ಮೊದಲನೇ ವಾಚನ: 1 ಪೇತ್ರ 5:1-4
ಯೇಸುವಿನ ಮರಣ - ಯಾತನೆಯನ್ನು ಕಣ್ಣಾರೆ ಕಂಡವನೂ ಮುಂದೆ ಪ್ರತ್ಯಕ್ಷವಾಗುವ ಮಹಿಮೆಯಲ್ಲಿ ಭಾಗಿಯಾಗಲಿರುವವನೂ ಸಭಾಪ್ರಮುಖನೂ ಆದ ನಾನು, ನಿಮ್ಮಲ್ಲಿ ಪ್ರಮುಖರಾದ ಇತರರನ್ನು ಪ್ರೋತ್ಸಾಹಿಸಿ ವಿನಂತಿಸುವುದೇನೆಂದರೆ ನನ್ನ ಜೊತೆಹಿರಿಯರೇ, ದೇವರು ನಿಮಗೆ ವಹಿಸಿಕೊಟ್ಟಿರುವ ಮಂದೆಯನ್ನು ಕಾಯಿರಿ. ಕಡ್ಡಾಯದಿಂದಲ್ಲ. ದೇವರ ಚಿತ್ತಾನುಸಾರ ಅಕ್ಕರೆಯಿಂದ ಕಾಯಿರಿ. ದ್ರವ್ಯದ ದುರಾಶೆಯಿಂದಲ್ಲ, ಸೇವಾಸಕ್ತಿಯಿಂದ ಕಾಯಿರಿ. ನಿಮ್ಮ ಪಾಲನೆಗೆ ಒಳಗಾಗಿರುವವರ ಮೇಲೆ ದರ್ಪದಿಂದ ದೊರೆತನಮಾಡದೆ ದೇವರ ಮುಂದೆ ಆದರ್ಶ ಮಾದರಿಗಳಾಗಿರಿ. ಆಗಮಾತ್ರ, ಪ್ರಧಾನ ಕುರಿಗಾಹಿ ಪ್ರತ್ಯಕ್ಷನಾಗುವಾಗ ಮಲಿನವಾಗದ ಮಹಿಮಾನ್ವಿತ ಜಯಮಾಲೆಯನ್ನು ಪಡೆಯುವಿರಿ.
ಕೀರ್ತನೆ: 23:1-3, 4, 5, 6
ಶ್ಲೋಕ: ಪ್ರಭು ಕುರಿಗಾಹಿಯಾಗಿರಲು ನನಗೆ ಕುಂದುಕೊರತೆಗಳೆಲ್ಲಿಯವು ಎನಗೆ?
ಶುಭಸಂದೇಶ: ಮತ್ತಾಯ 16:13-19

ಮನಸಿಗೊಂದಿಷ್ಟು : ಯೇಸುವಿನಿಂದ ಅದೆಷ್ಟೋ ಬಾರಿ ಛೀಮಾರಿ ಹಾಕಿಸಿಕೊಂಡರೂ, ಪೇತ್ರ ಯೇಸುವಿನ ಮೇಲೆ ತನ್ನ ಗಾಢ ವಿಶ್ವಾಸ ಹಾಗೂ ಪ್ರೀತಿ ಬಿಡಲಿಲ್ಲ. ಯೇಸುವಿಗೂ ಪೇತ್ರನೇ ಮಚ್ಚಿನ ಶಿಷ್ಯನಾಗಿದ್ದ. ಇದರ ಪ್ರತೀಕವೆಂಬಂತೆ ಮುಂದೆ ಮೂರು ಸಲ ತಮ್ಮನ್ನು ನಿರಾಕರಿಸುತ್ತನೆಂದು ತಿಳಿದಿದ್ದರೂ ಯೇಸು ತಮ್ಮ ಧರ್ಮಸಭೆಗೆ ಆತನನ್ನೇ ಅಡಿಪಾಯ ಮಾಡಿಕೊಳ್ಳುತ್ತಾರೆ. ನಮ್ಮ ಕೊರತೆಗಳ ನಡುವೆಯೂ ಯೇಸು ನಮ್ಮನ್ನು ಅಪ್ಪಿಕೊಳ್ಳಬಲ್ಲರು.
ಪ್ರಶ್ನೆ : ಧರ್ಮಸಭೆಯೆಂಬ ಕಟ್ಟಡದ ಸಣ್ಣ ಕಲ್ಲುಗಳಾಗುವಷ್ಟಾದರೂ ಅದರೆಡೆಗೆ ಪ್ರೀತಿ, ವಿಶ್ವಾಸ ನಮ್ಮಲ್ಲಿದೆಯೇ?
No comments:
Post a Comment