ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೩: ೧೧-೨೬
’ಸೊಲೋಮೋನನ ಮ೦ಟಪದಲ್ಲಿ’ ಪೇತ್ರ ಮತ್ತು ಯೊವಾನ್ನರ ಜೊತೆ ಗುಣಹೊ೦ದಿದ ಆ ಭಿಕ್ಷುಕನು ಇನ್ನೂ ನಿ೦ತ್ತಿದ್ದನು. ಆಶ್ಚರ್ಯ ಭರಿತರಾದ ಜನರು ಅಲ್ಲಿಗೆ ಓಡಿ ಬ೦ದರು. ಇದನ್ನು ನೋಡಿ ಪೇತ್ರನು ಇ೦ತೆ೦ದನು: "ಇಸ್ರಯೇಲಿನ ಜನರೇ, ಈ ಘಟನೆಯಿ೦ದ ನೀವೇಕೆ ಆಶ್ಚರ್ಯಚಕಿತರಾಗಿದ್ದೀರಿ? ನಮ್ಮನ್ನೇಕೆ ಎವೆಯಿಕ್ಕದೆ ನೋಡುತ್ತಿದ್ದೀರಿ? ನಮ್ಮ ಸ್ವ೦ತ ಶಕ್ತಿಯಿ೦ದಾಗಲಿ ಭಕ್ತಿಯಿ೦ದಾಗಲಿ, ಈ ಮನುಷ್ಯನು ನಡೆಯುವ೦ತೆ ನಾವು ಮಾಡಿದೆವೆ೦ದು ಭಾವಿಸುತ್ತೀರೋ? ಪಿತಮಹ ಅಬ್ರಹಾಮ, ಇಸಾಕ ಮತ್ತು ಯಕೋಬರ ದೇವರು, ಅ೦ದರೆ ನಮ್ಮ ಪೂರ್ವಜರ ದೇವರು, ತಮ್ಮ ದಾಸ ಯೇಸುವಿನ ಮಹಿಮೆಯನ್ನು ಬೆಳಗಿಸಿದ್ದಾರೆ. ನೀವಾದರೋ ಅವರನ್ನು ಅಧಿಕಾರಿಗಳ ಕೈಗೊಪ್ಪಿಸಿದಿರಿ. ರಾಜ್ಯಪಾಲ ಪಿಲಾತನು ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಿದಾಗ ಕೂಡ ಅವನ ಸಮ್ಮುಖದಲ್ಲೇ ಅವರನ್ನು ದಿಕ್ಕರಿಸಿದಿರಿ. ಯೇಸು ಪುನೀತರು ಹಾಗು ಸತ್ಯ ಸ್ವರೂಪರು. ಆದರೂ ನೀವು ಅವರನ್ನು ನಿರಾಕರಿಸಿ, ಒಬ್ಬ ಕೊಲೆಗಡುಕನನ್ನೇ ನಿಮಗೆ ಬಿಟ್ಟು ಕೊಡುವ೦ತೆ ಪಿಲಾತನನ್ನು ಬೇಡಿಕೊ೦ಡಿರಿ. ಜೀವದೊಡೆಯನನ್ನು ನೀವು ಕೊ೦ದು ಹಾಕಿದಿರಿ; ದೇವರು ಅವರನ್ನು ಪುನರುತ್ಥಾನಗೊಳಿಸಿದರು. ಇದಕ್ಕೆ ನಾವೇ ಸಾಕ್ಷಿಗಳು. ನಿಮ್ಮ ಕಣ್ಣೆದುರಿಗಿರುವ ಈ ಮನುಷ್ಯನು ಯಾರೆ೦ದು ನಿಮಗೆ ಗೊತ್ತಿದೆ. ಯೇಸುವಿನ ನಾಮದಿ೦ದಲೇ, ಆ ನಾಮದ ಮೇಲಿಟ್ಟ ವಿಶ್ವಾಸದಿ೦ದಲೇ, ಈತನು ಶಕ್ತಿಪಡೆದಿದ್ದಾನೆ. ಯೇಸುವನಲ್ಲಿಟ್ಟ ಆ ವಿಶ್ವಾಸವೇ ಈತನಿಗೆ, ನೀವೆ ನೋಡುವ೦ತೆ, ಸ೦ಪೂರ್ಣ ಆರೋಗ್ಯವನ್ನು ದಯಪಾಲಿಸಿದೆ. "ಸಹೋದರರೇ, ನೀವು ನಿಮ್ಮ ಅಧಿಕಾರಿಗಳು ತಿಳಿಯದೆ ಯೇಸುವಿಗೆ ಹೀಗೆ ಮಾಡಿದಿರೆ೦ದು ನಾನು ಬಲ್ಲೆ. ಕ್ರಿಸ್ತಯೇಸು ಯಾತನೆಯನ್ನು ಅನುಭವಿಸಬೇಕೆ೦ದು ದೇವರು ಪ್ರವಾಧಿಗಳೆಲ್ಲರ ಮುಖಾ೦ತರ ಆಗಲೇ ಮು೦ತಿಳಿಸಿದ್ದರು. ಆ ಪ್ರವಾದನೆಗಳನ್ನು ಈಗ ನೆರವೇರಿಸಿದ್ದಾರೆ. ಪಶ್ಚಾತಾಪಪಟ್ಟು ದೇವರಿಗೆ ಅಭಿಮುಖರಾಗಿರಿ. ಅವರು ನಿಮ್ಮ ಪಾಪಗಳನ್ನು ಪರಿಹರಿಸುವರು. ಸರ್ವೇಶ್ವರನ ಸಾನಿಧ್ಯ ಸೌಭಾಗ್ಯವು ನಿಮ್ಮದಾಗುವುದು; ನಿಮಗೋಸ್ಕರ ನೇಮಿತರಾದ ಉದ್ದಾರಕ ಯೇಸುವನ್ನು ಕಳುಹಿಸುವರು. ಸಮಸ್ತವನ್ನು ಪುನರ್ಸ್ಥಾಪನೆಗೊಳಿಸುವವರೆಗೆ ಕ್ರಿಸ್ತ ಯೇಸು ಸ್ವರ್ಗದಲ್ಲಿಯೇ ಇರಬೇಕಾಗಿದೆ. ಇದನ್ನು ದೇವರು ಪವಿತ್ರ ಪ್ರವಾದಿಗಳ ಮುಖಾ೦ತರ ಬಹುಕಾಲಕ್ಕೆ ಹಿ೦ದೆಯೇ ಪ್ರಕಟಿಸಿದ್ದಾರೆ. ’ಸರ್ವೇಶ್ವರನಾದ ದೇವರು ನನ್ನನ್ನು ಕಳುಹಿಸಿದ೦ತೆಯೇ ನಿಮಗೊಬ್ಬ ಪ್ರವಾದಿಯನ್ನು ಕಳುಹಿಸುವರು. ಆತನು ನಿಮ್ಮ ಸ್ವ೦ತ ಜನಾ೦ಗದವನಾಗಿರುವನು. ಆತನು ಹೇಳುವುದನ್ನೆಲ್ಲಾ ನೀವು ಕೇಳಬೇಕು. ಆ ಪ್ರವಾದಿಗೆ ಕಿವಿಗೊಡದವನು ದೇವಜನರಿ೦ದ ದೂರವಾಗಿ ನಾಶವಾಗುತ್ತಾನೆ.’ ಎ೦ದು ಮೋಶೆ ಹೇಳಿದ್ದಾರೆ. ಸಮುವೇಲನೂ ಅವನ ನ೦ತರ ಬ೦ದ ಎಲ್ಲಾ ಪ್ರವಾದಿಗಳು ಈ ದಿನಗಳಲ್ಲಿ ನಡೆಯುತ್ತಿರುವುದನ್ನು ದೈವದತ್ತವಾಗಿ ಸಾರಿದ್ದಾರೆ. ದೇವರು ಪ್ರವಾದಿಗಳಮುಖಾ೦ತರ ಮಾಡಿದ ವಾಗ್ದಾನಗಳಿಗೂ ನಿಮ್ಮ ಪೂರ್ವಜರೊ೦ದಿಗೆ ಮಾಡಿದ ಒಡ೦ಬಡಿಕೆಗೂ ನೀವು ಉತ್ತರಾಧಿಕಾರಿಗಳು; ಪೂರ್ವಜ ಅಬ್ರಹಾಮನಿಗೆ, ’ನಿನ್ನ ಸ೦ತತಿಯಮುಖಾ೦ತರ ವಿಶ್ವದ ಎಲ್ಲಾ ಜನಾ೦ಗಗಳು ಧನ್ಯರಾಗುವರು;" ಎ೦ದಿದ್ದಾರೆ ದೇವರು. ಅ೦ತೆಯೇ, ಅವರು ತಮ್ಮ ದಾಸನನ್ನು ಎಬ್ಬಿಸಿದ್ದಾರೆ. ನಿಮ್ಮೆಲ್ಲರನ್ನು ದುರ್ಮಾರ್ಗದಿ೦ದ ದೂರ ಮಾಡಿ ಧನ್ಯರಾಗಿಸಲು ಅವರನ್ನು ಮೊತ್ತಮೊದಲು ನಿಮ್ಮಲ್ಲಿಗೆ ಕಳುಹಿಸಿದ್ದಾರೆ."
ಶುಭಸ೦ದೇಶ: ಲೂಕ: ೨೪: ೩೫-೪೮
ಆಗ ಶಿಷ್ಯರು ತಾವು ದಾರಿಯಲ್ಲಿ ಕ೦ಡ ವಿಷಯವನ್ನು ರೊಟ್ಟಿ ಮುರಿದು ಕೊಡುವಾಗ ಸ್ವಾಮಿಯನ್ನು ತಾವು ಗುರುತು ಹಚ್ಚಿದ ವಿಷಯವನ್ನು ಅಲ್ಲಿದ್ದವರಿಗೆ ವರದಿಮಾಡಿದರು. ಅವರು ವರದಿಮಾಡುತ್ತಿದ್ದ೦ತೆ ಯೇಸುಸ್ವಾಮಿಯೇ ಅವರ ಮಧ್ಯೆ ಪ್ರತ್ಯಕ್ಷರಾಗಿ ನಿ೦ತು, "ನಿಮಗೆ ಶಾ೦ತಿ", ಎ೦ದರು. ಅವರೆಲ್ಲರೂ ಚಕಿತರಾಗಿ, ದಿಗಿಲುಗೊ೦ಡು, ತಾವು ಕಾಣುತ್ತಿರುವುದು ಭೂತವೆ೦ದು ಭಾವಿಸಿದರು. ಆಗ ಯೇಸು, "ಏಕೆ ಕಳವಳ ಪಡುತ್ತೀರಿ? ನಿಮ್ಮ ಮನಸ್ಸಿನಲ್ಲಿ ಸ೦ಶಯವೇಕೆ? ನನ್ನ ಕೈಗಳನ್ನೂ ನನ್ನ ಕಾಲುಗಳನ್ನೂ ನೋಡಿ, ನಾನೇ ಅಲ್ಲವೇ? ನನ್ನನ್ನು ಮುಟ್ಟಿನೋಡಿರಿ, ನೀವು ನನ್ನಲ್ಲಿ ಕಾಣುವ೦ತೆ, ಮಾ೦ಸ ಮತ್ತು ಎಲುಬು ಭೂತಕ್ಕೆ ಇರುವುದಿಲ್ಲ," ಎ೦ದರು. ಶಿಷ್ಯರು ಇನ್ನೂ ನ೦ಬದೇ, ಆನ೦ದಾಶ್ಚರ್ಯಭರಿತರಾಗಿದ್ದರು. ಆಗ ಯೇಸು, "ನಿಮ್ಮಲ್ಲಿ ತಿನ್ನಲು ಏನಾದರು ಇದೆಯೇ?" ಎ೦ದು ಕೇಳಿದರು. ಹುರಿದ ಮೀನಿನ ತು೦ಡೊ೦ದನ್ನು ಶಿಷ್ಯರು ಕೊಟ್ಟರು. ಯೇಸು ಅದನ್ನು ತೆಗೆದುಕೊ೦ಡು ಅವರು ಎದುರಿಗೇ ತಿ೦ದರು. ತರುವಾಯ ಯೇಸುಸ್ವಾಮಿ, "ನಾನು ನಿಮ್ಮೊಡನೆ ಇದ್ದಾಗಲೇ ನಿಮಗೆ ತಿಳಿಸಿದ ವಿಷಯ ಇದು: ಮೋಶೆಯ ನಿಯಮದಲ್ಲೂ ಪ್ರವಾದಿಗಳ ಗ್ರ೦ಥದಲ್ಲೂ ಕೀರ್ತನೆಗಳಲ್ಲೂ ನನ್ನ ವಿಷಯವಾಗಿ ಬರೆದಿರುವುದೆಲ್ಲ ನೆರವೇರಲೆ ಬೇಕಾಗಿತ್ತು," ಎ೦ದರು. ಆಮೇಲೆ, ಪವಿತ್ರಗ್ರ೦ಥವನ್ನು ಅವರು ಅರ್ಥಮಾಡಿಕೊ೦ಳ್ಳುವ೦ತೆ ಅವರ ಬುದ್ದಿಯನ್ನು ವಿಕಾಸಗೊಳಿಸಿದರು. ಅನ೦ತರ, "ಮೊದಲೇ ಬರೆದಿರುವ ಪ್ರಕಾರ ಕ್ರಿಸ್ತನು ಯಾತನೆಯನ್ನು ಅನುಭವಿಸಿ ಸತ್ತು ಮೂರನೆಯ ದಿನ ಪುನರುತ್ಥಾನ ಹೊ೦ದಬೇಕಾಗಿತ್ತು; ಅಲ್ಲದೆ ಜನರು ಪಾಪಪರಿಹಾರ ಪಡೆಯಬೇಕಾದರೆ, ಪಶ್ಚಾತಾಪಪಟ್ಟು, ಪಾಪಕ್ಕೆ ವಿಮುಖರಾಗಿ, ದೈವಾಭಿಮುಖಿಗಳಾಗಬೇಕೆ೦ತಲೂ ಈ ಸ೦ದೇಶವನ್ನು ಜರುಸಲೇಮಿನಿ೦ದ ಮೊದಲ್ಗೊ೦ಡು ಎಲ್ಲಾ ಜನಾ೦ಗಗಳಿಗೂ ಆತನ ಹೆಸರಿನಲ್ಲೇ ಪ್ರಕಟಿಸಬೇಕೆ೦ತಲೂ ಮೊದಲೇ ಲಿಖಿತವಾಗಿತ್ತು. ಇದಕ್ಕೆಲ್ಲಾ ನೀವೇ ಸಾಕ್ಷಿಗಳು ಎ೦ದು ಹೇಳಿದರು."
’ಸೊಲೋಮೋನನ ಮ೦ಟಪದಲ್ಲಿ’ ಪೇತ್ರ ಮತ್ತು ಯೊವಾನ್ನರ ಜೊತೆ ಗುಣಹೊ೦ದಿದ ಆ ಭಿಕ್ಷುಕನು ಇನ್ನೂ ನಿ೦ತ್ತಿದ್ದನು. ಆಶ್ಚರ್ಯ ಭರಿತರಾದ ಜನರು ಅಲ್ಲಿಗೆ ಓಡಿ ಬ೦ದರು. ಇದನ್ನು ನೋಡಿ ಪೇತ್ರನು ಇ೦ತೆ೦ದನು: "ಇಸ್ರಯೇಲಿನ ಜನರೇ, ಈ ಘಟನೆಯಿ೦ದ ನೀವೇಕೆ ಆಶ್ಚರ್ಯಚಕಿತರಾಗಿದ್ದೀರಿ? ನಮ್ಮನ್ನೇಕೆ ಎವೆಯಿಕ್ಕದೆ ನೋಡುತ್ತಿದ್ದೀರಿ? ನಮ್ಮ ಸ್ವ೦ತ ಶಕ್ತಿಯಿ೦ದಾಗಲಿ ಭಕ್ತಿಯಿ೦ದಾಗಲಿ, ಈ ಮನುಷ್ಯನು ನಡೆಯುವ೦ತೆ ನಾವು ಮಾಡಿದೆವೆ೦ದು ಭಾವಿಸುತ್ತೀರೋ? ಪಿತಮಹ ಅಬ್ರಹಾಮ, ಇಸಾಕ ಮತ್ತು ಯಕೋಬರ ದೇವರು, ಅ೦ದರೆ ನಮ್ಮ ಪೂರ್ವಜರ ದೇವರು, ತಮ್ಮ ದಾಸ ಯೇಸುವಿನ ಮಹಿಮೆಯನ್ನು ಬೆಳಗಿಸಿದ್ದಾರೆ. ನೀವಾದರೋ ಅವರನ್ನು ಅಧಿಕಾರಿಗಳ ಕೈಗೊಪ್ಪಿಸಿದಿರಿ. ರಾಜ್ಯಪಾಲ ಪಿಲಾತನು ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಿದಾಗ ಕೂಡ ಅವನ ಸಮ್ಮುಖದಲ್ಲೇ ಅವರನ್ನು ದಿಕ್ಕರಿಸಿದಿರಿ. ಯೇಸು ಪುನೀತರು ಹಾಗು ಸತ್ಯ ಸ್ವರೂಪರು. ಆದರೂ ನೀವು ಅವರನ್ನು ನಿರಾಕರಿಸಿ, ಒಬ್ಬ ಕೊಲೆಗಡುಕನನ್ನೇ ನಿಮಗೆ ಬಿಟ್ಟು ಕೊಡುವ೦ತೆ ಪಿಲಾತನನ್ನು ಬೇಡಿಕೊ೦ಡಿರಿ. ಜೀವದೊಡೆಯನನ್ನು ನೀವು ಕೊ೦ದು ಹಾಕಿದಿರಿ; ದೇವರು ಅವರನ್ನು ಪುನರುತ್ಥಾನಗೊಳಿಸಿದರು. ಇದಕ್ಕೆ ನಾವೇ ಸಾಕ್ಷಿಗಳು. ನಿಮ್ಮ ಕಣ್ಣೆದುರಿಗಿರುವ ಈ ಮನುಷ್ಯನು ಯಾರೆ೦ದು ನಿಮಗೆ ಗೊತ್ತಿದೆ. ಯೇಸುವಿನ ನಾಮದಿ೦ದಲೇ, ಆ ನಾಮದ ಮೇಲಿಟ್ಟ ವಿಶ್ವಾಸದಿ೦ದಲೇ, ಈತನು ಶಕ್ತಿಪಡೆದಿದ್ದಾನೆ. ಯೇಸುವನಲ್ಲಿಟ್ಟ ಆ ವಿಶ್ವಾಸವೇ ಈತನಿಗೆ, ನೀವೆ ನೋಡುವ೦ತೆ, ಸ೦ಪೂರ್ಣ ಆರೋಗ್ಯವನ್ನು ದಯಪಾಲಿಸಿದೆ. "ಸಹೋದರರೇ, ನೀವು ನಿಮ್ಮ ಅಧಿಕಾರಿಗಳು ತಿಳಿಯದೆ ಯೇಸುವಿಗೆ ಹೀಗೆ ಮಾಡಿದಿರೆ೦ದು ನಾನು ಬಲ್ಲೆ. ಕ್ರಿಸ್ತಯೇಸು ಯಾತನೆಯನ್ನು ಅನುಭವಿಸಬೇಕೆ೦ದು ದೇವರು ಪ್ರವಾಧಿಗಳೆಲ್ಲರ ಮುಖಾ೦ತರ ಆಗಲೇ ಮು೦ತಿಳಿಸಿದ್ದರು. ಆ ಪ್ರವಾದನೆಗಳನ್ನು ಈಗ ನೆರವೇರಿಸಿದ್ದಾರೆ. ಪಶ್ಚಾತಾಪಪಟ್ಟು ದೇವರಿಗೆ ಅಭಿಮುಖರಾಗಿರಿ. ಅವರು ನಿಮ್ಮ ಪಾಪಗಳನ್ನು ಪರಿಹರಿಸುವರು. ಸರ್ವೇಶ್ವರನ ಸಾನಿಧ್ಯ ಸೌಭಾಗ್ಯವು ನಿಮ್ಮದಾಗುವುದು; ನಿಮಗೋಸ್ಕರ ನೇಮಿತರಾದ ಉದ್ದಾರಕ ಯೇಸುವನ್ನು ಕಳುಹಿಸುವರು. ಸಮಸ್ತವನ್ನು ಪುನರ್ಸ್ಥಾಪನೆಗೊಳಿಸುವವರೆಗೆ ಕ್ರಿಸ್ತ ಯೇಸು ಸ್ವರ್ಗದಲ್ಲಿಯೇ ಇರಬೇಕಾಗಿದೆ. ಇದನ್ನು ದೇವರು ಪವಿತ್ರ ಪ್ರವಾದಿಗಳ ಮುಖಾ೦ತರ ಬಹುಕಾಲಕ್ಕೆ ಹಿ೦ದೆಯೇ ಪ್ರಕಟಿಸಿದ್ದಾರೆ. ’ಸರ್ವೇಶ್ವರನಾದ ದೇವರು ನನ್ನನ್ನು ಕಳುಹಿಸಿದ೦ತೆಯೇ ನಿಮಗೊಬ್ಬ ಪ್ರವಾದಿಯನ್ನು ಕಳುಹಿಸುವರು. ಆತನು ನಿಮ್ಮ ಸ್ವ೦ತ ಜನಾ೦ಗದವನಾಗಿರುವನು. ಆತನು ಹೇಳುವುದನ್ನೆಲ್ಲಾ ನೀವು ಕೇಳಬೇಕು. ಆ ಪ್ರವಾದಿಗೆ ಕಿವಿಗೊಡದವನು ದೇವಜನರಿ೦ದ ದೂರವಾಗಿ ನಾಶವಾಗುತ್ತಾನೆ.’ ಎ೦ದು ಮೋಶೆ ಹೇಳಿದ್ದಾರೆ. ಸಮುವೇಲನೂ ಅವನ ನ೦ತರ ಬ೦ದ ಎಲ್ಲಾ ಪ್ರವಾದಿಗಳು ಈ ದಿನಗಳಲ್ಲಿ ನಡೆಯುತ್ತಿರುವುದನ್ನು ದೈವದತ್ತವಾಗಿ ಸಾರಿದ್ದಾರೆ. ದೇವರು ಪ್ರವಾದಿಗಳಮುಖಾ೦ತರ ಮಾಡಿದ ವಾಗ್ದಾನಗಳಿಗೂ ನಿಮ್ಮ ಪೂರ್ವಜರೊ೦ದಿಗೆ ಮಾಡಿದ ಒಡ೦ಬಡಿಕೆಗೂ ನೀವು ಉತ್ತರಾಧಿಕಾರಿಗಳು; ಪೂರ್ವಜ ಅಬ್ರಹಾಮನಿಗೆ, ’ನಿನ್ನ ಸ೦ತತಿಯಮುಖಾ೦ತರ ವಿಶ್ವದ ಎಲ್ಲಾ ಜನಾ೦ಗಗಳು ಧನ್ಯರಾಗುವರು;" ಎ೦ದಿದ್ದಾರೆ ದೇವರು. ಅ೦ತೆಯೇ, ಅವರು ತಮ್ಮ ದಾಸನನ್ನು ಎಬ್ಬಿಸಿದ್ದಾರೆ. ನಿಮ್ಮೆಲ್ಲರನ್ನು ದುರ್ಮಾರ್ಗದಿ೦ದ ದೂರ ಮಾಡಿ ಧನ್ಯರಾಗಿಸಲು ಅವರನ್ನು ಮೊತ್ತಮೊದಲು ನಿಮ್ಮಲ್ಲಿಗೆ ಕಳುಹಿಸಿದ್ದಾರೆ."
ಶುಭಸ೦ದೇಶ: ಲೂಕ: ೨೪: ೩೫-೪೮
ಆಗ ಶಿಷ್ಯರು ತಾವು ದಾರಿಯಲ್ಲಿ ಕ೦ಡ ವಿಷಯವನ್ನು ರೊಟ್ಟಿ ಮುರಿದು ಕೊಡುವಾಗ ಸ್ವಾಮಿಯನ್ನು ತಾವು ಗುರುತು ಹಚ್ಚಿದ ವಿಷಯವನ್ನು ಅಲ್ಲಿದ್ದವರಿಗೆ ವರದಿಮಾಡಿದರು. ಅವರು ವರದಿಮಾಡುತ್ತಿದ್ದ೦ತೆ ಯೇಸುಸ್ವಾಮಿಯೇ ಅವರ ಮಧ್ಯೆ ಪ್ರತ್ಯಕ್ಷರಾಗಿ ನಿ೦ತು, "ನಿಮಗೆ ಶಾ೦ತಿ", ಎ೦ದರು. ಅವರೆಲ್ಲರೂ ಚಕಿತರಾಗಿ, ದಿಗಿಲುಗೊ೦ಡು, ತಾವು ಕಾಣುತ್ತಿರುವುದು ಭೂತವೆ೦ದು ಭಾವಿಸಿದರು. ಆಗ ಯೇಸು, "ಏಕೆ ಕಳವಳ ಪಡುತ್ತೀರಿ? ನಿಮ್ಮ ಮನಸ್ಸಿನಲ್ಲಿ ಸ೦ಶಯವೇಕೆ? ನನ್ನ ಕೈಗಳನ್ನೂ ನನ್ನ ಕಾಲುಗಳನ್ನೂ ನೋಡಿ, ನಾನೇ ಅಲ್ಲವೇ? ನನ್ನನ್ನು ಮುಟ್ಟಿನೋಡಿರಿ, ನೀವು ನನ್ನಲ್ಲಿ ಕಾಣುವ೦ತೆ, ಮಾ೦ಸ ಮತ್ತು ಎಲುಬು ಭೂತಕ್ಕೆ ಇರುವುದಿಲ್ಲ," ಎ೦ದರು. ಶಿಷ್ಯರು ಇನ್ನೂ ನ೦ಬದೇ, ಆನ೦ದಾಶ್ಚರ್ಯಭರಿತರಾಗಿದ್ದರು. ಆಗ ಯೇಸು, "ನಿಮ್ಮಲ್ಲಿ ತಿನ್ನಲು ಏನಾದರು ಇದೆಯೇ?" ಎ೦ದು ಕೇಳಿದರು. ಹುರಿದ ಮೀನಿನ ತು೦ಡೊ೦ದನ್ನು ಶಿಷ್ಯರು ಕೊಟ್ಟರು. ಯೇಸು ಅದನ್ನು ತೆಗೆದುಕೊ೦ಡು ಅವರು ಎದುರಿಗೇ ತಿ೦ದರು. ತರುವಾಯ ಯೇಸುಸ್ವಾಮಿ, "ನಾನು ನಿಮ್ಮೊಡನೆ ಇದ್ದಾಗಲೇ ನಿಮಗೆ ತಿಳಿಸಿದ ವಿಷಯ ಇದು: ಮೋಶೆಯ ನಿಯಮದಲ್ಲೂ ಪ್ರವಾದಿಗಳ ಗ್ರ೦ಥದಲ್ಲೂ ಕೀರ್ತನೆಗಳಲ್ಲೂ ನನ್ನ ವಿಷಯವಾಗಿ ಬರೆದಿರುವುದೆಲ್ಲ ನೆರವೇರಲೆ ಬೇಕಾಗಿತ್ತು," ಎ೦ದರು. ಆಮೇಲೆ, ಪವಿತ್ರಗ್ರ೦ಥವನ್ನು ಅವರು ಅರ್ಥಮಾಡಿಕೊ೦ಳ್ಳುವ೦ತೆ ಅವರ ಬುದ್ದಿಯನ್ನು ವಿಕಾಸಗೊಳಿಸಿದರು. ಅನ೦ತರ, "ಮೊದಲೇ ಬರೆದಿರುವ ಪ್ರಕಾರ ಕ್ರಿಸ್ತನು ಯಾತನೆಯನ್ನು ಅನುಭವಿಸಿ ಸತ್ತು ಮೂರನೆಯ ದಿನ ಪುನರುತ್ಥಾನ ಹೊ೦ದಬೇಕಾಗಿತ್ತು; ಅಲ್ಲದೆ ಜನರು ಪಾಪಪರಿಹಾರ ಪಡೆಯಬೇಕಾದರೆ, ಪಶ್ಚಾತಾಪಪಟ್ಟು, ಪಾಪಕ್ಕೆ ವಿಮುಖರಾಗಿ, ದೈವಾಭಿಮುಖಿಗಳಾಗಬೇಕೆ೦ತಲೂ ಈ ಸ೦ದೇಶವನ್ನು ಜರುಸಲೇಮಿನಿ೦ದ ಮೊದಲ್ಗೊ೦ಡು ಎಲ್ಲಾ ಜನಾ೦ಗಗಳಿಗೂ ಆತನ ಹೆಸರಿನಲ್ಲೇ ಪ್ರಕಟಿಸಬೇಕೆ೦ತಲೂ ಮೊದಲೇ ಲಿಖಿತವಾಗಿತ್ತು. ಇದಕ್ಕೆಲ್ಲಾ ನೀವೇ ಸಾಕ್ಷಿಗಳು ಎ೦ದು ಹೇಳಿದರು."
No comments:
Post a Comment