02.07.23 - ನನ್ನ ಶಿಷ್ಯನೆಂದು ಕುಡಿಯಲು ಒಂದು ಲೋಟ ತಣ್ಣೀರನ್ನು ಕೊಟ್ಟರೂ ಅದಕ್ಕೆ ತಕ್ಕ ಪ್ರತಿಫಲವನ್ನು ಪಡೆಯದೆ ಹೋಗನೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ

ಮೊದಲನೆಯ  ವಾಚನ ; ಅರಸರುಗಳ  ಎರಡನೆಯ  ಪತ್ರದಿಂದ  ಇಂದಿನ  ಮೊದಲನೆಯ  ವಾಚನ 4:8-11, 14-16


ಒಂದು  ಸಾರಿ  ಎಲೀಷನು  ಶೂನೇಮಿಗೆ  ಹೋದನು.  ಅಲ್ಲಿ  ಒಬ್ಬ  ಶ್ರೀಮಂತ  ಮಹಿಳೆ  ಇದ್ದಳು.   ಆಕೆ  ಅವನನ್ನು  ತನ್ನ  ಮನೆಯಲ್ಲಿ  ಊಟಮಾಡಬೇಕೆಂದು  ಒತ್ತಾಯಪಡಿಸಿದಳು.  ಅಂದಿನಿಂದ  ಅವನು    ಮಾರ್ಗವಾಗಿ  ಹೋಗುವಾಗಲೆಲ್ಲಾ    ಮನೆಯಲ್ಲೇ  ಊಟಮಾಡುತ್ತಿದ್ದನು.    ಮಹಿಳೆ  ತನ್ನ  ಗಂಡನಿಗೆ,  "ಯಾವಾಗಲೂ    ದಾರಿಯಿಂದ  ಹೋಗುತ್ತಾ  ಬರುತ್ತಾ  ಇರುವ    ವ್ಯಕ್ತಿ  ಒಬ್ಬ  ಸಂತನು  ಹಾಗು  ದೈವಪುರುಷನು  ಆಗಿರುತ್ತಾನೆಂದು  ನನಗೆ  ಗೊತ್ತಾಯಿತು.  ಆದುದರಿಂದ  ನಾವು  ಅವನಿಗಾಗಿ  ಮಾಳಿಗೆಯ  ಮೇಲೆ  ಒಂದು  ಸಣ್ಣ  ಕೋಣೆಯನ್ನು  ಕಟ್ಟಿಸೋಣ.  ಅದರಲ್ಲಿ  ಒಂದು  ಮಂಚಮೇಜುಕುರ್ಚಿದೀಪಸ್ತಂಭ  ಇವುಗಳನ್ನು  ಇಡೋಣಅವನು  ಅಲ್ಲಿಗೆ  ಬಂದಾಗೆಲ್ಲಾ  ಅದರಲ್ಲಿ  ವಾಸಮಾಡಲಿ, " ಎಂದು  ಹೇಳಿದಳು.  ಒಂದು  ದಿನ  ಎಲೀಷನು  ಅಲ್ಲಿಗೆ  ಬಂದು    ಕೋಣೆಯೊಳಗೆ  ಪ್ರವೇಶಿಸಿ  ದಣಿವಾರಿಸಿಕೊಂಡನು.  ಅಮೇಲೆ  ಎಲೀಷನು ಗೇಹಜಿಯನ್ನು,   "ನಾವು  ಆಕೆಗೆ  ಯಾವ  ಉಪಕಾರವನ್ನು  ಮಾಡಬಹುದು? " ಎಂದು  ಕೇಳಿದನು.  ಅವನು,  " ಆಕೆಗೆ  ಮಗನಿಲ್ಲಗಂಡನು  ಮುದಕನಾಗಿದ್ದಾನೆ, ' ಎಂದನು.  ಇದನ್ನು  ಕೇಳಿ  ಎಲೀಷನು    ಮಹಿಳೆಯನ್ನು ಕರೆಯಬೇಕೆಂದು. ಆಜ್ಞಾಪಿಸಿದನು.  ಅವನು  ಹೋಗಿ  ಕರೆದನು.  ಆಕೆ  ಬಂದು  ಬಾಗಿಲಿನ  ಹತ್ತಿರ  ನಿಂತಳು.  ಇಲೀಷನು  ಆಗೆಗೆ,  " ನೀನು  ಬರುವ  ವರ್ಷ  ಇದೇ  ಕಾಲದಲ್ಲಿ  ಒಬ್ಬ  ಮಗುನನ್ನು  ಅಪ್ಪಿಕೊಂಡಿರುವೆ, " ಎಂದನು.

ಪ್ರಭುವಿನ  ವಾಕ್ಯ


ಕೀರ್ತನೆ       89:1-2,15-16,17-18.V.1

ಶ್ಲೋಕ:   ಪ್ರಭೂ  ಕೀರ್ತಿಸುವೆನು  ಸದಾ  ನಿನ್ನಚಲ  ಪ್ರೀತಿಯನು ||

 

1.  ಪ್ರಭೂಕೀರ್ತಿಸುವೆನು ಸದಾ ನಿನ್ನಚಲ ಪ್ರೀತಿಯನು|

ಸಾರುವೆನು ತಲತಲಾಂತರಕು ನಿನ್ನ ಸತ್ಯತೆಯನು||

ನಿನ್ನಚಲ  ಪ್ರೀತಿ  ಪ್ರಭೂ ನನಗೆ ಶಾಶ್ವತ  ಸಿದ್ದ|

ನಿನ್ನ  ಸತ್ಯತೆ  ಆಗಸದಂತೆ  ಸ್ಥಿರ ಸ್ಥಾಪಿತ||

 

2.  ಧನ್ಯರು  ಪ್ರಭೂನಿನಗೆ  ಜಯಕಾರ  ಹಾಡುವವರು|

ನಿನ್ನ  ಮುಖದ  ಪ್ರಕಾಶದೊಳವರು  ನಡೆಯುವರು||

ಆನಂದಿಸುವರವರು  ಸದಾ  ನಿನ್ನ  ನಾಮದಲಿ|

ಪ್ರವರ್ಧಿಸುವರವರು  ನಿನ್ನ  ನ್ಯಾಯನೀತಿಯಲಿ||

 

3.  ಅವರ  ಶಕ್ತಿಸಾಮರ್ಥ್ಯದ  ಪ್ರತಿಭೆ  ನಿನ್ನದೆ|

ನಿನ್ನ  ದಯೆಯಿಂದ  ನಮಗೆ  ಕೋಡುಮೂಡಿದೆ||

ಗುರಾಣಿಯಂತಿಹ  ನಮ್ಮ  ರಾಜನು  ಪ್ರಭುವಿನವನೇ|

ಇಸ್ರಯೇಲಿನ  ಪರಮಪಾವನ  ಸ್ವಾಮಿಗೆ  ಸೇರಿದವನೇ||

 

ಎರಡನೆಯ  ವಾಚನ : ಪೌಲನು  ರೋಮನರಿಗೆ  ಬರೆದ  ಪತ್ರದಿಂದ ಇಂದಿನ ಎರಡನೆಯ ವಾಚನ 6:3-4, 8-11



 ಕ್ರಿಸ್ತ  ಯೇಸುವಿನವರಾಗಲು  ದೀಕ್ಷಾಸ್ನಾನ  ಹೊಂದಿರುವ  ನಾವು.  ಅವರ  ಮರಣದಲ್ಲಿ  ಪಾಲುಗಾರರಾಗಲು  ದೀಕ್ಷಾಸ್ನಾನ  ಪಡೆದೆವು  ಎಂಬುದು  ನಿಮಗೆ  ತಿಳಿಯದೆಹೀಗಿರಲಾಗಿದೀಕ್ಷಾಸ್ನಾನ  ಮಾಡಿಸಿಕೊಂಡಾಗ  ಅವರ  ಮರಣದಲ್ಲಿ  ಪಾಲುಗಾರರಾದ  ನಮಗೆ  ಅವರೊಡನೆ  ಸಮಾಧಿಯೂ  ಆಯಿತು.  ಆದುದರಿಂದ  ತಂದೆಯ  ಮಹಿಮಾಶಕ್ತಿಯಿಂದ  ಕ್ರಿಸ್ತ  ಯೇಸು  ಮರಣದಿಂದ  ಪುನರುತ್ಥಾನ  ಹೊಂದಿದ್ದಂತೆಯೇ  ನಾವು  ಸಹ  ಹೊಸ  ಜೀವವನ್ನು  ಹೊಂದಿ  ಬಾಳುತ್ತೇವೆ.  ಕ್ರಿಸ್ತ  ಯೇಸುವಿನೊಂದಿಗೆ  ನಾವು  ಮರಣ  ಹೊಂದಿದ್ದರೆ  ಅವರೊಡನೆ  ನಾವೂ  ಜೀವಿಸುತ್ತೇವೆ ಇದೇ  ನಮ್ಮ  ವಿಶ್ವಾಸ.  ಯೇಸುಕ್ರಿಸ್ತರನ್ನು  ಮರಣದಿಂದ  ಎಬ್ಬಿಸಲಾಯಿತು  ಎಂಬುದನ್ನು  ನಾವು  ಬಲ್ಲೆವು.  ಆದ್ದರಿಂದ  ಅವರು  ಇನ್ನು  ಎಂದಿಗೂ  ಸಾಯುವುದಿಲ್ಲ ಸಾವಿಗೆ  ಅವರ  ಮೇಲೆ  ಯಾವ  ಅಧಿಕಾರವೂ  ಇಲ್ಲ.  ಏಕೆಂದರೆಅವರು  ಪಾಪದ  ಪಾಲಿಗೆ  ಒಂದೇ  ಸಾರಿಗೆ  ಮಾತ್ರವಲ್ಲಎಂದೆಂದಿಗೂ  ಸತ್ತವರು.  ಅವರು  ಈಗ  ಜೀವಿಸುವುದು  ದೇವರಿಗಾಗಿಯೇ.  ಅಂತೆಯೇ  ನೀವೂ  ಸಹ  ಪಾಪದ  ಪಾಲಿಗೆ  ಸತ್ತವರೆಂದೂ  ದೇವರಿಗಾಗಿ  ಮಾತ್ರ  ಯೇಸುಕ್ರಿಸ್ತರಲ್ಲಿ  ಜೀವಿಸುವವರೆಂದೂ  ಪರಿಗಣಿಸಿರಿ.

 - ಪ್ರಭುವಿನ  ವಾಕ್ಯ 


ಘೋಷಣೆ                  ಪ್ರೇ. ಕಾ. ಕ. 16:14

ಅಲ್ಲೆಲೂಯ, ಅಲ್ಲೆಲೂಯ!

ನಿಮ್ಮ  ಬೋಧನೆಗೆ  ಕಿವಿಗೊಟ್ಟು  ಗ್ರಹಿಸುವಂತೆ ಪ್ರಭೂನಮ್ಮ  ಹೃದಯವನ್ನು  ತೆರೆಯಿರಿ ||

ಅಲ್ಲೆಲೂಯ!

 

ಶುಭಸಂದೇಶ  ವಾಚನ : ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 10:37-42



   ಕಾಲದಲ್ಲಿ  ಯೇಸು  ತಮ್ಮ  ಶಿಷ್ಯರಿಗೆ  ಹೀಗೆಂದರು: "ನನ್ನನ್ನು  ಪ್ರೀತಿಸುವುದಕ್ಕಿಂತ  ಹೆಚ್ಚಾಗಿ  ತನ್ನ  ತಂದೆಯನ್ನು  ಅಥವಾ  ತಾಯಿಯನ್ನು  ಪ್ರೀತಿಸುವವನು  ನನ್ನವನಾಗಲು  ಯೋಗ್ಯನಲ್ಲ.  ನನ್ನನ್ನು  ಪ್ರೀತಿಸುವುದಕ್ಕಿಂತ  ಹೆಚ್ಚಾಗಿ  ತನ್ನ  ಮಗನನ್ನು  ಅಥವಾ  ಮಗಳನ್ನು  ಪ್ರೀತಿಸುವವನು  ನನ್ನವನಾಗಲು  ಯೋಗ್ಯನಲ್ಲ.  ತನ್ನ  ಪ್ರಾಣವನ್ನು  ಕಾಪಾಡಿಕೊಳ್ಳುವವನು  ಅದನ್ನು  ಕಳೆದುಕೊಳ್ಳುತ್ತಾನೆ.  ನನಗೋಸ್ಕರವಾಗಿ  ತನ್ನ  ಪ್ರಾಣವನ್ನು  ಕಳೆದುಕೊಳ್ಳುವವನು  ಅದನ್ನು  ಕಾಪಾಡಿಕೊಳ್ಳುತ್ತಾನೆ.  ನಿಮ್ಮನ್ನು  ಸ್ವಾಗತಿಸುವವನು  ನನ್ನನ್ನು  ಸ್ವಾಗತಿಸುತ್ತಾನೆ ನನ್ನನ್ನು  ಸ್ವಾಗತಿಸುವವನು  ನನ್ನನ್ನು  ಕಳುಹಿಸಿಕೊಟ್ಟಾತನನ್ನೇ  ಸ್ವಾಗತಿಸುತ್ತಾನೆ.  ಪ್ರವಾದಿಯನ್ನು  ಪ್ರವಾದಿಯೆಂದು  ಸ್ವಾಗತಿಸುವವನು  ಪ್ರವಾದಿಗೆ  ಸಿಗುವ  ಪ್ರತಿಫಲವನ್ನು  ಪಡೆಯುತ್ತಾನೆ.  ಸತ್ಪುರುಷನನ್ನು  ಸತ್ಪುರುಷನೆಂದು  ಸ್ವಾಗತಿಸುವವನು  ಸತ್ಪುರುಷನಿಗೆ  ಸಿಗುವ  ಪ್ರತಿಫಲವನ್ನು  ಪಡೆಯುತ್ತಾನೆ.  ಯಾರಾದರೂ    ಚಿಕ್ಕವರಲ್ಲಿ  ಒಬ್ಬನಿಗೆ  ಅವನು  ನನ್ನ  ಶಿಷ್ಯನೆಂದು  ಕುಡಿಯಲು  ಒಂದು  ಲೋಟ  ತಣ್ಣೀರನ್ನು  ಕೊಟ್ಟರೂ  ಅದಕ್ಕೆ  ತಕ್ಕ  ಪ್ರತಿಫಲವನ್ನು  ಪಡೆಯದೆ  ಹೋಗನೆಂದು  ನಿಮಗೆ  ನಿಶ್ಚಯವಾಗಿ  ಹೇಳುತ್ತೇನೆ.

ಪ್ರಭುಕ್ರಿಸ್ತರ  ಶುಭಸಂದೇಶ

2 comments:

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...