ಮೊದಲನೇ ವಾಚನ:
2ತಿಮೊಥಿ 1:1-3,6-12
 |
ತಿಮೋಥಿಯ ಪರಿಚಯ |
ನನ್ನ
ಪ್ರೀತಿಯ ಪುತ್ರ
ತಿಮೊಥೇಯನಿಗೆ ಪೌಲನು
ಬರೆಯುವ ಪತ್ರ.
ಕ್ರಿಸ್ತ ಯೇಸುವಿನಲ್ಲಿರುವವರಿಗೆ
ಲಭಿಸುವ ಅಮರ
ಜೀವನ ವಾಗ್ದಾನವನ್ನು
ಸಾರಲು ದೈವಚಿತ್ತಾನುಸಾರ
ಪ್ರೇಷಿತನಾದ ನಾನು ತಿಳಿಸುವುದೇನಂದರೆ:
ಪಿತನಾಗಿರುವ ದೇವರೂ
ಒಡೆಯರಾದ ಕ್ರಿಸ್ತಯೇಸುವೂ
ನಿನಗೆ ಕೃಪೆಯನ್ನೂ,
ಕರುಣೆಯನ್ನೂ, ಶಾಂತಿಯನ್ನೂ
ಅನುಗ್ರಹಿಸಲಿ! ನಾನು
ಹಗಲಿರುಳೂ ನನ್ನ
ಪ್ರಾರ್ಥನೆಯಲ್ಲಿ ತಪ್ಪದೆ
ನಿನ್ನನ್ನು ಸ್ಮರಿಸಿಕೊಳ್ಳುತ್ತೇನೆ.
ನನ್ನ ಪೂರ್ವಿಕರ
ಹಾಗೆ ಶುದ್ದ ಮನಃಸಾಕ್ಷಿಯಿಂದ
ನನ್ನ ಆರಾಧ್ಯ ದೇವರಿಗೆ ನಿನ್ನ
ವಿಷಯವಾಗಿ ಧನ್ಯವಾದಗಳನ್ನು
ಸಲ್ಲಿಸುತ್ತೇನೆ. ಅಂದು
ನೀನು ಸುರಿಸಿದ
ಕಣ್ಣೀರನ್ನು ನಾನು
ಇನ್ನೂ ಮರೆತಿಲ್ಲ.
ನಿನ್ನನ್ನು ಪುನಃ
ನೋಡಿ ಆನಂದಪಡಬೇಕೆಂದು ಹಂಬಲಿಸುತ್ತಿದ್ದೇನೆ.
ನಾನು ನಿನ್ನ
ಮೇಲೆ ಹಸ್ತ
ನಿಕ್ಷೇಪ ಮಾಡಿ ಪ್ರಾರ್ಥಿಸುವಾಗ ನೀನು ಪಡೆದಂಥ
ವರದಾನವನ್ನು ಪುನಃ
ಪ್ರಜ್ವಲಿಸುವಂತೆ ಮಾಡಬೇಕೆಂದು
ನಿನಗೆ ಜ್ಞಾಪಿಸುತ್ತೇನೆ.
ದೇವರು ನಮಗೆ
ಪ್ರಧಾನ ಮಾಡಿರುವ
ಪವಿತ್ರಾತ್ಮ ನಮ್ಮನ್ನು
ಹೇಡಿಗಳನ್ನಾಗಿ ಮಾಡುವುದಿಲ್ಲ;
ನಮ್ಮಲ್ಲಿ ದೈವೀಶಕ್ತಿ,
ಪ್ರೀತಿ ಹಾಗೂ
ಸಂಯಮಗಳನ್ನು ಪ್ರವರ್ಧಿಸುವಂತೆ
ಮಾಡುತ್ತಾರೆ. ಆದ್ದರಿಂದ
ಕ್ರಿಸ್ತಯೇಸುವಿಗೆ ಸಾಕ್ಷಿ
ಆಗಿರಲು ನಾಚಬೇಡ.
ಅವರಿಗಾಗಿ ಬಂಧಿಯಾಗಿರುವ
ನನ್ನ ವಿಷಯದಲ್ಲೂ
ನಾಚಬೇಡ. ದೇವರ
ಶಕ್ತಿಯನ್ನು ಆಶ್ರಯಿಸಿ ನನ್ನೊಡನೆ ಶುಭಸಂದೇಶಕ್ಕೋಸ್ಕರ
ನಿನ್ನ ಪಾಲಿನ
ಶ್ರಮವನ್ನು ಅನುಭವಿಸು.
ನಾವು ಸ್ವಂತ
ಸತ್ಕಾರ್ಯಗಳಿಂದಲ್ಲ, ದೇವರ
ಯೋಜನೆ ಹಾಗು
ಅನುಗ್ರಹಗಳಿಂದಲೇ ಜೀವೋದ್ದಾರ
ವರವನ್ನು ಪಡೆದಿದ್ದೇವೆ;
ದೇವರ ಪ್ರಜೆಗಳೆನಿಸಿಕೊಂಡಿದ್ದೇವೆ.
ಈ ಅನುಗ್ರಹವನ್ನು
ಕ್ರಿಸ್ತಯೇಸುವಿನಲ್ಲಿ ಅನಾದಿಯಿಂದಲೇ
ನಮಗೆ ಕೊಡಲಾಯಿತು.
ಕೀರ್ತನೆ:
123:1b-2ab, 2cdef
ಶ್ಲೋಕ:
ನನ್ನ, ಕಣ್ಣುಗಳನು
ಪ್ರಭು. ನಿನ್ನ
ಕಡೆಗೆ ಎತ್ತಿರುವೆ.
ಶುಭಸಂದೇಶ:
ಮಾರ್ಕ 12:18-27
ಆನಂತರ
ಸದ್ದುಕಾಯರು ಯೇಸುಸ್ವಾಮಿಯ
ಬಳಿಗೆ ಬಂದರು.
ಸತ್ತ ಮೇಲೆ ಪುನರುತ್ದಾನ
ಇಲ್ಲವೆಂಬುದು ಇವರ
ಅಭಿಮತ. ಇವರು
ಯೇಸುವನ್ನು , ಬೋಧಕರೇ,
ಒಬ್ಬನು ಮಕ್ಕಳಿಲ್ಲದೆ
ಸತ್ತರೆ ಅವನ
ಹೆಂಡತಿಯನ್ನು ಅವನ
ತಮ್ಮನು ಮದುವೆ
ಮಾಡಿಕೊಂಡು ಅಣ್ಣನಿಗೆ
ಸಂತಾನ ಪಡೆಯಬೇಕು,"
ಎಂದು ಮೊಶೆ
ನಮಗಾಗಿ ಬರೆದಿಟ್ಟಿದ್ದಾನಲ್ಲವೇ?
ಒಮ್ಮೆ ಏಳು ಮಂದಿ
ಅಣ್ಣತಮ್ಮಂದಿರಿದ್ದರು. ಅವರಲ್ಲಿ
ಮೊದಲನೆಯವನಿಗೆ ವಿವಾಹವಾಯಿತು.
ಅವನು ಮಕ್ಕಳಿಲ್ಲದೆ
ಮೃತನಾದುದರಿಂದ ಎರಡನೆಯವನು
ಅವನ ಹೆಂಡತಿಯನ್ನು
ಮದುವೆ ಮಾಡಿಕೊಂಡು,
ಸಂತಾನವಿಲ್ಲದೆ ಸಾವನ್ನಪ್ಪಿದ.
ಮೂರನೆಯವನಿಗೂ ಇದೇ
ಗತಿಯಾಯಿತು. ಆನಂತರ, ಉಳಿದವರೂ
ಒಬ್ಬರ ಬಳಿಕ
ಇನ್ನೊಬ್ಬರು ಆಕೆಯನ್ನು
ಮದುವೆ ಮಾಡಿಕೊಂಡು
ಸಂತಾನವಿಲ್ಲದೆ ಸತ್ತುಹೋದರು.
ಕಡಗೆ ಆ
ಸ್ತ್ರೀಯೂ ಮರಣ
ಹೊಂದಿದಳು. ಆಗ
ಹೇಳಿ, ಪುನರುತ್ಥಾನದ
ದಿನದಲ್ಲಿ, ಆಕೆ
ಯಾರ ಹೆಂಡತಿ
ಎನಿಸಿಕೊಳ್ಳುವಳು? ಏಳು
ಮಂದಿ ಸತ್ತು ಹೋದರು
ಆಕೆಯನ್ನು ವಿವಾಹವಾಗಿದ್ದರಲ್ಲವೇ?"ಎಂದು
ಪ್ರಶ್ನಿಸಿದರು. ಅದಕ್ಕೆ
ಯೇಸು, 'ನಿಮ್ಮದು
ಎಂಥಾ ತಪ್ಪು
ಅಭಿಪ್ರಾಯ! ಪವಿತ್ರ ಗ್ರಂಥವನ್ನಾಗಲಿ
ದೇವರ ಶಕ್ತಿಯನ್ನಾಗಲೀ
ನೀವು ಅರ್ಥಮಾಡಿಕೊಂಡಿಲ್ಲ.
ಸತ್ತವರು ಪುನರುತ್ದಾನವಾದ
ಮೇಲೆ ಮದುವೆ
ಮಾಡಿಕೊಳ್ಳುವುದು ಇಲ್ಲ,
ಮದುವೆ ಮಾಡಿಕೊಡುವುದೂ
ಇಲ್ಲ. ಅವರು
ಸ್ವರ್ಗದ ದೇವದೂತರಂತೆ
ಇರುತ್ತಾರೆ. ಇದಲ್ಲದೆ
ಸತ್ತವರು ಪುನರುತ್ದಾನವಾಗುವ
ವಿಷಯದಲ್ಲಿ ಹೇಳುವುದಾದರೆ:
"ನಾನು ಅಬ್ರಹಾಮನಿಗೆ
ದೇವರು, ಇಸಾಕನಿಗೆ
ದೇವರು, ಯಕೋಬನಿಗೆ
ದೇವರು ಎಂದು
ದೇವರು ಮೋಶೆಗೆ
ಹೇಳಿದ್ದನ್ನು ಮೋಶೆಯ
ಗ್ರಂಥದಲ್ಲಿ "ಉರಿಯುವ
ಪೊದೆ'ಯ
ಪ್ರಸ್ತಾಪವಿರುವ ಭಾಗದಲ್ಲಿ,
ನೀವು ಓದಿರಬೇಕಲ್ಲವೇ?
ದೇವರು ಜೀವಿತರ
ದೇವರೇ ಹೊರತು
ಮೃತರ ದೇವರಲ್ಲ.
ನಿಮ್ಮ ಅಭಿಪ್ರಾಯ
ತೀರ ತಪ್ಪಾಗಿದೆ,"
ಎಂದರು.
No comments:
Post a Comment