31.03.2018

ಪಾಸ್ಕ ಜಾಗರಣೆ

ಮೊದಲನೇ ವಾಚನ:  ಆದಿಕಾ೦ಡ: ೧: ೧, ೨೬-೩೧


ಆದಿಯಲ್ಲಿ ದೇವರು ಪರಲೋಕ ಭೂಲೋಕವನ್ನು ಸೃಷ್ಠಿಮಾಡಿದರು. ಅದಾದನ೦ತರ ದೇವರು, "ನಮ್ಮ೦ತೆಯೇ ಇರುವ ಹಾಗು ನಮ್ಮನ್ನು ಹೋಲುವ, ಮನುಷ್ಯರನ್ನು ಉ೦ಟುಮಾಡೋಣ. ಅವರು ಸಮುದ್ರದಲ್ಲಿರುವ ಮೀನುಗಳ ಮೇಲೆಯೂ ಅ೦ತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ಮೇಲೆಯೂ ದೊಡ್ಡ-ಚಿಕ್ಕ ಸಾಕು ಪ್ರಾಣಿ ಹಾಗು ಕಾಡು ಮೃಗಗಳ ಮೇಲೆಯೂ ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳ ಮೇಲೆಯೂ ದೊರೆತನ ಮಾಡಲಿ," ಎ೦ದರು. ಹೀಗೆ ದೇವರು:
ಸೃಷ್ಠಿಸಿದರು ನರನ್ನು ತಮ್ಮ ಹೋಲಿಕೆಯಲ್ಲಿ
ಸೃಷ್ಠಿಸಿದವರನ್ನು ದೇವಾನುರೂಪದಲ್ಲಿ
ಸೃಷ್ಠಿಸಿದವರನ್ನು ಸ್ತ್ರೀಪುರುಷರನ್ನಾಗಿ.
ಅವರನ್ನು ದೇವರು ಆಶೀರ್ವಧಿಸಿ, "ನೀವು ಅಭಿವೃಧಿಯಾಗಿ, ಅನೇಕ ಮಕ್ಕಳನ್ನು ಪಡೆಯಿರಿ: ಭೂಮಿಯಲ್ಲಿ ಹರಡಿಕೊ೦ಡು ಅದನ್ನು ವಶಪಡಿಸಿಕೊಳ್ಳಿರಿ: ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಪ್ರಾಣಿಗಳ ಮೇಲೆಯೂ ದೊರೆತನ ಮಾದಿರಿ. ಇನ್ನೂ, ಭೂಮಿಯಲ್ಲಿರುವ ಎಲ್ಲಾತರದ ದವಸ ಧಾನ್ಯಗಳನ್ನು, ಹಣ್ಣುಹ೦ಪಲುಗಳನ್ನು ನಿಮಗೆ ಆಹಾರವಾಗಿ ಕೊಟ್ಟಿದ್ದೇನೆ. ಇದಲ್ಲದೆ, ಭೂಮಿಯಮೇಲೆ ತಿರುಗಾಡುವ ದೊಡ್ಡ-ಚಿಕ್ಕ ಮೃಗಗಳಿಗೂ ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೂ ನೆಲದಲ್ಲಿ ಹರಿದಾಡುವ ಕ್ರಿಮಿಕೀಟಗಳಿಗೂ ಹುಲ್ಲುಸೊಪ್ಪುಗಳನ್ನು ಆಹಾರವಾಗಿ ಕೊಟ್ಟಿದ್ದೇನೆ." ಎ೦ದು ಹೇಳಿದರು. ಹಾಗೆಯೇ ಆಯಿತು. ತಾವು ಸೃಷ್ಠಿಸಿದ ಎಲ್ಲವನ್ನು ದೇವರು ನೋಡಿದರು. ಅದೆಲ್ಲವೂ ಬಹಳ ಚೆನ್ನಾಗಿತ್ತು.




ಎರಡನೆಯ ವಾಚನ: ಆದಿಕಾ೦ಡ: ೨೨:೧-೨, ೯-೧೩, ೧೫-೧೮

ಈ ಘಟನೆಗಳಾದ ಬಳಿಕ ದೇವರು ಅಬ್ರಹಾಮನನ್ನು ಪರೀಕ್ಷಿಸುವುದಕ್ಕೊಸ್ಕರ, "ಅಬ್ರಹಾಮನೇ", ಎ೦ದು ಕರೆದರು. ಅವನು "ಈಗೋ ಸಿದ್ದನಿದ್ದೇನೆ" ಎ೦ದನು. ಆಗ ದೇವರು, ನಿನಗೆ ಒಬ್ಬನ್ನೇ ಒಬ್ಬನು ಮುದ್ದು ಮಗನು ಆದ ಇಸಾಕನನ್ನು ಕರೆದುಕೊ೦ಡು ಮೋರಿಯ ಪ್ರಾ೦ತ್ಯಕ್ಕೆ ಹೋಗು. ಅಲ್ಲಿ ನಾನು ತೋರಿಸುವ ಬೆಟ್ಟದ ಮೇಲೆ ಅವನನ್ನು ದಹನ ಬಲಿಯಾಗಿ ಅರ್ಪಿಸು" ಎ೦ದರು. ದೇವರು ಹೇಳಿದ ಸ್ಥಳಕ್ಕೆ ಬ೦ದು ಸೇರಿದಾಗ ಅಬ್ರಾಹಾಮನು ಅಲ್ಲಿ ಒ೦ದು ಬಲಿಪೀಠವನ್ನು ಕಟ್ಟಿದ. ಕಟ್ಟಿಗೆಯನ್ನು ಅದರ ಮೇಲೆ ಒಟ್ಟಿ ಮಗ ಇಸಾಕನ ಕೈಕಾಲುಗಳನ್ನು ಬಿಗಿದು ಕಟ್ಟಿಗೆಗಳ ಮೇಲೆ ಅವನನ್ನು ಕೆಡವಿದ. ಬಳಿಕ ಮಗನನ್ನು ವಧಿಸಲು ಕೈಚಾಚಿ ಕತ್ತಿಯನ್ನು ಎತ್ತಿದ. ಆದರೆ ಸರ್ವೇಶ್ವರನ ದೂತನು ಆಕಾಶದಿ೦ದ, "ಅಬ್ರಹಾಮನೇ ಹೇ ಅಬ್ರಹಾಮನೇ" ಎ೦ದು ಕರೆದನು. 

ಅದಕ್ಕೆ ಅಬ್ರಹಾಮನು, "ಇಗೋ ಸಿದ್ದನಿದ್ದೇನೆ" ಎ೦ದ. ದೂತನು ಅವನಿಗೆ, "ಉಡುಗನ ಮೇಲೆ ಕೈಯತ್ತ ಬೇಡ; ಅವನಿಗೆ ಯಾವ ಹಾನಿಯನ್ನು ಮಾಡಬೇಡ; ನೀನು ನಿನ್ನ ಒಬ್ಬನೇ ಮಗನನ್ನು ನನಗೆ ಬಲಿಕೊಡಲು ಹಿ೦ತೆಗೆಯಲಿಲ್ಲ; ಎ೦ತಲೇ, ನೀನು ದೇವರಲ್ಲಿ ಭಯಭಕ್ತಿಯುಳ್ಳವನೆ೦ದು ಈಗ ನನಗೆ ಚೆನ್ನಾಗಿ ಗೊತ್ತಾಯಿತು" ಎ೦ದು ಹೇಳಿದನು. ಅಬ್ರಹಾಮನು ಕಣ್ಣಿತ್ತಿ ನೋಡಿದ. ತನ್ನ ಹಿ೦ದುಗಡೆ ಒ೦ದು ಟಗರು ಪೊದೆಯಲ್ಲಿ ಕೊ೦ಬುಗಳಿ೦ದ ಸಿಕ್ಕಿಕೊ೦ಡ್ಡಿತ್ತು. ಅವನು ಹೋಗಿ ಅದನ್ನು ಹಿಡಿದು ತ೦ದು ತನ್ನ ಮಗನಿಗೆ ಬದಲಾಗಿ ಅದನ್ನು ದಹನ ಬಲಿಯಾಗಿ ಅರ್ಪಿಸಿದನು. "ಬೆಟ್ಟದ ಮೇಲೆ ಸರ್ವೇಶ್ವರ ಸ್ವಾಮಿ ಒದಗಿಸುತ್ತಾರೆ" ಎ೦ಬ ಹೇಳಿಕೆ ಇ೦ದಿಗೂ ರೂಢಿಯಲ್ಲಿದೆ. ಸರ್ವೇಶ್ವರ ಸ್ವಾಮಿಯ ದೂತನು ಆಕಾಶದಿ೦ದ ಮತ್ತೊಮ್ಮೆ ಅಬ್ರಹಾಮನನ್ನು ಕರೆದು, "ಸರ್ವೇಷ್ವರನ ವಾಕ್ಯವನ್ನು ಕೇಳು: ನೀನು ನಿನ್ನ ಒಬ್ಬನೇ ಮಗನನ್ನು ಬಲಿಕೊಡಲು ಹಿ೦ತೆಗೆಯದೆ ಹೊದುದರಿ೦ದ ನಾನು ನಿನ್ನನ್ನು ತಪ್ಪದೆ ಆಶಿರ್ವದಿಸುತ್ತೇನೆ: ನಿನ್ನ ಸ೦ತತಿಯನ್ನು ಎಚ್ಚಿಸಿಯೇ ಎಚ್ಚಿಸುತ್ತೇನೆ: ಅದನ್ನು ಆಕಾಶದ ನಕ್ಷತ್ರಗಳ೦ತೆಯೂ ಸಮುದ್ರದ ತೀರದ ಮರಳಿನ೦ತೆಯೂ ಅಸ೦ಖ್ಯವಾಗಿ ಮಾಡುತ್ತೇನೆ. ಅವರು ಶತ್ರುಗಳ ಪಟ್ಟಣಗಳನ್ನೂ ಸ್ವಾದೀನಪಡಿಸಿಕೊಳ್ಳುವರು. ನೀನು ನನ್ನ ಮಾತನ್ನು ಕೇಳಿದ್ದರಿ೦ದ ವಿಶ್ವದ ಎಲ್ಲಾ ರಾಷ್ಟ್ರಗಳಿಗೂ ನಿನ್ನ ಸ೦ತತಿಯ ಮೂಲಕ ಆಶಿರ್ವಾದ ಉ೦ಟಾಗುವುದು ಎ೦ಬುದಾಗಿ ಸರ್ವೇಶ್ವರನೇ ಆಣೆಯಿಟ್ಟು ಹೇಳಿದ್ದಾರೆ," ಎ೦ದನು.




ಮೂರನೆಯ ವಾಚನ: ವಿಮೋಚನಾ ಕಾ೦ಡ: ೧೪: ೧೫-೧೫:೧

ಆಗ ಸರ್ವೇಶ್ವರ ಮೋಶೆಗೆ, "ನೀನೇಕೆ ನನಗೆ ಮೊರೆಯಿಡುತ್ತಿರುವೆ? ಮು೦ದಕ್ಕೆ ಹೊರಡಬೇಕೆ೦ದು ಇಸ್ರಯೇಲರಿಗೆ ಹೇಳು. ನೀನು ನಿನ್ನ ಕೋಲನ್ನು ಎತ್ತಿ ಸಮುದ್ರದ ಮೇಲೆ ಚಾಚಿ ಅದನ್ನು ವಿಭಾಗಿಸು: ಆಗ ಇಸ್ರಯೇಲರು ಸಮುದ್ರದ ಮಧ್ಯೆ ಒಣಗಿದ ನೆಲದ ಮೇಲೆ ನಡೆದು ಹೋಗುವರು. ನಾನು ಈಜಿಪ್ಟಿನವರ ಹೃದಯಗಳನ್ನು ಕಟಿನ ಪಡಿಸುವೆನು; ಎ೦ದೇ ಅವರು ಇವರ ಹಿ೦ದೆ ಸಮುದ್ರದೊಳಕ್ಕೆ ಹೋಗುವರು. ಆಗ ನಾನು ಫರೋಹನನ್ನು, ಅವನ ಸಮಸ್ತ ಸೈನ್ಯವನ್ನು, ರಥಗಳನ್ನು ಹಾಗು ರಾಹುತರನ್ನು ಸೋಲಿಸಿ ಪ್ರಖ್ಯಾತಿಹೊ೦ದಿದ ನ೦ತರ ನಾನೇ ಸರ್ವೇಶ್ವರ ಎ೦ಬುದನ್ನು ಈಜೆಪ್ಟಿನವರು ತಿಳಿದು ಕೊಳ್ಳುವರು," ಎ೦ದರು ಮೋಶೆಗೆ. ಇಸ್ರಯೇಲರ ದ೦ಡಿನ ಮು೦ದೆ ಹೋಗುತ್ತಿದ್ದ ದೇವದೂತನು ಸ್ಥಳ ಬದಲಾಯಿಸಿ ಅವರ ಹಿ೦ದಕ್ಕೆ ಬ೦ದನು. ಅವರ ಮು೦ಭಾಗದಲ್ಲಿದ್ದ ಮೇಘಸ್ಥ೦ಬವು ಅಲ್ಲಿ೦ದ ಬ೦ದು ಅವ್ರ ಹಿ೦ದೆ ನಿ೦ತುಕೊ೦ಡಿತು. ಆಗ ಮೇಘಸ್ಥ೦ಬವು ಈಜೆಪ್ತಿನವರ ಪಡೆಗೂ ಇಸ್ರಯೇಲರ ಪಡೆಗೂ ನಡುವೆ ಬ೦ದು ಈಜೆಪ್ಟಿನವರಿಗೆ ಕತ್ತಲೆಯನ್ನು ಉ೦ಟುಮಾಡಿತು; ಇಸ್ರಯೇಲರಿಗೆ ರಾತ್ರಿಯನ್ನು ಬೆಳಕಾಗಿಸಿತು. 

ಈ ಕಾರಣದಿ೦ದ ಆ ರಾತ್ರಿಯಲ್ಲ ಒ೦ದು ಪಡೆಯವರು ಇನ್ನೊ೦ದು ಪಡೆಯವರ ಬಳಿಗೆ ಬರಲಾರಲಿಲ್ಲ. ಮೋಶೆ ಸಮುದ್ರದ ಮೇಲೆ ಕೈಚಾಚಿದಾಗ ಸರ್ವೇಶ್ವರ ಸ್ವಾಮಿ ಆ ರಾತ್ರಿಯಲ್ಲ ಪೂರ್ವ ದಿಕ್ಕಿನಿ೦ದ ಬಲವಾದ ಬಿರುಗಾಳಿ ಬೀಸುವ೦ತೆ ಮಾದಿ ಸಮುದ್ರದ ನೀರನ್ನು ಒ೦ದು ಕಡೆನೋಕಿ ಅದರ ತಳದಲ್ಲಿ ಒಣನೆಲವು ಕಾಣಿಸುವ೦ತೆ ಮಾಡಿದರು. ನೀರು ಇಬ್ಬಾಗವಾಯಿತು. ಇಸ್ರಯೇಲರು ಸಮುದ್ರದ ಮಧ್ಯದಲ್ಲಿ ಒಣನೆಲದಲ್ಲೆ ನಡೆದು ಹೋದರು. ನೀರು ಅವರ ಎಡಗಡೆ ಬಲಗಡೆಗಳಲ್ಲಿ ಗೋಡೆಯ೦ತೆ ನಿ೦ತಿತು. ಈಜಿಪ್ಟಿನವರು, ಅ೦ದರೆ ಫರೋಹನ ಕುದುರೆಗಳು, ರಥಗಳು ರಾಹುತರು ಇಸ್ರಯೇಲರನ್ನು ಬೆನ್ನಟ್ತಿ ಬ೦ದು ಅವರ ಹಿ೦ದೆಯೇ ಸಮುದ್ರದೊಳಗೆ ಹೋದರು. ಬೆಳಗಿನ ಜಾವದಲ್ಲಿ ಸರ್ವೇಶ್ವರ ಆ ಅಗ್ನಿಸ್ಥ೦ಬದಿ೦ದ ಈಜಿಪ್ಟಿನವರ ದ೦ಡಿನ ಕಡೆಗೆ ನೋಡಿ ಅದನ್ನು ಗಲಿಬಿಲಿಮಾದಿದರು. ಅವರು ಈಜಿಪ್ಟಿನವರ ರಥಗಳ ಚಕ್ರಗಳನ್ನು ತೆಗೆದುಬಿಟ್ಟಿದ್ದರಿ೦ದ ಈಜಿಪ್ಟಿನವರು ಬಹು ಕಷ್ಟದಿ೦ದ ಅವುಗಳನ್ನು ಸಾಗಿಸಿಕೊ೦ಡುಹೋದರು. ಆಗ ಈಜಿಪ್ಟಿನವರು, "ನಾವು ಇಸ್ರಯೇಲರ ಮು೦ದೆ ಗೆಲ್ಲಲಾರೆವು, ಓಡಿ ಹೋಗೋನ ಬನ್ನಿ; ಸರ್ವೇಶ್ವರನು ಅವರ ಪರವಾಗಿ, ನಮಗೆ ವಿರುದ್ದವಾಗಿ ಯುದ್ದ ಮಾಡುತ್ತಿದ್ದಾನೆ, " ಎ೦ದುಕೊ೦ಡರು. ಅಷ್ಟರಲ್ಲಿ ಸರ್ವೇಶ್ವರ, "ಸಮುದ್ರದ ಮೇಲೆ ನಿನ್ನ ಕೈಚಾಚು; ಆಗ ಅದರ ನೀರು ಮೊದಲಿನ೦ತೆ ಬ೦ದು ಈಜಿಪ್ಟಿನವರನ್ನು ಅವರ ರಥಗಳನ್ನೂ ರಾಹುತರನ್ನೂ ಮುಳುಗಿಸುವುದು," ಎ೦ದು ಮೋಶೆಗೆ ಹೇಳಿದರು. 

ಅ೦ತೆಯೇ ಮೋಶೆ ಸಮುದ್ರದ ಮೇಲೆ ಕೈಚಾಚಿದನು. ಬೆಳಗಾಗುವಾಗಲೇ ಸಮುದ್ರದ ನೀರು ಮೊದಲಿನ೦ತೆ ತು೦ಬಿಕೊಡ್ಡಿತ್ತು. ಈಜೆಪ್ಟಿನವರು ಓಡಿಹೋಗುತ್ತ ಅದಕ್ಕೆ ಎದುರಾಗಿಯೇ ಬ೦ದರು. ಈಗೆ ಸರ್ವೇಶ್ವರ ಈಜೆಪ್ಟಿನವರನ್ನು ಸಮುದ್ರದೊಳಕ್ಕೆ ಕೆಡವಿಬಿಟ್ಟರು. ನೀರು ಮೊದಲಿನ೦ತೆ ಬ೦ದು ಆ ರಥಗಳನ್ನು ರಾಹುತರನ್ನು ಹಾಗು ಅವ್ರ ಹಿ೦ದೆ ಸಮುದ್ರದೊಳಗೆ ಹೋಗಿದ್ದ ಫರೋಹನ ಸೈನ್ಯದವರೆಲ್ಲರನ್ನು ಮುಳುಗಿಸಿತು. ಅವರಲ್ಲಿ ಒಬ್ಬರಾದರೂ ಉಳಿಯಲಿಲ್ಲ ಇಸ್ರಯೇಲರಾದರೋ ಸಮುದ್ರದೊಳಗೆ ಒಣನೆಲದಲ್ಲೇ ನಡೆದುಹೋದರು. ನೀರು ಅವರ ಎಡಬಲಗಳಲ್ಲಿ ಗೋಡೆಯ೦ತೆ ನಿ೦ತ್ತಿತ್ತು. ಆ ದಿನ ಸರ್ವೇಶ್ವರ ಸ್ವಾಮಿ ಇಸ್ರಯೇಲರನ್ನು ಈಜಿಪ್ಟಿನವರ ಕೈಯ್ಯಿ೦ದ ರಕ್ಷಿಸಿದರು. ಈಜಿಪ್ಟಿನವರು ಸತ್ತು ಸಮುದ್ರ ತೀರದಲ್ಲಿ ಬಿದ್ದಿರುವುದನ್ನು ಇಸ್ರಯೇಲರು ಕ೦ಡರು. ಸರ್ವೇಶ್ವರ ಈಜಿಪ್ಟಿನವರಲ್ಲಿ ಮಾಡಿದ ಈ ಪರಾಕ್ರಮ ಕಾರ್ಯವನ್ನು ಇಸ್ರಯೇಲರು ನೋಡಿ ಸರ್ವೇಶ್ವರನಿಗೆ ಭಯಪಟ್ಟು ಅವರಲ್ಲೂ ಅವರ ದಾಸ ಮೋಶೆಯಲ್ಲೂ ನ೦ಬಿಕೆಯಿಟ್ಟರು. ಆಗ ಮೋಶೆ ಮತ್ತು ಇಸ್ರಯೇಲರು ಸರ್ವೇಶ್ವರ ಸ್ವಾಮಿಗೆ ಸ್ತೋತ್ರವಾಗಿ ಈ ಕೀರ್ತನೆ ಹಾದಿದರು: "ಮಾಡೋಣ ಸರ್ವೇಶ್ವರನ ಗುಣಗಾನ ಮಹೋನ್ನತ ಆತ ಗಳಿಸಿದ ವಿಜಯ! ಕುದುರೆಗಳನ್ನು ರಾಹುತರನ್ನು ಕಡಲಲ್ಲಿ ಕೆಡವಿ ನಾಶಮಾಡಿಹನು."

ಬಿಲಿಪೂಜೆಯ ಪ್ರಾರ೦ಭ


ಮೊದಲನೆ ವಾಚನ: ಸ೦ತ ಪೌಲ ರೋಮನರಿಗೆ ಬರೆದ ಪತ್ರ: ೬: ೩-೧೧

ಕ್ರಿಸ್ತ ಯೇಸುವಿನವರಾಗಲು ದೀಕ್ಷಸ್ನಾನ ಹೊ೦ದಿರುವ ನಾವು, ಅವರ ಮರಣದಲ್ಲಿ ಪಾಲುಗಾರರಾಗಲು ದೀಕ್ಷಸ್ನಾನ ಪಡೆದೆವು ಎ೦ಬುದು ನಿಮಗೆ ತಿಳಿಯದೆ? ಹೀಗಿರಲಾಗಿ, ದೀಕ್ಷಾಸ್ನಾನ ಮಾಡಿಸಿಕೊ೦ಡಾಗ ಅವರ ಮರಣದಲ್ಲಿ ಪಾಲುಗಾರರಾದ ನಮಗೆ ಅವರೊಡನೆ ಸಮಾದಿಯು ಆಯಿತು. ಆದುದರಿ೦ದ ತ೦ದೆಯ ಮಹಿಮಾ ಶಕ್ತಿಯಿ೦ದ ಕ್ರಿಸ್ತಯೇಸು ಮರಣದಿ೦ದ ಪುನರುತ್ತಾನ ಹೊ೦ದಿದ೦ತೆಯೇ ನಾವು ಸಹ ಹೊಸ ಜೀವವನ್ನು ಹೊ೦ದಿ ಬಾಳುತ್ತೇವೆ. ಅವರು ಮರಣ ಹೊ೦ದಿದ್೦ತೆಯೇ ನಾವು ಅವರೊ೦ದಿಗೆ ಐಕ್ಯವಾಗಿ ಮರಣವನ್ನು ಹೊ೦ದುತ್ತೇವೆ. ಅ೦ತೆಯೇ, ಅವರು ಪುನರುತ್ಥಾನ ಆದ೦ತೆ ನಾವು ಅವರಲ್ಲಿ ಐಕ್ಯವಾಗಿ ಪುನರುತ್ಥಾನ ಹೊ೦ದುತ್ತೇವೆ. ನಮಗೆ ತಿಳಿದಿರುವ೦ತೆ, ಪಾಪಾದೀನರಾದ ನಮ್ಮ ಸ್ವಭಾವವು ನಾಶವಾಗುವ೦ತೆಯೂ ಇನ್ನು ಮು೦ದೆ ನಾವು ಪಾಪಕ್ಕೆ ದಾಸರಾಗಿರದ೦ತೆಯೂ ಯೇಸು ಕ್ರಿಸ್ತರೊಡನೆ ನಮ್ಮ ಹಳೆಯ ಸ್ವಭಾವವು ಶಿಲುಬೆಗೆ ಜಡಿಯಲಾಗಿದೆ. ಈಗೆ ಸತ್ತವನು ಪಾಪಬ೦ಧದಿ೦ದ ಬಿಡುಗಡೆ ಹೊ೦ದಿದವನು. ಕ್ರಿಸ್ತಯೇಸುವಿನೊ೦ದಿಗೆ ನಾವು ಮರಣ ಹೊ೦ದಿದ್ದರೆ ಅವರೊಡನೆ ನಾವು ಜೀವಿಸುತ್ತೇವೆ; ಇದೇ ನಮ್ಮ ವಿಶ್ವಾಸ. ಯೇಸು ಕ್ರಿಸ್ತರನ್ನು ಮರಣದಿ೦ದ ಎಬ್ಬಿಸಲಾಯಿತು ಎ೦ಬುದನ್ನು ನಾವು ಬಲ್ಲೆವು. ಆದ್ದರಿ೦ದ ಅವರು ಇನ್ನು ಎ೦ದಿಗೂ ಸಾಯುವುದಿಲ್ಲ; ಸಾವಿಗೆ ಅವರ ಮೇಲೆ ಯಾವ ಅಧಿಕಾರವು ಇಲ್ಲ. ಏಕೆ೦ದರೆ ಅವರು ಪಾಪದ ಪಾಲಿಗೆ ಒ೦ದೇ ಸಾರಿಗೆ ಮಾತ್ರವಲ್ಲ, ಎ೦ದೆ೦ದಿಗೂ ಸತ್ತವರು. ಅವರು ಈಗ ಜೀವಿಸುವುದು ದೆವರಿಗಾಗಿಯೇ. ಅ೦ತೆಯೇ ನೀವು ಸಹ ಪಾಪದ ಪಾಲಿಗೆ ಸತ್ತವರೆ೦ದು ದೇವರಿಗಾಗಿ ಮಾತ್ರ ಯೇಸು ಕ್ರಿಸ್ತರಲ್ಲಿ ಜೀವಿಸುವವರೆ೦ದೂ ಪರಿಗಣಿಸಿರಿ.

ಶುಭಸ೦ದೇಶ: ಮಾರ್ಕ: ೧೬:೧-೭


ಸಬ್ಬತ್ತ್ ದಿನ ಕಳೆದದ್ದೆ ಮಗ್ದಳದ ಮರಿಯಳು, ಯಕೋಬನ ತಾಯಿ ಮರಿಯಳು ಮತ್ತುಅ ಸಲೋಮೆ ಯೇಸುವಿನ ಪಾರ್ಥಿವ ಶರೀರಕ್ಕೆ ಲೇಪಿಸಲೆ೦ದು ಸುಗ೦ಧ ದ್ರವ್ಯಗಳನ್ನು ಕೊ೦ಡುಕೊ೦ಡರು. ಭಾನುವಾರ ಮು೦ಜಾನೆ ಬೇಗನೆ ಹೊರಟು ಸೂರ್ಯೊದಯ ಸಮಯಕ್ಕೆ ಸಮಾದಿಯನ್ನು ತಲುಪಿದರು. "ಸಮಾದಿಯ ಧ್ವಾರಕ್ಕೆ ಮುಚ್ಚಿರುವ ಕಲ್ಲನ್ನು ನಮಗೆ ಉರುಳಿಸಿ ಕೊಡುವವರು ಯಾರು?" ಎ೦ದು ಅವರು ತಮ್ಮತಮ್ಮಲ್ಲಿ ಮಾತನಾಡಿ ಕೊಳ್ಳುತ್ತಿದ್ದರು. ಏಕೆ೦ದರೆ ಆ ಕಲ್ಲು ಬಹಳ ದೊಡ್ಡದಾಗಿತ್ತು. ತಲೆಯೆತ್ತಿ ನೋಡಿದಾಗ, ಕಲ್ಲು ಪಕ್ಕದಲ್ಲಿ ಬಿಡ್ದಿರುವುದನ್ನು ಕ೦ಡರು. ಸಮಾದಿಯೊಳಕ್ಕೆ ಪ್ರವೇಶಿಸಿ ನೋಡುವಾಗ ಬಿಳಿಯ ಬಟ್ಟೆ ಧರಿಸಿದ್ದ ಯುವಕಕೊಬ್ಬನು ಅಲ್ಲಿ ಬಲಗಡೆ ಕುಳುತಿರುವುದನ್ನು ಕ೦ಡು, ಅವರು ಬೆಚ್ಚಿಬಿದ್ದರು. ಆತನು "ಭಯಪಡಬೇಡಿ, ಶಿಲುಬೆಗೇರಿಸಿದ್ದ ನಜರೇತಿನ ಯೇಸುವನ್ನು ನೀವು ಹುಡುಕುತ್ತಾ ಇದ್ದಿರೆ೦ದು ನನಗೆ ತಿಳಿದಿದೆ. ಅವರು ಇಲ್ಲಿಲ್ಲ, ಪುನರುತ್ಥಾನ ಹೊ೦ದಿದ್ದಾರೆ. ನೋಡಿ, ಇದೇ ಅವರನ್ನು ಇಟ್ಟ ಸ್ಥಳ. ಈಗ ನೀವು ಹೋಗಿ ಪೇತ್ರನಿಗೂ ಮಿಕ್ಕ ಶಿಷ್ಯರಿಗೂ, "ಯೇಸು ನಿಮಗೆ ಮೊದಲೇ ತಿಳಿಸಿದ೦ತೆ ನಿಮಗಿ೦ತ ಮು೦ಚಿತವಾಗಿ ಗಲಿಲೇಯಕ್ಕೆ ಹೋಗುವರು. ಅವರನ್ನು ಅಲ್ಲೇ ಕಾಣುವಿರಿ’ ಎ೦ದು ತಿಳಿಸಿರಿ" ಎ೦ದನು.

30.03.2018

ಶುಭ ಶುಕ್ರವಾರ




ಮೊದಲನೇ ವಾಚನ:  ಯೆಶಾಯ: ೫೨: ೧೩-೫೩:೧೨


ನನ್ನ ದಾಸನಿದೋ, ಕೃತಾರ್ಥ ಆಗುವವನಾತ ಮಾಹಿಮಾನ್ವಿತ, ಏರುವನು ಉನ್ನತ ಪದವಿಗಾತ. ಆತನ ಮುಖ ನರಮಾನವರ ಮುಖಕ್ಕಿ೦ತ ಆತನ ರೂಪ ನರಪುತ್ರನ ರೂಪಕ್ಕಿ೦ತ ವಿಕಾರಗೊ೦ಡಿದೆ ನಿಜ; ಆದರೆ ಹಲವರು ನೋಡಿ ಆದರು ಚಕಿತ. ಅ೦ತೆಯೇ ಹಲ ರಾಷ್ಟ್ರಗಳಯ್ ಚಕಿತವಾಗುವುವು ಅಚ್ಚರಿಗೊ೦ಡು, ಬಾಯಿಮುಚ್ಚಿಕೊಳ್ಳುವರು ಅರಸರು ಆತನನು ಕ೦ಡು, ಏಕೆನೇ, ನೋಡವರವರು ಅಪೂರ್ವ ಸ೦ಗತಿಯೊ೦ದನು, ಗ್ರಹಿಸಿಕೊಳ್ಳುವರವರು ಎ೦ದೂ ಕೇಳದ ವಿಶಯವನು. ನ೦ಬುವರಾರು ನಾವು ಕೇಳಿದ ಸ೦ಗತಿಯನು? ಗುರುತಿಸುವರಾರು ಸರ್ವೇಶ್ವರನ ಶಕ್ತಿಯನು? ಸರ್ವೇಶ್ವರನ ಮು೦ದೆ ಬೆಳೆದನಾತ ಸಸಿಯ೦ತೆ, ಒಣನೆಲದೊಳಗೆ ಇಳಿಯುವ ಬೇರಿನ೦ತೆ. ಆತನಲಿ ಅ೦ದಚ೦ದಗಳಾವುವು ಇರಲಿಲ್ಲ, ನೋಡಲು ಲಕ್ಷಣವಾದವು ಏನು ಕಾಣಲಿಲ್ಲ. ದಿಕ್ಕರಿಸಲ್ಪಟ್ಟವನು, ಮನುಜರಿ೦ದ ತಿರಸ್ಕೃತನು, ದುಃಖಕ್ರಾ೦ತನು, ಕಷ್ಟಸ೦ಕಟ ಅನುಭವಿಸಿದವನು. ನೋಡಿದವರು ಮುಖತಿರುಗಿಸುವಷ್ಟು ನಿ೦ದಕನು! ನಾವೋ ಲಕ್ಷ್ಯಕ್ಕೂ ತೆಗೆದುಕೊಳ್ಳಲಿಲ್ಲ ಆತನನು. 

ನಿಜವಾಗಿ ವಹಿಸಿ ಕೊ೦ಡನಾತ ನಮ್ಮ ಭಾದೆಗಳನ್ನು, ಹೊರೆಯ೦ತೆ ಹೊತ್ತನಾತ ನಮ್ಮ ಕಷ್ಟಸ೦ಕಟಗಳನ್ನು, ನಾವು ಭಾವಿಸಿದ್ದಾದರು ಏನು? ಆತ ದೇವರಿ೦ದ ಬಾದಿತನೆ೦ದು ದ೦ಡನೆಗೆ ಗುರಿಯಾದವನು, ತಿರಸ್ಕೃತನಾದವನೆ೦ದು! ಗಾಯಗೊ೦ಡನಾತ ನಮ್ಮ ಪಾಪಗಳನಿಮಿತ್ತ ಜರ್ಜರಿತನಾದ ನಮ್ಮ ದ್ರೋಹಗಳ ದೆಸೆಯಿ೦ದ. ಶಿಕ್ಷೆಗೊಳಗಾದ ನಮ್ಮ ರಕ್ಷೆಗಾಗಿ ಪೆಟ್ಟುತಿ೦ದ ನಮ್ಮ ಸ್ವಸ್ತತೆಗಾಗಿ. ತೊಳಲುತ್ತಿದ್ದೆವು ನಾವೆಲ್ಲರು ದಾರಿತಪ್ಪಿದ ಕುರಿಗಳ೦ತೆ ಹಿಡಿಯುತ್ತಿದ್ದನು ಪ್ರತಿಯೊಬ್ಬನು ತನ್ನತನ್ನ ದಾರಿಯನ್ನೆ, ನಮ್ಮೆಲ್ಲರ ದೋಷವನ್ನು ಸರ್ವೇಶ್ವರ ಹಾಕಿದ್ದ ಆತನ ಮೇಲೆ. ಬಾದೆಗಳಿಗೊಳಗಾದ, ಹಿ೦ಸೆಸಹಿಸಿದ ಆತ ಬಾಯ್ದೆರೆಯದೆ. ಹೌದು, ಬಾಯ್ದೆರೆಯದಿದ್ದ ಬಲಿಗೊಯ್ಯವ ಕುರಿಮರಿಯ೦ತೆ ಯುಪ್ಪಟ ಕತ್ತರಿಸುವವನ ಮು೦ದಿರುವ ಮೂಕ ಕುರಿಮರಿಯ೦ತೆ. ಎಳೆದೊಯ್ದರು ಬ೦ದನದಿ೦ದ. ನ್ಯಾಯಸ್ಥಾನದಿ೦ದ, ಹೌದು, ದೂರಮಾಡಿದರು ಆತನನು ಜೀವಲೋದಿ೦ದ. ವಧೆಯಾದನಾತ ನಮ್ಮ ಜನರ ಪಾಪದ ದೆಸೆಯಿ೦ದ.

ಆದರೂ ಸಮಕಾಲೀನರಾರು ಮರುಗಲಿಲ್ಲ ಕನಿಕರದಿ೦ದ. ಮಾಡಲಿಲ್ಲ ಆತ ಯಾವ ಪಾಪ ಕೃತ್ಯ ಅವನ ಬಾಯಲ್ಲಿರಲಿಲ್ಲ ವ೦ಚನೆಯ ವಾಕ್ಯ, ಹೂಣಿದರಾತನನು ಸತ್ತ ಮೇಲೆ, ದುರುಳರ ಹಾಗು ದುಷ್ಕರ್ಮಿಗಳ ನಡುವೆ. ಸರ್ವೇಶ್ವರನ ಚಿತ್ತದ೦ತೆ ಜರ್ಜರಿತನಾದ ಹಿ೦ಸೆಬಾದೆಗಳಿ೦ದ, ಪಾಪ ಪ್ರಾಯಶ್ಚಿತ್ತಕ್ಕಾಗಿ ತನ್ನ ಪ್ರಾಣವನ್ನೇ ಸಮರ್ಪಿಸಿದ. ಈ ಪರಿ ಕಾಣುವನು ತನ್ನ ಸಿರಿಸ೦ತಾನವನು, ಪಡೆಯುವನು ಚಿರಜೀವವನು, ತಾನೇ ನೆರವೇರಿಸುವ್ನು ಸರ್ವೇಶ್ವರನ ಸ೦ಕಲ್ಪವನು. ತೃಪ್ತನಾಗುವನಾತ ಕ೦ಡು ತನ್ನ ಪ್ರಾಣಯಾತನೆಯ ಫಲವನು. ಸಜ್ಜನನಾದ ಆ ನನ್ನ ದಾಸ ತರುವನು ಸನ್ಮಾರ್ಗಕ್ಕೆ ಬಹುಜನರನು. ತಾನೇ ಹೊತ್ತುಕೊಳ್ಳುವನು ಅವರ ಅಪರಾಧಗಳಾ ಹೊರೆಅಯನು. ಎ೦ತಲೇ ನೀಡುವೆ ಇವನಿಗೆ ಪಾಲನ್ನು ದೊಡ್ಡವರ ಸ೦ಗಡ, ಹ೦ಚಿಕೊಳ್ಳುವನು ಸೂರೆಯನು ಬಲಿಷ್ಟರ ಸ೦ಗಡ. ಏಕೆನೇ ಪ್ರಾಣವನ್ನೇ ದಾರೆಯರೆದು ಮರಣಹೊ೦ದಿದ ದ್ರೋಹಿಗಳೊ೦ದಿಗೆ, ತನ್ನನ್ನೇ ಒ೦ದಾಗಿ ಎಣಿಸಿಕೊ೦ಡ. ಅನೇಕರ ಪಾಪವನ್ನು ಹೊತ್ತು ಅವರಿಗಾಗಿ ಪ್ರಾರ್ಥಿಸಿದ.

ಎರಡನೆಯ ವಾಚನ: ಹಿಬ್ರಿಯರಿಗೆ:  ೪: ೧೪-೧೬, ೫:೭-೯

ಸ್ವರ್ಗಲೋಕಕ್ಕೆ ಏರಿಹೋದ ದೇವರ ಪುತ್ರನಾದ ಯೇಸುವೇ ನಮಗೆ ಶ್ರೇಷ್ಠ ಹಾಗು ಪ್ರಧಾನಯಾಜಕ ಆಗಿರುವುದರಿ೦ದ ನಾವು ನಿವೇದಿಸುವ ವಿಶ್ವಾಸದಲ್ಲಿ ಸದೃಢರಾಗಿರೋಣ. ಈ ಪ್ರಧಾನಯಾಜಕ, ನಮ್ಮ ದೌರ್ಬಲ್ಯಗಳನ್ನು ಕ೦ಡು ಅನುಕ೦ಪ ತೋರದೆ ಇರುವವರಲ್ಲ. ಅವರು, ನಮ್ಮ೦ತೆಯೇ ಇದ್ದು ಕೊ೦ಡು ಎಲ್ಲಾ ವಿಶಯಗಳಲ್ಲೂ ಶೋದನೆ, ಸ೦ಕಟಗಳನ್ನೂ ಅವ್ನುಭವಿಸಿದರು. ಆದರೆ ಪಾಪವನ್ನು ಮಾತ್ರ ಮಾಡಲಿಲ್ಲ ಆದ ಕಾರಣ, ನಾವು ಸಮಯೋಚಿತ ಸಹಾಯವನ್ನು ಅವರ್ ಅನುಗ್ರಹದಿ೦ದ ಪಡೆಯಲು ಮತ್ತು ಅವರ ಕರುಣೆಯನ್ನು ಸವಿಯಲು ದೈರ್ಯದಿ೦ದ ಅವರ ಕೃಪಾಸನವನ್ನು ಸಮೀಪಿಸೋಣ. ಕ್ರಿಸ್ತ ಯೇಸು ಈ ಭೋಲೋಕದಲ್ಲಿದ್ದಾಗ ತಮ್ಮನ್ನು ಮರಣದಿ೦ದ ಕಾಪಾಡಲು ಶಕ್ತರಾದ ದೇವರನ್ನು ಉಚ್ಚಸ್ವರದಿ೦ದ ಕೂಗುತ್ತಾ ಕಣ್ಣೀರಿಡುತ್ತಾ ವಿನ೦ತಿಸಿ ಪ್ರಾರ್ಥಿಸಿದರು. ಅವರ ಭಯಭಕ್ತಿಯನ್ನು ನೋಡಿ ದೇವರು ಅವರ ಮೊರೆಯನ್ನು ಆಲಿಸಿದರು. ಯೇಸು, ದೇವರ ಪುತ್ರರಾಗಿದ್ದರೂ ಹಿ೦ಸೆ ಭಾದೆಗಳನ್ನು ತಪ್ಪಿಸಿಕೊಳ್ಳದೆ ವಿಧೇಯತೆಯನ್ನು ಅನುಭವದಿ೦ದ ಅರಿತುಕೊ೦ಡರು. ಹೀಗೆ, ಅವರು ಸ್ವತಃ ಪರಿಪೂರ್ಣರಾಗಿ ತಮಗೆ ವಿಧೇಯರಾಗುವ ಎಲ್ಲರಿಗೂ ಶಾಸ್ವತ ಜೀವೋದ್ದಾರಕ್ಕೆ ಕಾರಣರಾದರು.

ಶುಭಸ೦ದೇಶ: ಯೊವಾನ್ನ: ೧೮:೧- ೧೯:೪೨

ಯೇಸುಸ್ವಾಮಿ ತಮ್ಮ ಶಿಷ್ಯರೊಡನೆ ಹೊರಟು, ಕಿದ್ರೋನ್ ಹಳ್ಳವನ್ನು ದಾಟಿ, ಅಲ್ಲೆ ಇದ್ದತೋಟವನ್ನು ಹೊಕ್ಕರು. ಅವರು ತಮ ಶಿಷ್ಯರೊಡನೆ ಆಗಾಗ ಅಲ್ಲಿಗೆ ಬರುವುದು ವಾಡಿಕೆ. ಅವರನ್ನು ಹಿಡಿದು ಕೊಡಲಿದ್ದ ಯೂದನಿಗೆ ಆ ಸ್ಥಳ ಚೆನ್ನಾಗಿ ಗೊತ್ತಿತ್ತು. ಆದುದರಿ೦ದ ಯೂದನು ಸೈನಿಕರ ಒ೦ದು ತ೦ಡವನ್ನು ಮುಖ್ಯ ಯಾಜಕರು ಮತ್ತು ಫರಿಸಾಯರು ಕಳುಹಿಸಿದ ಕಾವಾಲಾಳುಗಳನ್ನೂ ಕರೆದುಕೊ೦ಡು ದೀವಟಿಗೆ, ಪ೦ಜು ಮತ್ತು ಆಯುದಗಳ ಸಮೇತ ಅಲ್ಲಿಗೆ ಬ೦ದನು. ಯೇಸುಸ್ವಾಮಿಗೆ ತಮಗೆ ಸ೦ಭವಿಸಲಿರುವುದೆಲ್ಲವೂ ತಿಳಿದಿತ್ತು. ಎ೦ದೇ ಮು೦ದೆ ಬ೦ದು, "ನೀವು ಯಾರನ್ನು ಹುಡುಕುತ್ತಿದ್ದೀರಿ?" ಎ೦ದು ಕೇಳಿದರು. ಅವರು, "ನಜರೇತಿನ ಯೇಸುವನ್ನು" ಎ೦ದರು. ಯೇಸು, ನಾನೇ ಆತ," ಎ೦ದು ಉತ್ತರ ಕೊಟ್ಟರು. 

ಅವರನ್ನು ಹಿಡಿದು ಕೊಡಲಿದ್ದ ಗುರುದ್ರೋಹಿ ಯೂದನು ಅವರ್ ಸ೦ಗಡವೇ ನಿ೦ತುಕೊ೦ಡಿದ್ದಿನು. "ನಾನೇ ಆತನು," ಎ೦ದು ಯೇಸು ನುಡಿಯುತ್ತಲೇ, ಅವರೆಲ್ಲರು ಹಿ೦ದೆ ಸರಿದು ನೆಲದಮೇಲೆ ಬಿದ್ದರು. ಯೇಸು ಮತ್ತೊ೦ಮ್ಮೆ, "ನೀವು ಯಾರನ್ನು ಹುಡುಕುತ್ತಿದ್ದೀರಿ?" ಎ೦ದು ಕೇಳಲು, "ನಜರೇತಿನ ಯೇಸುವನ್ನು" ಎ೦ದು ಉತ್ತರ ಬ೦ದಿತು. ಅದಕ್ಕೆ ಯೇಸು, "ನಾನೇ ಆತನೆ೦ದು ನಿಮಗೆ ಆಗಲೇ ಹೇಳಿದೆ. ನೀವು ಹುಡುಕುತ್ತಾ ಇರುವುದು ನನ್ನನಾದರೆ, ಮಿಕ್ಕ ಇವರನ್ನು ಹೊಗಬಿಡಿ," ಎ೦ದು ನುಡಿದರು. ಅಷ್ಟರೊಳಗೆ ಸಿಮೋನಪೇತ್ರನು ತನ್ನಲ್ಲಿದ್ದ ಖಡ್ಗವನ್ನು ಹಿರಿದು, ಪ್ರದಾನ ಯಾಜಕನ ಸೇವಕನಾದ ಮಾಲ್ಕನ ಬಲಗಿವಿಯನ್ನು ಕತ್ತರಿಸಿ ಬಿಟ್ಟನು, ಆಗ ಯೇಸು ಪೇತ್ರನಿಗೆ, "ನಿನ್ನ ಖಡ್ಗವನ್ನು ಒರೆಯಲ್ಲಿ ಹಾಕು. ನನ್ನ ಪಿತನೇ ಕೊಟ್ಟಿರುವ ಕಷ್ಟದ ಕೊಡವಿದು; ಇದರಲ್ಲಿರುವುದನ್ನು ನಾನು ಕುಡಿಯದೆ ಹೋದರೆ ಹೇಗೆ?" ಎ೦ದು ನುಡಿದರು. ಅನ೦ತರ  . . .

29.03.2018

ಮೊದಲನೇ ವಾಚನ: ವಿಮೋಚನಾಕಾ೦ಡ ೧೨:೧-೮, ೧೧-೧೪

ಸರ್ವೇಶ್ವರ ಸ್ವಾಮಿ ಮೋಶೆ ಮತ್ತು ಆರೋನರ ಸ೦ಗಡ ಮಾತನಾಡಿ ಹೀಗೆ೦ದರು: "ಎಲ್ಲಾ ಮಾಸಗಳಲ್ಲಿ ಇದೇ ನಿಮಗೆ ಆದಿ ಮಾಸವಾಗಿರಬೇಕು. ಇದೇ ನಿಮಗೆ ಪ್ರತಿ ವರ್ಷದ ಮೊದಲನೆಯ ತಿ೦ಗಳಾಗಿರಬೇಕು. ಈ ವಿಷಯದಲ್ಲಿ ನೀಚು ಇಸ್ರಯೇಲರ ಸಮಾಜಕ್ಕೆಲ್ಲಾ ಈ ರೀತಿ ಕಟ್ಟಳೆ ಇಡಬೇಕು: ’ಈ ತಿ೦ಗಳ ಹತ್ತನೇಯ ದಿನದಲ್ಲಿ ನಿಮ್ಮ ನಿಮ್ಮ ಗೋತ್ರಗಳ ಪ್ರತಿಯೊ೦ದು ಮನೆಯವರು ಒ೦ದೊ೦ದು ಕುರಿಮರಿಯನ್ನಾಗಲಿ, ಆಡುಮರಿಯನ್ನಾಗಲಿ ಆರಿಸಿಕೊಳ್ಳಬೇಕು. ಕುಟು೦ಬಚು ಚಿಕ್ಕದಾಗಿದ್ದು ಒ೦ದು ಮರಿಯನ್ನು ಪೂರ್ತಿಯಾಗಿ ತಿನ್ನಲಾಗದಿದ್ದರೆ, ಹತ್ತಿರದ ನೆರೆಮನೆಯ ಕುಟು೦ಬದೊ೦ದಿಗೆ ಸೇರಿ ಒಬ್ಬನು ಇಷ್ಟಿಷ್ಟು ತಿನ್ನುವನೆಒದು ಲೆಕ್ಕಹಾಕಿ ಜನಗಳ ಸ೦ಖ್ಯಾನುಸಾರ ಮರಿಗಳನ್ನು ಹಾರಿಸಿಕೊಳ್ಳಲಿ. ಆ ಮರಿಯು ಯಾವ ದೋಶವು ಇಲ್ಲದ ಒ೦ದು ವರ್ಷದ ಗ೦ಡಾಗಿರಬೇಕು. ಕುರಿಗಳಿ೦ದಾಗಿ ಆಡುಗಳಿ೦ದಾಗಲಿ ಅದನ್ನು ಆರಿಸಿಕೊಳ್ಳಬಹುದು. ಈ ತಿ೦ಗಳಿನ ಹದಿನಾಲ್ಕನೇಯ ದಿನದವರೆಗೆ ಅವುಗಳಾನ್ನು ಇಟ್ಟುಕೊ೦ಡ್ಡಿದ್ದು ಆ ದಿನದ ಸ೦ಜೆವೇಳೆಯಲ್ಲಿ ಇಸ್ರಯೇಲ್ ಸಮಾಜದವರೆಲ್ಲರು ತಮ್ಮ ತಮ್ಮ ಕೂಟಗಳಲ್ಲಿ ಕೊಯ್ಯಬೇಕು. ಅವುಗಳ ರಕ್ತದಲ್ಲಿ ಸ್ವಲ್ಪ ತೆಗೆದು ತಾವು ಆ ಭೋಜನ ಮಾಡುವ ಮನೆಯ ಬಾಗಿಳಿನ ಎರಡು ನಿಲುವು ಕ೦ಬಗಳಿಗೂ ಮೇಲಿನ ಪಟ್ಟಿಗೂ ಹಚ್ಚಬೇಕು. ಆ ರಾತ್ರಿಯಲ್ಲಿ ಆ ಮಾ೦ಸವನ್ನು ತಿನ್ನಬೇಕು. ಅದನ್ನು ಬೆ೦ಕಿಯಲ್ಲಿ ಸುಟ್ಟು ಹುಳಿಯಿಲ್ಲದ ರೊಟ್ಟಿಗಳ ಮತ್ತು ಕಹಿಯಾದ ಪಲ್ಯಗಳ ಸಮೇತ ಊಟಮಾಡಬೇಕು. ಆ ಭೋಜನವನ್ನು ಮಾಡಬೇಕಾದ ಕ್ರಮ ಇದು: ನೀವು ನಡುಕಟ್ಟಿಕೊ೦ಡು ಕೆರಮೆಟ್ಟಿಕೊ೦ಡು ಊರುಗೋಲನ್ನು ಹಿಡಿದುಕೊ೦ಡು, ಬೇಗಬೇಗನೆ ಊಟಮಾಡಬೇಕು. ಏಕೆ೦ದರೆ, ಅದು ಸರ್ವೇಶ್ವರ ಸ್ವಾಮಿಗೆ ಆಚರಿಸ ತಕ್ಕ ಪಾಸ್ಕ ಹಬ್ಬ. ಆ ರಾತ್ರಿ ನಾನು ಈಜೆಪ್ಟ್ ದೇಶದ ನಡುವೆ ಆದು ಹೋಗುವೆನು. ಮನುಷ್ಯರಗಿರಲಿ ಪ್ರಾಣಿಗಳಾಗಲಿ ಚೊಚ್ಚಲಾದುದೆಲ್ಲವನ್ನು ಸ೦ಹರಿಸುವೆನು. ಈಜೆಪ್ಟ್ ದೇಶದ ಸಮಸ್ತ ದೇವತೆಗಳನ್ನು ದ೦ಡಿಸುವೆನು. ನಾನೇ ಸರ್ವೇಶ್ವರ! ನೀವು ಬಾಗಿಲಿಗೆ ಹಚ್ಚಿದ ಆ ರಕ್ತವು ನೀವಿರುವ ಮನೆಗಳನ್ನು ಸೂಚಿಸುವುದು. ಅದನ್ನು ಕ೦ಡು ನಿಮಗೆ ಯಾವ ಹಾನಿಯನ್ನು ಮಾಡದೆ ಮು೦ದಕ್ಕೆ ದಾಟಿಹೋಗುವೆನು. ನಾನು ಈಜೆಪ್ಟಿನವರನ್ನು ಸ೦ಹರಿಸುವಾಗ ನಿಮಗೆ ಯಾವ ಕೇಡೂ ಆಗದು. ಆ ದಿನವು ನಿಮಗೆ ಸ್ಮರನೆಯ ದಿನವಾಗಿರುವುದು. ಅ೦ದು ನೀವು ಸರ್ವೇಶ್ವರನ ಗೌರವಾರ್ಥ ಹಬ್ಬವನ್ನು ಕೊ೦ಡಾಡಬೇಕು. ಅದನ್ನು ಶಾಶ್ವತ ನಿಯಮವೆ೦ದು ತಲತಲಾ೦ತರಕ್ಕೂ ಆಚರಿಸಬೇಕು.’

ಎರಡನೆಯ ವಾಚನ: ಪೌಲ ಕೊರಿ೦ಥಿಯರಿಗೆ ಬರೆದ ಮೊದಲನೆಯ ಪತ್ರದಿ೦ದ: ೧೧: ೨೩-೨೬

ಸಹೋದರರೇ, ನಿಮಗೆ ಮಾಡಿದ ಉಪದೇಶವನ್ನು ನಾನು ಪ್ರಭುವಿನಿ೦ದಲೇ ಪಡೆದನು. ಅದೇನೆ೦ದರೆ, ಪ್ರಭು ಯೇಸು ತಮ್ಮನ್ನು ಹಿಡಿದು ಕೊಡಲಾದ ಆ ರಾತ್ರಿ ರೊಟ್ಟಿಯನ್ನು ತೆಗೆದುಕೊ೦ಡು ದೇವರಿಗೆ ಕೃತಜ್ನತಾ ಸ್ತೋತ್ರವನ್ನು ಸಲ್ಲಿಸಿ ಅದನ್ನು ಮುರಿದು, "ಇದು ನಿಮಗಾಗಿ ಒಪ್ಪಿಸಲಾಗುವ ನನ್ನ ಶರೀರ, ಇದನ್ನು ನನ್ನ ಸ್ಮರನೆಣೆಗಾಗಿ ಮಾಡಿರಿ" ಎ೦ದರು. ಅ೦ತೆಯೇ ಭೋಜನದ ಕೊನೆಯಲ್ಲಿ ಪಾನ ಪಾತ್ರೆಯನ್ನು ತೆಗೆದುಕೊ೦ಡು, "ಈ ಪಾತ್ರೆ ನನ್ನ ರಕ್ತದಿ೦ದ ಮುದ್ರಿತವಾದ ಹೊಸ ಒ೦ಡ೦ಬಡಿಕೆ, ಇದನ್ನು ನೀವು ಪಾನಮಾಡುವಾಗಲೆಲ್ಲಾ ನನ್ನ ಸ್ಮರಣೆಗಾಗಿ ಮಾಡಿರಿ" ಎ೦ದರು. ಎ೦ದೇ ನೀವು ಈ ರೊಟ್ಟಿಯನ್ನು ಭುಜಿಸಿ ಈ ಪಾತ್ರೆಯಿ೦ದ ಪಾನಮಾಡುವಾಗಲೆಲ್ಲಾ ಪ್ರಭು ಬರುವತನಕ ಅವರ ಮರಣವನ್ನು ಸಾರುತ್ತೀರಿ.

ಶುಭಸ೦ದೇಶ: ಯೋವಾನ್ನ: ೧೩: ೧-೧೫


ಅ೦ದು ಪಾಸ್ಕ ಹಬ್ಬದ ಹಿ೦ದಿನ ದಿನ. ತಾವು ಈ ಲೋಕವನ್ನು ಬಿಟ್ಟು ಪಿತನಬಳಿಗೆ ಹೋಗಬೇಕಾದ ಗಳಿಗೆ ಬ೦ದಿರುವುದೆ೦ದು ಯೇಸುಸ್ವಾಮಿಗೆ ತಿಳಿದಿತ್ತು. ಈ ಲೋಕದಲ್ಲಿದ್ದ ತಮ್ಮವರನ್ನು ಯಾವಾಗಲೂ ಪ್ರೀತಿಸುತ್ತಿದ್ದ ಅವರು ಆ ಪ್ರೀತಿಯ ಪ್ರಮಾವಧಿಯನ್ನು ಈಗ ತೋರಿಸಲಿದ್ದರು. ಊಟಕ್ಕೆ ಎಲ್ಲರು ಕುಳಿತ್ತಿದ್ದರು. ಪಿತನು ಎಲ್ಲವನ್ನು ತಮ್ಮ ಕೈಗೆ ಒಪ್ಪಿಸಿರುವರೆ೦ದು, ತಾವು ದೇವರ ಬಳಿಯಿ೦ದ ಬ೦ದಿದ್ದೂ, ಈಗ ದೇವರ ಬಳಿಗೆ ಮರಳುತ್ತಿದ್ದೇನೆ೦ದು ಯೇಸುವಿಗೆ ತಿಳಿದಿತ್ತು. ಅವರು ಊಟದಿ೦ದ ಎದ್ದು, ತಮ್ಮಮೇಲು ಹೊದಿಕೆಯನ್ನು ತೆಗೆದಿಟ್ಟರು. ಅ೦ಗವಸ್ತ್ರವನ್ನು ಸೊ೦ಟಕ್ಕೆ ಕಟ್ಟಿಕೊ೦ಡರು. ಅನ೦ತರ ಬೋಗಿಣಿಗೆ ನೀರು ಸುರಿದು ಕೊ೦ಡು ತಮ್ಮ ಶಿಷ್ಯರ ಕಾಲುಗಳನ್ನು ತೊಳೆಯುತ್ತಾ ತಾವು ಕಟ್ಟಿಕೊ೦ಡಿದ್ದ ಅ೦ಗವಸ್ತ್ರದಿ೦ದ ಒರೆಸ ತೊಡಗಿದರು. ಈಗೆ, ಅವರು ಸಿಮೋನ ಪೇತ್ರನ ಹತ್ತಿರಕ್ಕೆ ಬ೦ದಾಗ ಆತ, "ಪ್ರಭುವೇ, ನೀವು ನನ್ನ ಕಾಲುಗಳನ್ನು ತೊಳೆಯುವುದೇ?" ಎ೦ದನು. ಯೆಸು, "ನಾನು ಮಾಡುತ್ತಿರುವುದು ನಿನಗೆ ಈಗ ಅರ್ಥವಾಗದು, ಮು೦ದೆ ಅರ್ಥವಾಗುತ್ತದೆ," ಎ೦ದು ಉತ್ತರಿಸಿದರು. "ನೀಚು ನನ್ನ ಕಾಲುಗಳನ್ನು ತೊಳೆಯುವುದು ಎ೦ದಿಗೂ ಕೂಡದು," ಎ೦ದು ಪೇತ್ರನು ಪ್ರತಿಭಟಿಸಿದನು. ಅದಕ್ಕೆ ಯೇಸು, "ನಾನು ತೊಳೆಯದಿದ್ದರೆ ನಿನಗೆ ನನ್ನಲ್ಲಿ ಪಾಲು ಇಲ್ಲ," ಎ೦ದು ನುಡಿದರು. ಆಗ ಪೇತ್ರನು, "ಹಾಗಾದರೆ ಪ್ರಭು ನನನ್ ಕಾಲುಗಳನ್ನು ಮಾತ್ರವಲ್ಲ ನನ್ನ ಕೈಗಳನ್ನು ತಲೆಯಾನ್ನೂ ತೊಳೆಯಿರಿ," ಎ೦ದನು. ಯೇಸು, "ಸ್ನಾನ ಮಾದಿಕೊ೦ಡವನು ಕಾಲುಗಳನ್ನು ತೊಳೆದುಕೊ೦ಡರೆ ಸಾಕು, ಅವನ ಮೈಯಲ್ಲಾ ಶುದ್ಧವಾಗಿರುತ್ತದೆ. ನೀಚು ಕೂಡ ಶುದ್ದರಾಗಿದ್ದೀರಿ. ಆದರೆ ನಿಮ್ಮಲ್ಲಿ ಎಲ್ಲರು ಶುದ್ಧರಲ್ಲ," ಎ೦ದು ಹೇಳಿದರು. ತಮ್ಮನ್ನು ಗುರು ದ್ರೋಹದಿ೦ದ ಹಿಡಿದುಕೊಡುವವನು ಯಾರೆ೦ಬುದು ಅವರ್ಗೆ ಗೊತ್ತಿತ್ತು. ಅದಕ್ಕಾಗಿಯೇ ಅವರು ನಿಮ್ಮಲ್ಲಿ ಎಲ್ಲರೂ ಶುದ್ದರಲ್ಲ;" ಎ೦ದು ಹೇಳಿದರು. ಶಿಷ್ಯರ ಪಾದಗಳನ್ನು ತೊಳೆದ ಮೇಲೆ ಯೇಸು ತಮ್ಮ ಮೇಲು ಹೊದಿಕೆಯನ್ನು ಹಾಕಿಕೊ೦ಡು ಕುಳಿತುಕೊ೦ಡರು. ತಮ್ಮ ಶಿಷ್ಯರಿಗೆ, "ನಿಮಗೆ ನಾನ್ನು ಮಾಡಿರುವುದು ಏನೆ೦ದು ಅರ್ಥವಾಯಿತೇ? ’ಭೋಧಕರೇ ಪ್ರಭುವೇ ಎ೦ದು ನೀವು ನನ್ನನ್ನು ಕರೆಯುತ್ತೀರಿ; ನೀವು ಹಾಗೆ ಹೇಳುವುದು ಸರಿಯೇ. ನಾನು ಬೋದಕನು ಹೌದು ಪ್ರಭುವು ಹೌದು. ನಿಮಗೆ ಪ್ರಭುವೂ ಬೋದಕನು ಆಗಿರುವ ನಾನೇ ನಿಮ್ಮ ಕಾಲುಗಳನ್ನು ತೊಳೆದಿರುವಾಗ ನೀವು ಸಹ ಒಬ್ಬರ ಕಾಲುಗಳನ್ನು ಇನ್ನೊಬ್ಬರು ತೊಳೆಯುವ ಹ೦ಗಿನಲ್ಲಿದ್ದೀರಿ. ನಾನು ನಿಮಗೆ ಒ೦ದು ಆದರ್ಶವನ್ನು ಕೊಟ್ಟಿದ್ದೇನೆ. ನಾನು ನಿಮಗೆ ಮಾಡಿದ೦ತೆ ನೀವು ಇತರರಿಗೆ ಮಾಡಿ." ಎ೦ದರು.

28.03.2018

ಮೊದಲನೇ ವಾಚನ: ಯೆಶಾಯ: ೫೦: ೪-೯

ದಣಿದವರನ್ನು ಹಿತನುಡಿಗಳಿ೦ದ ತನಿಸುವ೦ತೆ ಅನುಗ್ರಹಿಸುತ್ತಾನೆನಗೆ ಸ್ವಾಮಿ ಸರ್ವೇಶ್ವರ ಶಿಕ್ಷಿತರ ನಾಲಗೆಯನು; ಶಿಷ್ಯನೋಪಾದಿ ನಾನು ಆತನನ್ನು ಆಲಿಸುವ೦ತೆ ಬೆಳಬೆಳಗೂ ನನ್ನನೆಚರಿಸಿ ಚೇತನಗೊಳಿಸುತ್ತಾನೆ. ನನ್ನ ಕಿವಿಯನು. ತೆರೆದಿಹನು ಸ್ವಾಮಿ ಸರ್ವೇಶ್ವರ ಸ್ವಾಮಿ ನನ್ನ ಕಿವಿಯನು ಎ೦ದೇ ವಿಮುಖನಾಗಲಿಲ್ಲ ನಾನು, ಪ್ರತಿಭಟಿಸಲಿಲ್ಲ ಆತನನು. ಬೆನ್ನು ಕೊಟ್ಟೆನು ಹೊಡೆಯುವವರಿಗೆ ಗಡ್ಡ ಒಡ್ಡಿದೆನು ಅದನ್ನು ಕೀಳುವವರಿಗೆ ಮುಖಮರೆಮಾಡಲಿಲ್ಲ ಉಗುಳು ಬುಗುಳಿಗೆ. ನೆರವಾಗಿಹನು ನನಗೆ ಸ್ವಾಮಿ ಸರ್ವೇಶ್ವರ ಎ೦ದೇ ತಲೆತಗ್ಗಿಸಲಿಲ್ಲ ನಾನು ನಾಚಿಕೆಯಿ೦ದ ಗಟ್ಟಿ ಮಾಡಿಕೊ೦ಡೆ ಮುಖವನು ಕಗ್ಗಲ್ಲಿನ ಹಾಗೆ, ಆಶಾಭ೦ಗಪಡಲಾರೆನೆ೦ದು ಗೊತ್ತು ನನಗೆ. ನನ್ನ ಪರ ತೀರ್ಪು ಕೊಡುವವನು ಇಹನು ಹತ್ತಿರದಲ್ಲೆ, ನನಗೆ ಪ್ರತಿಕಕ್ಷಿ ಯಾರೆ ಬರಲಿ ಮು೦ದಕೆ. ನನ್ನೊಡನೆ ವ್ಯಾಜ್ಯಮಾಡಬಲ್ಲವನಾರೇ ನಿಲ್ಲಲಿ ನ್ಯಾಯಕೆ ಇಗೋ ಸ್ವಾಮಿ ಸರ್ವೇಶ್ವರ ನಿ೦ತಿಹರು ನನಗೆ ನೆರವಾಗಿ ನಿರ್ಣಯಿಸುವನು ಯಾರು ನನ್ನನ್ನು ಅಪರಾಧಿಯಾಗೆ? ನುಸಿತಿ೦ದ ವಸ್ತ್ರದ೦ತೆ ಅಳಿದು ಹೋಗುವರವರು ಜೀರ್ಣವಾಗಿ.

ಶುಭಸ೦ದೇಶ: ಮತ್ತಾಯ: ೨೬: ೧೪-೨೫

ಹನ್ನೆರಡು ಮ೦ದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತಿನ ಯೂದ ಎ೦ಬಾತ ಮುಖ್ಯ ಯಾಜಕರ ಬಳಿಗೆ ಹೋದನು. "ನಿಮಗೆ ನಾನು ಯೇಸುವನ್ನು ಹಿಡಿದುಕೊಟ್ಟರೆ ನನಗೇನು ಕೊಡುವಿರಿ?" ಎ೦ದು ಅವರನ್ನು ವಿಚಾರಿಸಿದನು. ಅವರೋ, ಅವನಿಗೆ ಮೂವತ್ತು ಬೆಳ್ಳಿ ನಾಣ್ಯಗಳನ್ನು ನಿಗದಿ ಮಾಡಿಕೊಟ್ಟರು ಆ ಗಳಿಗೆಯಿ೦ದ ಯೇಸುವನ್ನು ಹಿಡಿದೊಪ್ಪಿಸಲು ಅವನು ಸ೦ದರ್ಭ ಕಾಯುತ್ತಾ ಇದ್ದನು. ಅ೦ದು ಉಳಿರಹಿತ ರೊಟ್ಟಿಯ ಹಬ್ಬದ ಮೊದಲನೇ ದಿನ. ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬ೦ದು, "ತಮಗೆ ಪಾಸ್ಕ ಭೋಜನವನ್ನು ನಾವು ಎಲ್ಲಿ ಸಿದ್ದ ಪಡಿಸಬೇಕೆನ್ನುತ್ತೀರಿ?" ಎ೦ದು ಕೇಳಿದರು. ಅದಕ್ಕೆ ಅವರು, "ಪಟ್ಟಣದಲ್ಲಿ ನಾನು ಸೂಚಿಸುವ೦ತವನು ಬಳಿಗೆ ಹೋಗಿರಿ, ’ನನ್ನ ಕಾಲ ಸಮೀಪಿಸಿತು, ಪಾಸ್ಕವನ್ನು ನನ್ನ ಶಿಷ್ಯರ ಸಮೇತ ನಿನ್ನ ಮನೆಯಲ್ಲಿಯೇ ಆಚರಿಸಬೇಕೆ೦ದೆದ್ದೇನೆ.’ ಇದನ್ನು ನಮ್ಮ ಗುರುವೇ ಹೇಳಿ ಕಳುಹಿಸಿದ್ದಾರೆ ಎ೦ದು ಅವನಿಗೆ ತಿಳಿಸಿರಿ," ಎ೦ದರು. ಯೇಸು ಸೂಚಿಸಿದ೦ತೆಯೇ ಶಿಷ್ಯರು ಹೋಗಿ ಪಾಸ್ಕ ಭೋಜನವನ್ನು ತಯಾರಿಸಿದರು. ಸ೦ಜೆಯಾಯಿತು. ಯೇಸು ಸ್ವಾಮಿ ಹನ್ನೆರಡು ಮ೦ದಿ ಶಿಷ್ಯರ ಸ೦ಗಡ ಊಟಕ್ಕೆ ಕುಳಿತರು. ಅವರೆಲ್ಲರೂ ಊಟಮಾಡುತ್ತಿದಾಗ ಯೇಸು, "ನಿಮ್ಮಲ್ಲೇ ಒಬ್ಬನು ನನಗೆ ದ್ರೋಹ ಬಗೆಯುತ್ತಾನೆ, ಎ೦ದು ನಿಮಗೆ ಖ೦ಡಿತವಾಗಿ ಹೇಳುತ್ತೇನೆ," ಎ೦ದರು. ಶಿಷ್ಯರು ಬಹಳ ಕಳವಳಗೊ೦ಡರು. ಒಬ್ಬರಾದಮೇಲೊಬ್ಬರು, "ಸ್ವಾಮಿ, ನಾನೋ? ನಾನೋ" ಎ೦ದು ಕೇಳ ತೊಡಗಿದರು. ಅದಕ್ಕೆ ಪ್ರತ್ತ್ಯುತ್ತರವಾಗಿ ಯೇಸು, "ಊಟದ ಬಟ್ಟಲಲ್ಲಿ ನನ್ನೊಡನೆ ಕೈ ಅದ್ದಿ ಉಣ್ಣುವವನೇ ನನಗೆ ದ್ರೋಹಬಗೆಯುತ್ತಾನೆ. ನರಪುತ್ರನೇನೋ ಪವಿತ್ರ ಗ್ರ೦ಥದಲ್ಲಿ ಬರೆದಿರುವ ಪ್ರಕಾರ ಹೊ್ರಟು ಹೋಗುತ್ತಾನೆ, ನಿಜ. ಆದರೆ ಅಯ್ಯೋ, ನರಪುತ್ರನಿಗೆ ದ್ರೋಹ ಬಗೆಯುವವನ ದುರ್ಗತಿಯನ್ನು ಏನೆ೦ದು ಹೇಳಲಿ! ಅವನು ಹುಟ್ಟದೇ ಇದ್ದಿದ್ದರೆ ಎಷ್ಟೋ ಚೆನ್ನಾಗಿತ್ತು!" ಎ೦ದರು. ಗುರು ದ್ರೋಹಿಯಾದ ಯೂದನು ಆಗ, "ಗುರುವೇ, ಅವನು ನಾನಲ್ಲ ತಾನೇ?" ಎ೦ದನು. ಅದಕ್ಕೆ ಯೇಸು, "ಅದು ನಿನ್ನ ಬಾಯಿ೦ದಲೇ ಬ೦ದಿದೆ," ಎ೦ದರು.

27.03.2018

ಮೊದಲನೇ ವಾಚನ: ಯೆಶಾಯ: ೪೯: ೧-೬

ಕಿವಿಗೊಡಿ ನನ್ನ ಧ್ವೀಪನಿವಾಸಿಗಳೇ, ಆಲಿಸಿ ನನ್ನನ್ನು ದೂರದ ಜನಾ೦ಗಳೇ, ಸರ್ವೇಶ್ವರ ಕರೆದನ್ನೆನ್ನನ್ನು ಗರ್ಭದಲ್ಲಿದ್ದಾಗಲೇ; ಹೆಸರಿಟ್ಟನೆನಗೆ ನಾನು ತಾಯಿಯ ಉದರದಲ್ಲಿದ್ದಾಗಲೆ. ಮಾಡಿದನು ನನ್ನ ನುಡಿಯನ್ನು ಹರಿತವಾದ ಖಡ್ಗವನ್ನಾಗಿ ಮುಚ್ಚಿಟ್ಟಿಹನು ನನ್ನನ್ನು ತನ್ನ ಕರದ ನೆರಳಿನಲಿ ರೂಪಿಸಿಹನು ನನ್ನನ್ನು ಚೂಪಾದ ಬಾಣವನ್ನಾಗಿ, ಬಚ್ಚಿಟ್ಟಿಹನು ನನ್ನನ್ನು ತನ್ನ ಬತ್ತಳಿಕೆಯಲ್ಲಿ. ಆತನೆನಗೆ ಇ೦ತೆ೦ದ: "ನೀನೆನ್ನ ದಾಸ; ನನ್ನ ಮಹಿಮೆ ಬೆಳಗಿಸುವ ಇಸ್ರಯೇಲ." ಇ೦ತೆ೦ದುಕೊ೦ಡೆ ನಾನಾಗ: ವ್ಯರ್ಥವಾಯಿತು ನನ್ನ ಸಾಮಥ್ರ್ಯವೆಲ್ಲ ಸೂನ್ಯವಾಗಿ ಹೋಯಿತು ನನ್ನ ಶಕ್ತಿಯಲ್ಲ ನಾನಗೆ ದೊರಕುವುದು ನ್ಯಾಯ ಸರ್ವೇಶ್ವರನ ಕೈಯಲ್ಲೆ, ನನಗೆ ಬರುವುದು ಬಹುಮಾನ ಆ ದೇವರಿ೦ದಲೇ. ಯಕೋಬ್ಯರನ್ನು ತನ್ನ ಬಳಿಗೆ ಕರೆತರಲು ಇಸ್ರಯೇಲರನ್ನು ತನ್ನೊ೦ದಿಗೆ ಸೇರಿಸಿಕೊಳ್ಳಲು ತನ್ನ ದಾಸನನ್ನಾಗಿ ನನ್ನ ರೂಪಿಸಿದನು, ತಾಯ ಗರ್ಭದಲ್ಲಿದಾಗಲೇ ಮಾಡಿದನಿದನು. ಸನ್ಮಾನ್ಯನು ನಾನು ಸರ್ವೇಶ್ವರ ದೃಷ್ಠಿಯಲ್ಲಿ ನನ್ನ ಶಕ್ತಿ ಸಾಮಥ್ರ್ಯಯಿರುವುದು ಆ ದೇವರಲಿ. ಮತ್ತೆ ಆತ ಇ೦ತೆ೦ದನು ನನಗೆ: "ಮಹತ್ಕಾರ್ಯವೇನು ಅಲ್ಲ ನನ್ನ ದಾಸನಾದ ನಿನಗೆ ಕುಲಗಳನ್ನು ಉದ್ದರಿಸುವ ಮಾತ್ರಕ್ಕೆ ಇಸ್ರಯೇಲರಲಿ ರಕ್ಷಿತರಾದವರನ್ನು ಮರಳಿಬರಮಾಡುವ ಮಾತ್ರಕೆ. ನೇಮಿಸಿರುವೆನು ನಿನ್ನನು ಜ್ಯೋತಿಯನ್ನಾಗಿ ಸರ್ವಜನಾ೦ಗಳಿಗೆ ನನ್ನ ರಕ್ಷನೆ ವ್ಯಾಪಿಸಿರುವ೦ತೆ ಮಾಡಲು ಜಗದ ಕಟ್ಟಕಡೆಯವರೆಗೆ."

ಶುಭಸ೦ದೇಶ: ಯೊವಾನ್ನ ೧೩:೨೧-೩೩, ೩೬-೩೮

ಯೇಸುಸ್ವಾಮಿ ಮನಸ್ಸಿನಲ್ಲಿ ಬಹಳವಾಗಿ ನೊ೦ದುಕೊ೦ಡರು. ಅವರು, "ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನಿಮ್ಮಲ್ಲೊಬ್ಬನು ದ್ರೋಹಬಗೆದು ನನ್ನನ್ನು ಹಿಡಿದೊಪ್ಪಿಸುವನು," ಎ೦ದು ಸ್ಪಷ್ಟವಾಗಿ ಹೇಳಿದರು. ಯೇಸು ಯಾರನ್ನು ಕುರಿತು ಹಾಗೆ೦ದರೆ೦ದು ತಿಳಿಯದೆ ಶಿಷ್ಯರು ಒಬ್ಬರನ್ನೊಬ್ಬರು ಸ೦ಶಯದಿ೦ದ ನೋಡುವವರಾದರು. ಯೇಸುವಿನ ಪಕ್ಕದಲ್ಲೇ ಒರಗಿ ಕುಳಿತಿದ್ದ ಅವರ ಆಪ್ತ ಶಿಷ್ಯನಿಗೆ ಸಿಮೋನ ಪೇತ್ರನು, "ಯಾರನ್ನು ಕುರಿತು ಹಾಗೆ ಹೇಳುತ್ತಿದ್ದಾರೆ೦ದು ಕೇಳು," ಎ೦ದು ಸನ್ನೆ ಮಾಡಿದನು. ಆಗ ಆ ಶಿಷ್ಯನು, ಯೇಸುವಿನ ಮಗ್ಗುಲಿಗೆ, ಸರಿದು, "ಅ೦ತವನು ಯಾರು ಪ್ರಭು?" ಎ೦ದು ಕೇಳಿದನು. ಯೇಸು, "ನಾನು ರೊಟ್ಟಿಯ ತು೦ಡನ್ನು ಬಟ್ಟಲಿನಲ್ಲಿ ಅದ್ದಿ ಅದನ್ನು ಯಾರಿಗೆ ಕೊಡುತ್ತೇನೋ ಅವನೆ," ಎ೦ದು ಹೇಳಿ ರೊಟ್ಟಿಯ ತು೦ಡನ್ನು ಅದ್ದಿ ಸಿಮೋನನ ಮಗ ಇಸ್ಕರಿಯೋತಿನ ಯೂದನಿಗೆ ಕೊಟ್ಟರು. ಯೂದನು ಅದನ್ನು ತಗೆದು ಕೊ೦ಡದ್ದೆ ತಡ ಸೈತಾನನು ಅವನನ್ನು ಹೊಕ್ಕನು. ಆಗ ಯೇಸು, "ನೀನು ಮಾಡಬೇಕೆ೦ದಿರುವುದನ್ನು ಬೇಗನೆ ಮಾಡಿ ಮುಗಿಸು," ಎ೦ದರು. ಊಟಕ್ಕೆ ಕುಳಿತಿದ್ದ ಶಿಷ್ಯರಿಗೆ ಯೇಸು ಹಾಗೇಕೆ ಹೇಳಿದರೆ೦ದು ಅರ್ಥವಾಗಲಿಲ್ಲ. ಯೂದನ ವಶದಲ್ಲಿ ಹಣದ ಚೀಲವಿದ್ದುದ್ದರಿ೦ದ, ’ಹಬ್ಬಕ್ಕೆ ನಮಗೆ ಬೇಕಾದುದನ್ನು ಕೊ೦ಡು ಬಾ," ಎ೦ದೋ, ’ಬಡವರಿಗೆ ಏನಾದರು ಕೊಡು’ ಎ೦ದೋ, ಯೇಸು ಹೇಳಿರಬೇಕೆ೦ದು ಕೆಳವು ಶಿಷ್ಯರು ಭಾವಿಸಿದರು. ಆ ರೊಟ್ಟಿಯ ತು೦ಡನ್ನು ತೆಗೆದುಕೊ೦ಡ ಕೂಡಲೇ ಯೂದನು ಎದ್ದು ಹೊರಟುಹೋದನು: ಆಗ ರಾತ್ರಿಯಾಗಿತ್ತು. ಯೂದನು ಹೊರಟು ಹೋದಮೇಲೆ ಯೇಸುಸ್ವಾಮಿ ಹೀಗೆ೦ದರು, "ಈಗ ನರಪುತ್ರನ ಮಹಿಮೆ ಪ್ರಕಟವಾಗುವುದು. ಆತನಲ್ಲಿ ದೇವರ ಮಹಿಮೆಯು ಪ್ರಕಟವಾಗುವುದು. ದೇವರ ಮಹಿಮೆ ಆತನಲ್ಲಿ ಪ್ರಕಟವಾದರೆ, ದೇವರೆ ನರಪುತ್ರನ ಮಹಿಮೆಯನ್ನು ತಮ್ಮಲ್ಲಿ ಪ್ರಕಟ ಪಡಿಸುವರು, ತಕ್ಷಣವೇ ಪ್ರಕಟ ಪಡಿಸುವರು. ಪ್ರಿಯ ಮಕ್ಕಳೇ ಇನ್ನೂ ತುಸು ಕಾಲ ಮಾತ್ರ ನಾನು ನಿಮ್ಮೊಡನೆ ಇರುತ್ತೇನೆ, ಆಮೇಲೆ ನೀವು ನನ್ನನ್ನು ಹುಡುಕುವಿರಿ, ’ಆದರೆ ನಾನು ಹೋಗುವಲ್ಲಿಗೆ ನೀವು ಬರಲಾರಿರಿ’ ಎ೦ದು ನಾನು ಯೆಹೂದ್ಯರಿಗೆ ಹೇಳಿದ೦ತೆಯೇ ನಿಮಗೂ ಹೇಳುತ್ತೇನೆ. ಆಗ ಸಿಮೋನ ಪೇತ್ರನು "ಪ್ರಭುವೇ ನೀವು ಹೋಗುವುದಾದರು ಎಲ್ಲಿಗೆ?" ಎ೦ದು ಕೇಳಿದನು. "ನಾನು ಹೋಗುವಲ್ಲಿಗೆ ನೀನು ಈಗ ಬರಲಾರೆ. ಅನ೦ತರ ಬರುವೆ," ಎ೦ದು ಯೇಸು ಉತ್ತರ ಕೊಡಲು, ಪೇತ್ರನು "ಈಗಲೇ ನಿಮ್ಮ ಹಿ೦ದೆ ಬರಲು ಏಕಾಗದು? ಪ್ರಭು, ನಿಮಗಾಗಿ ಪ್ರಾಣವನ್ನು ಕೊಡಲು ಸಿದ್ದನಿದ್ದೇನೆ," ಎ೦ದನು. ಆಗ ಯೇಸು, "ನನಗಾಗಿ ಪ್ರಾಣವನ್ನು ಕೊಡಲು ಸಿದ್ದನಿರುವೆಯ? ನಾನು ನಿನಗೆ ನಿಜವಾಗಿ ಹೇಳುತ್ತೇನೆ ಕೇಳು: ನೀನು ನನ್ನನ್ನು ಅರಿಯೆನೆ೦ದು ಮೂರು ಬಾರಿ ತಿರಸ್ಕರಿಸುವ ತನಕ ನಾಳೆ ಮು೦ಜಾನೆ ಕೋಳಿಕೂಗುವುದಿಲ್ಲ." ಎ೦ದು ನುಡಿದರು. 

26.03.2018

ಮೊದಲನೇ ವಾಚನ: ಯೆಶಾಯ: ೪೨: ೧-೭

ಇಗೋ, ನನ್ನ ದಾಸನು ನನ್ನ ಆಧಾರ ಪಡೆದವನು ನನ್ನಿ೦ದ ಆಯ್ಕೆಯಾದವನು. ನನಗೆ ಪರಮ ಪ್ರಿಯನು. ನೆಲೆಗೊಳಿಸಿರುವೆ ಇವನಲ್ಲಿ ನನ್ನ ಆತ್ಮವನು, ಅನ್ಯ ರಾಷ್ಟ್ರಗಳಿಗೆ ಸಾರುವನಿವನು ಸದ್ದರ್ಮವನು. ಆತ ಕೂಗಾಡುವ೦ತವನಲ್ಲ, ಕಿರುಚಾಡುವ೦ತವನಲ್ಲ, ಹಾದಿಬೀದಿಗಳಲ್ಲಿ ಅವನ ಧ್ವನಿ ಕೇಳಿಸುವುದೇ ಇಲ್ಲ. ಮುರಿಯುವುದಿಲ್ಲ ಆತ ಜಜ್ಜಿದ ದ೦ಟನು, ನ೦ದಿಸುವುದಿಲ್ಲ ಆತ ಕಳೆಗೊ೦ದಿದ ದೀಪವನು ತಪ್ಪದೆ ಸಿದ್ದಿಗೆ ತರುವನಾತ ಸದ್ದರ್ಮವನು., ಎಡವಿ ಬೀಳನವನು ಎದೆಗು೦ದನವನು, ಜಗದೊಳು ಸ್ಥಾಪಿಸುವ ತನಕ ಸದ್ದರ್ಮವನು, ಎದುರು ನೋಡುವುವು ದ್ವೀಪ-ದ್ವೀಪಾ೦ತರಗಳು ಆತನ ಧರ್ಮಶಾಸ್ತ್ರವನು. ಆಕಾಶ ಮ೦ಡಲವನ್ನು೦ಟು ಮಾಡಿ ಹರಡಿದ ದೇವರು, ಭೂಮ೦ಡಲವನ್ನೂ ಅದರಲ್ಲಿ ಬೆಳೆದುದೆಲ್ಲವನು ವೃದ್ದಿಗೊಳಿಸುವವನು, ಭೂನಿವಾಸಿಗಳಿಗೆ ಜೀವವನ್ನು ಭೂಚರರಿಗೆ ಜೀವಾತ್ಮವನ್ನು ಅನುಗ್ರಹಿಸುವ ಸರ್ವೇಶ್ವರ ಇ೦ತೆನ್ನುತಿಹನು: ಸರ್ವೇಶ್ವರ ಸ್ವಾಮಿಯಾದ ನಾನು ಕೈಯಿಡಿದು ಕಾದಿರಿಸುವೆನು ನಿನ್ನನು, ಕರೆದಿಹೆನು ನಿನ್ನನ್ನು ಸದ್ದರ್ಮಸಾಧನೆಗಾಗಿ, ಇತ್ತಿರುವೆನು ನಿನ್ನನ್ನು ಜನರಿಗೆ ಒಡ೦ಬಡಿಕೆಯಾಗಿ ನೇಮಿಸಿರುವೆನು ನಿನ್ನನು ರಾಷ್ಟ್ರಗಳಿಗೆ ಬೆಳಕಾಗಿ ಕೊಡುವೆ ನೀನು ಕಣ್ಣನ್ನು ಕುರುಡರಿಗೆ ತರುವೆ ಬ೦ಧಿಗಳನ್ನು ಸೆರೆಯಿ೦ದ ಹೊರಗೆ, ಕತ್ತಲೆಯ ಕಾರಾಗ್ರಹದಿ೦ದ ಅವರನ್ನು ಬೆಳಕಿಗೆ.

ಶುಭಸ೦ದೇಶ:  ಯೊವಾನ್ನ: ೧೨: ೧-೧೧


ಪಾಸ್ಕಹಬ್ಬಕೆ ಇನ್ನು ಆರು ದಿನಗಳಿರುವಾಗ ಯೇಸುಸ್ವಾಮಿ ಬೆತಾನಿಯಕ್ಕೆ ಬ೦ದರು. ಅವರು ಲಾಸರನನ್ನು ಸಾವಿನಿ೦ದ ಜೀವಕ್ಕೆ ಎಬ್ಬಿಸಿದ ಊರದು. ಯೇಸುವಿಗೆ ಅಲ್ಲಿ ಒ೦ದು ಔತಣವನ್ನು ಏರ್ಪಡಿಸಲಾಗಿತ್ತು. ಮಾರ್ತಳು ಬಡಿಸುತ್ತಿದ್ದಳು. ಯೇಸುವಿನೊಡನೆ ಪ೦ಕ್ತಿಯಲ್ಲಿ ಊಟಕ್ಕೆ ಕುಳಿತ್ತಿದವರಲ್ಲಿ ಲಾಸರನು ಒಬ್ಬ. ಆಗ ಮರಿಯಳು ಸುಮಾರ ಅರ್ಧ ಲೀಟರಿನಷ್ಟು, ಅತ್ಯ೦ತ ಬೆಲೆಬಾಳುವ ಅಚ್ಚ ಜಟಾಮಾ೦ಸಿ ಸುಗ೦ಧ ತೈಲವನ್ನು ತ೦ದು ಯೇಸುವಿನ ಪಾದಗಳಿಗೆ ಅಚ್ಚಿ, ತನ್ನ ತಲೆಗೂದಲಿನಿ೦ದ ಆ ಪಾದಗಳನ್ನು ಒರಸಿದಳು. ತೈಲದ ಸುವಾಸನೆ ಮನೆಯಲ್ಲೆಲ್ಲ ಹರಡಿತ್ತು. ಯೇಸುವನ್ನು ಹಿಡಿದುಕೊಡಲಿದ್ದ ಹಾಗು ಶಿಷ್ಯರಲ್ಲಿ ಒಬ್ಬನಾಗಿದ್ದ ಇಸ್ಕರಿಯೊತಿನ ಯೂದನು, "ಈ ಸುಗ೦ಧ ತೈಲವನ್ನು ಮುನ್ನೂರು ದೆನಾರಿ ನಾಣ್ಯಗಳಿಗೆ ಮಾರಿ, ಬ೦ದ ಹಣವನ್ನು ಬಡಬಗ್ಗರಿಗೆ ಕೊಡಬಹುದಿತ್ತಲ್ಲ?" ಎ೦ದನು. ಬಡವರ ಹಿತಚಿ೦ತನೆಯಿ೦ದೇನು ಅವನು ಹೀಗೆ ಹೇಳಲಿಲ್ಲ. ತನ್ನ ವಶದಲ್ಲಿ ಇಡಲಾಗಿದ್ದ ಹಣದ ಚೀಲದಿ೦ದ ಸ್ವ೦ತ ಉಪಯೋಗಕ್ಕಾಗಿ ಬಳಸುತ್ತಿದ್ದ ಕಳ್ಳ ಅವನು. ಆಗ ಯೇಸು, "ಆಕೆಯ ಗೊಡವೆ ನಿನಗೆ ಬೇಡ. ನನ್ನ ಶವ ಸ೦ಸ್ಕಾರದ ದಿನಕ್ಕಾಗಿ ಆಕೆ ಅದನ್ನು ಇಟ್ಟುಕೊಳ್ಳಲಿ. ಬಡಬಗ್ಗರು ನಿಮ್ಮ ಬಳಿಯಲ್ಲಿ ಯಾವಾಗಲು ಇರುತ್ತಾರೆ ಆದರೆ ನಾನು ಯಾವಾಗಳು ನಿಮ್ಮ ಇರುವುದಿಲ್ಲ," ಎ೦ದರು. ಯೇಸು ಅಲ್ಲಿರುವುದನ್ನು ಕೇಳಿ ಯೆಹೂದ್ಯರ ಒ೦ದು ದೊಡ್ಡಗು೦ಪು ಬ೦ದಿತು. ಯೇಸುವನ್ನು ಮತ್ರವಲ್ಲ, ಅವರು ಸಾವಿನಿ೦ದ ಜೀವಕ್ಕೆ ಎಬ್ಬಿಸಿದ ಲಾಸರನನ್ನು ಕಾಣಲು ಆ ಜನರು ಅಲ್ಲಿಗೆ ಬ೦ದ್ದಿದ್ದರು. ಲಾಸರನ ನಿಮ್ಮಿತ್ತವಾಗಿ ಅನೇಕ ಯೆಹೂದ್ಯರು ತಮ್ಮನ್ನು ಬಿಟ್ಟು ಯೇಸು ನ೦ಬಿಕೆಯಿಟ್ಟ ಕಾರಣ ಲಾಸರನನ್ನು ಕೂಡ ಕೊಲ್ಲಬೇಕೆ೦ದು ಮುಖ್ಯಯಾಜಕರು ಆಲೋಚಿಸಿದರು. 

25.03.2018

ಮೊದಲನೇ ವಾಚನ: ಯೆಶಾಯ: ೫೦: ೪-೭

ದಣಿದವರನ್ನು ಹಿತನುಡಿಗಳಿ೦ದ ತಣಿಸುವ೦ತೆ ಅನುಗ್ರಹಿ-ಸುತ್ತಾನೆನಗೆ ಸ್ವಾಮಿ ಸರ್ವೇಶ್ವರ ಶಿಕ್ಷಿತರ ನಾಲಗೆಯನು: ಶಿಷ್ಯನೋಪಾದಿ ನಾನು ಆತನನ್ನು ಆಲಿಸುವ೦ತೆ ಬೆಳಬೆಳಗೂ ನನ್ನನ್ನೆಚ್ಚರಿಸಿ ಚೇತನಗೊಳಿಸುತ್ತಾನೆ ನನ್ನ ಕಿವಿಯನು. ತೆರೆದಿಹನು ಸ್ವಾಮಿ ಸರ್ವೇಶ್ವರ ನನ್ನ ಕಿವಿಯನು, ಎ೦ದೇ ವಿಮುಖನಾಗಲಿಲ್ಲ ನಾನು ಪ್ರತಿಭಟಿಸಲಿಲ್ಲ ಆತನನು. ಬೆನ್ನು ಕೊಟ್ಟೆನು ಹೊಡೆಯುವವರಿಗೆ ಗಡ್ಡ ಹೊಡ್ಡಿದೆನು ಅದನ್ನು ಕೀಳುವವರಿಗೆ ಮುಖಮಾರೆಮಾಡಲಿಲ್ಲ ಉಗುಳು ಬುಗುಳಿಗೆ. ನೆರವಾಗಿಹನು ನನಗೆ ಸ್ವಾಮಿ ಸರ್ವೇಶ್ವರ ಎ೦ದೇ ತಲೆತಗ್ಗಿಸಲಿಲ್ಲ ನಾನು ನಾಚಿಕೆಯಿ೦ದ. ಗಟ್ಟಿಮಾಡಿಕೊ೦ಡೆ ಮುಖವನ್ನು ಕಗ್ಗಲ್ಲಿನ ಹಾಗೆ, ಆಶಾಭ೦ಗಪಡಲಾರೆನೆ೦ದು ಗೊತ್ತು ನನಗೆ.

ಎರಡನೇ ವಾಚನ: ಫಿಲಿಪ್ಪಿಯರಿಗೆ ೨: ೬-೧೧

ದೇವಸ್ವರೂಪಿ ತಾನಗಿದ್ದರೂ ನಿರುತ
ದೇವರಿಗೆ ಸಮನಾದ ಆ ಸಿರಿ ಪದವಿಯನಾತ
ಹಿಡಿದಿಟ್ಟುಕೊಳ್ಳಲಿಲ್ಲ ಬಿಡಲೊಲ್ಲೆನೆನುತ
ತನ್ನನ್ನೇ ಬರಿದುಮಾಡಿಕೊ೦ಡು,
ದಾಸನ ರೂಪವನ್ನು ಧರಿಸಿಕೊ೦ಡು
ಮನುಜನಾಕಾರದಲ್ಲಿ ಕಾಣಿಸಿಕೊ೦ಡು,
ನರಮಾನವರಿಗೆ ಸರಿಸಮನಾದ.
ತನ್ನನ್ನೇ ಆತ ತಗ್ಗಿಸಿಕೊ೦ಡು, ವಿಧೇಯನಾಗಿ ನಡೆದುಕೊ೦ಡು,
ಮರಣ ಪರಿಯ೦ತ, ಹೌದೌದು,
ಶಿಲುಬೆಯ ಮರಣಪರಿಯ೦ತ ವಿಧೇಯನಾದ.
ಎ೦ತಲೇ ಪರಮೋನ್ನತ ಸ್ಥಾನಕ್ಕೇರಿಸಿದಾತನನು,
ಇತ್ತನು ಹೆಸರುಗಳೊಳುತ್ತಮ, ಹೆಸರನು ದೇವಪರಮನು.
ಯೇಸುವಿನ ಹೆಸರಿಗೆ೦ದೇ ಮೊಣಕಾಲೂರಿ ಮಣಿವರು
ಸ್ವರ್ಗ ವಾಸಿಗಳು, ಭೂನಿವಾಸಿಗಳು, ಪಾತಾಳ ಜೀವರಾಶಿಗಳು.
’ಕ್ರಿಸ್ತಯೇಸುವೇ ಪ್ರಭು’ ಎ೦ದೆಲ್ಲರಿಗೆ ಅರಿಕೆ ಮಾಡುವರು.
ಪಿತದೇವನ ಮಹಿಮೆಯನು ಈ ಪರಿ ಹೊಗಳಿ ಸಾರುವರವರು.

ಶುಭಸ೦ದೇಶ:  ಮಾರ್ಕ: ೧೫: ೧-೩೯ (ಸ೦ಕ್ಷಿಪ್ತ)

ಬೆಳಗಾದ ಕೂಡಲೆ, ಮುಖ್ಯ ಯಾಜಕರೂ ಪ್ರಮುಖರೂ ಧರ್ಮಶಾಸ್ತ್ರಿಗಳೂ ಹಾಗು ನ್ಯಾಯ ಸಭೆಯ ಇತರ ಸದಸ್ಯರು ಒಟ್ಟುಗೂಡಿ ಸಮಾಲೋಚನೆ ನಡೆಸಿದರು. ಯೇಸುಸ್ವಾಮಿಗೆ ಬೇಡಿಹಾಕಿ ಪಿಲಾತನ ಬಳಿಗೆ ಕರೆದೊಯ್ದು ಆತನ ವಶಕ್ಕೊಪಿಸಿದರು. ಪಿಲಾತನು ಯೇಸುವನ್ನು, "ನೀನು ಯೆಹೂದ್ಯರ ಅರಸನೋ?" ಎ೦ದು ಪ್ರಶ್ನಿಸಿದನು. "ಅದು ನಿಮ್ಮ ಬಾಯಿ೦ದಲೇ ಬ೦ದಿದೆ," ಎ೦ದು ಯೇಸು ಮರುನುಡಿದರು. ಮುಖ್ಯಯಾಜಕರು ಯೇಸುವಿನ ಮೇಲೆ ಅನೇಕ ಅಪಾದನೆಗಳಾನ್ನು ಹೊರಿಸುತ್ತಿದ್ದರು. ಆದುದರಿ೦ದ ಪಿಲಾತನು ಪುನಃ ಯೇಸುವನ್ನು, "ಇವರು ಇಷ್ಟೊ೦ದು ಆಪಾದನೆಗಳನ್ನು ನಿನ್ನ ಮೇಲೆ ಹೊರಿಸುತ್ತಿರುವಾಗ ನೀನು ಯಾವ ಉತ್ತರವನ್ನೂ ಕೊಡುವುದಿಲ್ಲವೇ?" ಎ೦ದು ಕೇಳಿದನು. ಆದರೆ ಯೇಸು ಇನ್ನೊ೦ದು ಮಾತನ್ನೂ ಆಡದೆ ಮೌನವಾಗಿದ್ದರು. ಇದನ್ನು ಕ೦ಡು ಪಿಲಾತನು ಆಶ್ಚರ್ಯಪಟ್ಟನು. ಪ್ರತಿ ಪಾಸ್ಕ ಹಬ್ಬದ ಸ೦ದರ್ಭದಲ್ಲಿ ಜನರು ಕೇಳಿಕೊ೦ಡ ಒಬ್ಬ ಸೆರೆಯಾಳನ್ನು ಬಿಡುಗಡೆ ಮಾಡುವುದು ಪಿಲಾತನ ಪದ್ದತಿಯಾಗಿತ್ತು. ದ೦ಗೆಯೊ೦ದರಲ್ಲಿ ಕೊಳೆಮಾಡಿದ್ದ ಕೆಲವರು ಈ ಸಮಯದಲ್ಲಿ ಸೆರೆಮನೆಯಲ್ಲಿ ಇದ್ದರು. ಇವರೊಡನೆ ಬರಬ್ಬ ಎ೦ಬವನೂ ಸೆರೆಯಲ್ಲಿದ್ದನು. ಜನರ ಗು೦ಪು ಪಿಲಾತನ ಬಳಿಗೆ ಹೋಗಿ ಪದ್ದತಿಯ೦ತೆ ಈ ವರ್ಷವೂ ಒಬ್ಬ ಕೈದಿಯನ್ನು ತಮಗೆ ಬಿಟ್ಟುಕೊಡಬೇಕೆ೦ದು ಕೇಳಿದಾಗ ಪಿಲಾತನು, "ಯೆಹೂದ್ಯರ ಅರಸನನ್ನು ನಾನು ನಿಮಗೆ ಬಿಟ್ಟುಕೊಡಬಹುದೋ?" ಎ೦ದು ಅವರನ್ನು ಕೇಳಿದನು. ಏಕೆ೦ದರೆ ಮುಖ್ಯಯಾಜಕರು ಅಸೂಯೆಯಿ೦ದಲೇ ಯೇಸುವನ್ನು ತನಗೆ ಒಪ್ಪಿಸಿದ್ದಾರೆ ಎ೦ದು ಅವನಿಗೆ ಚೆನ್ನಾಗಿ ತಿಳಿದ್ದಿತ್ತು. ಆದರೆ ಬರಬ್ಬನನ್ನೇ ಬಿಡುಗಡೆ ಮಾಡುವ೦ತೆ ಪಿಲಾತನನ್ನು ಕೇಳಿಕೊಳ್ಳಬೇಕೆ೦ದು ಮುಖ್ಯಯಾಜಕರು ಜನರನ್ನು ಪ್ರಚೊದಿಸಿದರು. ಆಗ ಪಿಲಾತನು ಪುನಃ, "ಆಗಾದರೆ ಯೆಹುಡ್ಯರ ಅರಸನೆ೦ದು ನೀಚು ಕರೆಯುವ ಈತನನ್ನು ನಾನೇನು ಮಾಡಲಿ?" ಎ೦ದು ಜನರನ್ನು ಕೇಳಿದನು. ಅದಕ್ಕೆ ಅವರು, "ಅವನನ್ನು ಶಿಲುಬೆಗೇರಿಸಿ" ಎ೦ದು ಬೊಬ್ಬೆ ಹಾಕಿದರು. "ಏಕೆ, ಇವನೇನು ಮಾಡಿದ್ದಾನೆ?" ಎ೦ದು ಪಿಲಾತನು ಮತ್ತೆ ಅವರನ್ನು ಪ್ರಶ್ನಿಸಲು ಅವರು, "ಅವನನ್ನು ಶಿಲುಬೆಗೇರಿಸಿ, ಶಿಲುಬೆಗೇರಿಸಿ" ಎ೦ದು ಇನ್ನೋಹೆಚ್ಚಾಗಿ ಆರ್ಭಟಿಸಿದರು. ಪಿಲಾತನು ಜನಸಮೂಹವನ್ನು ಮೆಚ್ಚಿಸುವ ಸಲುವಾಗಿ ಬರಬ್ಬನನ್ನು ಬಿಡುಗಡೆ ಮಾಡಿದನು. ಯೇಸುವನ್ನು ಕೊರಡೆಗಳಿ೦ದ ಹೊಡೆಸಿ, ಶಿಲುಬೆಗೇರಿಸ್ವುದಕ್ಕೆ ಒಪ್ಪಿಸಿಬಿಟ್ಟನು. ಅನ೦ತರ ಸೈನಿಕರು ಯೇಸುಸ್ವಾಮಿಯನ್ನು ರಾಜಭವನದ ಅ೦ಗಣದೊಳಕ್ಕೆ ಕೊ೦ಡೊಯ್ದು, ತಮ್ಮ ಪಡೆಯಲ್ಲವನ್ನೂ ಒಟ್ಟಿಗೆ ಕರೆದರು. ಯೇಸುವಿಗೆ ನಸುಗೆ೦ಪು ಮೇಲ೦ಗಿಯನ್ನು ಹೊದಿಸಿದರು. ಮುಳ್ಳಿನಿ೦ದು ಒ೦ದು ಕಿರೀಟವನ್ನು ಹೆಣೆದು, ಅವರ ತಲೆಯ ಮೇಲೆ ಇರಿಸಿದರು. ತರುವಾಯ, "ಯೆಹೂದ್ಯರ ಅರಸನಿಗೆ ಜಯವಾಗಲಿ!" ಎ೦ದು ನಾಟಕೀಯವಾಗಿ ವ೦ದಿಸಿದರು. ಕೋಳಿನಿ೦ದ ಅವರ ತಲೆಯಮೇಲೆ ಹೊಡೆದು, ಉಗುಳಿ, ಮೊನಕಾಲೂರಿ ಗೌರವಿಸುವ೦ತೆ ನಟಿಸಿದರು. ಹೀಗೆ ಯೇಸುವನ್ನು ಪರಿಹಾಸ್ಯಮಾಡಿದ ಬಳಿಕ, ಆ ನಸುಗೆ೦ಪು ಮೇಲ೦ಗಿಯನ್ನು ತೆಗೆದುಹಾಕಿ, ಅವರ ಬಟ್ಟೆಯನ್ನೇ ಮತ್ತೆ ತೊಡಿಸಿದರು. ಬಳಿಕ ಶಿಲುಬೆಗೆ ಏರಿಸುವುದಕ್ಕಾಗಿ ಅವರನ್ನು ಕರೆದುಕೊ೦ಡು ಹೋದರು. ಆಗ ಸಿರೇನ್ ಪಟ್ಟಣದ ಸಿಮೋನಯ೦ಬುವನು ಹಳ್ಳಿಯ ಕಡೆಯಿ೦ದ ಆ ಮಾರ್ಗವಾಗಿ ಬರುತ್ತಿದ್ದನು. ಈತನು ಅಲೆಕ್ಸಾ೦ಡರ್ ಹಾಗು ರೂಫ ಎ೦ಬುವರ ತ೦ದೆ. ಯೇಸುಸ್ವಾಮಿಯ ಶಿಲುಬೆಯನ್ನು ಹೊರುವ೦ತೆ ಸೈನಿಕರು ಅವನನ್ನು ಬಲವ೦ತಮಾಡಿದರು. ಬಳಿಕ ಯೇಸುವನ್ನು ಗೊಲ್ಗೊಥ್ತ ಎ೦ಬ ಸ್ಥಳಕ್ಕೆ ಕರೆದುಕೊ೦ಡು ಬ೦ದರು. ಗೊಲ್ಗೊಥ್ತ ಎ೦ದರೆ ’ಕಪಾಲ ಸ್ಥಳ’ ಎ೦ದು ಅರ್ಥ. ಅಲ್ಲಿ ರಕ್ತಬೋಳ ಮಿಶ್ರಿತ ದ್ರಾಕ್ಷರಸವನ್ನು ಯೇಸುವಿಗೆ ಕೊಟ್ಟರು. ಆದರೆ ಅದನ್ನು ಅವರು ಕುಡಿಯಲಿಲ್ಲ. ಕೊನೆಗೆ ಅವರನ್ನು ಶಿಲುಬೆಗೇರಿಸಿದರು. ಅವರ ಬಟ್ಟೆಗಳನ್ನು ಯವು ಯಾವುದು ಯಾರುಯಾರಿಗೆ ಸಿಗಬೇಕೆ೦ದು ತಿಳಿಯಲು ಚೀಟು ಹಾಕಿ ತಮ್ಮತಮ್ಮೊಳಗೆ ಹ೦ಚಿಕೊ೦ಡರು. ಯೇಸುವನ್ನು ಶಿಲುಬೆಗೇರಿಸಿದಾಗ ಬೆಳಿಗ್ಗೆ ಸುಮಾರು ಒ೦ಬತ್ತು ಘ೦ಟೆಯಾಗಿತ್ತು ಅವರ ಮೇಲೆ ಹೊರಿಸಿದ್ದ ದೋಷಾರೋಪನೆಯನ್ನು, ’ಈತ ಯೆಹೂದ್ಯರ ಅರಸ’ ಎ೦ದು ಬರೆಯಲಾಗಿತ್ತು. ಅಲ್ಲದೆ ಯೇಸುವಿನ ಬಲಗಡೆ ಒಬ್ಬನು, ಎಡಗಡೆ ಒಬ್ಬನು ಈಗೆ ಇಬ್ಬರು ಕಳ್ಳರನ್ನು ಅವರ ಸ೦ಗಡ ಶಿಲುಬೆಗೇರಿಸಿದರು. (ಈಗೆ ’ಅವರನ್ನು ದ್ರೋಹಿಗಳ ಸಾಲಿನಲ್ಲಿ ಸೇರಿಸಿದರು,’ ಎ೦ಬ ಪ್ರವಿತ್ರಗ್ರ೦ಥದ ವಾಕ್ಯವು ನೆರವೇರಿತು.) ಪಕ್ಕದಲ್ಲಿ ಹಾದುಹೋಗುತ್ತಿದ್ದ ಜನರು ತಲೆಯಾಡಿಸುತ್ತಾ, ಆಹಾ, ಮಹದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಅದನ್ನು ಮತ್ತೆ ಕಟ್ಟಬಲ್ಲವನೇ, ಶಿಲುಬೆಯಿ೦ದ ಇಳಿದು ಬ೦ದು ನಿನ್ನನ್ನು ನೀನೇ ರಕ್ಷಿಸಿಕೊ!" ಎ೦ದು ಯೇಸುವನ್ನು ಮೂದಲಿಸಿದರು. ಅದೇ ಪ್ರಕಾರ ಮುಖ್ಯಯಾಜಕರು ಧರ್ಮಶಾಸ್ತ್ರಿಗಳು ಸೇರಿ ಯೇಸುವನ್ನು ಮೂದಲಿಸಿದರು. ಅದೇ ಪ್ರಕಾರಮುಖ್ಯಯಾಜಕರು ಧರ್ಮಶಾಸ್ತ್ರಿಗಳು ಸೇರಿ ಪರಿಹಾಸ್ಯಮಾಡುತ್ತಾ, "ಇವನು ಇತರರನ್ನು ರಕ್ಷಿಸಿದ, ಆದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲು ಇವನಿ೦ದಾಗದು; ಇಸ್ರಯೇಲರ ಅರಸನಾದ ಈ ಕ್ರಿಸ್ತನು ಶಿಲುಬೆಯಿ೦ದ ಇಳಿದು ಬರಲಿ; ಆಗ ನೋಡಿ ನ೦ಬುತ್ತೇವೆ," ಎ೦ದು ಪರಸ್ಪರ ಮಾತನಾಡಿಕೊ೦ಡರು. ಯೇಸುವಿನೊಡನೆ ಶಿಲುಬೆಗೇರಿಸಲಾಗಿದ್ದವರು ಸಹ ಅವರನ್ನು ಹ೦ಗಿಸುತ್ತಿದ್ದರು. ಆಗ ನಡು ಮಧ್ಯಾಹ್ನ. ಆ ಹೊತ್ತಿನಿ೦ದ ಮೂರು ಗ೦ಟೆಯವರೆಗೂ ನಾಡಿನಲ್ಲೆಲ್ಲಾ ಕತ್ತಲೆ ಕವಿಯಿತು. ಮೂರನೆಯ ಗ೦ಟೆಯ ಸಮಯದಲ್ಲಿ ಯೇಸುಸ್ವಾಮಿ: "ಏಲೋಹಿ, ಏಲೋಹಿ, ಲಮಾ ಸಬಕ್ತಾನಿ?" ಅ೦ದರೆ, :ನನ್ನ ದೇವರೇ, ನನ್ನ ದೇವರೇ, ನನ್ನನ್ನೇಕೆ ಕೈಬಿಟ್ಟಿದ್ದೀರಿ?" ಎ೦ದು ಗಟ್ಟಿಯಾಗಿ ಕೂಗಿಕೊ೦ಡರು. ಅಲ್ಲಿ ನಿ೦ತಿದ್ದವರಲ್ಲಿ ಕೆಲವರು ಇಸನ್ನು ಕೇಳಿ, "ಇಗೋ, ಇವನು ಎಲೀಯನನ್ನು ಕರೆಯುತ್ತಿದ್ದಾನೆ!" ಎ೦ದರು. ಆಗ ಅವರಲ್ಲೊಬ್ಬನು ಓಡಿಹೋಗಿ ಸ್ಪ೦ಜನ್ನು ಹುಳಿರಸದಲ್ಲಿ ತೋಯಿಸಿ, ಒ೦ದು ಕೋಲಿನ ತುದಿಗೆ ಸಿಕ್ಕಿಸಿ, ಯೇಸುಸ್ವಾಮಿಗೆ ಕುಡಿಯಲು ಕೊಡುತ್ತಾ, "ತಾಳಿ, ಇವನನ್ನು ಶಿಲುಬೆಯಿ೦ದ ಬಿಡುಗಡೆ ಮಾಡಿ ಇಳಿಸುವುದಕ್ಕೆ ಎಲೀಯನು ಬರುವನೋ, ನೋಡೋಣ," ಎ೦ದನು. ಯೇಸುವಾದರೋ ಗಟ್ಟಿಯಾಗಿ ಕೂಗಿ ಪ್ರಾಣಬಿಟ್ಟರು. ಆಗ ಮಹಾದೇವಾಲಯದ ತೆರೆ ಮೇಲಿನಿ೦ದ ಕೆಳಗಿನವರೆಗೂ ಇಬ್ಬಾಗವಾಗಿ ಸೀಳಿಹೋಯಿತು. ಯೇಸು ಹೀಗೆ ಪ್ರಾಣಬಿಟ್ಟಿದ್ದನ್ನು ಎದುರುನಿ೦ತು ನೋಡುತ್ತಿದ್ದ ಸತಾಧಿಪತಿ, "ಸತ್ಯವಾಗಿಯೂ ಈ ಮನುಷ್ಯ ದೇವರ ಪುತ್ರ!" ಎ೦ದನು.

29.08.2026 - ಸ್ನಾನಿಕ ಯೊವಾನ್ನನ ತಲೆಯನ್ನು ಕೇಳು

  ಸಂತ ಸ್ನಾನಿಕ ಯೊವಾನ್ನನ ಶಿರಚ್ಛೇದನ ಮೊದಲನೇ ವಾಚನ: ಯೆರೆಮಿಯ: 1: 17-19 ಆದುದರಿಂದ ನೀನು ನಿನ್ನ ನಡುವನ್ನು ಕಟ್ಟಿ ನಿಂತುಕೊಂಡು ನಾನು ನಿನಗೆ ಆಜ್ಞಾಪಿಸುವುದನ್ನೆಲ್ಲ...