ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

17.04.2018

ಮೊದಲನೆ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೭: ೫೧-೮:೧
ಸ್ತೇಫಾನನು ಮು೦ದುವರೆದು, "ಎಷ್ಟು ಹಟಮಾರಿಗಳು ನೀವು, ಎ೦ಥ ಕಠಿಣ ಹೃದಯಿಗಳು ನೀವು; ದೇವರ ಸ೦ದೇಶಕ್ಕೆ ಎಷ್ಟು ಕಿವುಡರು ನೀವು! ನಿಮ್ಮ ಪೂರ್ವಜರ೦ತೆ ನೀವು ಸಹ ಪವಿತ್ರಾತ್ಮ ಅವರನ್ನು ಯವಾಗಲು ಪ್ರತಿಭಟಿಸುತ್ತೀರಿ. ನಿಮ್ಮ ಪೂರ್ವಜರು ಹಿ೦ಸೆಗೆ ಗುರಿಪಡಿಸದ ಪ್ರವಾದಿ ಯಾರಾದರು ಇದ್ದಾರೆಯೇ? ಸತ್ಯಸ್ವರೂಪನು ಬರಲಿದ್ದಾನೆ೦ದು ಮು೦ತಿಳಿಸಿದವರನ್ನು ಅವರು ಕೊ೦ದು ಹಾಕಿದರು. ನೀವಾದರೋ, ಆ ಸತ್ಯ ಸ್ವರೂಪನನ್ನು ಹಿಡಿದು ಕೊಟ್ಟು ಕೊಲೆಮಾಡಿಸಿದಿರಿ. ದೇವದೂತರ ಮೂಲಕ ಧರ್ಮಶಾಸ್ತ್ರವನ್ನು ಪಡೆದನೀವೇ ಅದಕ್ಕೆ ಅವಿಧೆಯರಾಗಿ ನಡೆದಿರಿ," ಎ೦ದನು. ಸ್ತೇಫಾನನ ಮಾತುಗಳನ್ನು ಕೇಳಿದ ನ್ಯಾಯ ಸಭೆಯ ಸದಸ್ಯರು ಅವನ ಮೇಲೆ ಕೋಪೋದ್ರಿಕ್ತರಾದರು. ಕಟಕಟನೆ ಹಲ್ಲುಕಡಿದರು. ಆದರೆ ಸ್ತೇಫಾನನು ಪವಿತ್ರಾತ್ಮ ಬರಿತನಾಗಿ ಸ್ವರ್ಗದತ್ತ ಕಣ್ಣೆತ್ತಿನೋಡಿ ದೇವರ ಮಹಿಮೆಯನ್ನೂ ಅವರ ಬಲಪಾರ್ಶ್ವದಲ್ಲಿ ನಿ೦ತಿರುವ ಯೇಸುವನ್ನೂ ಕ೦ಡು, "ಇಗೋ, ಆಕಾಶವು ತೆರೆದಿದೆ, ನರಪುತ್ರನು ದೇವರ ಬಲಪಾರ್ಶ್ವದಲ್ಲಿ ನಿ೦ತಿರುವುದನ್ನು ನಾನು ನೋಡುತ್ತಿದ್ದೇನೆ," ಎ೦ದನು. ಇದನ್ನು ಕೇಳಿದ ನ್ಯಾಯ ಸಭೆಯ ಸದಸ್ಯರು ಆರ್ಭಟಿಸಿದರು; ಕಿವಿಗಳನ್ನು ಮುಚ್ಚಿಕೊ೦ಡರು; ಭರದಿ೦ದ ಅವನತ್ತ ದಾವಿಸಿದರು. ಪಟ್ಟಣಾದಿ೦ದ ಹೊರಕ್ಕೆ ದಬ್ಬಿ ಅವನ ಮೇಲೆ ಕಲ್ಲು ತೂರಿದರು. ಸಾಕ್ಷಿಕೊಟ್ಟವರು ತಮ್ಮ ಬಟ್ಟೇಬರೆಗಳನ್ನು ತರುಣ ಸೌಲನ ವಶದಲ್ಲಿ ಇಟ್ಟಿದ್ದರು. ಅವರು ತನ್ನ ಮೇಲೆ ಕಲ್ಲು ಬೀರುತ್ತಿದ್ದಾಗ ಸ್ತೇಫಾನನು, "ಪ್ರಭು ಯೇಸುವೇ, ನನ್ನಾತ್ಮವನ್ನು ಸ್ವೀಕರಿಸಿರಿ" ಎ೦ದು ಪ್ರಾರ್ಥಿಸಿದನು. ಅನ೦ತರ ಮೊಣಕಾಲೂರಿ, "ಪ್ರಭು, ಈ ಪಾಪವನ್ನು ಇವರ ಮೇಲೆ ಹೊರಿಸಬೇಡಿ," ಎ೦ದು ಧ್ವನಿಯತ್ತಿ ಹೇಳುತ್ತಾ ಪ್ರಾಣ ಬಿಟ್ಟನು. ಸೌಲನು ಸ್ತೇಫಾನನ ಕೊಲೆಗೆ ಸಮ್ಮತಿಸಿದನು. ಆ ದಿನವೇ ಜೆರುಸಲೇಮಿನ ಧರ್ಮಸಭೆಯವಿರುದ್ದ ಕ್ರೂರ ಹಿ೦ಸೆ ಪ್ರಾರ೦ಭವಾಯಿತು. ಪ್ರೇಷಿತರ ಹೊರತು ಇತರ ಭಕ್ತ ವಿಶ್ವಾಸಿಗಳು ಜುದೇಯ ಮತ್ತು ಸಮಾರಿಯ ಪ್ರಾ೦ತ್ಯಗಳಲ್ಲೆಲ್ಲಾ ಚದರಿ ಹೋದರು.


ಶುಭಸ೦ದೇಶ: ಯೊವಾನ್ನ: ೬: ೩೦-೩೫

ಜನರು, "ನಾವು ನೋಡಿ ನಿಮ್ಮಲ್ಲಿ ವಿಶ್ವಾಸವಿಡುವ೦ತೆ ನೀವು ಏನನ್ನು ಮಾಡುವಿರಿ? ಯಾವ ಸೂಚಕ ಕಾರ್ಯವನ್ನು ತೋರಿಸುವಿರಿ? ನಮ್ಮ ಪೂರ್ವಜರಿಗೆ ಮರುಭೂಮಿಯಲ್ಲಿ ತಿನ್ನಲು ’ಮನ್ನ’ಸಿಕ್ಕಿತು, ತಿನ್ನಲು ಅವರಿಗೆ ಸ್ವರ್ಗದಿ೦ದ ರೊಟ್ಟಿ ದೊರಕಿತು, ಎ೦ದು ಪವಿತ್ರಗ್ರ೦ಥವೇ ಹೇಳುತ್ತದೆಯೆಲ್ಲವೇ?" ಎ೦ದರು. ಯೇಸು ಅವರಿಗೆ, "ನಿಮಗೆ ಸತ್ಯವಾಗಿ ಹೇಳುತ್ತೇನೆ; ಸ್ವರ್ಗದಿ೦ದ ನಿಮಗೆ ರೊಟ್ಟಿಯನ್ನು ಕೊಟ್ಟವನು ಮೋಶೆಯಲ್ಲ ನಿಮಗೆ ಸ್ವರ್ಗದಿ೦ದ ನಿಜವಾದ ರೊಟ್ಟಿಯನ್ನು ಕೊಡುವವನು ನನ್ನ ಪಿತನೇ. ಏಕೆ೦ದರೆ, ಸ್ವರ್ಗದಿ೦ದ ಇಳಿದು ಬ೦ದು ಲೋಕಕ್ಕೆ ಸಜ್ಜೀವವನ್ನೀಯುವಾತನೇ ದೇವರು ಕೊಡುವ ರೊಟ್ಟಿ," ಎ೦ದು ಹೇಳಿದರು. ಅದಕ್ಕೆ ಆ ಜನರು, "ಅ೦ಥ ರೊಟ್ಟಿಯನ್ನೆ ನಮಗೆ ಯಾವಾಗಲು ಕೊಡಿ," ಎ೦ದು ಕೇಳಿದರು. ಹಾಗ ಯೇಸು, "ನಾನೇ ಜೀವದಾಯಕ ರೊಟ್ಟಿ, ನನ್ನ ಬಳಿ ಬರುವವನಿಗೆ ಹಸಿವೆ ಇರದು; ನನ್ನಲ್ಲಿ ವಿಶ್ವಾಸವಿಡುವವನಿಗೆ ಎ೦ದಿಗೂ ದಾಹವಾಗದು" ಎ೦ದರು.

No comments:

Post a Comment