ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

19.06.22 - ಸ್ವರ್ಗದತ್ತ ಕಣ್ಣೆತ್ತಿ ನೋಡಿ ದೇವರಿಗೆ ಸ್ತೋತ್ರ ಸಲ್ಲಿಸಿದರು.

ಮೊದಲನೆಯ  ವಾಚನ : ಆದಿಕಾಂಡದಿಂದ  14:18-20

ಸಾಲೇಮಿನ  ಅರಸನೂ  ಪರಾತ್ಪರ  ದೇವರ  ಯಾಜಕನೂ  ಆಗಿದ್ದ  ಮೆಲ್ಕಿಸದೇಕನು  ಸಹ  ಅಲ್ಲಿಗೆ  ಬಂದು  ರೊಟ್ಟಿಯನ್ನು  ದ್ರಾಕ್ಷರಸವನ್ನೂ  ಅರ್ಪಿಸಿ  ಅಬ್ರಹಾಮನಿಗೆ  ಇಂತೆಂದು  ಆಶೀರ್ವಾದ  ಮಾಡಿದನು: ಭೂಮ್ಯಾಕಾಶಗಳನ್ನು  ಉಂಟುಮಾಡಿದ  ಪರಾತ್ಪರ  ದೇವರ  ಆಶೀರ್ವಾದ  ಅಬ್ರಾಹಮನಿಗಿರಲಿನಿನ್ನ  ಶತ್ರುಗಳನ್ನು  ನಿನ್ನ  ಕೈವಶಮಾಡಿದ    ಪರಾತ್ಪರ  ದೇವರಿಗೆ  ಸ್ತೋತ್ರವಾಗಲಿ"  ಅಬ್ರಾಮನು  ತಾನು  ಗೆದ್ದು  ತಂದಿದ್ದ  ಎಲ್ಲ  ವಸ್ತುಗಳಲ್ಲಿ ಹತ್ತನೆಯ  ಒಂದು  ಭಾಗವನ್ನು  ಮೆಲ್ಕಿಸದೇಕನಿಗೆ  ಕೊಟ್ಟನು.

- ಪ್ರಭುವಿನ  ವಾಕ್ಯ

ಕೀರ್ತನೆ : 10:1-4

ಶ್ಲೋಕ:  ಮೆಲ್ಕಿಸದೇಕ್  ಪರಂಪರೆಯ  ಯಾಜಕ  ನೀ  ನಿರುತ.

1.  ನುಡಿದಿಹನು  ಇಂತೆಂದು  ಪ್ರಭು  ನನ್ನೊಡೆಯನಿಗೆ|

ಆಸೀನನಾಗಿರು  ನೀನು  ನನ್ನ  ಬಲಗಡೆಗೆ|

ಹಗೆಗಳನು  ನಿನಗೆ  ಕಾಲ್ಮಣೆಯಾಗಿಸುವವರೆಗೆ||

 

2.  ಸಿಯೋನಿನ  ಹೊರಗು  ವಿಸ್ತರಿಸುವನು|

ಪ್ರಭು  ನಿನ್ನ  ರಾಜ್ಯದಾಳಿಕೆಯನು||

ನಿನ್ನ  ವೈರಿ  ವಿರೋಧಿಗಳ  ನಟ್ಟನಡುವೆಯೇ|

ದೊರೆತನ  ಮಾಡುವೆ  ನೀನು||

 

3.  ಸೇನೆಯನು  ನೀ  ಅಣಿಗೊಳಿಸುವ  ದಿನದೊಳು|

ಸೇರಿಕೊಳ್ವರು  ತಾವಾಗಿಯೇ  ಪ್ರಜೆಗಳು||

ಶುಭ್ರವಸ್ತ್ರಧರಿಸಿ  ನಿನ್ನ  ಯುವಕ  ಯೋಧರು|

ಉದಯಕಾಲದಿಬ್ಬನಿಯಂತೆ  ಇಳಿದು  ಬರುವರು||

ಎರಡನೆಯ  ವಾಚನ : 1ಕೊರಿಂಥಿಯ 11:23-36

ಸಹೋದರರೇನಿಮಗೆ  ಮಾಡಿದ  ಉಪದೇಶವನ್ನು  ನಾನು  ಪ್ರಭುವಿನಿಂದಲೇ  ಪಡೆದೆನು.  ಅದೇನೆಂದರೆಪ್ರಭುಯೇಸುತಮ್ಮನ್ನು  ಹಿಡಿದುಕೊಡಲಾದ    ರಾತ್ರಿರೊಟ್ಟಿಯನ್ನು  ತೆಗೆದುಕೊಂಡು  ದೇವರಿಗೆ  ಕೃತಜ್ಞತಾಸ್ತೋತ್ರವನ್ನು  ಸಲ್ಲಿಸಿಅದನ್ನು  ಮುರಿದು,  " ಇದು  ನಿಮಗಾಗಿ  ಒಪ್ಪಿಸಲಾಗುವ  ನನ್ನ  ಶರೀರಇದನ್ನು  ನನ್ನ  ಸ್ಮರಣೆಗಾಗಿ  ಮಾಡಿ, " ಎಂದರು.  ಅಂತೆಯೇ  ಭೋಜನದ  ಕೊನೆಯಲ್ಲಿ  ಪಾನಪಾತ್ರೆಯನ್ನು  ತೆಗೆದುಕೊಂಡು,  "   ಪಾತ್ರೆ  ನನ್ನ  ರಕ್ತದಿಂದ  ಮುದ್ರಿತವಾದ  ಹೊಸ  ಒಡಂಬಡಿಕೆಇದನ್ನು  ನೀವು  ಪಾನಮಾಡುವಾಗಲೆಲ್ಲಾ  ನನ್ನ  ಸ್ಮರಣೆಗಾಗಿ  ಮಾಡಿರಿ, " ಎಂದರು.  ಎಂದೇನೀವು    ರೊಟ್ಟಿಯನ್ನು  ಭುಜಿಸಿ  ಪಾತ್ರೆಯಿಂದ  ಪಾನಮಾಡುವಾಗಲೆಲ್ಲಾ  ಪ್ರಭು  ಬರುವ  ತನಕ  ಅವರ  ಮರಣವನ್ನು  ಸಾರುತ್ತೀರಿ.

 - ಪ್ರಭುವಿನ  ವಾಕ್ಯ

ಘೋಷಣೆ   : ಯೊವಾನ್ನ 6:51

 ಅಲ್ಲೆಲೂಯ, ಅಲ್ಲೆಲೂಯ! ನಾನೇ  ಸ್ವರ್ಗದಿಂದ  ಇಳಿದುಬಂದ  ಜೀವಂತ  ರೊಟ್ಟಿ  ರೊಟ್ಟಿಯನ್ನು  ತಿಂದವನು  ಚಿರಕಾಲ  ಬಾಳುತ್ತಾನೆ. ಅಲ್ಲೆಲೂಯ!

ಶುಭಸಂದೇಶ  ವಾಚನ : ಲೂಕ 9:11-17

ತಮ್ಮನ್ನು  ಹಿಂಬಾಲಿಸುತ್ತಿದ್ದ  ಜನಸಮೂಹವನ್ನು  ಯೇಸು  ಸ್ವಾಗತಿಸಿದೇವರ  ಸಾಮ್ರಾಜ್ಯದ  ವಿಷಯವಾಗಿ  ಹೇಳಿ  ಅಗತ್ಯವಿದ್ದವರಿಗೆ  ಆರೋಗ್ಯದಾನ  ಮಾಡಿದರು.  ಅಷ್ಟರಲ್ಲಿ  ಸಾಯಂಕಾಲವಾಗುತ್ತಾ  ಬಂದಿತು.  ಹನ್ನೆರಡು  ಮಂದಿ  ಪ್ರೇಷಿತರು  ಯೇಸುವಿನ  ಬಳಿಗೆ  ಬಂದು,  " ಇದು  ನಿರ್ಜನಪ್ರದೇಶಜನರನ್ನು  ಕಳುಹಿಸಿಬಿಡಿ.  ಅವರು  ಸಮೀಪದ  ಊರುಕೇರಿಗಳಿಗೂ  ಹೋಗಿ  ಊಟವಸತಿಯನ್ನು  ಒದಗಿಸಿಕೊಳ್ಳಲಿ, ಎಂದರು.  ಅದಕ್ಕೆ  ಯೇಸು,  " ನೀವೇ  ಅವರಿಗೆ  ಊಟಕ್ಕೆ  ಏನಾದರೂ  ಕೊಡಿ, " ಎಂದರು.  ಅವರು,  " ನಮ್ಮಲ್ಲಿರುವುದು  ಐದು  ರೊಟ್ಟಿ  ಮತ್ತು  ಎರಡು  ಮೀನು  ಮಾತ್ರನಾವು  ಹೋಗಿ  ಇವರೆಲ್ಲರಿಗೆ  ಬೇಕಾಗುವಷ್ಟು  ಊಟ  ಕೊಂಡುಕೊಂಡು  ಬರಬೇಕೇ? " ಎಂದರು.  ಏಕೆಂದರೆ  ಅಲ್ಲಿ  ಗಂಡಸರೇ  ಸುಮಾರು  ಐದು  ಸಾವಿರ  ಮಂದಿ ಇದ್ದರು.  ಆಗ  ಯೇಸು  ಶಿಷ್ಯರಿಗೆ, " ಇವರನ್ನು  ಐವತ್ತು  ಐವತ್ತರಂತೆ  ಪಂಕ್ತಿಯಾಗಿ  ಕೂರಿಸಿರಿ, " ಎಂದು  ಹೇಳಲು  ಅವರು  ಹಾಗೆಯೇ  ಎಲ್ಲರನ್ನು  ಕುಳ್ಳರಿಸಿದರು.  ಅನಂತರ  ಯೇಸು    ಐದು  ರೊಟ್ಟಿಗಳನ್ನೂ  ಎರಡು  ಮೀನುಗಳನ್ನೂ  ತೆಗೆದುಕೊಂಡು  ಸ್ವರ್ಗದತ್ತ  ಕಣ್ಣೆತ್ತಿ  ನೋಡಿ  ದೇವರಿಗೆ  ಸ್ತೋತ್ರ  ಸಲ್ಲಿಸಿದರು.  ತರುವಾಯ  ಅವುಗಳನ್ನು  ಮುರಿದು  ಜನಸಮೂಹಕ್ಕೆ  ಬಡಿಸುವಂತೆ  ಶಿಷ್ಯರಿಗೆ  ಕೊಟ್ಟರು.  ಎಲ್ಲರೂ   ಹೊಟ್ಟೆತುಂಬ  ತಿಂದು  ಸಂತೃಪ್ತರಾದರು.  ಇನ್ನು  ಉಳಿದಿದ್ದ  ತುಂಡುಗಳನ್ನು  ಒಟ್ಟುಗೂಡಿಸಿದಾಗ  ಅವು  ಹನ್ನೆರಡು  ಬುಟ್ಟಿತುಂಬ  ಆದವು.

No comments:

Post a Comment