ಮೊದಲನೇ ವಾಚನ: ಹೊಶೇಯ 14:1-9
ಸರ್ವೇಶ್ವರ ಇಂತೆಂದು ನುಡಿಯುತ್ತಾರೆ: ಇಸ್ರಯೇಲೇ, ನಿನ್ನ ಸರ್ವೇಶ್ವರನಾದ ದೇವರ ಬಳಿಗೆ ಹಿಂದಿರುಗು, ನಿನ್ನ ಪಾಪದ್ರೋಹಗಳೇ ನಿನ್ನ ಪತನಕ್ಕೆ ಕಾರಣ. ಆದುದರಿಂದ ಪಶ್ಚಾತಾಪದ ಮಾತುಗಳೊಂದಿಗೆ ದೇವರಿಗೆ ಅಭಿಮುಖವಾಗಿ, "ಪ್ರಭುವೇ, ನಮ್ಮ ಅಪರಾಧಗಳನ್ನು ತೊಡೆದುಹಾಕು. ನಮ್ಮಲ್ಲಿ ಒಳಿತಾದುದನ್ನೇ ಅಂಗೀಕರಿಸು. ನಿನಗೆ ಸ್ತುತಿಬಲಿಯನ್ನು ಸಮರ್ಪಿಸುವೆವು. ಅಸ್ಸೀರಿಯದಿಂದ ನಮಗೆ ರಕ್ಷಣೆ ದೊರಕದು. ನಾವು ಕಾಳಗದ ಕುದುರೆಗಳ ಮೇಲೆ ಇನ್ನೆಂದೂ ಸವಾರಿ ಮಾಡೆವು. ನಮ್ಮ ಕೈಗಳು ನಿರ್ಮಿಸಿರುವ ವಿಗ್ರಹಗಳನ್ನು ವೀಕ್ಷಿಸಿ, "ನೀವೇ ನಮ್ಮ ದೇವರು" ಎಂದು ಜಪಿಸೆವು. ಓ ದೇವಾ, ದಿಕ್ಕಿಲ್ಲದವರಿಗೆ ಕರುಣೆತೋರಿಸುವವನು ನೀನೇ," ಎಂದ ಹೇಳು. ಸರ್ವೇಶ್ವರ ಇಂತೆನ್ನುತ್ತಾರೆ; ಪರಿಹರಿಸುವೆನು ಜನರ ಭ್ರಷ್ಟತನವನ್ನು, ಪ್ರೀತಿಸುವೆನು ಮನಪೂರ್ವಕವಾಗಿ ಅವರನ್ನು, ತ್ಯಜಿಸಿಬಿಡುವೆನು ಅವರ ಮೇಲಿದ್ದ ಕೋಪವನ್ನು. ಇರುವೆನು ಇಸ್ರಯೇಲಿಗೆ ಇಬ್ಬನಿಯಂತೆ, ಅರಳುವುದು ಆ ನಾಡು ತಾವರೆಯಂತೆ, ಬೇರೂರುವುದು ಲೆಬನೋನಿನ ದೇವದಾರುವೃಕ್ಷದಂತೆ. ಹರಡಿಕೊಳ್ಳುವುದು ಮರದ ರೆಂಬೆಗಳಂತೆ, ಕಂಗೊಳಿಸುವುದು ಚೆಲುವಾದ ಓಲಿವ್ ಮರದಂತೆ. ಅದರ ಪರಿಮಳ ಮನೋಹರ ಲೆಬನೋನಿನ ಲತೆಗಳಂತೆ. ಮರಳಿ ಆಶ್ರಯಿಸುವರು ನನ್ನ ನೆರಳನ್ನು ಆ ಜನತೆ ಆಭಿವೃದ್ಧಿಯಾಗುವರು ಉದ್ಯಾನವನದಂತೆ, ಫಲಪ್ರದವಾಗುವರು ಆ ಜನರು ದ್ರಾಕ್ಷಾಲತೆಯಂತೆ, ಸುಪ್ರಸಿದ್ದ ಅವರ ಕೀರ್ತಿ ಲೆಬನೋನಿನ ದ್ರಾಕ್ಷಾರಸದಂತೆ. ನುಡಿವುದು ಎಫ್ರಯಿಮ್, "ನನಗಿನ್ನು ಬೇಡ ವಿಗ್ರಹಗಳ ಗೊಡವೆ" ಅದಕ್ಕೆ ಒಲಿದು ಕಟಾಕ್ಷಿಸುವವನು ನಾನೇ, ಅದಕ್ಕೆ ಹಚ್ಚ ಹಸಿರಾದ ತುರಾಯಿ ಮರದಂತಿರುವೆ ಅದಕ್ಕೆ ಫಲವನ್ನು ನೀಡುವವನು ನಾನೇ. ಬುದ್ದಿವಂತನು ಈ ಮಾತುಗಳನ್ನು ಗ್ರಹಿಸಿಕೊಳ್ಳಲಿ. ವಿವೇಕಿಯು ಈ ನುಡಿಗಳನ್ನು ಅರ್ಥ ಮಾಡಿಕೊಳ್ಳಲಿ. ಸರ್ವೇಶ್ವರಸ್ವಾಮಿಯ ಮಾರ್ಗಗಳು ನೇರವಾದವುಗಳು. ಸನ್ಮಾರ್ಗಿಗಳು ಅವುಗಳನ್ನು ಕೈಗೊಂಡು ನಡೆಯುವರು. ದುರ್ಮಾರ್ಗಿಗಳು ಅವುಗಳನ್ನು ಕೈಬಿಟ್ಟು ಮುಗ್ಗರಿಸಿ ಬೀಳುವರು.
ಕೀರ್ತನೆ: 81:6-8, 8-9, 10-11, 14, 17
ಶ್ಲೋಕ: ಈಜಿಪ್ಟಿನಿಂದ ಕರೆತಂದ ಸ್ವಾಮಿದೇವನು ನಾನು ನನ್ನ ಜನರೇ ಕಿವಿಗೊಡಿ ನನ್ನ ಬುದ್ಧಿಮಾತಿಗೆ
ಶುಭಸಂದೇಶ: ಮಾರ್ಕ 12:28-34
ಧರ್ಮಶಾಸ್ತ್ರಿ ಒಬ್ಬನು, ಯೇಸುಸ್ವಾಮಿ ಸದ್ದುಕಾಯರಿಗೆ ಸಮರ್ಪಕವಾದ ಉತ್ತರವನ್ನು ಕೊಟ್ಟಿದ್ದನ್ನು ಮೆಚ್ಚಿ, ಅವರ ಬಳಿಗೆ ಬಂದು "ಆಜ್ಞೆಗಳಲ್ಲೆಲ್ಲಾ ಪ್ರಪ್ರಥಮ ಆಜ್ಞೆ ಯಾವುದು?" ಎಂದು ಕೇಳಿದನು. ಯೇಸು ಅವನಿಗೆ ,"ಇಸ್ರಯೇಲ್ ಸಮಾಜವೇ ಕೇಳು; ನಮ್ಮ ದೇವರಾದ ಸರ್ವೇಶ್ವರ ಏಕೈಕ ಸರ್ವೇಶ್ವರ; ನಿನ್ನ ದೇವರಾದ ಸರ್ವೇಶ್ವರನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ನಿನ್ನ ಪೂರ್ಣ ಶಕ್ತಿಯಿಂದಲೂ ಪ್ರೀತಿಸು. ಇದೇ ಪ್ರಪ್ರಥಮ ಆಜ್ಞೆ. ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು. ಇದೇ ಎರಡನೆಯ ಆಜ್ಞೆ ಇವೆರಡು ಆಜ್ಞೆಗಳಿಗಿಂತ ಶ್ರೇಷ್ಟವಾದ ಆಜ್ಞೆ ಬೇರೊಂದೂ ಇಲ್ಲ," ಎಂದರು. ಇದನ್ನು ಕೇಳಿದ ಆ ಧರ್ಮಶಾಸ್ತ್ರಿ " ಬೋಧಕರೇ, ಚೆನ್ನಾಗಿ ಹೇಳಿದಿರಿ. ದೇವರು ಒಬ್ಬರೇ, ಅವರ ಹೊರತು ಬೇರೆ ದೇವರಿಲ್ಲ, ಎಂದು ಹೇಳಿದ್ದು ಸತ್ಯ; ಅವರನ್ನು ನಾವು ಪೂರ್ಣ ಹೃದಯದಿಂದಲೂ ಪೂರ್ಣ ಜ್ಞಾನದಿಂದಲೂ ಪೂರ್ಣ ಶಕ್ತಿಯಿಂದಲೂ ಪ್ರೀತಿಸತಕ್ಕದ್ದು. ಇದಲ್ಲದೆ ನಮ್ಮನ್ನು ನಾವು ಪ್ರೀತಿಸಿಕೊಳ್ಳುವಂತೆಯೇ ನಮ್ಮ ನೆರೆಯವರನ್ನೂ ಪ್ರೀತಿಸತಕ್ಕದ್ದು. ಇವು ಎಲ್ಲಾ ದಹನ ಬಲಿಗಳಿಗಿಂತಲೂ ಯಜ್ಞಯಾಗಾದಿಗಳಿಗಿಂತಲೂ ಎಷ್ಟೋ ಮೇಲಾದುವು," ಎಂದನು. ಅವನ ವಿವೇಕಪೂರ್ಣವಾದ ಉತ್ತರವನ್ನು ಮೆಚ್ಚಿ ಯೇಸು, "ನೀನು ದೇವರ ಸಾಮ್ರಾಜ್ಯದಿಂದ ದೂರವಿಲ್ಲ," ಎಂದರು. ಇದಾದ ಬಳಿಕ ಯೇಸುವನ್ನು ಪ್ರಶ್ನಿಸುವುದಕ್ಕೆ ಯಾರೊಬ್ಬರೂ ಧೈರ್ಯಗೊಳ್ಳಲಿಲ್ಲ.
ಮನಸಿಗೊಂದಿಷ್ಟು : ಪೂರ್ಣ ಹೃದಯ, ಆತ್ಮ, ಮನಸ್ಸು, ಶಕ್ತಿಯಿಂದ ದೇವರನ್ನು ಪ್ರೀತಿಸುವಷ್ಟೇ ಮುಖ್ಯ ಪರರನ್ನು ಪ್ರೀತಿಸಿವುದು ಎನ್ನುತ್ತಾರೆ ಯೇಸು. ಅದರಲ್ಲೂ ನಿನನ್ನು ನೀನೇ ಪ್ರೀತಿಸಿಕೊಳ್ಳುವಷ್ಟು ಎಂದು ಸೇರಿಸುತ್ತಾರೆ. ನಾವು ದೇವರು ಪರರು ಎಂಬ ಈ ತ್ರಿಕೋನದಲ್ಲಿ ನಾವು ನಮನ್ನೇ ಪ್ರೀತಿಸಿಕೊಳ್ಳುವಷ್ಟು ದೇವರನ್ನು ಪ್ರೀತಿಸುತ್ತಿದ್ದೇವೆಯೇ? ಇನ್ನೂ ಪರ ಪ್ರೀತಿಯಂತೂ ದೂರದ ಮಾತೆ.
ಪ್ರಶ್ನೆ : ಪ್ರಮುಖ ಈ ಎರಡು ಆಜ್ಞೆಗಳನ್ನು ಪಾಲಿಸುವುದರಲ್ಲಿ ಸ್ವರ್ಗ ಸಾಮ್ರಾಜ್ಯದಿಂಡ ನಾವೆಷ್ಟು ದೂರ ಅಥವಾ ಹತ್ತಿರ?
ಮನಸಿಗೊಂದಿಷ್ಟು : ಪೂರ್ಣ ಹೃದಯ, ಆತ್ಮ, ಮನಸ್ಸು, ಶಕ್ತಿಯಿಂದ ದೇವರನ್ನು ಪ್ರೀತಿಸುವಷ್ಟೇ ಮುಖ್ಯ ಪರರನ್ನು ಪ್ರೀತಿಸಿವುದು ಎನ್ನುತ್ತಾರೆ ಯೇಸು. ಅದರಲ್ಲೂ ನಿನನ್ನು ನೀನೇ ಪ್ರೀತಿಸಿಕೊಳ್ಳುವಷ್ಟು ಎಂದು ಸೇರಿಸುತ್ತಾರೆ. ನಾವು ದೇವರು ಪರರು ಎಂಬ ಈ ತ್ರಿಕೋನದಲ್ಲಿ ನಾವು ನಮನ್ನೇ ಪ್ರೀತಿಸಿಕೊಳ್ಳುವಷ್ಟು ದೇವರನ್ನು ಪ್ರೀತಿಸುತ್ತಿದ್ದೇವೆಯೇ? ಇನ್ನೂ ಪರ ಪ್ರೀತಿಯಂತೂ ದೂರದ ಮಾತೆ.
ಪ್ರಶ್ನೆ : ಪ್ರಮುಖ ಈ ಎರಡು ಆಜ್ಞೆಗಳನ್ನು ಪಾಲಿಸುವುದರಲ್ಲಿ ಸ್ವರ್ಗ ಸಾಮ್ರಾಜ್ಯದಿಂಡ ನಾವೆಷ್ಟು ದೂರ ಅಥವಾ ಹತ್ತಿರ?
No comments:
Post a Comment