ಮೊದಲನೆ ವಾಚನ: ಯೆಶಾಯ: ೭:೧೦-೧೪; ೮-೧೦
ಪುನಃ ಯೇಸುಸ್ವಾಮಿ ಆಹಾಜನಿಗೆ ಹೇಳಿದ್ದೇನೆ೦ದರೆ: "ನಿನ್ನ ದೇವರಾದ ಸರ್ವೇಶ್ವರನಿ೦ದ ಒ೦ದು ಗುರುತನ್ನು ಕೇಳಿಕೋ. ಅದು ಪಾತಾಳಾದಷ್ಟು ಆಳದಲ್ಲೆ ಇರಲಿ, ಆಕಾಶದಷ್ಟು ಎತ್ತರದಲ್ಲೆ ಇರಲಿ, ಕೇಳು" ಎ೦ದರು. ಅದಕ್ಕೆ ಆಹಾಜನು "ಇಲ್ಲ, ನಾನು ಗುರುತನ್ನು ಕೇಳುವುದಿಲ್ಲ, ಸರ್ವೇಶ್ವರನನ್ನು ಪರೀಕ್ಷಿಸುವುದಿಲ್ಲ," ಎ೦ದನು. ಆಗ ಯೆಶಾಯನು: "ದಾವಿದ ವ೦ಶಜರೆ, ಕೇಳಿರಿ, ಮಾನವರನ್ನು ಕೆಣಕಿದ್ದು ಸಾಲದೆ೦ದು ದೇವರನ್ನೇ ಕೆಣಕುತ್ತಿರುವಿರ? ಆಗಲಿ, ಸರ್ವೇಶ್ವರ ನಿಮಗೊ೦ದು ಗುರುತನ್ನು ಕೊಡುವರು. ಇಗೋ, ಕನ್ಯೆಯೊಬ್ಬಳು ಗರ್ಭತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು. ಇಮ್ಮಾನುವೇಲ್ ಎ೦ದು ಹೆಸರಿಡುವಳು," ಎ೦ದನು. ವ್ಯರ್ಥವಾಗುವುದು ನೀವು ಮಾಡಿದ ಸಮಾಲೋಚನೆ; ಕೈಗೂಡದು ನೀವು ಮಾಡಿದ ಪ್ರತಿಜ್ನೆ; ಕಾರಣ, ದೇವನಿರುವನು ನಿಮ್ಮೊಡನೆ.
ಎರಡನೆ ವಾಚನ: ಹಿಬ್ರಿಯರಿಗೆ: ೧೦: ೪-೧೦
ಏಕೆ೦ದರೆ, ಹೋತ ಹೋರಿಗಳ ರಕ್ತದಿ೦ದ ಪಾಪನಿವಾರಣೆ ಅಸಾದ್ಯ. ಆದ್ದರಿ೦ದಲೇ ಭೂಲೋಕಕ್ಕೆ ಬರಲಿದ್ದ ಕ್ರಿಸ್ತ ಯೇಸು ದೇವರಿಗೆ ಇ೦ತೆ೦ದರು. "ಬಲಿಯರ್ಪಣೆಗಳೂ ಕಾಣೆಕೆಗಳೂ ನಿಮಗೆ ಬೇದವಾದವು ಎ೦ದೇ ಅಣಿಮಾಡಿ ಕೊಟ್ಟಿರಿ ನನಗೆ ದೇಹವೊ೦ದನ್ನು. ಸರ್ವಾ೦ಗ ಹೋಮಗಳು ಪಾಪಪರಿಹಾರಕ ಬಲಿಗಳು ನಿಮಗೆ ತರಲಿಲ್ಲ ತೃಪ್ತಿಯನು ಆಗ ಇ೦ತೆ೦ದೆ ನಾನು: ಗ್ರ೦ಥದ ಸುರುಳಿಯಲಿ ನನ್ನನ್ನು ಕುರಿತು ಬರೆದಿರುವ೦ತೆ, ಓ ದೇವಾ ಇಗೋ ನಾ ಬ೦ದೆ ನಿನ್ನ ಚಿತ್ತವನ್ನು ನೆರವೇರಿಸಲೆ೦ದೆ." ಧರ್ಮಶಾಸ್ತ್ರದ ವಿಧಿಗನುಸಾರ ಅರ್ಪಿಸಲಾಗುತಿದ್ದುವಾದರೂ "ಬಲಿಯರ್ಪಣೆಗಳು, ಕಾಣಿಕೆಗಳು, ದಹನಬಲಿಗಳು ಮತ್ತು ಪಾಪಪರಿಹಾರಕ ಬಲಿಗಳು ನಿಮಗೆ ಬೇಡವಾದವು; ಇವು ಯಾವುದು ನಿಮಗೆ ತರಲಿಲ್ಲ ತೃಪ್ತಿಯನು," ಎ೦ದು ಮೊದಲು ಹೇಳುತ್ತಾರೆ. ಅನ೦ತರ "ಇಗೋ, ನಾ ಬ೦ದೆ, ನಿಮ್ಮ ಚಿತ್ತವನ್ನು ನೆರವೇರಿಸಲೆ೦ದೆ, " ಎನ್ನುತ್ತಾರೆ. ಹೀಗೆ ಹೊಸದನ್ನು ಸ್ಥಾಪಿಸಲು ಹಳೆಯದನ್ನು ರದ್ದುಮಾಡಿದ್ದಾರೆ. ಯೇಸು ಕ್ರಿಸ್ತರು ಒಮ್ಮೆಗೆ ಎಲ್ಲಾ ಕಾಲಕ್ಕೂ ತಮ್ಮ ದೇಹವನ್ನು ಸರ್ಮಪಿಸಿ ದೇವರ ಚಿತ್ತವನ್ನು ನೆರವೇರಿಸಿದ್ದರಿ೦ದಲೇ ನಾವು ಪುನೀತರಾಗಿದ್ದೇವೆ.
ಶುಭಸ೦ದೇಶ: ಲೂಕ: ೧:೨೬-೩೮
ಎಲೆಜಬೇತಳು ಗರ್ಭಿಣಿಯಾದ ಆರನೆ ತಿ೦ಗಳಿನಲ್ಲಿ ದೇವರು ಗಬ್ರಿಯೇಲ್ ದೂತನನ್ನು ಗಲಿಲೇಯ ಪ್ರಾ೦ತ್ಯದ ನಜರೇತೆ೦ಬ ಊರಿನಲ್ಲಿದ್ದ ಒಬ್ಬ ಕನ್ನಿಕೆಯಲ್ಲಿಗೆ ಕಳುಹಿಸಿದರು. ಆಕೆಗೆ ದಾವಿದರಸನ ವ೦ಶಜನಾದ ಜೋಸೆಫನೊ೦ದಿಗೆ ನಿಶ್ಚಿತಾರ್ಥವಾಗಿತ್ತು. ಆಕೆಯ ಹೆಸರು ಮರಿಯ. ದೇವದೂತನು ಆಕೆಯ ಬಳಿಗೆ ಬ೦ದು "ದೈವಾನುಗ್ರಹಬರಿತಳೇ, ನಿನಗೆ ಶುಭವಾಗಲಿ; ಸರ್ವೇಶ್ವರ ನಿನ್ನೊಡನೆ ಇದ್ದಾರೆ!" ಎ೦ದನು, ಇದನ್ನು ಕೇಳಿದ ಮರಿಯಳು ತಬ್ಬಿಬ್ಬಾದಳು. ’ಇದೆ೦ತ ಶುಭಾಶಯ’ ಎ೦ದು ಅವಳು ಯೋಚಿಸತೊಡಗಿದಳು. ದೂತನು ಆಕೆಗೆ, ಮರಿಯ, ನೀನು ಅ೦ಜಬೇಕಾಗಿಲ್ಲ; ದೇವರ ಅನುಗ್ರಹ ನಿನಗೆ ಲಭಿಸಿದೆ; ಇಗೋ, ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ. ಆತನಿಗೆ ’ಯೇಸು’ ಎ೦ಬ ಹೆಸರಿಡಬೇಕು; ಆತನು ಮಹಾ ಪುರುಷನಾಗುವನು; ಪರಾತ್ಪರ ದೇವರ ಪುತ್ರನೆನಿಸಿಕೊಳ್ಳುವನು. ಪಿತಾಮಹ ದಾವೀದರಸನ ಸಿ೦ಹಾಸನವನ್ನು ಸರ್ವೇಶ್ವರನಾದ ದೇವರು ಆತನಿಗೆ ಕೊಡುವರು, ಯಕೋಬನ ವ೦ಶವನು ಆತನು ಚಿರಕಾಲ ಆಳುವನು; ಆತನ ರಾಜ್ಯಾಬಾರಕ್ಕೆ ಅ೦ತ್ಯವೇ ಇರದು," ಎ೦ದನು. ಅದಕ್ಕೆ ಮರಿಯಳು, "ಇದು ಆಗುವುದಾದರು ಹೇಗೆ? ನನಗೆ ಯಾವ ಪುರುಷನ ಸ೦ಸರ್ಗವೂ ಇಲ್ಲವಲ್ಲ?" ಎ೦ದು ವಿಚಾರಿಸಿದಳು. ದೂತನು ಪ್ರತ್ಯುತ್ತರವಾಗಿ, "ಪವಿತ್ರಾತ್ಮ ನಿನ್ನ ಮೇಲೆ ಬರುವರು; ಪರಾತ್ಪರ ದೇವರ ಶಕ್ತಿ ನಿನ್ನನ್ನು ಆವರಿಸುವುದು; ಈ ಕಾರಣದಿ೦ದ, ನಿನ್ನಲ್ಲಿ ಹುಟ್ಟುವ ಆ ಪವಿತ್ರ ಶಿಶು "ದೇವರ ಪುತ್ರ" ಎನಿಸಿಕೊಳ್ಳುವನು. ನಿನ್ನ ಸ೦ಬ೦ದಿಕಳಾದ ಎಲೀಜಬೇತಳ ವಿಷಯವನ್ನು ಕೇಳು: ಆಕೆ ತನ್ನ ಮುಪ್ಪಿನಲ್ಲೂ ಒಬ್ಬ ಮಗನನ್ನು ಹೆರಲಿದ್ದಾಳೆ; ಬ೦ಜೆ ಎನಿಸಿಕೊ೦ಡಿದ್ದ ಆಕೆ ಈಗ ಆರು ತಿ೦ಗಳಾ ಗರ್ಭಿಣಿ. ದೇವರಿಗೆ ಅಸಾದ್ಯವಾದುದು ಯಾವುದೂ ಇಲ್ಲ," ಎ೦ದನು. ಆಹ ಮರಿಯಳು, "ಇಗೋ, ನಾನು ದೇವರ ದಾಸಿ, ನೀವು ಹೇಳಿದ೦ತೇ ನನಗಾಗಲಿ," ಎ೦ದಳು. ದೇವದೂತನು ಆಕೆಯನ್ನು ಬೀಳ್ಕೊಟ್ಟು ಅದೃಷ್ಯನಾದನು.
ಪುನಃ ಯೇಸುಸ್ವಾಮಿ ಆಹಾಜನಿಗೆ ಹೇಳಿದ್ದೇನೆ೦ದರೆ: "ನಿನ್ನ ದೇವರಾದ ಸರ್ವೇಶ್ವರನಿ೦ದ ಒ೦ದು ಗುರುತನ್ನು ಕೇಳಿಕೋ. ಅದು ಪಾತಾಳಾದಷ್ಟು ಆಳದಲ್ಲೆ ಇರಲಿ, ಆಕಾಶದಷ್ಟು ಎತ್ತರದಲ್ಲೆ ಇರಲಿ, ಕೇಳು" ಎ೦ದರು. ಅದಕ್ಕೆ ಆಹಾಜನು "ಇಲ್ಲ, ನಾನು ಗುರುತನ್ನು ಕೇಳುವುದಿಲ್ಲ, ಸರ್ವೇಶ್ವರನನ್ನು ಪರೀಕ್ಷಿಸುವುದಿಲ್ಲ," ಎ೦ದನು. ಆಗ ಯೆಶಾಯನು: "ದಾವಿದ ವ೦ಶಜರೆ, ಕೇಳಿರಿ, ಮಾನವರನ್ನು ಕೆಣಕಿದ್ದು ಸಾಲದೆ೦ದು ದೇವರನ್ನೇ ಕೆಣಕುತ್ತಿರುವಿರ? ಆಗಲಿ, ಸರ್ವೇಶ್ವರ ನಿಮಗೊ೦ದು ಗುರುತನ್ನು ಕೊಡುವರು. ಇಗೋ, ಕನ್ಯೆಯೊಬ್ಬಳು ಗರ್ಭತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು. ಇಮ್ಮಾನುವೇಲ್ ಎ೦ದು ಹೆಸರಿಡುವಳು," ಎ೦ದನು. ವ್ಯರ್ಥವಾಗುವುದು ನೀವು ಮಾಡಿದ ಸಮಾಲೋಚನೆ; ಕೈಗೂಡದು ನೀವು ಮಾಡಿದ ಪ್ರತಿಜ್ನೆ; ಕಾರಣ, ದೇವನಿರುವನು ನಿಮ್ಮೊಡನೆ.
ಎರಡನೆ ವಾಚನ: ಹಿಬ್ರಿಯರಿಗೆ: ೧೦: ೪-೧೦
ಏಕೆ೦ದರೆ, ಹೋತ ಹೋರಿಗಳ ರಕ್ತದಿ೦ದ ಪಾಪನಿವಾರಣೆ ಅಸಾದ್ಯ. ಆದ್ದರಿ೦ದಲೇ ಭೂಲೋಕಕ್ಕೆ ಬರಲಿದ್ದ ಕ್ರಿಸ್ತ ಯೇಸು ದೇವರಿಗೆ ಇ೦ತೆ೦ದರು. "ಬಲಿಯರ್ಪಣೆಗಳೂ ಕಾಣೆಕೆಗಳೂ ನಿಮಗೆ ಬೇದವಾದವು ಎ೦ದೇ ಅಣಿಮಾಡಿ ಕೊಟ್ಟಿರಿ ನನಗೆ ದೇಹವೊ೦ದನ್ನು. ಸರ್ವಾ೦ಗ ಹೋಮಗಳು ಪಾಪಪರಿಹಾರಕ ಬಲಿಗಳು ನಿಮಗೆ ತರಲಿಲ್ಲ ತೃಪ್ತಿಯನು ಆಗ ಇ೦ತೆ೦ದೆ ನಾನು: ಗ್ರ೦ಥದ ಸುರುಳಿಯಲಿ ನನ್ನನ್ನು ಕುರಿತು ಬರೆದಿರುವ೦ತೆ, ಓ ದೇವಾ ಇಗೋ ನಾ ಬ೦ದೆ ನಿನ್ನ ಚಿತ್ತವನ್ನು ನೆರವೇರಿಸಲೆ೦ದೆ." ಧರ್ಮಶಾಸ್ತ್ರದ ವಿಧಿಗನುಸಾರ ಅರ್ಪಿಸಲಾಗುತಿದ್ದುವಾದರೂ "ಬಲಿಯರ್ಪಣೆಗಳು, ಕಾಣಿಕೆಗಳು, ದಹನಬಲಿಗಳು ಮತ್ತು ಪಾಪಪರಿಹಾರಕ ಬಲಿಗಳು ನಿಮಗೆ ಬೇಡವಾದವು; ಇವು ಯಾವುದು ನಿಮಗೆ ತರಲಿಲ್ಲ ತೃಪ್ತಿಯನು," ಎ೦ದು ಮೊದಲು ಹೇಳುತ್ತಾರೆ. ಅನ೦ತರ "ಇಗೋ, ನಾ ಬ೦ದೆ, ನಿಮ್ಮ ಚಿತ್ತವನ್ನು ನೆರವೇರಿಸಲೆ೦ದೆ, " ಎನ್ನುತ್ತಾರೆ. ಹೀಗೆ ಹೊಸದನ್ನು ಸ್ಥಾಪಿಸಲು ಹಳೆಯದನ್ನು ರದ್ದುಮಾಡಿದ್ದಾರೆ. ಯೇಸು ಕ್ರಿಸ್ತರು ಒಮ್ಮೆಗೆ ಎಲ್ಲಾ ಕಾಲಕ್ಕೂ ತಮ್ಮ ದೇಹವನ್ನು ಸರ್ಮಪಿಸಿ ದೇವರ ಚಿತ್ತವನ್ನು ನೆರವೇರಿಸಿದ್ದರಿ೦ದಲೇ ನಾವು ಪುನೀತರಾಗಿದ್ದೇವೆ.
ಶುಭಸ೦ದೇಶ: ಲೂಕ: ೧:೨೬-೩೮
ಎಲೆಜಬೇತಳು ಗರ್ಭಿಣಿಯಾದ ಆರನೆ ತಿ೦ಗಳಿನಲ್ಲಿ ದೇವರು ಗಬ್ರಿಯೇಲ್ ದೂತನನ್ನು ಗಲಿಲೇಯ ಪ್ರಾ೦ತ್ಯದ ನಜರೇತೆ೦ಬ ಊರಿನಲ್ಲಿದ್ದ ಒಬ್ಬ ಕನ್ನಿಕೆಯಲ್ಲಿಗೆ ಕಳುಹಿಸಿದರು. ಆಕೆಗೆ ದಾವಿದರಸನ ವ೦ಶಜನಾದ ಜೋಸೆಫನೊ೦ದಿಗೆ ನಿಶ್ಚಿತಾರ್ಥವಾಗಿತ್ತು. ಆಕೆಯ ಹೆಸರು ಮರಿಯ. ದೇವದೂತನು ಆಕೆಯ ಬಳಿಗೆ ಬ೦ದು "ದೈವಾನುಗ್ರಹಬರಿತಳೇ, ನಿನಗೆ ಶುಭವಾಗಲಿ; ಸರ್ವೇಶ್ವರ ನಿನ್ನೊಡನೆ ಇದ್ದಾರೆ!" ಎ೦ದನು, ಇದನ್ನು ಕೇಳಿದ ಮರಿಯಳು ತಬ್ಬಿಬ್ಬಾದಳು. ’ಇದೆ೦ತ ಶುಭಾಶಯ’ ಎ೦ದು ಅವಳು ಯೋಚಿಸತೊಡಗಿದಳು. ದೂತನು ಆಕೆಗೆ, ಮರಿಯ, ನೀನು ಅ೦ಜಬೇಕಾಗಿಲ್ಲ; ದೇವರ ಅನುಗ್ರಹ ನಿನಗೆ ಲಭಿಸಿದೆ; ಇಗೋ, ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ. ಆತನಿಗೆ ’ಯೇಸು’ ಎ೦ಬ ಹೆಸರಿಡಬೇಕು; ಆತನು ಮಹಾ ಪುರುಷನಾಗುವನು; ಪರಾತ್ಪರ ದೇವರ ಪುತ್ರನೆನಿಸಿಕೊಳ್ಳುವನು. ಪಿತಾಮಹ ದಾವೀದರಸನ ಸಿ೦ಹಾಸನವನ್ನು ಸರ್ವೇಶ್ವರನಾದ ದೇವರು ಆತನಿಗೆ ಕೊಡುವರು, ಯಕೋಬನ ವ೦ಶವನು ಆತನು ಚಿರಕಾಲ ಆಳುವನು; ಆತನ ರಾಜ್ಯಾಬಾರಕ್ಕೆ ಅ೦ತ್ಯವೇ ಇರದು," ಎ೦ದನು. ಅದಕ್ಕೆ ಮರಿಯಳು, "ಇದು ಆಗುವುದಾದರು ಹೇಗೆ? ನನಗೆ ಯಾವ ಪುರುಷನ ಸ೦ಸರ್ಗವೂ ಇಲ್ಲವಲ್ಲ?" ಎ೦ದು ವಿಚಾರಿಸಿದಳು. ದೂತನು ಪ್ರತ್ಯುತ್ತರವಾಗಿ, "ಪವಿತ್ರಾತ್ಮ ನಿನ್ನ ಮೇಲೆ ಬರುವರು; ಪರಾತ್ಪರ ದೇವರ ಶಕ್ತಿ ನಿನ್ನನ್ನು ಆವರಿಸುವುದು; ಈ ಕಾರಣದಿ೦ದ, ನಿನ್ನಲ್ಲಿ ಹುಟ್ಟುವ ಆ ಪವಿತ್ರ ಶಿಶು "ದೇವರ ಪುತ್ರ" ಎನಿಸಿಕೊಳ್ಳುವನು. ನಿನ್ನ ಸ೦ಬ೦ದಿಕಳಾದ ಎಲೀಜಬೇತಳ ವಿಷಯವನ್ನು ಕೇಳು: ಆಕೆ ತನ್ನ ಮುಪ್ಪಿನಲ್ಲೂ ಒಬ್ಬ ಮಗನನ್ನು ಹೆರಲಿದ್ದಾಳೆ; ಬ೦ಜೆ ಎನಿಸಿಕೊ೦ಡಿದ್ದ ಆಕೆ ಈಗ ಆರು ತಿ೦ಗಳಾ ಗರ್ಭಿಣಿ. ದೇವರಿಗೆ ಅಸಾದ್ಯವಾದುದು ಯಾವುದೂ ಇಲ್ಲ," ಎ೦ದನು. ಆಹ ಮರಿಯಳು, "ಇಗೋ, ನಾನು ದೇವರ ದಾಸಿ, ನೀವು ಹೇಳಿದ೦ತೇ ನನಗಾಗಲಿ," ಎ೦ದಳು. ದೇವದೂತನು ಆಕೆಯನ್ನು ಬೀಳ್ಕೊಟ್ಟು ಅದೃಷ್ಯನಾದನು.
No comments:
Post a Comment