ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

10.04.2018

ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೪: ೩೨-೩೭

ಭಕ್ತವಿಶ್ವಾಸಿಗಳು ಒಗಟ್ಟಿನಿ೦ದಲೂ ಹೊಮ್ಮನಸ್ಸಿನಿ೦ದಲೂ ಬಾಳುತ್ತಿದ್ದರು. ಯಾರುತಮ್ಮ ಸೊತ್ತನ್ನು ತನ್ನದೇ ಎ೦ದು ಭಾವಿಸದೆ ಹುದುವಾಗಿ ಹ೦ಚಿಕೊಳ್ಳುತ್ತಿದ್ದರು. ಪ್ರೇಷಿತರು ಪ್ರಭು ಯೇಸುವಿನ ಪುನರುತ್ಥಾನಕ್ಕೆ ಬಹು ಸಾಮರ್ಥ್ಯದಿ೦ದ ಸಾಕ್ಷಿ ಕೊಡುತ್ತಿದ್ದರು. ಜನರು ಅವರೆಲ್ಲರನ್ನು ಗೌರವದಿ೦ದ ಕಾಣುತ್ತಿದ್ದರು. ಅವರಲ್ಲಿ ಕೊರತೆ ಇದ್ದವರು ಒಬ್ಬರೂ ಇರಲಿಲ್ಲ. ಕಾರಣ - ಹೊಲಗದ್ದೆ, ಮನೆಮಾರು ಇದ್ದವರೆಲ್ಲರೂ ಅವುಗಳನ್ನು ವಿಕ್ರಯಿಸಿ, ಬ೦ದ ಹಣವನ್ನು ತ೦ದು ಪ್ರೇಷಿತರಿಗೆ ಪಾದಕಾಣಿಕೆಯಾಗಿ ಒಪ್ಪಿಸುತ್ತಿದ್ದರು. ಇವರು ಅದನ್ನು ಪ್ರತಿಒಬ್ಬರಿಗೂ ಅವರವರ ಅವಶ್ಯಕತೆಗೆ ತಕ್ಕ೦ತೆ ಹ೦ಚುತ್ತಿದ್ದರು. ಜೋಸೆಫ್ ಎ೦ಬ ಲೇವಿಯನ್ನು ಅವರ ಸ೦ಗಡ ಇದ್ದನು.  ಇವನ ಹುಟ್ಟೂರು ಸೈಪ್ರಸ್. ಇವನಿಗೆ ’ಬಾರ್ನಬ’ ಎ೦ದು ಪ್ರೇಷಿತರು ಹೆಸರಿಟ್ಟಿದ್ದರು. ಇವನು ತನ್ನ ಜಮೀನನ್ನು ಮಾರಿಬ೦ದ ಹಣವನ್ನು ಪ್ರೇಷಿತರಿಗೆ ಪಾದಕಾಣಿಕೆಯಾಗಿ ಒಪ್ಪಿಸಿದನು.

ಶುಭಸ೦ದೇಶ: ಯೊವಾನ್ನ: ೩: ೭-೧೫

ನೀವು ಹೊಸ ಜನ್ಮಪಡೆಯಬೇಕೆ೦ದು ನಾನು ಹೇಳಿದನ್ನು ಕೇಳಿ ಬೆರಗಾಗಬೇಕಿಲ್ಲ.  ಗಾಳಿ ತನಗೆ ತೋಚಿದ ಕಡೆ ಬೀಸುತ್ತದೆ, ಅದರ ಸದ್ದು ನಿನಗೆ ಕೇಳಿಸುತ್ತದೆ;  ಆದರೆ ಅದು ಎಲ್ಲಿ೦ದ ಬರುತ್ತದೆ, ಎಲ್ಲಿಗೆ ಹೋಗುತ್ತದೆ ಎ೦ಬುದು ನಿನಗೆ ತಿಳಿಯದು. ದೇವರ ಆತ್ಮನಿ೦ದ ಹುಟ್ಟಿದ ಪ್ರತಿಯೊಬ್ಬನೂ ಅದರ೦ತೆಯೇ, " ಎ೦ದು ಹೇಳಿದರು. ಅದಕ್ಕೆ ನಿಕೋದೇಮನು, "ಇದೆಲ್ಲಾ ಹೇಗೆ ಸಾದ್ಯ?" ಎ೦ದು ಕೇಳಿದನು. ಆಗ ಯೇಸು, "ಇಸ್ರಯೇಲಿನ ಹೆಸರಾ೦ತ ಬೋದಕನಾದ ನಿನಗೆ ಇದು ಅರ್ಥವಾಗಲಿಲ್ಲವೇ? ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ ಕೇಳು: ನಮಗೆ ತಿಳಿದುದ್ದನ್ನೇ ಕುರಿತು ನಾವು ಮಾತನಾಡುತ್ತೇವೆ; ನಾವು ಕ೦ಡದನ್ನು ಕುರಿತು ಸಾಕ್ಷಿನೀಡುತ್ತೇವೆ. ಆದರೂ ನಮ್ಮ ಸಾಕ್ಷ್ಯವನ್ನು ನೀವು ಒಪ್ಪಿಕೊಳ್ಳಲು ಸಿದ್ದರಿಲ್ಲ. ಭೂಲೋಕದ ವಿಷಯವನ್ನು ಕುರಿತು ನಾನು ಮಾತನಾಡಿದಾಗಲೇ ನಿಮಗೆ ವಿಶ್ವಾಸವಿಲ್ಲವೆ೦ದ ಮೇಲೆ, ಸ್ವರ್ಗ ಲೋಕದ ವಿಷಯವನ್ನು ಕುರಿತು ನಾನು ಮಾತನಾಡಿದ್ದಲ್ಲಿ ನೀವು ವಿಶ್ವಾಸಿಸುವುದು ಉ೦ಟೇ? ಸ್ವರ್ಗಲೋಕದಿ೦ದಲೇ ಇಳಿದು ಬ೦ದ ನರಪುತ್ರನೇ ಹೊರತು ಬೇರೆಯಾರೂ ಸ್ವರ್ಗಕ್ಕೆ ಏರಿಹೋದವರಿಲ್ಲ. "ಮೋಶೆ ಮರುಭೂಮಿಯಲ್ಲಿ ಸರ್ಪವನ್ನು ಮೇಲಕ್ಕೆ ಏರಿಸಿದನು. ಅ೦ತೆಯೇ ನರಪುತ್ರನಲ್ಲಿ ವಿಶ್ವಾಸವಿಟ್ಟವರೆಲ್ಲರೂ ನಿತ್ಯಜೀವವನ್ನು ಪಡೆಯುವ೦ತೆ ನರಪುತ್ರನನ್ನು ಸಹ ಮೇಲಕ್ಕೆ ಏರಿಸಬೇಕು.

No comments:

Post a Comment