04.07.23 - "ಯೇಸು ಎದ್ದು ನಿಂತು ಸುಂಟರಗಾಳಿಯನ್ನೂ ಸರೋವರವನ್ನೂ ಗದರಿಸಿದರು. ಆಗ ವಾತಾವರಣ ಪ್ರಶಾಂತವಾಯಿತು."

ಮೊದಲನೆಯ  ವಾಚನ : ಆದಿಕಾಂಡದಿಂದ  ಇಂದಿನ  ವಾಚನ  19:15-29

ಮೂಡುವುದಕ್ಕೆ  ಮುಂಚೆ  ದೂತರು  ಲೋಟನಿಗೆ,  " ಏಳುನಿನ್ನ  ಹೆಂಡತಿ  ಮತ್ತು  ಹೆಣ್ಣುಮಕ್ಕಳಿಬ್ಬರನ್ನು  ಕರೆದುಕೊಂಡು  ಬೇಗನೆ  ಹೊರಡು ಇಲ್ಲದಿದ್ದರೆ  ಊರಿಗೆ  ಬರಲಿರುವ  ದಂಡನೆಯಲ್ಲಿ  ನೀನೂ  ಸಿಕ್ಕಿಕೊಂಡು  ನಾಶವಾಗಬೇಕಾದೀತು, " ಎಂದು  ಹೇಳಿ  ತ್ವರೆಪಡಿಸಿದನು.  ಅವನು  ಇನ್ನೂ  ತಡಮಾಡುತ್ತಿರುವುದನ್ನು  ಕಂಡುಆ  ಮನುಷ್ಯರು  ಅವನನ್ನು  ಹಾಗು  ಅವನ  ಹೆಂಡತಿ  ಮಕ್ಕಳನ್ನು  ಕೈಹಿಡಿದು  ಹೊರಗೆ  ತಂದು  ಊರಾಚೆಗೆ  ಬಿಟ್ಟರು.  ಸರ್ವೇಶ್ವರಸ್ವಾಮಿಗೆ  ಅವನ  ಮೇಲೆ  ಅಷ್ಟು  ಕನಿಕರವಿತ್ತು.  ಊರ  ಹೊರಗೆ  ಬಿಟ್ಟಾದ  ಮೇಲೆ  ಆ  ಇಬ್ಬರಲ್ಲಿ  ಒಬ್ಬನು,  " ಪ್ರಾಣ  ಉಳಿಸಿಕೊಳ್ಳಬೇಕಾದರೆ  ಓಡಬೇಕುಹಿಂದಕ್ಕೆ  ತಿರುಗಿ  ನೋಡಬಾರದು ಬಯಲುಸೀಮೆಯಲ್ಲೂ  ನಿಲ್ಲದೆ  ಗುಡ್ಡಗಾಡಿಗೆ  ಓಡಬೇಕುಇಲ್ಲವಾದರೆ  ನಾಶವಾದೀತು !  "ಎಂದು  ಎಚ್ಚರಿಸಿದನು.  ಅದಕ್ಕೆ  ಲೋಟನು,  "ಸ್ವಾಮಿಅದು  ನನ್ನಿಂದಾಗದು ನಿಮ್ಮ  ದಾಸನ  ಮೇಲೆ  ಮರುಕವಿಟ್ಟುಪ್ರಾಣ  ಉಳಿಸಿದ್ದೇನೋ  ಮಹಾ  ಉಪಕಾರವಾಯಿತು ಆದರೆ  ಗುಡ್ಡಗಾಡಿಗೆ  ಓಡಿಹೋಗಲು  ನನ್ನಿಂದಾಗದುಅಲ್ಲಿಗೆ  ಸೇರುವುದಕ್ಕೆ  ಮುಂಚೆಯೇ  ಈ  ವಿಪತ್ತಿಗೆ  ಸಿಕ್ಕಿ  ಸತ್ತೇನು.  ಆದುದರಿಂದ  ಅಗೋಅಲ್ಲಿ  ಊರೊಂದು  ಕಾಣಿಸುತ್ತಿದೆ ಅದು  ಅಷ್ಟೇನು  ದೂರವಲ್ಲಚಿಕ್ಕ  ಊರುಹೌದಲ್ಲವೆ ಅಲ್ಲಿಗಾದರೂ  ಹೋಗಲು  ಅಪ್ಪಣೆಯಾದರೆ  ಪ್ರಾಣ  ಉಳಿಯುತ್ತದೆ, " ಎಂದನು.  ಅದಕ್ಕಾತನು, " ಸರಿಹಾಗೆಯೇ  ಆಗಲಿಈ  ನಿನ್ನ  ಕೋರಿಕೆಯನ್ನು  ನೆರವೇರಿಸುತ್ತೇನೆ.  ನೀನು  ಹೇಳಿದ  ಆ  ಊರನ್ನು  ಹಾಳುಮಾಡುವುದಿಲ್ಲ.  ಬೇಗನೆ  ಅಲ್ಲಿಗೆ  ಹೋಗಿ  ಸುರಕ್ಷಿತವಾಗಿರು.  ನೀನು  ಅಲ್ಲಿಗೆ  ಮುಟ್ಟುವ  ತನಕ  ನಾನು  ಏನನ್ನೂ  ಮಾಡಲಿಕ್ಕಾಗುವುದಿಲ್ಲ,  " ಎಂದನು.   ಲೋಟನು  ಆ  ಊರನ್ನು  ಚಿಕ್ಕದು  ಎಂದು  ಕರೆದುದಕ್ಕಾಗಿ  ಅದಕ್ಕೆ  "ಚೋಗರ್"  ಎಂದು  ಹೆಸರಾಯಿತು.  ಲೋಟನು  ಚೋಗುರನ್ನು  ಮುಟ್ಟುವಷ್ಟರಲ್ಲಿ  ಸೂರ್ಯೋದಯವಾಗಿತ್ತು.  ಆಗ  ಸರ್ವೇಶ್ವರಸ್ವಾಮಿ  ಸೊದೋಮ್ - ಗೊಮೋರಗಳ  ಮೇಲೆ  ಅಗ್ನಿಉರಿಯುತ್ತಿರುವ  ಗಂಧಕಮಳೆ  ಸುರಿಸಿದರು.  ಆ  ಪಟ್ಟಣಗಳನ್ನೂಇಡೀ  ಆ  ಬಯಲುಸೀಮೆಯನ್ನೂ  ಅವುಗಳ  ನಿವಾಸಿಗಳನ್ನೂ  ಹೊಲಗಳ  ಬೆಳೆಯೆಲ್ಲವನ್ನೂ  ಹಾಳುಮಾಡಿದರು.  ಲೋಟನ  ಹೆಂಡತಿಯೋಅವನ  ಹಿಂದೆ  ಬರುತ್ತಿದ್ದಾಗ  ಹಿಂದಿರುಗಿ  ನೋಡಿದಳು ಕೂಡಲೇ  ಉಪ್ಪಿನ  ಕಂಬವಾಗಿ  ಮಾರ್ಪಟ್ಟಳು.  ಇತ್ತ  ಅಬ್ರಾಮನು  ಬೆಳಿಗ್ಗೆ  ಎದ್ದು  ತಾನು  ಸರ್ವೇಶ್ವರಸ್ವಾಮಿ  ಸನ್ನಿಧಿಯಲ್ಲಿ  ನಿಂತಿದ್ದ  ಸ್ಥಳಕ್ಕೆ  ಮರಳಿ  ಬಂದನು.  ಸೊದೋಮ್ - ಗೊಮೋರ  ಹಾಗೂ  ಆ  ಬಯಲುಸೀಮೆಯತ್ತ  ಅವನು  ಕಣ್ಣು  ಹಾಯಿಸಿದಾಗಇಗೋಆ  ಪ್ರದೇಶದಿಂದ  ಹೊಗೆದೊಡ್ಡ  ಆವಿಗೆಯ  ಹೊಗೆಯಂತೆ  ಭುಗಿಲೇರುತ್ತಿತ್ತು.   ದೇವರು  ಆ  ಬಯಲುಸೀಮೆಯ  ಪಟ್ಟಣಗಳನ್ನು  ನಾಶಮಾಡಿದಾಗ  ಲೋಟನು  ವಾಸವಾಗಿದ್ದ  ಊರುಗಳನ್ನೇನೋ  ಹಾಳುಮಾಡಿದರು.  ಆದರೆ  ಅಬ್ರಾಮನನ್ನು  ನೆನಪಿಗೆ  ತಂದುಕೊಂಡು  ಲೋಟನನ್ನು ತಪ್ಪಿಸಿ  ಕಾಪಾಡಿದರು.

- ಪ್ರಭುವಿನ  ವಾಕ್ಯ

ಕೀರ್ತನೆ 26:2-3,9-10,11-12.
ಶ್ಲೋಕ: ಕೈಬಿಡದ ನಿನ್ನೊಲವು ನನ್ನ ಕಣ್ಮುಂದಿದೆ |

ಪರೀಕ್ಷಿಸು,  ಪ್ರಭೂ,  ಎನ್ನನ್ನು  ಪರಿಶೀಲಿಸು|

ಹೃನ್ಮನಗಳೆಲ್ಲವನು  ನೀ  ಪರಿಶೋಧಿಸು||

ಕೈಬಿಡದ  ನಿನ್ನೊಲವು  ನನ್ನ  ಕಣ್ಮುಂದಿದೆ|

ನೀ  ತೋರಿದ  ಸತ್ಯ  ಪಥದಲಿ,  ನಾ  ನಡೆದೆ||

 

ಪಾಪಿಗಳ  ಸಮೇತ  ಎನ್ನ  ಪ್ರಾಣವನಳಿಸಬೇಡಯ್ಯಾ|

ಕೊಳೆಪಾತಕರ  ಸಮೇತ  ಎನ್ನ  ಜೀವ  ತೆಗೆಯಬೇಡಯ್ಯಾ||

ಇದೆ    ಜನರ  ಕೈಗಳಲಿ  ಕೆಡಕುತನ|

ಬಲಗೈ  ತುಂಬ  ಲಂಚಕೋರತನ||

 

ನೀತಿಯ  ಪಥದೊಳು  ನಾ  ನಡೆವೆನಯ್ಯಾ|

ಕರುಣೆ  ತೋರುವ  ಪ್ರಭೂ,  ರಕ್ಷಿಸಯ್ಯಾ||

ಸಮತಳದಲಿ  ನಿಂತಿವೆ  ನನ್ನ  ಪಾದಗಳು|

ಸ್ತುತಿಸುವೆ  ನಾ  ಪ್ರಭುವನು  ಭಕ್ತರ  ಸಭೆಯೊಳು||

 ಘೋಷಣೆ       2 ತಿಮೊಥೇಯ  1:10

 ಅಲ್ಲೆಲೂಯ, ಅಲ್ಲೆಲೂಯ!

ಮೃತ್ಯುಶಕ್ತಿಯನ್ನು  ವಿನಾಶಗೊಳಿಸಿಅಮರಜೀವವನ್ನು  ಶುಭಸಂದೇಶದ  ಮೂಲಕ  ಬೆಳಕಿಗೆ  ತಂದವರು  ಯೇಸುವೇ,,

ಅಲ್ಲೆಲೂಯ!

ಶುಭಸಂದೇಶ  ವಾಚನ : ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 8:23-27

ಆ  ಕಾಲದಲ್ಲಿ  ಯೇಸು  ದೋಣಿಯನ್ನು  ಹತ್ತಿದರು.  ಶಿಷ್ಯರು  ಹತ್ತಿ  ಅವರ  ಸಂಗಡ  ಹೋದರು‌.  ಇದ್ದಕ್ಕಿದ್ದ  ಹಾಗೆ  ಸರೋವರದಲ್ಲಿ  ರಭಸವಾದ  ಬಿರುಗಾಳಿ  ಎದ್ದಿತು.  ದೋಣಿ  ಅಲೆಗಳಿಂದ  ಮುಳುಗಿ  ಹೋಗುವುದರಲ್ಲಿತ್ತು.  ಯೇಸುವಾದರೋ  ನಿದ್ರಾವಶರಾಗಿದ್ದರು.  ಶಿಷ್ಯರು  ಹತ್ತಿರಕ್ಕೆ  ಬಂದು  ಅವರನ್ನು  ಎಬ್ಬಿಸಿ,  "ಪ್ರಭೂಕಾಪಾಡಿನಾವು  ನೀರುಪಾಲಾಗುತ್ತಿದ್ದೇವೆ,  " ಎಂದರು.  ಅದಕ್ಕೆ  ಯೇಸು,  "ಅಲ್ಪ  ವಿಶ್ವಾಸಿಗಳೇನಿಮಗೇಕೆ  ಇಷ್ಟು  ಭಯ?  "ಎಂದರು.  ಅನಂತರ  ಎದ್ದುನಿಂತು  ಸುಂಟರಗಾಳಿಯನ್ನೂ  ಸರೋವರವನ್ನೂ  ಗದರಿಸಿದರು.  ಆಗ  ವಾತಾವರಣ  ಪ್ರಶಾಂತವಾಯಿತು.   ಶಿಷ್ಯರು  ನಿಬ್ಬೆರಗಾದರು. " ಗಾಳಿಯೂ  ಸರೋವರವೂ  ಇವರು  ಹೇಳಿದಂತೆ  ಕೆಳಬೇಕಾದರೆ  ಇವರೆಂತಹ  ವ್ಯಕ್ತಿಯಾಗಿರಬೇಕು ! " ಎಂದುಕೊಂಡರು.

-ಪ್ರಭುಕ್ರಿಸ್ತರ  ಶುಭಸಂದೇಶ


No comments:

Post a Comment

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...