ಮೊದಲನೇ
ವಾಚನ: ಯೂದ 1:20-25
ಪ್ರಿಯರೇ,
ನೀವಾದರೋ ಅತಿ
ಪರಿಶುದ್ದ ವಿಶ್ವಾಸದ
ಅಧಾರದ ಮೇಲೆ
ನಿರ್ಮಿಸಲಾದ ಮಂದಿರದಂತೆ
ಪ್ರವರ್ಧಿಸಿರಿ; ಪವಿತ್ರಾತ್ಮ
ಅವರಿಂದ ಪ್ರೇರಿತರಾಗಿ
ಪ್ರಾರ್ಥಿಸಿರಿ. ನಿತ್ಯಜೀವವನ್ನು
ದಯಪಾಲಿಸುವ ಕರುಣಾಮಯ
ಪ್ರಭು ಯೇಸುಕ್ರಿಸ್ತರನ್ನು
ಎದುರು ನೋಡುತ್ತಾ ದೇವರ
ಪ್ರೀತಿಯಲ್ಲಿ ನೆಲೆಗೊಂಡಿರಿ.
ಸಂಶಯಪಡುವವರಿಗೆ ಸಹೃದಯದಿಃದ
ನೆರವಾಗಿರಿ. ಬೆಂಕಿಯ
ಬಾಯಲ್ಲಿ ಇರುವವರನ್ನು
ಎಳೆದು ಸಂರಕ್ಷಿಸಿರಿ.
ಕೆಲವರಿಗೆ ದಯೆತೋರಿಸುವಾಗ
ಭಯವಿರಲಿ. ಪಾಪದ
ನಡತೆಯಿಂದ ಹೊಲಸಾದ
ಅವರ ಬಟ್ಟೆಬರೆಗಳನ್ನೂ
ಮುಟ್ಟದಿರಿ. ಪಾಪದಲ್ಲಿ
ಎಡವಿ ಬೀಳದಂತೆ
ನಿಮ್ಮನ್ನು ಕಾಪಾಡುವ
ತಮ್ಮ ಮಹಿಮಾಸನ್ನಿಧಿಯಲ್ಲಿ
ನಿಮ್ಮನ್ನು ನಿರ್ದೋಷಿಗಳನ್ನಾಗಿಯೂ
ಹರ್ಷಭರಿತರನ್ನಾಗಿಯೂ ನಿಲ್ಲಿಸಲು
ಶಕ್ತರಾಗಿರುವ ನಮ್ಮ
ಉದ್ದಾರಕರಾದ ಏಕೈಕ
ದೇವರಿಗೆ ನಮ್ಮ
ಪ್ರಭು ಯೇಸುಕ್ರಿಸ್ತರ
ಮುಖಾಂರ ಮಹಿಮೆ,
ಮಹತ್ವ, ಆಧಿಪತ್ಯ,
ಅಧಿಕಾರ ಆಧಿಯಲ್ಲಿ
ಇದ್ದ ಹಾಗೆ
ಈಗಲೂ ಯಾವಾಗಲೂ
ಸಲ್ಲಲಿ! ಆಮೆನ್.
ಕೀರ್ತನೆ: 63:3-4,5-6
ಶ್ಲೋಕ:
ನಿನಗೋಸ್ಕರ ಎನ್ನ
ತನು ಸೊರಗಿದೆ,
ಮನ ಬಾಯರಿದೆ,
ದೇವಾ, ನೀಯೆನ್ನ
ದೇವ.
ಯೇಸು
ಮತ್ತು ಶಿಷ್ಯರು
ಪುನಃ ಜೆರುಸಲೇಮಿಗೆ
ಬಂದರು. ಯೇಸು
ದೇವಾಲಯದ ಆವರಣದಲ್ಲಿ
ತಿರುಗಾಡುತ್ತಿದ್ದಾಗ ಮುಖ್ಯ
ಯಾಜಕರು, ಧರ್ಮಶಾಸ್ತ್ರಗಳು
ಮತ್ತು ಸಭಾಪ್ರಮುಖರು
ಅವರ ಬಳಿಗೆ
ಬಂದು, " ಇದನ್ನೆಲ್ಲಾ
ನೀನು ಯಾವ
ಅಧಿಕಾರದಿಂದ ಮಾಡುತ್ತಿರುವೆ?
ನಿನಗೆ ಈ
ಅಧಿಕಾರವನ್ನು ಕೊಟ್ಟವರು
ಯಾರು?" ಎಂದಿ
ಕೇಳಿದರು. ಅದಕ್ಕೆ
ಯೇಸು, "ನಾನೂ
ನಿಮಗೆ ಒಂದು
ಪ್ರಶ್ನ ಹಾಕುತ್ತೇನೆ;
ಅದಕ್ಕೆ ಉತ್ತರ
ಕೊಡಿ. ಆಗ
ಯಾವ ಅಧಿಕಾರದಿಂದ
ನಾನು ಇದೆಲ್ಲವನ್ನು
ಮಾಡುತ್ತೇನೆಂದು ನಿಮಗೆ
ಹೇಳುತ್ತೇನೆ. ಸ್ನಾನದಿಕ್ಷೆ
ಕೊಡುವ ಅಧಿಕಾರ
ಯೊವಾನನಿಗೆ ಎಲ್ಲಿಂದ
ಬಂದಿತು? ದೇವರಿಂದಲೋ?
ಮನುಷ್ಯರಿಂದಲೋ? ಉತ್ತರಕೊಡಿ,"
ಎಂದರು. ಇದನ್ನು
ಕೇಳಿದ ಅವರು
ತಮ್ಮ ತಮ್ಮೊಳಗೇ
ತರ್ಕ ಮಾಡುತ್ತಾ,
"ದೇವರಿಂದ ಬಂದಿತೆಂದು
ಹೇಳಿದರೆ, "ಹಾಗಾದರೆ
ನೀವೇಕೆ ಅವನನ್ನು
ನಂಬಲಿಲ್ಲ?" ಎಂದು
ಕೇಳುವನು. 'ಮನುಷ್ಯರಿಂದ
ಬಂದಿತು" ಎಂದು
ಹೇಳೋಣ ಎಂದರೆ
ಅದೂ ಅಗದು,
"ಎಂದುಕೊಂಡರು. ಯೊವಾನ್ನನು
ನಿಜವಾದ ಪ್ರವಾದಿಯೆಂದು
ಸರ್ವರು ನಂಬಿದ್ದರಿಂದ
ಅವರಿಗೆ ಜನರ
ಭಯವಿತ್ತು. ಆದುದರಿಂದ
ಅವರು, "ನಮಗೆ
ಗೊತ್ತಿಲ್ಲ" ಎಂದು
ಉತ್ತರಕೊಟ್ಟರು. ಅದಕ್ಕೆ
ಯೇಸು , "ಹಾಗಾದರೆ
ನಾನು ಕೂಡ
ಯಾವ ಅಧಿಕಾರದಿಂದ
ಇದನ್ನೆಲ್ಲಾ ಮಾಡುತ್ತೇನೆಂದು
ನಿಮಗೆ ಹೇಳುವುದಿಲ್ಲ,"
ಎಂದರು.
No comments:
Post a Comment