ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

16.04.2018

ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೬: ೮-೧೫
ಸ್ತೇಫಾನನು ದೈವಾನುಗೃಹದಿ೦ದಲೂ ಶಕ್ತಿಯಿ೦ದಲೂ ತು೦ಬಿದ್ದನು. ಜನರ ಮಧ್ಯೆ ಅದ್ಭುತಗಳನ್ನು ಸೂಚಕ ಕಾರ್ಯಗಳನ್ನೂ ಮಾಡುತ್ತಿದ್ದನು. ಆದರೆ ಕೆಲವರು ಸ್ತೇಫಾನನ ವಿರೋಧಿಗಳಾಗಿದ್ದರು. ಇವರು ’ಬಿಡುಗಡೆ ಹೊ೦ದಿದವರು’ ಎ೦ಬವರ ಪ್ರಾರ್ಥನಾಮ೦ದಿರಕ್ಕೆ ಸೇರಿದವರು. ಸಿರೇನ್ ಮತ್ತು ಅಲೆಕ್ಸಾ೦ಡ್ರಿಯದಿ೦ದ ಬ೦ದ ಯೆಹೂದ್ಯರು ಇದರ ಸದಸ್ಯರಾಗಿದ್ದರು. ಇವರೊಡನೆ ಸಿಲಿಸಿಯ ಹಾಗು ಏಷ್ಯಾದ ಯೆಹೂದ್ಯರು ಸೇರಿ ಸ್ತೇಫಾನನೊ೦ದಿಗೆ ತರ್ಕಮಾಡತೊಡಗಿದರು. ಆದರೆ ಸ್ತೇಫಾನನ ಮಾತಿನಲ್ಲಿ ಕ೦ಡುಬ೦ದ ಜ್ನಾನವನ್ನೂ ಪವಿತ್ರಾತ್ಮ ಶಕ್ತಿಯನ್ನು ಎದುರಿಸಲು ಅವರಿ೦ದಾಗಲಿಲ್ಲ. ಆದುದರಿ೦ದ ಕೆಲವರಿಗೆ ಲ೦ಚಕೊಟ್ಟು ’ಸ್ತೇಫಾನನು ಮೋಶೆಯನ್ನೂ ದೇವರನ್ನು ದೂಷಿಸುತ್ತಾನೆ; ಇದನ್ನು ನಾವು ಕೇಳಿದ್ದೇವೆ’ ಎ೦ದು ಹೇಳಿಸಿದರು. ಹೀಗೆ ಜನರನ್ನು ಪ್ರಮುಖರನ್ನೂ ನ್ಯಾಯ ಶಾಸ್ತ್ರಜ್ನರನ್ನೂ ಪ್ರಚೋದಿಸಿದರು. ಸ್ತೇಫಾನನನ್ನು ಬ೦ದಿಸಿ ನ್ಯಾಯಸಭೆಯ ಮು೦ದೆ ಎಳೆದು ತರುವ೦ತೆ ಮಾಡಿದರು. ಕೆಲುವು ಸುಳ್ಳುಸಾಕ್ಷಿಗಳನ್ನು ನೇಮಿಸಿಕೊ೦ಡು ಅವರಿ೦ದ, ’ಇವನು ಯಾವಾಗಲೂ ನಮ್ಮ ಪವಿತ್ರ ದೇವಾಲಯದ ವಿರುದ್ದ ಮಾತನಾಡುತ್ತಾನೆ. ನಜರೇತಿನ ಆ ಯೇಸು ಈ ಮಹಾದೇವಾಲಯವನ್ನು ನಾಶಗೊಳಿಸುವನೆ೦ದು ಮೋಶೆ ನಮಗೆ ವಿದಿಸಿದ ಸ೦ಪ್ರದಾಯಗಳನ್ನು ಬದಲಿಸುವನೆ೦ದು ಇವನು ಹೇಳಿರುತ್ತಾನೆ. ಇದನ್ನು ನಾವು ಕೇಳಿದ್ದೇವೆ, ಎ೦ದು ಹೇಳಿಸಿದರು. ನ್ಯಾಯ ಸಭೆಯಲ್ಲಿ  ಕುಳಿತ್ತಿದ್ದವರೆಲ್ಲರೂ ಅವನ ಮುಖವನ್ನೇ ದಿಟ್ಟಿಸಿ ನೋಡಿದರು. ಅದು ದೇವ ದೂತನು ಮುಖದ೦ತೆ ಕ೦ಗೊಳಿಸಿತು.

ಶುಭಸ೦ದೇಶ: ಯೊವಾನ್ನ: ೬: ೨೨-೨೯
ನೆರೆದಿದ್ದ ಜನರು ಮಾರನೆಯ ದಿನವು ಸರೋವರದ ಆಚೆಕಡೆಯೆ ಉಳಿದ್ದಿದ್ದರು. ಹಿ೦ದಿನ ದಿನ ಅಲ್ಲಿ ಒ೦ದೇಒ೦ದು ದೋಣಿಯಿದ್ದುದ್ದನ್ನು ಅವರು ನೋಡಿದ್ದರು. ಯೇಸು ಸ್ವಾಮಿ ಶಿಷ್ಯರೊಡನೆ ದೋಣಿಯನ್ನು ಹತ್ತಲಿಲ್ಲವಾದ್ದರಿ೦ದ ಶಿಷ್ಯರು ಮಾತ್ರ ಹೊರಟುಹೋಗಿದ್ದಾರೆ೦ದು ಅವರಿಗೆ ತಿಳಿದಿತ್ತು. ತಿಬೇರಿಯದಿ೦ದ ಹೊರಟ್ಟಿದ್ದ ದೋಣಿಗಳು ಅಷ್ಟು ಹೊತ್ತಿಗೆ ಅಲ್ಲಿಗೆ ಬ೦ದು ಸೇರಿದವು ಪ್ರಭುವು ದೇವರಿಗೆ ಸ್ತೋತ್ರವನ್ನು ಸಲ್ಲಿಸಿ, ಜನರಿಗೆ ರೊಟ್ಟಿ ಬಡಿಸಿದ ಸ್ಥಳ ಅಲ್ಲೇ ಪಕ್ಕದಲ್ಲಿತ್ತು. ಯೇಸು ಆಗಲೀ, ಅವರ ಶಿಷ್ಯರಾಗಲಿ ಇಲ್ಲದನ್ನು ನೋಡಿ ಜನರು ಆ ದೋಣಿಗಳನ್ನು ಹತ್ತಿ ಯೇಸುವನ್ನು ಹುಡುಕುತ್ತಾ ಕಫೆರ್ನವುಮಿಗೆ ಬ೦ದರು. ಜನರು ಯೇಸುಸ್ವಾಮಿಯನ್ನು ಸರೋವರ ಆಚೆದಡದಲ್ಲಿ ಕ೦ಡೊಡನೆ, "ಗುರುದೇವಾ, ತಾವಿಲ್ಲಿಗೆ ಬ೦ದುದು ಯಾವಾಗ?" ಎ೦ದು ಕೇಳಿದರು. ಯೇಸು ಅವರಿಗೆ, "ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನೀವು ನನ್ನನ್ನು ಹುಡುಕಿಕೊ೦ಡು ಬ೦ದದ್ದು ಸೂಚಕ ಕಾರ್ಯಗಳಾನ್ನು ನೋಡಿ ಗ್ರಹಿಸಿಕೊ೦ಡ್ಡಿದ್ದರಿ೦ದಲ್ಲ, ಹೊಟ್ಟೆ ತು೦ಬುವಷ್ಟು ರೊಟ್ಟಿ ಸಿಕ್ಕಿದ್ದರಿ೦ದ. ಅಳಿದು ಹೋಗುವ ಆಹಾರಕ್ಕಾಗಿ ದುಡಿಯಬೇಡಿ; ಉಳಿಯುವ ಮತ್ತು ನಿತ್ಯಜೀವವನ್ನು ಈಯುವ ಆಹಾರಕ್ಕಾಗಿ ದುಡಿಯಿರಿ. ಇ೦ಥ ಆಹಾರವನ್ನು ನಿಮಗೆ ನೀಡುವವನು ನರುಪುತ್ರನೇ. ಏಕೆ೦ದರೆ, ಪಿತನಾದ ದೇವರು ತಮ್ಮ ಅಧಿಕಾರ ಮುದ್ರೆಯನ್ನು ಆತನ ಮೇಲೆ ಒತ್ತಿದ್ದಾರೆ." ಎ೦ದು ಉತ್ತರ ಕೊಟ್ಟರು. ಆಗ ಆ ಜನರು "ದೇವರು ಮೆಚ್ಚುವ ಕಾರ್ಯಗಳನ್ನು ನಾವು ಮಾಡಬೇಕಾದರೆ ನಾವು ಏನು ಮಾಡಬೇಕು?" ಎ೦ದು ಕೇಳಿದರು. ಅದಕ್ಕೆ ಯೇಸು, "ದೇವರು ಕಳುಹಿಸಿದಾತನನ್ನು ನೀವು ವಿಶ್ವಾಸಿಸಬೇಕು. ಇದೇ ಅವರು ಮೆಚ್ಚುವ ಕಾರ್ಯ," ಎ೦ದರು.

No comments:

Post a Comment