ಪ್ರವಾದಿ ಯೆಶಾಯನ ಗ್ರಂಥದಿಂದ ವಾಚನ 26: 7-9, 12, 16-19
ನಡೆವೆವು ನಾವು, ಸರ್ವೇಶ್ವರಾ,
ನಿನ್ನ ನೀತಿ ಮಾರ್ಗದೊಳು
ನಿನ್ನ ನೀತಿ ಮಾರ್ಗದೊಳು
ಕಾದಿರುವೆವು ನಿನಗಾಗಿ
ಭರವಸೆಯಿಟ್ಟು ನಿನ್ನೊಳು;
ಭರವಸೆಯಿಟ್ಟು ನಿನ್ನೊಳು;
ನಿನ್ನ ನಾಮಸ್ಮರಣೆಯ ಬಯಕೆ
ನಮ್ಮ ಅಂತರಾತ್ಮದೊಳು.
ನಮ್ಮ ಅಂತರಾತ್ಮದೊಳು.
ಹಾರೈಸಿದೆ ಎನ್ನಾತ್ಮ
ನಿನ್ನನು ಇರುಳೊಳು,
ಅರಸಿತೆನ್ನ ಮನ
ನಿನ್ನನು ಮುಂಜಾನೆಯೊಳು.
ನಿನ್ನನು ಇರುಳೊಳು,
ಅರಸಿತೆನ್ನ ಮನ
ನಿನ್ನನು ಮುಂಜಾನೆಯೊಳು.
ನೀನೀಯುವಾಗ ಜಗಕೆ
ನ್ಯಾಯ ತೀರ್ಪನು,
ನ್ಯಾಯ ತೀರ್ಪನು,
ಕಲಿತುಕೊಳ್ಳುವರು ಭೂನಿವಾಸಿಗಳು ನ್ಯಾಯನೀತಿಯನು. ಸರ್ವೇಶ್ವರಾ,
ನೀಡೆಮಗೆ ಶಾಂತಿ ಸಮಾಧಾನ,
ನಮ್ಮ ಸತ್ಕಾರ್ಯಗಳೆಲ್ಲವೂ
ನಿನ್ನ ಕೃಪಾಸಾಧನ.
ನಮ್ಮ ಸತ್ಕಾರ್ಯಗಳೆಲ್ಲವೂ
ನಿನ್ನ ಕೃಪಾಸಾಧನ.
ನಿನ್ನಾಶ್ರಯ ಕೋರಿದರು, ಸರ್ವೇಶ್ವರಾ,
ಜನ ಇಕ್ಕಟ್ಟಿಗೆ ಸಿಕ್ಕಿದಾಗ
ಜನ ಇಕ್ಕಟ್ಟಿಗೆ ಸಿಕ್ಕಿದಾಗ
ಪ್ರಾರ್ಥನೆ ಗೈದರವರು ನಿನ್ನ ಶಿಕ್ಷೆಗೆ ಗುರಿಯಾದಾಗ.
ಹೆರಿಗೆ ಹತ್ತಿರವಾದ ಗರ್ಭಿಣಿ ಚೀರುವಂತೆ
ಯಾತನೆಪಡುವ ಬೇನೆಯಿಂದಾಕೆ ಅರಚುವಂತೆ
ಮಾಡಿರುವೆ, ಸರ್ವೇಶ್ವರಾ, ನಿನಗಾಗಿ ನಾವು ಮೊರೆಯಿಡುವಂತೆ.
ಪ್ರಸವ ವೇದನೆಪಟ್ಟು ನಾವು ಹಡೆದದ್ದು ಗಾಳಿಯನ್ನೆ,
ಆಗಲಿಲ್ಲ ಜಗಕೆ ನಮ್ಮಿಂದ ಯಾವ ರಕ್ಷಣೆ
ನೀಡಲಿಲ್ಲ ನಾವು ಜನ್ಮ ಲೋಕನಿವಾಸಿಗಳಿಗೆ.
ಬದುಕುವರು ನಿಧನರಾದ ನಮ್ಮ ಜನರು,
ಜೀವದಿಂದೇಳುವುದು ನಮ್ಮವರ ಶವಗಳು.
ಜೀವದಿಂದೇಳುವುದು ನಮ್ಮವರ ಶವಗಳು.
ಎದ್ದು ಹರ್ಷಧ್ವನಿಗೈಯಲಿ ನೆಲದಲ್ಲಿ ಬಿದ್ದಿರುವವರು.
ನೀ ಸುರಿಸುವ ಇಬ್ಬನಿ ಜ್ಯೋತಿರ್ಮಯ, ಆದುದರಿಂದ
ಸತ್ತವರು ಪುನರುತ್ಥಾನ ಹೊಂದುವರು ನೆಲದಿಂದ.
ಕೀರ್ತನೆ 102 : 12-14, 15-17
ಶ್ಲೋಕ : ದೃಷ್ಟಿಸಿದನು ಪ್ರಭು ತನ್ನ ಉನ್ನತ ಪವಿತ್ರ ಸ್ಥಾನದಿಂದ
ಸಂತ ಮತ್ತಾಯರು ಬರೆದ ಶುಭಸಂದೇಶದಿಂದ ವಾಚನ 11: 28-30
No comments:
Post a Comment