ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

19.02.2019 - ಸರ್ವೇಶ್ವರ ಆಜ್ಞಾಪಿಸಿದಂತೆಯೇ ನೋಹನು ಎಲ್ಲವನ್ನು ಮಾಡಿದನು

ಮೊದಲನೇ ವಾಚನ: ಆದಿಕಾಂಡ 6:5-8;  7:1-5, 10

ಜಗತ್ತಿನಲ್ಲಿ ಮನುಜರ ಕೆಟ್ಟತನವು ಹೆಚ್ಚುತ್ತಲೇ ಇತ್ತು. ಅವರ ಮನದಾಲೋಚನೆಗಳು ಸದಾ ಕೆಟ್ಟದಾಗಿದ್ದವು. ಇದನ್ನು ಕಂಡ ಸರ್ವೇಶ್ವರ ಮನುಜನನ್ನು ಇಲ್ಲಿ ಸೃಷ್ಟಿಮಾಡಿದ್ದಕ್ಕಾಗಿ ವ್ಯಥೆಪಟ್ಟು, "ನಾನು ಸೃಷ್ಟಿಸಿದ ಮಾನವರನ್ನು ಈ ಜಗದಿಂದ ಅಳಿಸಿಬಿಡುತ್ತೇನೆ. ಅವರೊಂದಿಗೆ ಪ್ರಾಣಿಪಕ್ಷಿಗಳನ್ನು, ಕ್ರಿಮಿ ಕೀಟಗಳನ್ನು ಅಳಿಸಿ ಹಾಕುತ್ತೇನೆ. ಅವುಗಳನ್ನು ಉಂಟುಮಾಡಿದ್ದಕ್ಕಾಗಿ ನನಗೆ ದಃಖವಾಗುತ್ತಿದೆ," ಎಂದುಕೊಂಡರು. ಆದರೆ ನೋಹನ ವಿಷಯದಲ್ಲಿ ಸರ್ವೇಶ್ವರಸ್ವಾಮಿಗೆ ಮೆಚ್ಚುಗೆಯಿತ್ತು. ಸರ್ವೇಶ್ವರಸ್ವಾಮಿ ನೋಹನಿಗೆ, "ನೀನೂ ನಿನ್ನ ಮನೆಯವರೆಲ್ಲರೂ ನಾವೆಯನ್ನು ಸೇರಿಕೊಳ್ಳಿರಿ; ಈಗಿನ ಪೀಳಿಗೆಯಲ್ಲಿ ನೀನೊಬ್ಬನೇ ನನ್ನ ದೃಷ್ಟಿಗೆ ಸತ್ಪುರುಷ. ಎಲ್ಲ ಶುದ್ಧ ಪ್ರಾಣಿಗಳಲ್ಲಿ ಏಳೇಳು ಗಂಡುಹೆಣ್ಣುಗಳನ್ನು ಶುದ್ಧವಲ್ಲದ ಪ್ರಾಣಿಗಳಲ್ಲಿ ಎರಡೆರಡು ಗಂಡುಹೆಣ್ಣುಗಳನ್ನೂ ನಿನ್ನೊಂದಿಗೆ ಕರೆದುಕೊ.  ಪಕ್ಷಿಗಳಲ್ಲಿಯೂ ಏಳೇಳು ಗಂಡುಹೆಣ್ಣುಗಳನ್ನು ತೆಗೆದುಕೊ. ಏಳು ದಿನಗಳಾದ ನಂತರ ಭೂಮಿಯ ಮೇಲೆ ನಲವತ್ತು ದಿನ ಹಗಲಿರುಳೆನ್ನದೆ ಮಳೆ ಸುರಿಸುವೆನು; ನಾನು ಸೃಷ್ಟಿ ಮಾಡಿದ ಜೀವರಾಶಿನಳನ್ನೆಲ್ಲ ಭೂಮಿಯಿಂದ ಆಳಿಸಿ ಹಾಕುವೆನು," ಎಂದು ಹೇಳಿದರು. ಸರ್ವೇಶ್ವರ ಆಜ್ಞಾಪಿಸಿದಂತೆಯೇ ನೋಹನು ಎಲ್ಲವನ್ನು ಮಾಡಿದನು. ಏಳು ದಿನಗಳಾದ ಬಳಿಕ ಜಲ ಪ್ರಳಯವಾಗತೊಡಗಿತು.

ಕೀರ್ತನೆ: 29:1, 2, 3-4, 9-10

ಶ್ಲೋಕ: ಅನುಗ್ರಹಿಸಲಿ ಪ್ರಭೂ, ತನ್ನ ಪ್ರಜೆಗೆ ಸುಕ್ಷೇಮವನು.

ಶುಭಸಂದೇಶ: ಮಾರ್ಕ 8:14-21

ಶಿಷ್ಯರು ಬುತ್ತಿಯನ್ನು ಕಟ್ಟಿಕೊಳ್ಳಲು ಮರೆತಿದ್ದರು. ದೋಣಿಯಲ್ಲಿ ಒಂದೇ ಒಂದು ರೊಟ್ಟಿ ಇತ್ತು. ಯೇಸುಸ್ವಾಮಿ ಅವರಿಗೆ, "ಎಚ್ಚರಿಕೆ, ಫರಿಸಾಯರ ಹಾಗೂ ಹೆರೋದನ ಹುಳಿ ಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ," ಎಂದು ಹೇಳಿದರು. ಇದನ್ನು ಕೇಳಿದ  ಶಿಷ್ಯರು, "ನಮ್ಮಲ್ಲಿ ರೊಟ್ಟಿಯಿಲ್ಪದ್ದರಿಂದ ಹೀಗೆ ಹೇಳುತ್ತಿರಬಹುದೇ" ಎಂದು ಚರ್ಚಿಸತೊಡಗಿದರು. ಆ ಚರ್ಚೆಯನ್ನು ಯೇಸು ಗಮನಿಸಿ "ರೊಟ್ಟಿ ಇಲ್ಲವೆಂದು ಚರ್ಚೆ ಏಕೆ? ನಿಮಗೆ ಇನ್ನೂ ಅರಿವಾಗಲಿ, ಗ್ರಹಿಕೆಯಾಗಲಿ ಇಲ್ಲವೇ, ನೀವಿನ್ನೂ ಮಂದಮತಿಗಳಾಗಿರುವಿರೋ? ಕಿವಿಗಳಿದ್ದೂ ಕೇಳಲಾರಿರಾ? ಕಣ್ಣುಗಳಿದ್ದು ನೋಡಲಾರಿರಾ? ನಾನು ಐದು ರೊಟ್ಟಿಗಳಿದ  ಐದುಸಾವಿರ ಜನರನ್ನು ತೃಪ್ತಿಪಡಿಸಿದಾಗ ಉಳಿದ ರೊಟ್ಟಿಯ ತುಂಡುಗಳನ್ನು ಎಷ್ಟು ಬುಟ್ಟಿ ತುಂಬಾ ಒಟ್ಟುಗೂಡಿಸಿದಿರಿ? ನಿಮಗೆ ಜ್ಞಾಪಕವಿಲ್ಲವೇ?" ಎಂದು ಕೇಳಿದರು. "ಹನ್ನೆರಡು ಬುಟ್ಟಿಗಳು" ಎಂದು ಅವರು ಉತ್ತರವಿತ್ತರು. "ಅಲ್ಲದೆ ನಾನು ಏಳು ರೊಟ್ಟಿಗಳಿಂದ ನಾಲ್ಕುಸಾವಿರ ಜನರನ್ನು ತೃಪ್ತಿಪಡಿಸಿದಾಗ ಎಷ್ಟು ಕುಕ್ಕೆ ತಂಬ ರೊಟ್ಟಿಯ ತುಂಡುಗಳನ್ನು ಒಟ್ಟುಗೂಡಿಸಿದಿರಿ?"ಎಂದು ಪನಃ ಅವರನ್ನು ಕೇಳಲು, "ಏಳು ಕುಕ್ಕೆಗಳು," ಎಂದರು. ಆಗ ಯೇಸು, "ಇಷ್ಟಾದರೂ ನಿಮಗಿನ್ನೂ ತಿಳುವಳಿಕೆ ಇಲ್ಲವೆ?" ಎಂದರು.

ಮನಸಿಗೊಂದಿಷ್ಟು : ೪೦೦೦ ಜನರಿಗೆ ಆಹಾರ ಒದಗಿಸಿದನ್ನು ನೋಡಿಯೂ , ಶಿಷ್ಯರು ಮರೆತು ಬಂದ ರೊಟ್ಟಿಗಳ ಬಗ್ಗೆ ಯೋಚಿಸುತ್ತಿದ್ದಾರೆ. ಅದು ಸಹಜವೂ ಆಗಿತ್ತು, ಏಕೆಂದರೆ ಅದು ಅವರ ಮುಂದಿನ ಊಟವಾಗಿತ್ತು. ಆದರೆ ಅವರ ಪೇಚಾಟವನ್ನು ಗಮನಿಸಿದ ಯೇಸು  ಫರಿಸಾಯರ ಅವಿಶ್ವಾಸ ಹಾಗೂ ಹೆರೋದನ ದುಷ್ಟತನವನ್ನು ನೆನಪಿಸುತ್ತಾರೆ. ಅವಿಶ್ವಾಸದಷ್ಟೇ, ದುಷ್ಟತನದಷ್ಟೇ  ಅನವಶ್ಯಕ ಪೇಚಾಟಗಳೂ ನಮ್ಮನ್ನು ದೇವರಿಂದ ದೂರವಾಗಿಸಬಹುದು.     

ಪ್ರಶ್ನೆ : ಕ್ರಿಸ್ತನಿಂದ ನಮ್ಮನ್ನು ದೂರವಾಗಿಸುತ್ತಿರುವ ನಮ್ಮ ಚಿಂತೆ ಪೇಚಾಟಗಳು ಯಾವುವು?

2 comments: