ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

04.07.23 - "ಯೇಸು ಎದ್ದು ನಿಂತು ಸುಂಟರಗಾಳಿಯನ್ನೂ ಸರೋವರವನ್ನೂ ಗದರಿಸಿದರು. ಆಗ ವಾತಾವರಣ ಪ್ರಶಾಂತವಾಯಿತು."

ಮೊದಲನೆಯ  ವಾಚನ : ಆದಿಕಾಂಡದಿಂದ  ಇಂದಿನ  ವಾಚನ  19:15-29

ಮೂಡುವುದಕ್ಕೆ  ಮುಂಚೆ  ದೂತರು  ಲೋಟನಿಗೆ,  " ಏಳುನಿನ್ನ  ಹೆಂಡತಿ  ಮತ್ತು  ಹೆಣ್ಣುಮಕ್ಕಳಿಬ್ಬರನ್ನು  ಕರೆದುಕೊಂಡು  ಬೇಗನೆ  ಹೊರಡು ಇಲ್ಲದಿದ್ದರೆ  ಊರಿಗೆ  ಬರಲಿರುವ  ದಂಡನೆಯಲ್ಲಿ  ನೀನೂ  ಸಿಕ್ಕಿಕೊಂಡು  ನಾಶವಾಗಬೇಕಾದೀತು, " ಎಂದು  ಹೇಳಿ  ತ್ವರೆಪಡಿಸಿದನು.  ಅವನು  ಇನ್ನೂ  ತಡಮಾಡುತ್ತಿರುವುದನ್ನು  ಕಂಡುಆ  ಮನುಷ್ಯರು  ಅವನನ್ನು  ಹಾಗು  ಅವನ  ಹೆಂಡತಿ  ಮಕ್ಕಳನ್ನು  ಕೈಹಿಡಿದು  ಹೊರಗೆ  ತಂದು  ಊರಾಚೆಗೆ  ಬಿಟ್ಟರು.  ಸರ್ವೇಶ್ವರಸ್ವಾಮಿಗೆ  ಅವನ  ಮೇಲೆ  ಅಷ್ಟು  ಕನಿಕರವಿತ್ತು.  ಊರ  ಹೊರಗೆ  ಬಿಟ್ಟಾದ  ಮೇಲೆ  ಆ  ಇಬ್ಬರಲ್ಲಿ  ಒಬ್ಬನು,  " ಪ್ರಾಣ  ಉಳಿಸಿಕೊಳ್ಳಬೇಕಾದರೆ  ಓಡಬೇಕುಹಿಂದಕ್ಕೆ  ತಿರುಗಿ  ನೋಡಬಾರದು ಬಯಲುಸೀಮೆಯಲ್ಲೂ  ನಿಲ್ಲದೆ  ಗುಡ್ಡಗಾಡಿಗೆ  ಓಡಬೇಕುಇಲ್ಲವಾದರೆ  ನಾಶವಾದೀತು !  "ಎಂದು  ಎಚ್ಚರಿಸಿದನು.  ಅದಕ್ಕೆ  ಲೋಟನು,  "ಸ್ವಾಮಿಅದು  ನನ್ನಿಂದಾಗದು ನಿಮ್ಮ  ದಾಸನ  ಮೇಲೆ  ಮರುಕವಿಟ್ಟುಪ್ರಾಣ  ಉಳಿಸಿದ್ದೇನೋ  ಮಹಾ  ಉಪಕಾರವಾಯಿತು ಆದರೆ  ಗುಡ್ಡಗಾಡಿಗೆ  ಓಡಿಹೋಗಲು  ನನ್ನಿಂದಾಗದುಅಲ್ಲಿಗೆ  ಸೇರುವುದಕ್ಕೆ  ಮುಂಚೆಯೇ  ಈ  ವಿಪತ್ತಿಗೆ  ಸಿಕ್ಕಿ  ಸತ್ತೇನು.  ಆದುದರಿಂದ  ಅಗೋಅಲ್ಲಿ  ಊರೊಂದು  ಕಾಣಿಸುತ್ತಿದೆ ಅದು  ಅಷ್ಟೇನು  ದೂರವಲ್ಲಚಿಕ್ಕ  ಊರುಹೌದಲ್ಲವೆ ಅಲ್ಲಿಗಾದರೂ  ಹೋಗಲು  ಅಪ್ಪಣೆಯಾದರೆ  ಪ್ರಾಣ  ಉಳಿಯುತ್ತದೆ, " ಎಂದನು.  ಅದಕ್ಕಾತನು, " ಸರಿಹಾಗೆಯೇ  ಆಗಲಿಈ  ನಿನ್ನ  ಕೋರಿಕೆಯನ್ನು  ನೆರವೇರಿಸುತ್ತೇನೆ.  ನೀನು  ಹೇಳಿದ  ಆ  ಊರನ್ನು  ಹಾಳುಮಾಡುವುದಿಲ್ಲ.  ಬೇಗನೆ  ಅಲ್ಲಿಗೆ  ಹೋಗಿ  ಸುರಕ್ಷಿತವಾಗಿರು.  ನೀನು  ಅಲ್ಲಿಗೆ  ಮುಟ್ಟುವ  ತನಕ  ನಾನು  ಏನನ್ನೂ  ಮಾಡಲಿಕ್ಕಾಗುವುದಿಲ್ಲ,  " ಎಂದನು.   ಲೋಟನು  ಆ  ಊರನ್ನು  ಚಿಕ್ಕದು  ಎಂದು  ಕರೆದುದಕ್ಕಾಗಿ  ಅದಕ್ಕೆ  "ಚೋಗರ್"  ಎಂದು  ಹೆಸರಾಯಿತು.  ಲೋಟನು  ಚೋಗುರನ್ನು  ಮುಟ್ಟುವಷ್ಟರಲ್ಲಿ  ಸೂರ್ಯೋದಯವಾಗಿತ್ತು.  ಆಗ  ಸರ್ವೇಶ್ವರಸ್ವಾಮಿ  ಸೊದೋಮ್ - ಗೊಮೋರಗಳ  ಮೇಲೆ  ಅಗ್ನಿಉರಿಯುತ್ತಿರುವ  ಗಂಧಕಮಳೆ  ಸುರಿಸಿದರು.  ಆ  ಪಟ್ಟಣಗಳನ್ನೂಇಡೀ  ಆ  ಬಯಲುಸೀಮೆಯನ್ನೂ  ಅವುಗಳ  ನಿವಾಸಿಗಳನ್ನೂ  ಹೊಲಗಳ  ಬೆಳೆಯೆಲ್ಲವನ್ನೂ  ಹಾಳುಮಾಡಿದರು.  ಲೋಟನ  ಹೆಂಡತಿಯೋಅವನ  ಹಿಂದೆ  ಬರುತ್ತಿದ್ದಾಗ  ಹಿಂದಿರುಗಿ  ನೋಡಿದಳು ಕೂಡಲೇ  ಉಪ್ಪಿನ  ಕಂಬವಾಗಿ  ಮಾರ್ಪಟ್ಟಳು.  ಇತ್ತ  ಅಬ್ರಾಮನು  ಬೆಳಿಗ್ಗೆ  ಎದ್ದು  ತಾನು  ಸರ್ವೇಶ್ವರಸ್ವಾಮಿ  ಸನ್ನಿಧಿಯಲ್ಲಿ  ನಿಂತಿದ್ದ  ಸ್ಥಳಕ್ಕೆ  ಮರಳಿ  ಬಂದನು.  ಸೊದೋಮ್ - ಗೊಮೋರ  ಹಾಗೂ  ಆ  ಬಯಲುಸೀಮೆಯತ್ತ  ಅವನು  ಕಣ್ಣು  ಹಾಯಿಸಿದಾಗಇಗೋಆ  ಪ್ರದೇಶದಿಂದ  ಹೊಗೆದೊಡ್ಡ  ಆವಿಗೆಯ  ಹೊಗೆಯಂತೆ  ಭುಗಿಲೇರುತ್ತಿತ್ತು.   ದೇವರು  ಆ  ಬಯಲುಸೀಮೆಯ  ಪಟ್ಟಣಗಳನ್ನು  ನಾಶಮಾಡಿದಾಗ  ಲೋಟನು  ವಾಸವಾಗಿದ್ದ  ಊರುಗಳನ್ನೇನೋ  ಹಾಳುಮಾಡಿದರು.  ಆದರೆ  ಅಬ್ರಾಮನನ್ನು  ನೆನಪಿಗೆ  ತಂದುಕೊಂಡು  ಲೋಟನನ್ನು ತಪ್ಪಿಸಿ  ಕಾಪಾಡಿದರು.

- ಪ್ರಭುವಿನ  ವಾಕ್ಯ

ಕೀರ್ತನೆ 26:2-3,9-10,11-12.
ಶ್ಲೋಕ: ಕೈಬಿಡದ ನಿನ್ನೊಲವು ನನ್ನ ಕಣ್ಮುಂದಿದೆ |

ಪರೀಕ್ಷಿಸು,  ಪ್ರಭೂ,  ಎನ್ನನ್ನು  ಪರಿಶೀಲಿಸು|

ಹೃನ್ಮನಗಳೆಲ್ಲವನು  ನೀ  ಪರಿಶೋಧಿಸು||

ಕೈಬಿಡದ  ನಿನ್ನೊಲವು  ನನ್ನ  ಕಣ್ಮುಂದಿದೆ|

ನೀ  ತೋರಿದ  ಸತ್ಯ  ಪಥದಲಿ,  ನಾ  ನಡೆದೆ||

 

ಪಾಪಿಗಳ  ಸಮೇತ  ಎನ್ನ  ಪ್ರಾಣವನಳಿಸಬೇಡಯ್ಯಾ|

ಕೊಳೆಪಾತಕರ  ಸಮೇತ  ಎನ್ನ  ಜೀವ  ತೆಗೆಯಬೇಡಯ್ಯಾ||

ಇದೆ    ಜನರ  ಕೈಗಳಲಿ  ಕೆಡಕುತನ|

ಬಲಗೈ  ತುಂಬ  ಲಂಚಕೋರತನ||

 

ನೀತಿಯ  ಪಥದೊಳು  ನಾ  ನಡೆವೆನಯ್ಯಾ|

ಕರುಣೆ  ತೋರುವ  ಪ್ರಭೂ,  ರಕ್ಷಿಸಯ್ಯಾ||

ಸಮತಳದಲಿ  ನಿಂತಿವೆ  ನನ್ನ  ಪಾದಗಳು|

ಸ್ತುತಿಸುವೆ  ನಾ  ಪ್ರಭುವನು  ಭಕ್ತರ  ಸಭೆಯೊಳು||

 ಘೋಷಣೆ       2 ತಿಮೊಥೇಯ  1:10

 ಅಲ್ಲೆಲೂಯ, ಅಲ್ಲೆಲೂಯ!

ಮೃತ್ಯುಶಕ್ತಿಯನ್ನು  ವಿನಾಶಗೊಳಿಸಿಅಮರಜೀವವನ್ನು  ಶುಭಸಂದೇಶದ  ಮೂಲಕ  ಬೆಳಕಿಗೆ  ತಂದವರು  ಯೇಸುವೇ,,

ಅಲ್ಲೆಲೂಯ!

ಶುಭಸಂದೇಶ  ವಾಚನ : ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 8:23-27

ಆ  ಕಾಲದಲ್ಲಿ  ಯೇಸು  ದೋಣಿಯನ್ನು  ಹತ್ತಿದರು.  ಶಿಷ್ಯರು  ಹತ್ತಿ  ಅವರ  ಸಂಗಡ  ಹೋದರು‌.  ಇದ್ದಕ್ಕಿದ್ದ  ಹಾಗೆ  ಸರೋವರದಲ್ಲಿ  ರಭಸವಾದ  ಬಿರುಗಾಳಿ  ಎದ್ದಿತು.  ದೋಣಿ  ಅಲೆಗಳಿಂದ  ಮುಳುಗಿ  ಹೋಗುವುದರಲ್ಲಿತ್ತು.  ಯೇಸುವಾದರೋ  ನಿದ್ರಾವಶರಾಗಿದ್ದರು.  ಶಿಷ್ಯರು  ಹತ್ತಿರಕ್ಕೆ  ಬಂದು  ಅವರನ್ನು  ಎಬ್ಬಿಸಿ,  "ಪ್ರಭೂಕಾಪಾಡಿನಾವು  ನೀರುಪಾಲಾಗುತ್ತಿದ್ದೇವೆ,  " ಎಂದರು.  ಅದಕ್ಕೆ  ಯೇಸು,  "ಅಲ್ಪ  ವಿಶ್ವಾಸಿಗಳೇನಿಮಗೇಕೆ  ಇಷ್ಟು  ಭಯ?  "ಎಂದರು.  ಅನಂತರ  ಎದ್ದುನಿಂತು  ಸುಂಟರಗಾಳಿಯನ್ನೂ  ಸರೋವರವನ್ನೂ  ಗದರಿಸಿದರು.  ಆಗ  ವಾತಾವರಣ  ಪ್ರಶಾಂತವಾಯಿತು.   ಶಿಷ್ಯರು  ನಿಬ್ಬೆರಗಾದರು. " ಗಾಳಿಯೂ  ಸರೋವರವೂ  ಇವರು  ಹೇಳಿದಂತೆ  ಕೆಳಬೇಕಾದರೆ  ಇವರೆಂತಹ  ವ್ಯಕ್ತಿಯಾಗಿರಬೇಕು ! " ಎಂದುಕೊಂಡರು.

-ಪ್ರಭುಕ್ರಿಸ್ತರ  ಶುಭಸಂದೇಶ


No comments:

Post a Comment