ಮೊದಲನೇ ವಾಚನ - ಪ್ರವಾದಿ ಹೊಶೆಯನ ಗ್ರಂಥದಿಂದ ವಾಚನ 14: 1-9
ಇಸ್ರಯೇಲ್, ನಿನ್ನ ಸರ್ವೇಶ್ವರನಾದ
ದೇವರ ಬಳಿಗೆ ಹಿಂದಿರುಗು. ನಿನ್ನ ಪಾಪದ್ರೋಹಗಳೇ ನಿನ್ನ ಪತನಕ್ಕೆ ಕಾರಣ.
ಆದುದರಿಂದ ಪಶ್ಚಾತ್ತಾಪದ ಮಾತುಗಳೊಂದಿಗೆ ದೇವರಿಗೆ ಅಭಿಮುಖವಾಗಿ, “ಪ್ರಭುವೇ, ನಮ್ಮ ಅಪರಾಧವನ್ನು ತೊಡೆದುಹಾಕು. ನಮ್ಮಲ್ಲಿ ಒಳಿತಾದುದನ್ನೇ ಅಂಗೀಕರಿಸು. ನಿನಗೆ ಸ್ತುಬಲಿಯನ್ನು
ಸಮರ್ಪಿಸುವೆವು. ಅಸ್ಸೀರಿಯದಿಂದ ನಮಗೆ ರಕ್ಷಣೆ ದೊರಕದು. ನಾವು ಕಾಳಗದ ಕುದುರೆಗಳ ಮೇಲೆ ಇನ್ನೆಂದೂ ಸವಾರಿ ಮಾಡೆವು. ನಮ್ಮ
ಕೈಗಳು ನಿರ್ಮಿಸಿರುವ ವಿಗ್ರಹಗಳನ್ನು ವೀಕ್ಷಿಸಿ, ‘ನೀವೇ ನಮ್ಮ ದೇವರು’
ಎಂದು ಜಪಿಸೆವು. ಓ ದೇವಾ, ದಿಕ್ಕಿಲ್ಲದವರಿಗೆ ಕರುಣೆ ತೋರಿಸುವವನು ನೀನೇ,’’ ಎಂದು ಹೇಳು.
ಸರ್ವೇಶ್ವರ ಇಂತೆನ್ನುತ್ತಾರೆ :
ಪರಿಹರಿಸುವೆನು ಜನರ ಭ್ರಷ್ಟನವನು
ಪ್ರೀತಿಸುವೆನು ಮನಪೂರ್ವಕವಾಗಿ ಅವರನು
ತ್ಯಜಿಸಿಬಿಡುವೆನು ಅವರ ಮೇಲಿದ್ದ ಕೋಪವನು.
ಇರುವೆನು ಇಸ್ರಯೇಲಿಗೆ ಇಬ್ಬನಿಯಂತೆ
ಅರಳುವುದು ಆ ನಾಡು ತಾವರೆಯಂತೆ
ಬೇರೂರುವುದು ಲೆಬನೋನಿನ ದೇವದಾರು ವೃಕ್ಷದಂತೆ.
ಹರಡಿಕೊಳ್ಳುವುದು ಮರದ ರೆಂಬೆಗಳಂತೆ
ಅದರ ಪರಿಮಳ ಮನೋಹರ ಲರಬನೋನಿನ ಲತೆಗಳಂತೆ.
ಮರಳಿ ಆಶ್ರಯಿಸುವರು ನನ್ನ ನೆರಳನ್ನು
ಆ ಜನತೆ
ಅಭಿವೃದ್ಧಿಯಾಗುವರು ಉದ್ಯಾನವನದಂತೆ
ಫಲಪ್ರದವಾಗುವರು ಆ ಜನರು ದ್ರಾಕ್ಷಾಲತೆಯಂತೆ
ಸುಪ್ರಸಿದ್ದ ಅವರ ಕೀರ್ತಿ ಲೆಬನೋನಿನ
ದ್ರಾಕ್ಷಾರಸದಂತೆ.
ನುಡಿವುದು ಎಫ್ರಯಿಮ್, ‘ನನಗಿನ್ನು ಬೇಡ
ವಿಗ್ರಹಗಳ ಗೊಡವೆ’
ಅದಕ್ಕೆ ಒಲಿದು ಕಟಾಕ್ಷಿಸುವವನು ನಾನೇ
ಅದಕ್ಕೆ ಹಚ್ಚಹಸಿರಾದ ತುರಾಯಿ ಮರದಂತಿರುವೆ
ಅದಕ್ಕೆ ಫಲವನ್ನು ನೀಡುವವನು ನಾನೇ.
ಬುದ್ಧಿವಂತನು ಈ ಮಾತುಗಳನ್ನು ಗ್ರಹಿಸಿಕೊಳ್ಳಲಿ.
ವಿವೇಕಿಯು ಈ ನುಡಿಗಳನ್ನು ಅರ್ಥ ಮಾಡಿಕೊಳ್ಳಲಿ.
ಸರ್ವೇಶ್ವರಸ್ವಾಮಿಯ ಮಾರ್ಗಗಳು ನೇರವಾದವುಗಳು.
ಸನ್ಮಾರ್ಗಿಗಳು ಅವುಗಳನ್ನು ಕೈಗೊಂಡು
ನಡೆಯುವರು.
ದುರ್ಮಾರ್ಗಿಗಳು ಅವುಗಳನ್ನು ಕೈಬಿಟ್ಟು
ಮುಗ್ಗರಿಸಿ ಬೀಳುವರು.’’
ಕೀರ್ತನೆ 51:1-2- 6-7, 10-11,12-14
ಶ್ಲೋಕ : ನಿನ್ನ ಸತ್ಯಸಂಧತೆಯನು ಸಾರುವೆ
ಮುಕ್ತಕಂಠದಿಂದ |
ಸಂತ ಮತ್ತಾಯನು ಬರೆದ ಶುಭಸಂದೇಶ 10: 16-23

No comments:
Post a Comment