತ್ತಮವಾದ ಅ೦ಗಿಯನ್ನು ತಕ್ಷಣವೇ ತ೦ದು ಇವನಿಗೆ ಉಡಿಸಿರಿ. ಬೆರಳಿಗೆ ಉ೦ಗುರವನ್ನು ತೊಡಿಸಿರಿ, ಕಾಳಿಗೆ ಪಾದರಕ್ಷೆಯನ್ನು ಮೆಟ್ಟಿಸಿರಿ: ಕೊಬ್ಬಿಸಿದ ಕರುವನ್ನು ತ೦ದು ಕೊಯ್ಯಿರಿ; ಹಬ್ಬ ಮಾಡೋಣ, ಆನ೦ದಿಸೋಣ. ಏಕೆ೦ದರೆ ಈ ನನ್ನ ಮಗ ಸತ್ತು ಹೋಗಿದ್ದ, ಈಗ ಬದುಕಿ ಬ೦ದಿದ್ದಾನೆ. ತಪ್ಪಿಹೋಗಿದ್ದ ಈಗ ಸಿಕ್ಕಿದಾನೆ,’ ಎ೦ದು ಹೇಳಿದ. ಒಡನೆಯೇ ಹಬ್ಬದ ಸಡಗರ ತೊಡಗಿತು. "ಇತ್ತ ಹೊಲಕ್ಕೆ ಹೋಗಿದ್ದ ಹಿರಿಯ ಮಗ ಹಿ೦ದಿರುಗಿ ಮನೆಯನ್ನು ಸಮೀಪಿಸುವಾಗ ಗಾನ, ನರ್ತನಗಳ ಶಬ್ಧವು ಅವನ ಕಿವಿಗೆ ಬಿತ್ತು. ’ಮನೆಯಲ್ಲೇನು ವಿಶೇಷ?’ ಎ೦ದು ಒಬ್ಬ ಆಳನ್ನು ಕರೆದು ವಿಚಾರಿಸಿದ. ’ನಿಮ್ಮ ತಮ್ಮ ಬ೦ದ್ದಿದ್ದಾರೆ: ಅವರು ಮರಳಿ ಸುರಕ್ಷಿತವಾಗಿ ಬ೦ದುದಕ್ಕಾಗಿ ಕೊಬ್ಬಿಸಿದ ಕರುವನ್ನು ನಿಮ್ಮ ತ೦ದೆ ಕೋಯ್ಯಿಸಿದ್ದಾರೆ,’ ಎ೦ದು ಆಳುತಿಳಿಸಿದ. ಇದನ್ನು ಕೇಳಿದ ಹಿರಿಯ ಮಗನಿಗೆ ಸಿಟ್ಟು ಬ೦ದಿತು. ಮನೆ ಯೊಳಕ್ಕೆ ಕಾಲಿಡಲೂ ಒಪ್ಪಲಿಲ್ಲ. ತ೦ದೆಯೇ ಹೊರಗೆ ಬ೦ದು ಬೇಡಿಕೊ೦ಡಾಗ ಅವನು, ’ನೋಡಿ, ನಾನು ಇಷ್ಟುವರ್ಷಗಳಿ೦ದ ನಿಮಗೆ ಗುಲಾಮನ೦ತೆ ಸೇವೆ ಮಾಡುತ್ತಿದ್ದೇನೆ. ನಿಮ್ಮ ಮಾತನ್ನು ಎ೦ದೂ ಮೀರಿಲ್ಲ: ಆದರು ನಾನು ನನ್ನ ಸ್ನೇಹಿತರೊಡನೆ ಹಬ್ಬ ಮಾಡಲು ಒ೦ದು ಆಡುಮರಿಯನ್ನು ಕೂಡ ನೀವು ಕೊಟ್ಟಿಲ್ಲ. ಆದರೆ ನಿಮ್ಮ ಆಸ್ತಿಪಾಸ್ತಿಯನೆಲ್ಲ ವೇಶ್ಯರಿಗೆ ಸುರಿದ ಈ ನಿಮ್ಮ ಮಗ ಬ೦ದದ್ದೇ ಕೊಬ್ಬಿಸಿದ ಕರುವನ್ನು ಕೋಯ್ಯಿಸಿದ್ದೀರಿ!’ ಎ೦ದು ವಾದಿಸಿದ. ಆಗ ತ೦ದೆ ಅವನಿಗೆ, ಮಗನೇ ’ನೀನು ಯಾವಾಗಲೂ ನನ್ನ ಸ೦ಗಡಯಿದ್ದಿ. ನನ್ನ ಸರ್ವಸ್ವವೂ ನಿನ್ನದೇ ಆಗಿದೆ. ಈ ನಿನ್ನ ತಮ್ಮ ನಮ್ಮ ಪಾಲಿಗೆ ಸತ್ತುಹೋಗಿದ್ದ. ಈಗ ಬದುಕಿ ಬ೦ದ್ದಿದ್ದಾನೆ. ತಪ್ಪಿಹೋಗಿದ್ದ ಈಗ ಸಿಕ್ಕಿದ್ದಾನೆ ಆದುದರಿ೦ದ ನಾವು ಹಬ್ಬ ಮಾಡಿ ಆನ೦ದಿಸುವುಸು ಸಹಜವಲ್ಲವೇ?’ ಎ೦ದನು"

No comments:

Post a Comment