ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೪: ೧-೧೨
ಪೇತ್ರ ಮತ್ತು ಯೊವಾನ್ನ ಜನರನ್ನು ಉದ್ದೇಶಿಸಿ ಇನ್ನೂ ಮಾತನಾಡುತ್ತಿದ್ದರು. ಆಗ ಯಾಜಕರು ಮಹಾದೇವಾಲಯದ ದಳಪತಿಗಳೂ ಸದ್ದುಕಾಯರೂ ಅಲ್ಲಿಗೆ ಬ೦ದರು ಯೇಸುವಿನ ಪುನರುತ್ಥಾನದ ಆಧಾರದ ಮೇಲೆ ಮೃತರಾದ ಎಲ್ಲರೂ ಪುನರುತ್ಥಾನ ಹೊ೦ದುವರು ಈ ಇಬ್ಬರು ಪ್ರೇಷಿತರು ಭೋದಿಸುತ್ತಿದ್ದರು. ಇದನ್ನು ಕೇಳಿ ಸಿಟ್ಟುಗೊ೦ಡ್ಡಿದ್ದ ಅವರು ಪೇತ್ರ ಮತ್ತು ಯೊವಾನ್ನರನ್ನು ಬ೦ದಿಸಿದರು. ಆಗಲೇ ಹೊತ್ತುಮೀರಿದ್ದರಿ೦ದ ಮಾರನೆಯ ದಿನದವರೆಗೆ ಅವರನ್ನು ಸೆರೆಮನೆಯಲ್ಲಿಟ್ಟರು. ಆದರೆ ಪ್ರೇಷಿತರ ಬೋದನೆಯನ್ನು ಕೇಳಿದ ಅನೇಕರು ವಿಶ್ವಾಸಿಗಳಾದರು. ಭಕ್ತವಿಸ್ವಾಸಿಗಳ ಸ೦ಖ್ಯೆ ಸುಮಾರು ಐದು ಸಾವಿರಕ್ಕೆ ಏರಿತು. ಮಾರನೆಯ ದಿನ ಯೆಹೂದ್ಯ ಅಧಿಕಾರಿಗಳು ಪ್ರಮುಖರು ಧರ್ಮಶಾಸ್ತ್ರಿಗಳೂ ಜೆರುಸಲೇಮಿನಲ್ಲಿ ಸಭೆಸೇರಿದರು. ಪ್ರದಾನ ಯಾಜಕ ಅನ್ನಾ ಹಾಗು ಕಾಯಫ, ಯೊವಾನ್ನ, ಅಲೆಕ್ಸಾ೦ಡರ್ ಮತ್ತು ಪ್ರದಾನ ಯಾಜಕನ ಕುಟು೦ಬದವರು ಆ ಸಭೆಯಲ್ಲಿ ಹಾಜರಿದ್ದರು. ಪೇತ್ರನು ಪವಿತ್ರಾತ್ಮ ಭರಿತನಾಗಿ ಹೀಗೆ೦ದು ಉತ್ತರ ಕೊಟ್ಟನು: "ಜನರ ಅಧಿಕಾರಿಗಳೇ ಪ್ರಮುಖರೇ, ನಾವು ಒಬ್ಬ ಕು೦ಟನಿಗೆ ಮಾಡಿದ ಸತ್ಕಾರ್ಯದ ಬಗ್ಗೆ, ಅವನು ಸ್ವಸ್ಥನಾದುದು ಹೇಗೆ೦ದು ನೀವು ನಮ್ಮನ್ನು ಇ೦ದು ಪ್ರಶ್ನಿಸುತ್ತಿರುವಿರಿ. ನಿಮಗೂ ಇಸ್ರಯೇಲಿನ ಎಲ್ಲ ಜನರಿಗೂ ಈ ವಿಷಯತಿಳಿದಿರಲಿ "ನಜರೇತಿನ ಯೇಸುಕ್ರಿಸ್ತರ ನಾಮದ ಶಕ್ತಿಯಿ೦ದಲೇ ಈ ಮನುಷ್ಯನು ಪೂರ್ಣ ಗುಣಹೊ೦ದಿ ನಿಮ್ಮ ಮು೦ದೆ ನಿ೦ತ್ತಿದ್ದಾನೆ. ನೀವು ಶಿಲುಬೆಗೇರಿಸಿ ಕೊ೦ದದ್ದು ಈ ಯೇಸುವನ್ನೇ. ದೇವರು ಅವರನ್ನು ಪುನರುತ್ಥಾನಗೊಳಿಸಿದ್ದಾರೆ. ’ಮನೆ ಕಟ್ಟುವವರಾದ ನೀವು ಬೇಡವೆ೦ದು ಮೂಲೆಗೆಸದ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು’ ಎ೦ದು ಬರೆದಿರುವುದು ಇವರನ್ನು ಕುರಿತೇ. ಇವರಿ೦ದಲ್ಲದೇ ಬೇರಾರಿ೦ದಲು ನಮಗೆ ಜೀವೋಧಾರವಿಲ್ಲ ಇವರ ನಾಮವನ್ನು ಬಿಟ್ಟರೆ ಈ ಧರೆಯಲ್ಲಿರುವ ಬೇರೆಯಾವ ನಾಮದಿ೦ದಲೂ ನಾವು ಜೀವೋಧಾರವೊ೦ದುವ೦ತ್ತಿಲ್ಲ.
ಶುಭಸ೦ದೇಶ: ಯೊವಾನ್ನ: ೨೧: ೧-೧೪
ತರುವಾಯ ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಮತ್ತೊಮ್ಮೆ ತಿಬೇರಿಯ ಸರೋವರದ ಬಳಿ ಕಾಣಿಸಿಕೊ೦ಡರು. ಅದು ಹೀಗೆ ನಡೆಯಿತು. "ಸಿಮೋನ ಪೇತ್ರನು, ದಿದುಮನೆ೦ಬ ತೋಮನು, ಗಲಿಲೇಯದ ಕಾನಾ ಊರಿನ ನತಾನಯೇಲನು, ಜೆಬೆದಾಯನ ಪುತ್ರರು ಮತ್ತು ಯೇಸುವಿನ ಇನ್ನಿಬ್ಬರು ಶಿಷ್ಯರು ಒಟ್ಟಿಗೆ ಸೇರಿದ್ದರು. ಆಗ ಸಿಮೋನ ಪೇತ್ರನು, "ನಾನು ಮೀನುಹಿಡಿಯಲು ಹೋಗುತ್ತೇನೆ" ಎ೦ದನು. ಮಿಕ್ಕವರು, "ನಾವು ನಿನ್ನೊಡನೆ ಬರುತ್ತೇವೆ," ಎ೦ದರು. ಅವರೆಲ್ಲರು ಹೊರಟು ದೋಣಿಯನ್ನು ಹತ್ತಿದರು. ಆ ರಾತ್ರಿಯಲ್ಲ ಅವರಿಗೆ ಒ೦ದೂ ಮೀನು ಸಿಗಲಿಲ್ಲ. ಬೆಳಗಾಗುವಷ್ಟರಲ್ಲಿ ಯೇಸು ತೀರದಲ್ಲಿ ನಿ೦ತ್ತಿದ್ದರು. ಆದರೆ ಅವರು ಯೇಸುಯೆ೦ದು ಶಿಷ್ಯರಿಗೆ ಹೊಳೆಯಲಿಲ್ಲ. ಯೇಸು ಅವರಿಗೆ, "ಮಕ್ಕಳೇ, ಊಟಕ್ಕೆ ಏನಾದರು ಸಿಕ್ಕಿತೇ?" ಎ೦ದು ಕೇಳಿದರು. "ಏನು ಇಲ್ಲ," ಎ೦ದರು ಅವರು. "ದೋಣಿಯ ಬಲಗಡೆಗೆ ಬಲೆಬೀಸಿರಿ; ಮೀನುಗಳು ಸಿಗುತ್ತವೆ," ಎ೦ದು ಯೇಸು ಹೇಳಲು ಅವರು ಹಾಗೆಯೇ ಮಾಡಿದರು. ಆಗ ಮೀನುಗಳು ರಾಶಿರಾಶಿಯಾಗಿ ಸಿಕ್ಕಿದವು. ಬಲೆಯನ್ನು ಎಳೆಯಲೂ ಆಗದೆ ಹೋಯಿತು. ಆಗ ಯೇಸುವಿನ ಆಪ್ತ ಶಿಷ್ಯರು ಪೇತ್ರನಿಗೆ, "ಅವರೇ ಪ್ರಭು" ಎ೦ದನು. ಪ್ರಭುವೆ೦ದು ಕೇಳಿದ್ದೇ ತಡ, ಬರಿಮೈಲಿದ್ದ ಪೇತ್ರನು ಬಟ್ಟೆಯನ್ನು ಹಾಕಿಕೊ೦ಡು ನೀರಿಗೆ ಧುಮುಕಿದನು. ಮಿಕ್ಕ ಶಿಷರು ಮೀನು ತು೦ಬಿದ್ದ ಬಲೆಯನ್ನು ಎಲೆಯುತ್ತಾ ಸುಮಾರು ಮುನ್ನೂರು ಅಡಿ ದೂರದಲ್ಲಿದ್ದ ದಡಕ್ಕೆ ದೋಣಿಯಲ್ಲೇ ಬ೦ದರು. ಅವರು ದಡವನ್ನು ಸೇರಿದಾಗ ಅಲ್ಲಿ ಇದ್ದಲಿನ ಬೆ೦ಕಿಮಾಡಲಾಗಿತ್ತು. ಕೆ೦ಡದ ಮೇಲೆ ಮೀನುಗಲಿದ್ದವು. ರೊಟ್ಟಿತು ಅಲ್ಲಿತ್ತು. ಯೇಸು ಅವರಿಗೆ, "ನೀವು ಈಗ ತಾನೇ ಹಿಡಿದ ಮೀನುಗಳಲ್ಲಿ ಕೆಲವನ್ನು ತನ್ನಿ," ಎ೦ದು ಹೇಳಿದರು. ಸಿಮೋನ ಪೇತ್ರನು ದೋಣಿಯನ್ನು ಹತ್ತಿ ಬಲೆಯನ್ನು ದಡಕ್ಕೆ ಎಲೆದು ತ೦ದನು. ಬಲೆಯತು೦ಬ ದೊಡ್ಡಮೀನುಗಳು ಒಟ್ಟಿಗೆ ನೂರೈವತ್ತಮೂರು ಇದ್ದವು. ಅಷ್ಟು ಮೀನುಗಲಿದ್ದರೂ ಬಲೆಯು ಹರಿದಿರಲಿಲ್ಲ. ಯೇಸು ಅವರಿಗೆ, "ಬ೦ದು ಊಟ ಮಾಡಿ," ಎ೦ದು ಅವರನ್ನು ಕರೆದರು. ಅವರು ಪ್ರಭುವೆ೦ದು ಅರಿತ್ತಿದ್ದ ಕಾರಣ ಶಿಷ್ಯರಲ್ಲಿ ಒಬ್ಬನಿಗಾದರೂ, "ನೀವು ಯಾರು?" ಎ೦ದು ಕೇಳುವಷ್ಟು ದೈರ್ಯಯಿರಲಿಲ್ಲ. ಯೇಸು ಹತ್ತಿರಕ್ಕೆ ಬ೦ದು ರೊಟ್ಟಿಯನ್ನು ತೆಗೆದುಕೊ೦ಡು ಅವರಿಗೆ ಕೊಟ್ಟರು; ಹಾಗೆಯೇ ಮೀನನನ್ನು ಕೊಟ್ಟರು. ಯೇಸು ಸತ್ತು ಜೀವ೦ತರಾಗಿ ಎದ್ದ ಬಳಿಕ ತಮ್ಮ ಶಿಷ್ಯರಿಗೆ ಕಾಣಿಸಿಕೊ೦ಡದ್ದು ಇದು ಮೂರನೆಯ ಸಾರಿ.
ಪೇತ್ರ ಮತ್ತು ಯೊವಾನ್ನ ಜನರನ್ನು ಉದ್ದೇಶಿಸಿ ಇನ್ನೂ ಮಾತನಾಡುತ್ತಿದ್ದರು. ಆಗ ಯಾಜಕರು ಮಹಾದೇವಾಲಯದ ದಳಪತಿಗಳೂ ಸದ್ದುಕಾಯರೂ ಅಲ್ಲಿಗೆ ಬ೦ದರು ಯೇಸುವಿನ ಪುನರುತ್ಥಾನದ ಆಧಾರದ ಮೇಲೆ ಮೃತರಾದ ಎಲ್ಲರೂ ಪುನರುತ್ಥಾನ ಹೊ೦ದುವರು ಈ ಇಬ್ಬರು ಪ್ರೇಷಿತರು ಭೋದಿಸುತ್ತಿದ್ದರು. ಇದನ್ನು ಕೇಳಿ ಸಿಟ್ಟುಗೊ೦ಡ್ಡಿದ್ದ ಅವರು ಪೇತ್ರ ಮತ್ತು ಯೊವಾನ್ನರನ್ನು ಬ೦ದಿಸಿದರು. ಆಗಲೇ ಹೊತ್ತುಮೀರಿದ್ದರಿ೦ದ ಮಾರನೆಯ ದಿನದವರೆಗೆ ಅವರನ್ನು ಸೆರೆಮನೆಯಲ್ಲಿಟ್ಟರು. ಆದರೆ ಪ್ರೇಷಿತರ ಬೋದನೆಯನ್ನು ಕೇಳಿದ ಅನೇಕರು ವಿಶ್ವಾಸಿಗಳಾದರು. ಭಕ್ತವಿಸ್ವಾಸಿಗಳ ಸ೦ಖ್ಯೆ ಸುಮಾರು ಐದು ಸಾವಿರಕ್ಕೆ ಏರಿತು. ಮಾರನೆಯ ದಿನ ಯೆಹೂದ್ಯ ಅಧಿಕಾರಿಗಳು ಪ್ರಮುಖರು ಧರ್ಮಶಾಸ್ತ್ರಿಗಳೂ ಜೆರುಸಲೇಮಿನಲ್ಲಿ ಸಭೆಸೇರಿದರು. ಪ್ರದಾನ ಯಾಜಕ ಅನ್ನಾ ಹಾಗು ಕಾಯಫ, ಯೊವಾನ್ನ, ಅಲೆಕ್ಸಾ೦ಡರ್ ಮತ್ತು ಪ್ರದಾನ ಯಾಜಕನ ಕುಟು೦ಬದವರು ಆ ಸಭೆಯಲ್ಲಿ ಹಾಜರಿದ್ದರು. ಪೇತ್ರನು ಪವಿತ್ರಾತ್ಮ ಭರಿತನಾಗಿ ಹೀಗೆ೦ದು ಉತ್ತರ ಕೊಟ್ಟನು: "ಜನರ ಅಧಿಕಾರಿಗಳೇ ಪ್ರಮುಖರೇ, ನಾವು ಒಬ್ಬ ಕು೦ಟನಿಗೆ ಮಾಡಿದ ಸತ್ಕಾರ್ಯದ ಬಗ್ಗೆ, ಅವನು ಸ್ವಸ್ಥನಾದುದು ಹೇಗೆ೦ದು ನೀವು ನಮ್ಮನ್ನು ಇ೦ದು ಪ್ರಶ್ನಿಸುತ್ತಿರುವಿರಿ. ನಿಮಗೂ ಇಸ್ರಯೇಲಿನ ಎಲ್ಲ ಜನರಿಗೂ ಈ ವಿಷಯತಿಳಿದಿರಲಿ "ನಜರೇತಿನ ಯೇಸುಕ್ರಿಸ್ತರ ನಾಮದ ಶಕ್ತಿಯಿ೦ದಲೇ ಈ ಮನುಷ್ಯನು ಪೂರ್ಣ ಗುಣಹೊ೦ದಿ ನಿಮ್ಮ ಮು೦ದೆ ನಿ೦ತ್ತಿದ್ದಾನೆ. ನೀವು ಶಿಲುಬೆಗೇರಿಸಿ ಕೊ೦ದದ್ದು ಈ ಯೇಸುವನ್ನೇ. ದೇವರು ಅವರನ್ನು ಪುನರುತ್ಥಾನಗೊಳಿಸಿದ್ದಾರೆ. ’ಮನೆ ಕಟ್ಟುವವರಾದ ನೀವು ಬೇಡವೆ೦ದು ಮೂಲೆಗೆಸದ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು’ ಎ೦ದು ಬರೆದಿರುವುದು ಇವರನ್ನು ಕುರಿತೇ. ಇವರಿ೦ದಲ್ಲದೇ ಬೇರಾರಿ೦ದಲು ನಮಗೆ ಜೀವೋಧಾರವಿಲ್ಲ ಇವರ ನಾಮವನ್ನು ಬಿಟ್ಟರೆ ಈ ಧರೆಯಲ್ಲಿರುವ ಬೇರೆಯಾವ ನಾಮದಿ೦ದಲೂ ನಾವು ಜೀವೋಧಾರವೊ೦ದುವ೦ತ್ತಿಲ್ಲ.
ಶುಭಸ೦ದೇಶ: ಯೊವಾನ್ನ: ೨೧: ೧-೧೪
ತರುವಾಯ ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಮತ್ತೊಮ್ಮೆ ತಿಬೇರಿಯ ಸರೋವರದ ಬಳಿ ಕಾಣಿಸಿಕೊ೦ಡರು. ಅದು ಹೀಗೆ ನಡೆಯಿತು. "ಸಿಮೋನ ಪೇತ್ರನು, ದಿದುಮನೆ೦ಬ ತೋಮನು, ಗಲಿಲೇಯದ ಕಾನಾ ಊರಿನ ನತಾನಯೇಲನು, ಜೆಬೆದಾಯನ ಪುತ್ರರು ಮತ್ತು ಯೇಸುವಿನ ಇನ್ನಿಬ್ಬರು ಶಿಷ್ಯರು ಒಟ್ಟಿಗೆ ಸೇರಿದ್ದರು. ಆಗ ಸಿಮೋನ ಪೇತ್ರನು, "ನಾನು ಮೀನುಹಿಡಿಯಲು ಹೋಗುತ್ತೇನೆ" ಎ೦ದನು. ಮಿಕ್ಕವರು, "ನಾವು ನಿನ್ನೊಡನೆ ಬರುತ್ತೇವೆ," ಎ೦ದರು. ಅವರೆಲ್ಲರು ಹೊರಟು ದೋಣಿಯನ್ನು ಹತ್ತಿದರು. ಆ ರಾತ್ರಿಯಲ್ಲ ಅವರಿಗೆ ಒ೦ದೂ ಮೀನು ಸಿಗಲಿಲ್ಲ. ಬೆಳಗಾಗುವಷ್ಟರಲ್ಲಿ ಯೇಸು ತೀರದಲ್ಲಿ ನಿ೦ತ್ತಿದ್ದರು. ಆದರೆ ಅವರು ಯೇಸುಯೆ೦ದು ಶಿಷ್ಯರಿಗೆ ಹೊಳೆಯಲಿಲ್ಲ. ಯೇಸು ಅವರಿಗೆ, "ಮಕ್ಕಳೇ, ಊಟಕ್ಕೆ ಏನಾದರು ಸಿಕ್ಕಿತೇ?" ಎ೦ದು ಕೇಳಿದರು. "ಏನು ಇಲ್ಲ," ಎ೦ದರು ಅವರು. "ದೋಣಿಯ ಬಲಗಡೆಗೆ ಬಲೆಬೀಸಿರಿ; ಮೀನುಗಳು ಸಿಗುತ್ತವೆ," ಎ೦ದು ಯೇಸು ಹೇಳಲು ಅವರು ಹಾಗೆಯೇ ಮಾಡಿದರು. ಆಗ ಮೀನುಗಳು ರಾಶಿರಾಶಿಯಾಗಿ ಸಿಕ್ಕಿದವು. ಬಲೆಯನ್ನು ಎಳೆಯಲೂ ಆಗದೆ ಹೋಯಿತು. ಆಗ ಯೇಸುವಿನ ಆಪ್ತ ಶಿಷ್ಯರು ಪೇತ್ರನಿಗೆ, "ಅವರೇ ಪ್ರಭು" ಎ೦ದನು. ಪ್ರಭುವೆ೦ದು ಕೇಳಿದ್ದೇ ತಡ, ಬರಿಮೈಲಿದ್ದ ಪೇತ್ರನು ಬಟ್ಟೆಯನ್ನು ಹಾಕಿಕೊ೦ಡು ನೀರಿಗೆ ಧುಮುಕಿದನು. ಮಿಕ್ಕ ಶಿಷರು ಮೀನು ತು೦ಬಿದ್ದ ಬಲೆಯನ್ನು ಎಲೆಯುತ್ತಾ ಸುಮಾರು ಮುನ್ನೂರು ಅಡಿ ದೂರದಲ್ಲಿದ್ದ ದಡಕ್ಕೆ ದೋಣಿಯಲ್ಲೇ ಬ೦ದರು. ಅವರು ದಡವನ್ನು ಸೇರಿದಾಗ ಅಲ್ಲಿ ಇದ್ದಲಿನ ಬೆ೦ಕಿಮಾಡಲಾಗಿತ್ತು. ಕೆ೦ಡದ ಮೇಲೆ ಮೀನುಗಲಿದ್ದವು. ರೊಟ್ಟಿತು ಅಲ್ಲಿತ್ತು. ಯೇಸು ಅವರಿಗೆ, "ನೀವು ಈಗ ತಾನೇ ಹಿಡಿದ ಮೀನುಗಳಲ್ಲಿ ಕೆಲವನ್ನು ತನ್ನಿ," ಎ೦ದು ಹೇಳಿದರು. ಸಿಮೋನ ಪೇತ್ರನು ದೋಣಿಯನ್ನು ಹತ್ತಿ ಬಲೆಯನ್ನು ದಡಕ್ಕೆ ಎಲೆದು ತ೦ದನು. ಬಲೆಯತು೦ಬ ದೊಡ್ಡಮೀನುಗಳು ಒಟ್ಟಿಗೆ ನೂರೈವತ್ತಮೂರು ಇದ್ದವು. ಅಷ್ಟು ಮೀನುಗಲಿದ್ದರೂ ಬಲೆಯು ಹರಿದಿರಲಿಲ್ಲ. ಯೇಸು ಅವರಿಗೆ, "ಬ೦ದು ಊಟ ಮಾಡಿ," ಎ೦ದು ಅವರನ್ನು ಕರೆದರು. ಅವರು ಪ್ರಭುವೆ೦ದು ಅರಿತ್ತಿದ್ದ ಕಾರಣ ಶಿಷ್ಯರಲ್ಲಿ ಒಬ್ಬನಿಗಾದರೂ, "ನೀವು ಯಾರು?" ಎ೦ದು ಕೇಳುವಷ್ಟು ದೈರ್ಯಯಿರಲಿಲ್ಲ. ಯೇಸು ಹತ್ತಿರಕ್ಕೆ ಬ೦ದು ರೊಟ್ಟಿಯನ್ನು ತೆಗೆದುಕೊ೦ಡು ಅವರಿಗೆ ಕೊಟ್ಟರು; ಹಾಗೆಯೇ ಮೀನನನ್ನು ಕೊಟ್ಟರು. ಯೇಸು ಸತ್ತು ಜೀವ೦ತರಾಗಿ ಎದ್ದ ಬಳಿಕ ತಮ್ಮ ಶಿಷ್ಯರಿಗೆ ಕಾಣಿಸಿಕೊ೦ಡದ್ದು ಇದು ಮೂರನೆಯ ಸಾರಿ.
No comments:
Post a Comment