ಮೊದಲನೇ ವಾಚನ: ಹಿಬ್ರಿಯರಿಗೆ 12:18-19, 21-24
ನೀವು ಇಸ್ರಯೇಲರಂತೆ ಮುಟ್ಟಬಹುದಾದ ಸೀನಾಯ್ ಬೆಟ್ಟಕ್ಕೆ ಬಂದಿಲ್ಲ. ಅಲ್ಲಿ ಬೆಂಕಿ ಧಗಧಗಿಸುತ್ತಿತ್ತು. ಕಾರ್ಗತ್ತಲು ಕವಿದಿತ್ತು; ಮೋಡದ ಮಬ್ಬು ಮುಸುಕಿತ್ತು. ಬಿರುಗಾಳಿ ಬೀಸುತ್ತಿತ್ತು; ಕಹಳೆಗಳು ಮೊಳಗುತ್ತಿದ್ದವು. ಆಗ ಧ್ವನಿಯೊಂದು ಕೇಳಿಬಂತು. ಅದನ್ನು ಕೇಳಿದವರು, ಇನ್ನೆಂದಿಗೂ ಆ ಧ್ವನಿ ತಮ್ಮೊಂದಿಗೆ ಮತನಾಡುವುದೇ ಬೇಡವೆಂದು ಕೇಳಿಕೊಂಡರು. ಆ ನೋಟ ಎಷ್ಟು ಭಯಂಕರವಾಗಿತೆಂದರೆ, ಮೋಶೆ ಕೂಡ, "ನಾನು ಭಯದಿಂದ ನಡಗುತ್ತಿದ್ದೇನೆ. ಎಂದು ಹೇಳುವಂತಾಯಿತು! ಆದರೆ ನೀವು ಬಂದಿರುವುದು ಸಿಯೋನ್ ಬೆಟ್ಟಕ್ಕೆ, ಜೀವಂತ ದೇವರ ನಗರಕ್ಕೆ; ಸ್ವರ್ಗೀಯ ಜೆರುಸಲೇಮಿಗೆ; ಅಸಂಖ್ಯ ದೇವದೂತರು ಕೂಡಿರುವ ಉತ್ಸವ ಕೂಟಕ್ಕೆ; ಸ್ವರ್ಗದಲ್ಲಿ ದಾಕಲೆಯಾಗಿರುವ ಜೈಷ್ಠಪುತ್ರನ ಸಭೆಗೆ; ನೀವು ಬಂದಿರುವುದು ಸಕಲ ಮಾನವರ ನ್ಯಯ ಮೂರ್ತಿಯಾದ ದೇವರ ಸನ್ನಿಧಿಗೆ; ಸಿದ್ಧಿಗೆ ಬಂದ ಸತ್ಪುರುಷರ ಆತ್ಮಗಳ ಸಮೂಹಕ್ಕೆ ಹೊಸ ಒಡಂಬಡಿಕೆಯ ಮಧ್ಯಸ್ಥರಾದ ಯೇಸುಸ್ವಾಮಿಯ ಬಳಿಗೆ; ಹೇಬೆಲನ ರಕ್ತಕಿಂತಲೂ ಅಮೋಗವಾಗಿ ಮೊರೆಯಿಡುವ ಪ್ರೋಕ್ಷಣಾ ರಕ್ತದ ಬಳಿಗೆ ನೀವು ಬಂದಿದ್ದೀರಿ.
ಕೀರ್ತನೆ: 48:2-3, 3-4, 9, 10-11
ಶ್ಲೋಕ: ನಿನ್ನಚಲ ಪ್ರೀತಿಯನು ದೇವಾ ಸ್ಮರಿಸುವೆವು ನಿನ್ನ ಮಹಾದೇವಾಲಯದೊಳು
ಶುಭಸಂದೇಶ: ಮಾರ್ಕ 6:7-13
ಆನಂತರ ಯೇಸುಸ್ವಾಮಿ ಸತ್ತಮುತ್ತಲಿನ ಊರುಗಳಿಗೆ ಹೋಗಿ ಜನರಿಗೆ ಪ್ರಬೋಧಿಸಿದರು. ಇದಲ್ಲದೆ ಹನ್ನೆರಡು ಮಂದಿ ಶಿಷ್ಯರನ್ನು ಕರೆದು ಅವರಿಗೆ ದೆವ್ವ ಬಿಡಿಸುವ ಅಧಿಕಾರವನ್ನಿತ್ತು, ಅವರನ್ನು ಇಬ್ಬಿಬ್ಬರನ್ನಾಗಿ ಕಳುಹಿಸಿದರು. ಕಳುಹಿಸುವಾಗ, "ಪ್ರಯಾಣ ದಂಡವೊಂದನ್ನು ಹೊರತು ಇನ್ನೇನನ್ನೂ ತೆಗೆದುಕೊಂಡು ಹೋಗಬೇಡಿ. ಬುತ್ತಿ, ಜೋಳಿಗೆ, ಜೇಬಿನಲ್ಲಿ ಹಣ, ಯಾವುದೂ ಬೇಡ. ಪಾದರಕ್ಷೆಯನ್ನು ಮೆಟ್ಟಿಕೊಂಡರೆ ಸಾಕು. ಎರಡು ಅಂಗಿಗಳನ್ನು ತೊಟ್ಟುಕೊಳ್ಳಬೇಡಿ," ಎಂದು ಅಪ್ಪಣೆ ಮಾಡಿದರು. ಇದಲ್ಲದೆ, "ನೀವು ಯಾವುದೇ ಒಂದು ಊರಿಗೆ ಹೋದಾಗ ಆ ಊರನ್ನು ಬಿಡುವವರೆಗೂ ಅತಿಥ್ಯ ನೀಡುವ ಯಾವುದಾದರೂ ಒಂದು ಮನೆಯಲ್ಲೇ ಉಳಿದುಕೊಳ್ಳಿ. ಯಾವುದೇ ಊರಿನ ಜನರು ನಿಮ್ಮನ್ನು ಸ್ವಾಗತಿಸದೆಯೂ ನಿಮ್ಮ ಬೋಧನೆಗೆ ಕಿವಿಗೊಡದೆಯೂ ಹೋದರೆ, ಆ ಊರನ್ನು ಬಿಟ್ಟು ಹೋಗುವಾಗ ನಿಮ್ಮ ಪಾದಕ್ಕೆ ಹತ್ತಿದ ಧೂಳನ್ನು ಕೂಡ ಝಾಡಿಸಿ ಬಿಡಿ. ಅವರ ವಿರುದ್ಧ ಅದು ಸಾಕ್ಷಿಯಾಗಿರಲಿ," ಎಂದರು. ಶಿಷ್ಯರು ಹೊರಟು ಹೋಗಿ, "ಪಶ್ಚತಾಪಪಟ್ಟು ಪಾಪಕ್ಕೆ ವಿಮುಖರಾಗಿರಿ, ದೇವರಿಗೆ ಅಭಿಮುಖರಾಗಿರಿ," ಎಂದು ಜನರಿಗೆ ಸಾರಿ ಹೇಳಿದರು. ದೆವ್ವ ಹಿಡಿದಿದ್ದ ಅನೇಕರಿಂದ ದೆವ್ವಗಳನ್ನು ಹೊರಗಟ್ಟಿದರು. ತೈಲ ಲೇಪನ ಮಾಡಿ ಅನೇಕ ರೋಗಿಗಳನ್ನು ಗುಣಪಡಿಸಿದರು.
ಮನಸಿಗೊಂದಿಷ್ಟು : ಕ್ರಿಸ್ತನ ಹಿಂಬಾಲಕರಿಗೆ ಇರಬೇಕಾದ ಮೂರು ಗುಣಗಳನ್ನು ಇಲ್ಲಿ ಕಾಣಬಹುದು. ದಂಡವನ್ನು ಬಿಟ್ಟು ಏನೂ ತೆಗೆದುಕೊಂಡು ಹೋಗದ ಸರಳತೆ, ದೇವರೆಡೆಗಿನ ಪೂರ್ಣ ವಿಶ್ವಾಸ ಹಾಗೂ ಉದಾರತೆ ಬಯಸದೆ ಸ್ವತ; ಉದಾರಿಗಳಾಗಬೇಕಾದುದು. ಕಷ್ಟವಾದ ಈ ಗುಣಗಳನ್ನು ಒಪ್ಪಿಕೊಂಡು ಹೊರಟ ಆ ಶಿಷ್ಯರ ಬದ್ಧತೆ ಚಿಂತನಾರ್ಹ.
ಪ್ರಶ್ನೆ : ಆ ಮೂರು ಗುಣಗಳು ನಮ್ಮಲ್ಲಿ ಎಷ್ಟು ಪ್ರಮಾಣದಲ್ಲಿದೆ?
ಮನಸಿಗೊಂದಿಷ್ಟು : ಕ್ರಿಸ್ತನ ಹಿಂಬಾಲಕರಿಗೆ ಇರಬೇಕಾದ ಮೂರು ಗುಣಗಳನ್ನು ಇಲ್ಲಿ ಕಾಣಬಹುದು. ದಂಡವನ್ನು ಬಿಟ್ಟು ಏನೂ ತೆಗೆದುಕೊಂಡು ಹೋಗದ ಸರಳತೆ, ದೇವರೆಡೆಗಿನ ಪೂರ್ಣ ವಿಶ್ವಾಸ ಹಾಗೂ ಉದಾರತೆ ಬಯಸದೆ ಸ್ವತ; ಉದಾರಿಗಳಾಗಬೇಕಾದುದು. ಕಷ್ಟವಾದ ಈ ಗುಣಗಳನ್ನು ಒಪ್ಪಿಕೊಂಡು ಹೊರಟ ಆ ಶಿಷ್ಯರ ಬದ್ಧತೆ ಚಿಂತನಾರ್ಹ.
ಪ್ರಶ್ನೆ : ಆ ಮೂರು ಗುಣಗಳು ನಮ್ಮಲ್ಲಿ ಎಷ್ಟು ಪ್ರಮಾಣದಲ್ಲಿದೆ?
No comments:
Post a Comment