ಮೊದಲನೇ ವಾಚನ: ಯೆಶಾಯ 50:4-9
ದಣಿದವರನ್ನು ಹಿತನುಡಿಗಳಿಂದ ತಣಿಸುವಂತೆ ಅನುಗ್ರಹಿಸುತ್ತಾನೆನಗೆ ಸ್ವಾಮಿ ಸರ್ವೇಶ್ವರ ಶಿಕ್ಷಿತರ ನಾಲಗೆಯನು; ಶಿಷ್ಯನೋಪಾದಿ ನಾನು ಆತನನ್ನು ಆಲಿಸುವಂತೆ ಬೆಳಬೆಳಗೂ ನನ್ನನೆಚ್ಚರಿಸಿ ಚೇತನಗೊಳಿಸುತ್ತಾನೆ ನನ್ನ ಕಿವಿಯನ್ನು. ತೆರೆದಿಹನು ಸ್ವಾಮಿ ಸರ್ವೇಶ್ವರ ನನ್ನ ಕಿವಿಯನು ಎಂದೇ ವಿಮುಖನಾಗಲಿಲ್ಲ ನಾನು, ಪ್ರತಿಭಟಿಸಲಿಲ್ಲ ಆತನನು. ಬೆನ್ನುಕೊಟ್ಟೆನು ಹೊಡೆಯುವವರಿಗೆ, ಗಡ್ಡ ಒಡ್ಡಿದೆನು ಅದನ್ನು ಕೀಳುವವರಿಗೆ ಮುಖ ಮರೆಮಾಡಲಿಲ್ಲ ಉಗುಳುಬುಗುಳಿಗೆ. ನೆರವಾಗಿಹನು ನನಗೆ ಸ್ವಾಮಿ ಸರ್ವೇಶ್ವರ, ಎಂದೇ ತಲೆತಗ್ಗಿಸಲಿಲ್ಲ ನಾನು ನಾಚಿಕೆಯಿಂದ ಗಟ್ಟಿಮಾಡಿಕೊಂಡೆ ಮುಖವನು ಕಗ್ಗಲ್ಲಿನ ಹಾಗೆ, ಆಶಾಭಂಗಪಡಲಾರೆನೆಂದು ಗೊತ್ತು ನನಗೆ. ನನ್ನ ಪರ ತೀರ್ಪುಕೊಡುವವನು ಇಹನು ಹತ್ತಿರದಲೆ, ನನಗೆ ಪ್ರತಿಕಕ್ಷಿ ಯಾರೇ ಬರಲಿ ಮುಂದಕೆ. ನನ್ನೊಡನೆ ವ್ಯಾಜ್ಯಮಾಡಬಲ್ಲವನಾರೇ ನಿಲ್ಲಲಿ ನ್ಯಾಯಕೆ. ಇಗೋ, ಸ್ವಾಮಿ ಸರ್ವೇಶ್ವರ ಇಂತಿಹರು ನನಗೆ ನೆರವಾಗಿ ನಿರ್ಣಯಿಸುವವನು ಯಾರು ನನ್ನನ್ನು ಅಪರಾಧಿಯಾಗಿ? ನುಸಿತಿಂದ ವಸ್ತ್ರದಂತೆ ಅಳಿದು ಹೋಗುವರವರು ಜೀರ್ಣವಾಗಿ.
ದಣಿದವರನ್ನು ಹಿತನುಡಿಗಳಿಂದ ತಣಿಸುವಂತೆ ಅನುಗ್ರಹಿಸುತ್ತಾನೆನಗೆ ಸ್ವಾಮಿ ಸರ್ವೇಶ್ವರ ಶಿಕ್ಷಿತರ ನಾಲಗೆಯನು; ಶಿಷ್ಯನೋಪಾದಿ ನಾನು ಆತನನ್ನು ಆಲಿಸುವಂತೆ ಬೆಳಬೆಳಗೂ ನನ್ನನೆಚ್ಚರಿಸಿ ಚೇತನಗೊಳಿಸುತ್ತಾನೆ ನನ್ನ ಕಿವಿಯನ್ನು. ತೆರೆದಿಹನು ಸ್ವಾಮಿ ಸರ್ವೇಶ್ವರ ನನ್ನ ಕಿವಿಯನು ಎಂದೇ ವಿಮುಖನಾಗಲಿಲ್ಲ ನಾನು, ಪ್ರತಿಭಟಿಸಲಿಲ್ಲ ಆತನನು. ಬೆನ್ನುಕೊಟ್ಟೆನು ಹೊಡೆಯುವವರಿಗೆ, ಗಡ್ಡ ಒಡ್ಡಿದೆನು ಅದನ್ನು ಕೀಳುವವರಿಗೆ ಮುಖ ಮರೆಮಾಡಲಿಲ್ಲ ಉಗುಳುಬುಗುಳಿಗೆ. ನೆರವಾಗಿಹನು ನನಗೆ ಸ್ವಾಮಿ ಸರ್ವೇಶ್ವರ, ಎಂದೇ ತಲೆತಗ್ಗಿಸಲಿಲ್ಲ ನಾನು ನಾಚಿಕೆಯಿಂದ ಗಟ್ಟಿಮಾಡಿಕೊಂಡೆ ಮುಖವನು ಕಗ್ಗಲ್ಲಿನ ಹಾಗೆ, ಆಶಾಭಂಗಪಡಲಾರೆನೆಂದು ಗೊತ್ತು ನನಗೆ. ನನ್ನ ಪರ ತೀರ್ಪುಕೊಡುವವನು ಇಹನು ಹತ್ತಿರದಲೆ, ನನಗೆ ಪ್ರತಿಕಕ್ಷಿ ಯಾರೇ ಬರಲಿ ಮುಂದಕೆ. ನನ್ನೊಡನೆ ವ್ಯಾಜ್ಯಮಾಡಬಲ್ಲವನಾರೇ ನಿಲ್ಲಲಿ ನ್ಯಾಯಕೆ. ಇಗೋ, ಸ್ವಾಮಿ ಸರ್ವೇಶ್ವರ ಇಂತಿಹರು ನನಗೆ ನೆರವಾಗಿ ನಿರ್ಣಯಿಸುವವನು ಯಾರು ನನ್ನನ್ನು ಅಪರಾಧಿಯಾಗಿ? ನುಸಿತಿಂದ ವಸ್ತ್ರದಂತೆ ಅಳಿದು ಹೋಗುವರವರು ಜೀರ್ಣವಾಗಿ.
ಕೀರ್ತನೆ: 69:8-10, 21-22, 31, 33-34
ಶ್ಲೋಕ: ಪ್ರೀತಿಮಯ ದೇವಾ, ಜೀವೋದ್ಧಾರಕ, ಸದುತ್ತರ ನೀಡೆನಗೆ.
ಶುಭಸಂದೇಶ: ಮತ್ತಾಯ 26:14-25
ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತಿನ ಯೂದ ಎಂಬಾತ ಮುಖ್ಯ ಯಾಜಕರ ಬಳಿಗೆ ಹೋದನು. "ನಿಮಗೆ ನಾನು ಯೇಸುವನ್ನು ಹಿಡಿದುಕೊಟ್ಟರೆ ನನಗೇನು ಕೊಡುವಿರಿ?" ಎಂದು ಅವರನ್ನು ವಿಚಾರಿಸಿದನು ಅವರೋ, ಅವನಿಗೆ ಮೂವತ್ತು ಬೆಳ್ಳಿನಾಣ್ಯಗಳನ್ನು ನಿಗದಿಮಾಡಿ ಕೊಟ್ಟರು. ಆ ಗಳಿಗೆಯಿಂದ ಯೇಸುವನ್ನು ಹಿಡಿದೊಪ್ಪಿಸಲು ಅವನು ಸಂದರ್ಭ ಕಾಯುತ್ತಾ ಇದ್ದನು ಅಂದು ಹುಳಿರಹಿತ ರೊಟ್ಟಿಯ ಹಬ್ಬದ ಮೊದಲನೆಯ ದಿನ. ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, "ತಮಗೆ ಪಾಸ್ಕ ಭೋಜನವನ್ನು ನಾವು ಎಲ್ಲಿ ಸಿದ್ಧಪಡಿಸಬೇಕೆನ್ನುತ್ತೀರಿ?" ಎಂದು ಕೇಳಿದರು. ಅದಕ್ಕೆ ಅವರು, "ಪಟ್ಟಣದಲ್ಲಿ ನಾನು ಸೂಚಿಸುವಂಥವನ ಬಳಿಗೆ ಹೋಗಿರಿ, "ನನ್ನ ಕಾಲ ಸಮೀಪಿಸಿತು, ಪಾಸ್ಕವನ್ನು ನನ್ನ ಶಿಷ್ಯರ ಸಮೇತ ನಿನ್ನ ಮನೆಯಲ್ಲಿಯೇ ಆಚರಿಸಬೇಕೆಂದಿದ್ದೇನೆ', ಇದನ್ನು ನಮ್ಮ ಗುರುವೇ ಹೇಳಿಕಳುಹಿಸಿದ್ದಾರೆ ಎಂದು ಅವರಿಗೆ ತಿಳಿಸಿರಿ," ಎಂದರು. ಯೇಸು ಸೂಚಿಸಿದಂತೆಯೇ ಶಿಷ್ಯರು ಹೋಗಿ ಪಾಸ್ಕ ಭೋಜನವನ್ನು ತಯಾರಿಸಿದರು. ಸಂಜೆಯಾಯಿತು. ಯೇಸುಸ್ವಾಮಿ ಹನ್ನೆರಡು ಮಂದಿ ಶಿಷ್ಯರ ಸಂಗಡ ಊಟಕ್ಕೆ ಕುಳಿತರು. ಅವರೆಲ್ಲರೂ ಊಟಮಾಡುತ್ತಿದ್ದಾಗ ಯೇಸು, "ನಿಮ್ಮಲ್ಲೇ ಒಬ್ಬನು ನನಗೆ ದ್ರೋಹ ಬಗೆಯುತ್ತಾನೆ, ಎಂದು ನಿಮಗೆ ಖಂಡಿತವಾಗಿ ಹೇಳುತ್ತೇನೆ," ಎಂದರು. ಶಿಷ್ಯರು ಬಹಳ ಕಳವಳಗೊಂಡರು. ಒಬ್ಬರಾದ ಮೇಲೊಬ್ಬರು, "ಸ್ವಾಮೀ, ನಾನೋ? ನಾನೋ?" ಎಂದು ಕೇಳತೊಡಗಿದರು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, "ಊಟದ ಬಟ್ಟಲಲ್ಲಿ ನನ್ನೊಡನೆ ಕೈ ಅದ್ಧಿ ಉಣ್ಣುವವನೇ ನನಗೆ ದ್ರೋಹ ಬಗೆಯುತ್ತಾನೆ ನರಪುತ್ರನೇನೋ ಪವಿತ್ರ ಗ್ರಂಥದಲ್ಲಿ ಬರೆದಿರುವ ಪ್ರಕಾರ ಹೊರಟುಹೋಗುತ್ತಾನೆ, ನಿಜ. ಆದರೆ ಅಯ್ಯೋ, ನರಪುತ್ರನಿಗೆ ದ್ರೋಹ ಬಗೆಯುವವನ ದುರ್ಗತಿಯನ್ನು ಏನೆಂದು ಹೇಳಲಿ! ಅವನು ಹುಟ್ಟದೇ ಇದ್ದಿದ್ದರೆ ಎಷ್ಟೋ ಚೆನ್ನಾಗಿತ್ತು!" ಎಂದರು. ಗುರುದ್ರೋಹಿಯಾದ ಯೂದನು ಆಗ, "ಗುರುವೇ, ಅವನು ನಾನಲ್ಲ ತಾನೇ?" ಎಂದನು. ಅದಕ್ಕೆ ಯೇಸು, "ಅದು ನಿನ್ನ ಬಾಯಿಂದಲೇ ಬಂದಿದೆ," ಎಂದರು.
ಮನಸಿಗೊಂದಿಷ್ಟು : ಜೂದಾಸ್ ಯೇಸುವನ್ನು ಹಿಡಿದುಕೊಟ್ಟಾಗ ಅವನಿಗೆ ನಿಜಕ್ಕೂ ಯೇಸುವನ್ನು ಕೊಲ್ಲಿಸಬೇಕೆಂಬ ಇಚ್ಛೆಯಿತ್ತೇ ಎಂಬುದು ಬೈಬಲ್ ಪಂಡಿತರ ಪ್ರಶ್ನೆ. ತಮ್ಮನ್ನು ಸೈನಿಕರು, ಯೆಹೂದ್ಯರು ಬಂಧಿಸಲು ಬಂದಾಗಲಾದರೂ ಯೇಸು ಸಿಡಿದೇಳಬಹುದು, ಕ್ರಾಂತಿಯಾಗಬಹುದು, ತಮಗೊಬ್ಬ ರಾಜ ಸಿಗಬಹುದು ಎಂಬ ಆಸೆ ಅವನದಾಗಿತ್ತು. ಯೇಸುವನ್ನು ಆ ಯಹೂದ್ಯರು ಕೊಲ್ಲುತ್ತಾರೆ ಎಂದಾಗ ನೊಂದುಕೊಂಡ, ತನ್ನ ಕಾರ್ಯದ ಬಗ್ಗೆ ದು:ಖಿತನಾದ, ಸತ್ತ. ದೇವರ ಚಿತ್ತಕ್ಕಿಂತ ನಾವು ನೆನೆಸಿಕೊಂಡಂತೆ ಆಗಬೇಕೆಂಬ ನಮ್ಮ ಅಂತರಂಗದ ಪ್ರತಿಬಿಂಬವಿದು. ದೇವರ ಚಿತ್ತವನ್ನು ಅಪ್ಪಿಕೊಳ್ಳೋಣ, ಅಪ್ಪಿಕೊಳ್ಳೋಣ. ನಿರಾಶರಾಗಲಾರೆವು.
ಪ್ರಶ್ನೆ : ದಿನಕ್ಕೆಷ್ಟು ಬಾರಿ ಜೂದಾಸನಂತೆ ಯೇಸುವಿಗೆ ದ್ರೋಹ ಬಗೆಯುತ್ತಿದ್ದೇವೆ?
ಮನಸಿಗೊಂದಿಷ್ಟು : ಜೂದಾಸ್ ಯೇಸುವನ್ನು ಹಿಡಿದುಕೊಟ್ಟಾಗ ಅವನಿಗೆ ನಿಜಕ್ಕೂ ಯೇಸುವನ್ನು ಕೊಲ್ಲಿಸಬೇಕೆಂಬ ಇಚ್ಛೆಯಿತ್ತೇ ಎಂಬುದು ಬೈಬಲ್ ಪಂಡಿತರ ಪ್ರಶ್ನೆ. ತಮ್ಮನ್ನು ಸೈನಿಕರು, ಯೆಹೂದ್ಯರು ಬಂಧಿಸಲು ಬಂದಾಗಲಾದರೂ ಯೇಸು ಸಿಡಿದೇಳಬಹುದು, ಕ್ರಾಂತಿಯಾಗಬಹುದು, ತಮಗೊಬ್ಬ ರಾಜ ಸಿಗಬಹುದು ಎಂಬ ಆಸೆ ಅವನದಾಗಿತ್ತು. ಯೇಸುವನ್ನು ಆ ಯಹೂದ್ಯರು ಕೊಲ್ಲುತ್ತಾರೆ ಎಂದಾಗ ನೊಂದುಕೊಂಡ, ತನ್ನ ಕಾರ್ಯದ ಬಗ್ಗೆ ದು:ಖಿತನಾದ, ಸತ್ತ. ದೇವರ ಚಿತ್ತಕ್ಕಿಂತ ನಾವು ನೆನೆಸಿಕೊಂಡಂತೆ ಆಗಬೇಕೆಂಬ ನಮ್ಮ ಅಂತರಂಗದ ಪ್ರತಿಬಿಂಬವಿದು. ದೇವರ ಚಿತ್ತವನ್ನು ಅಪ್ಪಿಕೊಳ್ಳೋಣ, ಅಪ್ಪಿಕೊಳ್ಳೋಣ. ನಿರಾಶರಾಗಲಾರೆವು.
ಪ್ರಶ್ನೆ : ದಿನಕ್ಕೆಷ್ಟು ಬಾರಿ ಜೂದಾಸನಂತೆ ಯೇಸುವಿಗೆ ದ್ರೋಹ ಬಗೆಯುತ್ತಿದ್ದೇವೆ?
No comments:
Post a Comment