ಮೊದಲನೇ ವಾಚನ: ಸಿರಾಖನು 4:11-19
ಸುಜ್ಞಾನವೆಂಬಾಕೆ ಮಕ್ಕಳನ್ನು ಉನ್ನತಿಗೆ ಏರಿಸುವಳು. ತನ್ನನ್ನು ಅರಸುವವರನ್ನು ತನಗೇ ವಶಮಾಡಿಕೊಳ್ಳುವಳು. ಆಕೆಯನ್ನು ಪ್ರೀತಿಸುವವನು, ಪ್ರೀತಿಸುವುದು ಜೀವವನ್ನೇ ತಡವಿಲ್ಲದೆ ಅಕೆಯನ್ನು ಅರಸುವವನು ಪಡೆವನು ಅಮಿತಾನಂದವನ್ನೇ. ಆಕೆಯನ್ನು ಬಿಗಿಯಾಗಿ ಹಿಡಿದುಕೊಳ್ಳುವವನು ಆಗುವನು ಕೀರ್ತಿವಂತ ಅವನು ಹೋದೆಡೆಯಲ್ಲೆಲ್ಲ ಲಭಿಸುವುದವನಿಗೆ ದೇವರ ಆಶೀರ್ವಾದ. ಆಕೆಗೆ ಸೇವೆಮಾಡುವವನು ಪರಮಪಾವನನನ್ನು ಸೇವೆ ಮಾಡುತ್ತಾನೆ, ಆಕೆಯನ್ನು ಪ್ರೀತಿಸುವವನನ್ನು ಸರ್ವೇಶ್ವರ ಪ್ರೀತಿಸುತ್ತಾನೆ. ಆಕೆಗೆ ಕಿವಿಗೊಡುವವರು ಜನಾಂಗಗಳಿಗೆ ನ್ಯಾಯ ತೀರಿಸುವವರು, ಆಕೆಗೆ ಗಮನಕೊಡುವವರು ಸುರಕ್ಷಿತವಾಗಿ ಬದುಕುವರು. ಆಕೆಯನ್ನು ನೆಚ್ಚಿಕೊಂಡಿರುವವನು ಪಡೆಯುವು ಆಕೆಯನ್ನು ಬಾಧ್ಯವಾಗಿ ಆತನ ಪೀಳಿಗೆಯೂ ಆಕೆಯನ್ನು ಇಟ್ಟುಕೊಳ್ಳುವುದು ತನ್ನ ಸ್ವಾಧೀನವಾಗಿ ಪ್ರಾರಂಭದಲ್ಲಿ ಆಕೆ ಮಾನವರೊಂದಿಗೆ ಅಡ್ಡದಿಡ್ಡ ನಡೆಯುವವಳು; ಅವನಲ್ಲಿ ಅಳುಕು ಅಂಜಿಕೆಗಳನ್ನು ಹುಟ್ಟಿಸುತ್ತಾ ಸಾಗುವಳು; ಆತ್ಮದ ಬಗ್ಗೆ ನಂಬಿಕೆ ಹುಟ್ಟುವ ತನಕ ಶಿಕ್ಷೆಯಿತ್ತು ಬಾಧಿಸುವಳು; ನೀತಿ ನಿಯಮಗಳಿಂದ ಆತನನ್ನು ಪರೀಕ್ಷಿಸುವಳು. ತದನಂತರ ಅವನನ್ನು ನೇರವಾದ ಮಾರ್ಗಕ್ಕೆ ತಿರುಗಿಸುವಳು ಅವನಲ್ಲಿ ಸಂತೋಷವನ್ನು ಮೂಡಿಸುವಳು ಅವನಿಗೆ ತನ್ನ ಗುಟ್ಟುಗಳನ್ನು ತಿಳಿಸುತ್ತಾ ನಡೆಯುವಳು. ಆಗಲೂ ಅವನು ಅಡ್ಡದಾರಿ ಹಿಡಿದರೆ, ಅವನನ್ನು ತೊರೆದುಬಿಡುವಳು ತಾನು ಮಾಡಿದ್ದನು ತಾನೇ ಉಣ್ಣಲೆಂದು ಕೈಬಿಟ್ಟುಬಿಡುವಳು.
ಕೀರ್ತನೆ: 119:165, 168, 171, 174, 175
ಶ್ಲೋಕ: ಪ್ರಭು ಅತಿ ನೆಮ್ಮದಿಯುಂಟು ನಿನ್ನ ಶಾಸ್ತ್ರಪ್ರಿಯರಿಗೆ
ಶುಭಸಂದೇಶ: ಮಾರ್ಕ 9:38-40
ಯೊವಾನ್ನನು ಯೇಸುಸ್ವಾಮಿಗೆ, "ಗುರುವೇ, ಯಾರೋ ಒಬ್ಬನು ತಮ್ಮ ಹೆಸರಿನಲ್ಲಿ ದೆವ್ವ ಬಿಡಿಸುವುದನ್ನು ಕಂಡೆವು. ಅವನು ನಮ್ಮವನಲ್ಲ ಆದಕಾರಣ ಅವನನ್ನು ತಡೆದೆವು," ಎಂದನು. ಅದಕ್ಕೆ ಯೇಸು, "ಅವನನ್ನು ತಡೆಯಬೇಡಿ , ನನ್ನ ಹೆಸರಿನಲ್ಲಿ ಅದ್ಭುತ ಮಾಡುವವನು ಮರುಕ್ಷಣವೇ ನನ್ನ ವಿಷಯವಾಗಿ ಅಪಪ್ರಚಾರ ಮಾಡನು. ನಮಗೆ ವಿರೋಧಿ ಅಲ್ಲದವನು ನಮ್ಮ ಪರವಾದಿ.
ಮನಸಿಗೊಂದಿಷ್ಟು : ಸ್ವರ್ಗದತ್ತ ತಮ್ಮವರನ್ನು ಕರದುಕೊಂಡು ಹೋಗಲು ದೇವರು ಬಳಸುವ ಮಾರ್ಗ ಹತ್ತಾರು ಎನ್ನುತ್ತಾನೆ ಚಿಂತಕನೊಬ್ಬ. ನಾವು ಬಳಸುವ ಅಧ್ಯಾತ್ಮಿಕ ಮಾರ್ಗ ಮಾತ್ರ ಶ್ರೇಷ್ಟ ಹಾಗೂ ದೇವರ ಕೃಪೆಗೆ ತಾವು ಮಾತ್ರ ಪಾತ್ರರು ಎಂಬ ಅಹಂ ಸಲ್ಲದು ಎಂಬ ಸಂದೇಶ ಇಲ್ಲಿದೆ.
ಪ್ರಶ್ನೆ : ದೈವ ಕೃಪೆ ಎಲ್ಲರಿಗೂ ದೊರಕಲಿ ಎಂಬ ಆಶಯದಲ್ಲಿ ನಾವೆಷ್ಟು ಕ್ರಿಯಾಶೀಲ?
ಮನಸಿಗೊಂದಿಷ್ಟು : ಸ್ವರ್ಗದತ್ತ ತಮ್ಮವರನ್ನು ಕರದುಕೊಂಡು ಹೋಗಲು ದೇವರು ಬಳಸುವ ಮಾರ್ಗ ಹತ್ತಾರು ಎನ್ನುತ್ತಾನೆ ಚಿಂತಕನೊಬ್ಬ. ನಾವು ಬಳಸುವ ಅಧ್ಯಾತ್ಮಿಕ ಮಾರ್ಗ ಮಾತ್ರ ಶ್ರೇಷ್ಟ ಹಾಗೂ ದೇವರ ಕೃಪೆಗೆ ತಾವು ಮಾತ್ರ ಪಾತ್ರರು ಎಂಬ ಅಹಂ ಸಲ್ಲದು ಎಂಬ ಸಂದೇಶ ಇಲ್ಲಿದೆ.
ಪ್ರಶ್ನೆ : ದೈವ ಕೃಪೆ ಎಲ್ಲರಿಗೂ ದೊರಕಲಿ ಎಂಬ ಆಶಯದಲ್ಲಿ ನಾವೆಷ್ಟು ಕ್ರಿಯಾಶೀಲ?
No comments:
Post a Comment