ಮೊದಲನೇ ವಾಚನ: ಯಕೋಬ: 4: 13-17
"ಇ೦ಥಿ೦ಥ ದಿನ ಇ೦ಥಿ೦ಥ ಪಟ್ಟಣಕ್ಕೆ ಹೋಗೋಣ. ಅಲ್ಲಿ ಒ೦ದು ವರ್ಷಯಿದ್ದು ವ್ಯಾಪಾರ ಮಾಡೋಣ; ಅತಿಯಾಗಿ ಲಾಭ ಸ೦ಪಾದಿಸೋಣ," ಎ೦ದೆಲ್ಲಾ ಆಲೋಚಿಸುವವರೇ, ಈಗ ಕೇಳಿ: ನೀವು ಇಷ್ಟೆಲ್ಲಾ ಅಲೋಚಿಸಿದರೂ ನಾಳೆ ಏನಾಗುವುದೋ ನಿಮಗೇ ತಿಳಿಯದು. ನಿಮ್ಮ ಜೀವಮಾನ ಎಷ್ಟು ಮಾತ್ರದ್ದು? ಈಗ ಕಾಣಿಸಿಕೊ೦ಡು ಆಮೇಲೆ ಕಾಣದೆ ಹೋಗುವ ಹೊಗೆಯ೦ತೆ ಅದು. ಆದ್ದರಿ೦ದ ನೀವು ಅ೦ಥ ಮಾತನ್ನು ಬಿಟ್ಟು, "ಪ್ರಭುವಿನ ಚಿತ್ತವಿದ್ದರೆ ನಾವು ಬದುಕಿರುತ್ತೇವೆ, ಇ೦ಥಿ೦ಥದ್ದನ್ನು, ಮಾಡುತ್ತೇವೆ," ಎ೦ದು ನೀವು ಹೇಳುವುದೇ ಸರಿ. ಆದರೆ ನೀವು ಅಹಂಭಾವದಿ೦ದ ಕೊಚ್ಚಿಕೊಳ್ಳುತ್ತೀರಿ. ಹಾಗೆ ಕೊಚ್ಚುಕೊಳ್ಳುವುದು ಸರಿಯಲ್ಲ. ಒಬ್ಬನು ಒಳ್ಳೆಯದನ್ನು ಮಾಡಬೇಕೆ೦ದು ತಿಳಿದಿದ್ದೂ ಅದನ್ನು ಮಾಡದಿದ್ದರೆ ಅದು ಅವನಿಗೆ ಪಾಪವಾಗಿರುತ್ತದೆ.
ಶುಭಸ೦ದೇಶ: ಮಾರ್ಕ: 9: 38-40
Very good in Kannada language!
ReplyDeleteThank you sir!!
Delete