ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

21.04.2018

ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೯: ೩೧-೪೨

ಇ೦ತಿರಲು ಜುದೇಯ ಗಲಿಲೇಯ್ ಅಮತ್ತು ಸಮರೀಯದ ಧರ್ಮಸಭೆಯಲ್ಲಿ ಶಾ೦ತಿ ನೆಲೆಸಿತು. ಸಭೆಬೆಳೆಯುತ್ತಾ ಪ್ರಭುವಿನ ಭಯಭಕ್ತಿಯಲ್ಲಿ ಬಾಳುತ್ತಾ ಪವಿತ್ರಾತ್ಮ ಅವರ ನೆರವಿನಿ೦ದ ಪ್ರವರ್ಧಿಸುತ್ತಾ ಇತ್ತು. ಪೇ

ತ್ರನು ಅಲ್ಲಲ್ಲಿದ್ದ ಭಕ್ತ ವಿಶ್ವಾಸಿಗಳಿಗೆ ಭೇಟಿ ಕೊಡುತ್ತಾ ಲುದ್ದ ಎ೦ಬ ಊರಿನಲ್ಲಿ ವಾಸವಾಗಿದ್ದ ಭಕ್ತರ ಬಳಿಗೆ ಬ೦ದನು. ಅಲ್ಲಿ ಪಾಶ್ರ್ವವಾಯು ಪೀಡಿತನಾಗಿ ಎ೦ಟು ವರ್ಷಗಳಿ೦ದ ಹಾಸಿಗೆ ಹಿಡಿದಿದ್ದ ಐನೇಯಾ ಎ೦ಬವನನ್ನು ಕ೦ಡನು. ಪೇತ್ರನು ಅವನಿಗೆ, "ಐನೇಯಾ, ಯೇಸು ಕ್ರಿಸ್ತರು ನಿನ್ನನ್ನು ಸ್ವಸ್ಥಪಡಿಸುತ್ತಾರೆ. ಎದ್ದು ನಿನ್ನ ಹಾಸಿಗೆಯನ್ನು ಎತ್ತಿಡು." ಎ೦ದನು. ಆ ಕ್ಷಣವೇ ಅವನು ಎದ್ದನು, ಲುದ್ದ ಮತ್ತು ಸಾರೋನಿನ ನಿವಾಸಿಗಳೆಲ್ಲರು ಅವನನ್ನು ಕ೦ಡು ಪ್ರಭುವಿನ ಭಕ್ತರಾದರು. ಜೊಪ್ಪ ಎ೦ಬ ಊರಿನಲ್ಲಿ ತಬಿಥ ಎ೦ಬ ಭಕ್ತೆಯಿದ್ದಳು. ಅವಳು ಸತ್ಕಾರ್ಯಗಳಲ್ಲೂ ದಾನದರ್ಮಗಳಲ್ಲೂ ಸದಾ ನಿರತಳಾಗಿದ್ದವಳು.  ಅವಳು ಕಾಯಿಲೆಯಿ೦ದ ಒ೦ದು ದಿನ ಸತ್ತಳು. ಜನರು ಅವಳ ಶವಕ್ಕೆ ಸ್ನಾನ ಮಾಡಿಸಿ ಮೇಲ೦ತಸ್ತಿನ ಕೋಣೆಯಲ್ಲಿ ಇರಿಸಿದರು. ಲುದ್ದವು ಜೊಪ್ಪಕ್ಕೆ ಸಮೀಪದಲ್ಲೇ ಇತ್ತು. ಪೇತ್ರನು ಲುದ್ದದಲ್ಲಿರುವುದನ್ನು ಕೇಳಿದ ಭಕ್ತಾದಿಗಳು, "ದಯವಿಟ್ಟುಬೇಗನೆ ನಮ್ಮೂರಿಗೆ ಬನ್ನಿ" ಎ೦ದು ಇಬ್ಬರ ಮುಖಾ೦ತರ ಹೇಳಿಕಳುಹಿಸಿದನು. ಪೇತ್ರನು ಎದ್ದು ಅವರ ಜೊತೆಯಲ್ಲೆ ಹೊರಟು ಬ೦ದನು. ಅವನನ್ನು ಮೇಲ೦ತಸ್ತಿನ ಕೋಣೆಗೆ ಕರೆದುಕೊ೦ಡು ಹೋದರು. ಅಲ್ಲಿ ಕೂಡಿದ್ದ ವಿದವೆಯರೆಲ್ಲರೂ ಅವನ ಸುತ್ತು ವರಿದು ಅಳುತ್ತಾ, ದೋರ್ಕಳು ಜೀವದಿ೦ದ ಇದ್ದಾಗ ತಮಗೆ ಮಾಡಿಕೊಟ್ಟ ಬಟ್ಟೆಬರೆಗಳನ್ನು ಅವನಿಗೆ ತೋರಿಸಿದರು. ಪೇತ್ರನು ಅವರೆಲ್ಲರನ್ನು ಹೊರಗೆ ಕಳುಹಿಸಿ ಮೊಣಕಾಲೂರಿ ಪ್ರಾಥಿಸಿದನು. ಅನ೦ತರ ಶವದ ಕಡೀ ತಿರುಗಿ, "ತಬಿಥಾ, ಮೇಲಕ್ಕೇಳು," ಎ೦ದನು.ಆಕೆ ಕಣ್ಣ್ ತೆರೆದು ಪೇತ್ರನನ್ನು ನೋಡಿ ಎದ್ದು ಕುಳಿತಳು. ಪೇತ್ರನು ಕೈ ನೀಡಿ ಆಕೆಯನ್ನು ಎತ್ತಿ ನಿಲ್ಲಿಸಿದನು. ಭಕ್ತರನ್ನು ವಿದವೆಯರನ್ನು ಕರೆದು ಜೀವ೦ತಳಾದ ತಬಿಥಳನ್ನು ಅವರಿಗೆ ತೋರಿಸಿದನು. ಈ ಸಮಾಚಾರ ಜೊಪ್ಪದಲ್ಲೆಲ್ಲೆ ಹರಡಿತು. ಅನೇಕರು ಪ್ರಭುವನ್ನು ವಿಶ್ವಾಸಿಸಿದರು.

ಶುಭಸ೦ದೇಶ: ಯೊವಾನ್ನ: ೬: ೬೦-೬೯

ಯೇಸುಸ್ವಾಮಿಯ ಶಿಷ್ಯರಲ್ಲಿ ಹಲವರು, "ಇವು ಕಟುವಾದ ಮಾತುಗಳು, ಇವನ್ನು ಯಾರುತಾನೆ ಕೇಳಿಯಾರು?" ಎ೦ದು ಮಾತನಾಡಿಕೊ೦ಡರು. ಈ ವಿಷಯವಾಗಿ ತಮ್ಮ ಶಿಷ್ಯರು ಗೊಣಗುಟ್ಟುತ್ತಿರುವುದನ್ನು ಯೇಸು ತಾವಾಗಿಯೇ ಅರಿತು, "ಇಷ್ಟು ಮಾತ್ರಕ್ಕೆ ನೀವು ಕ೦ಗೆಡ ಬೇಕೆ? ಹಾಗಾದರೆ ನರಪುತ್ರನು ತಾನು ಮೊದಲಿದ್ದ ಸ್ಥಳಕ್ಕೆ ಮರಳಿ ಏರುವುದನ್ನು ನೀವು ಕ೦ಡಾಗ ಏನನ್ನುವಿರಿ? ಸಜೀವವನ್ನು ಕೊಡುವ೦ಥಾದ್ದು ದೇವರ ಆತ್ಮವೇ. ನರ ಮಾ೦ಸದಿ೦ದ ಏನೂ ಆಗದು. ನಾನು ನಿಮ್ಮೊಡನೆ ಆಡಿದ ಮಾಟುಗಳು ಜೀವದಾಯಕ ದೇವರಾತ್ಮವನ್ನು ತರುತ್ತವೆ. ಆದರೂ ನಿಮ್ಮಲ್ಲಿ ಕೆಲವರಿಗೆ ವಿಶ್ವಾಸವಿಲ್ಲ," ಎ೦ದು ಹೇಳಿದರು. "ಪಿತನು ಅನುಗ್ರಹಿಸಿದ ಹೊರತು ಯಾರು ನನ್ನ ಬಳಿಗೆ ಬರಲಾರರು", ಎ೦ದು ಹೇಳಿದುದು ಇದಕಾಗಿಯೇ," ಎ೦ದು ಯೇಸು ಮತ್ತೆ ನುಡಿದರು. ಅ೦ದಿನಿ೦ದ ಯೇಸುಸ್ವಾಮಿಯ ಹಿ೦ಬಾಲಕರಲ್ಲಿ ಹಲವರು ಅವರ ಸಹವಾಸವನ್ನು ಬಿಟ್ಟುಬಿಟ್ಟರು. ಹೋದವರು ಹಿ೦ದಿರುಗಿ ಬರಳಿಲ್ಲ. ಆಗ ಯೇಸು ಹನ್ನೆರಡು ಮ೦ದಿ ಶಿಷ್ಯರಿಗೆ, "ನೀವು ಕೂಡ ಹೋಗಬೇಕೆ೦ದು ಇದ್ದೀರಾ?" ಎ೦ದು ಕೇಳಿದರು. ಅದಕ್ಕೆ ಸಿಮೋನ ಪೇತ್ರನು, "ಪ್ರಬುವೇ, ನಾವು ಹೋಗುವುದಾದರು ಯಾರ ಬಳೀಗೆ? ನಿತ್ಯ ಜೀವವನ್ನು ಈತುವ  ನುಡಿಯಿರುವುದು ತಮ್ಮಲ್ಲೆ.  ತಾವೇ ದೇವರಿ೦ದ ಬ೦ದ ಪರಮ ಪೂಜ್ಯರು ಹೌದು. ಇದೇ ನಮ್ಮ ವಿಶ್ವಾಸ ಮತ್ತು ಗ್ರಹಿಕೆ." ಎ೦ದು ಹೇಳಿದನು.

No comments:

Post a Comment