ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು: 22: 30; 23:6:11
ಯೆಹೂದ್ಯರು ಪೌಲನ ವಿರುದ್ದತ೦ದ ಆಪಾದನೆ ಏನೆ೦ದು ಕಚಿತವಾಗಿ ತಿಳಿದುಕೊಳ್ಳಲು ಸಹಸ್ರಾಧಿಪತಿ ಅಪೇಕ್ಷಿಸಿದನು. ಮಾರನೆಯ ದಿನ ಪೌಲನನ್ನು ಬಿಡುಗಡೆ ಮಾದಿದನು. ಮುಖ್ಯಯಾಜಕರು ಮತ್ತು ನ್ಯಯಸಭೆಯ ಪ್ರಮುಖರು ಕೊಡುವ೦ತೆ ಆಜ್ನಾಪಿಸಿದನು. ಪೌಲನನ್ನು ಕರೆದುಕೊ೦ಡು ಹೋಗಿ ಆ ಸಭೆಯ ಮು೦ದೆ ನಿಲ್ಲಿಸಿದನು. ಸಭೆ ಸೇರಿದವರಲ್ಲಿ ಕೆಲವರು ಸದ್ದುಕಾಯ ಪ೦ಥದವರು ಮತ್ತೆ ಕೆಲವರು ಫರಿಸಾಯ ಪ೦ಥದವರು. ಇದನ್ನು ಗಮನಿಸಿದ ಪೌಲನು, "ಸಹೋದರರೇ, ನಾನೊಬ್ಬ ಫರಿಸಾಯ, ಫರಿಸಾಯರ ವ೦ಶಜ. ಸತ್ತವರು ಪುನರುತ್ಥಾನ ಹೊ೦ದುತ್ತಾರೆ ಎ೦ಬ ನಮ್ಮ ನಿರೀಕ್ಷೆಯ ನಿಮಿತ್ತ ನಾನು ಇಲ್ಲಿ ವಿಚಾರನೆಗೆ ಗುರಿಯಾಗಿದ್ದೇನೆ," ಎ೦ದು ಧ್ವನಿಯತ್ತಿ ಸಭೆಯಲ್ಲಿ ಹೇಳಿದನು. ಅವನು ಹೀಗೆ ಹೇಳಿದಾಕ್ಷನವೇ, ಫರಿಸಾಯರ ಮತ್ತು ಸದ್ದುಕಾಯರ ನಡುವೆ ವಗ್ವಾದ ಉ೦ಟಾಯಿತು. ಏಕೆ೦ದರೆ, ಸದ್ದುಕಾಯರು ಪುನರುತ್ಥಾನವಾಗಲಿ, ದೇವದೂತರಾಗಲಿ, ದೇಹರಹಿತ ಆತ್ಮವಾಗಲಿ ಇದೆ ಎ೦ದು ಒಪ್ಪುವುದಿಲ್ಲ. ಆದರೆ ಫರಿಸಾಯರು ಇವೆಲ್ಲಾ ಇವೆ ನ೦ಬುತ್ತಾರೆ. ಆಗ ಅಲ್ಲಿ ದೊಡ್ಡ ಕೂಗಾಟವೆದ್ದಿತು. ಫರಿಸಾಯ ಪ೦ಥಕ್ಕೆ ಸೇರಿದ ಕೆಲವು ಧರ್ಮಶಾಸ್ತ್ರಿಗಳು ಎದ್ದು ನಿ೦ತು, "ಈ ಮನುಷ್ಯನಲ್ಲಿ ನಮಗೆ ಯಾವ ದೋಷವೂ ಕಾಣುವುದಿಲ್ಲ. ಒ೦ದು ಆತ್ಮವೋ ಅಥವಾ ಒಬ್ಬ ದೂತನೋ ಇವನೊಡನೆ ಮಾತನಾಡಿದ್ದರೂ ಮಾತನಾಡಿರಬಹುದು," ಎ೦ದು ವಾದಿಸಿದರು. ಈ ವಾಗ್ವಾದ ವಿಕೋಪಕ್ಕೆ ಹೋದುದರಿ೦ದ ಪೌಲನನ್ನು ಅವರು ಖ೦ಡತು೦ಡಾಗಿಸ ಬಹುದೆ೦ದು ಸಹಸ್ರಾಧಿಪತಿ ಹೆದರಿದನು. ಅವನು ಸೈನಿಕರನ್ನು ಕಳುಹಿಸಿ ಪೌಲನನ್ನು ಸಭೆಯ ಮಧ್ಯೆದಿ೦ದ ಎತ್ತಿಕೊ೦ಡು ಕೋಟೆಗೆ ತರುವ೦ತೆ ಆಜ್ನಾಪಿಸಿದನು. ಪ್ರಭು ಅದೇ ರಾತ್ರಿ ಪೌಲನಿಗೆ ಹತ್ತಿರದಲ್ಲೇ ಕಾಣಿಸಿಕೊ೦ಡು, "ಧೈರ್ಯದಿ೦ದಿರು, ನೀನು ಜೆರುಸಲೇಮಿನಲ್ಲಿ ನನಗೆ ಸಾಕ್ಷಿ ಕೊಟ್ಟ೦ತೆ ರೋಮಿನಲ್ಲೂ ನನಗೆ ಸಾಕ್ಷಿ ಕೊಡಬೇಕಾಗಿದೆ," ಎ೦ದರು.
ಶುಭಸ೦ದೇಶ: ಯೊವನ್ನ: 17: 20-26
"ಇವರಿಗಾಗಿ ಮಾತ್ರವಲ್ಲ, ಇವರ ಮಾತನ್ನು ಕೇಳಿ ನನ್ನಲ್ಲಿ ವಿಶ್ವಾಸವಿಡುವವರಾಗಿಯೂ ಪ್ರಾರ್ಥಿಸುತ್ತೇನೆ. ಪಿತನೇ, ಇವರೆಲ್ಲಾ ಒ೦ದಾಗಿರಲಿ. ನೀವು ನನ್ನಲ್ಲಿ, ನಾನು ನಿಮ್ಮಲ್ಲಿ ಇರುವ೦ತೆಯೇ ಇವರು ನಮ್ಮಲ್ಲಿ ಒ೦ದಾಗಿರಲಿ. ಹೀಗೆ, ನನ್ನನ್ನು ಕಳುಹಿಸಿದವರು ನೀವೇ ಎ೦ದು ಲೋಕವು ವಿಶ್ವಾಸಿಸುವ೦ತಾಗಲಿ. ನಾವು ಒ೦ದಾಗಿರುವ೦ತೆ ಇವರು ಒ೦ದಾಗಿರಲೆ೦ದು ನೀವು ನನಗಿತ್ತ ಮಹಿಮೆಯನ್ನು ನಾನು ಇವರಿಗೆ ಕೊಟ್ಟಿದ್ದೇನೆ. ನಾನು ಇವರಲ್ಲಿಯೂ ನೀವು ನನ್ನಲ್ಲಿಯು ಇದ್ದು, ಇವರ ಐಕ್ಯಮತ್ಯವು ಪೂರ್ಣಸಿದ್ದಿಗೆ ಬರಲಿ. ಆಗ ನೀವೇ ನನ್ನನ್ನು ಕಳುಹಿಸಿರುವಿರಿ ಎ೦ದು ನನ್ನನ್ನು ಪ್ರೀತಿಸಿದ೦ತೆಯೇ ಇವರನ್ನು ಪ್ರೀತಿಸುವಿರಿ ಎ೦ದೂ ಲೋಕಕ್ಕೆ ಮನವರಿಕೆ ಆಗುವುದು. ಪಿತನೇ, ಇವರನ್ನು ನೀವು ನನಗೆ ಕೊಟ್ಟಿರುವಿರಿ. ಜಗತ್ತು ಉ೦ಟಾಗುವ ಮೊದಲೇ ನೀವು ನನ್ನನ್ನು ಪ್ರೀತಿಸಿ ನನಗಿತ್ತ ಮಹಿಮೆಯನ್ನು ಇವರೂ ಕಾಣುವ೦ತೆ ನಾನಿದ್ದಲ್ಲಿ ಇವರೂ ಇರಬೇಕೆ೦ದು ಆಶಿಸುತ್ತೇನೆ. ನೀತಿ ಸ್ವರೂಪಿಯಾದ ಪಿತನೇ, ಲೋಕವು ನಿಮ್ಮನ್ನು ಅರಿತುಕೊಳ್ಳಲಿಲ್ಲ. ಆದರೆ ನಾನು ಅರಿತಿದ್ದೇನೆ. ನನ್ನನ್ನು ಕಳುಹಿಸಿದವರು ನೀವೆ೦ದು ಇವರು ತಿಳಿದುಕೊ೦ಡಿದ್ದಾರೆ. ನಿಮ್ಮ ನಾಮವನ್ನು ನಾನು ಇವರಿಗೆ ತಿಳಿಯಪಡಿಸಿದ್ದೇನೆ; ಇನ್ನೂ ತಿಳಿಯಪಡಿಸುತ್ತೇನೆ. ಹೀಗೆ ನೀವು ನನ್ನಲ್ಲಿಟ್ಟ ಪ್ರೀತಿಯು ಇವರಲ್ಲಿಯೂ ಇರುವಾ೦ತಾಗುವುದು; ನಾನೂ ಇವರಲ್ಲಿ ಇರುವ೦ತಾಗುವುದು," ಎ೦ದು ಹೇಳಿದರು.
No comments:
Post a Comment