26.02.24 - "ನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದು ಕೊಡುವರು,”

 ಮೊದಲನೆಯ ವಾಚನ : ದಾನಿಯೇಲ 9: 4-10

ಹೇ ಸರ್ವೇಶ್ವರಾಮಹೋನ್ನತರೂ ಭಯಭಕ್ತಿಗೆ ಪಾತ್ರರೂ ಆದ ದೇವರೇನಿಮ್ಮನ್ನು ಪ್ರೀತಿಸಿನಿಮ್ಮ ಆಜ್ಞೆಗಳನ್ನು ಅನುಸರಿಸುವವರಿಗೆ ನೀವು ಮಾಡಿದ ವಾಗ್ದಾನಗಳನ್ನು ಪ್ರೀತಿಯಿಂದ ನೆರವೇರಿಸುತ್ತೀರಿ.

ನಾವು ಪಾಪಾಪರಾಧಗಳನ್ನು ಮಾಡಿಕೆಟ್ಟವರಾಗಿ ನಡೆದಿದ್ದೇವೆನಿಮಗೆ ವಿರುದ್ಧ ತಿರುಗಿಬಿದ್ದುನಿಮ್ಮ ಆಜ್ಞಾವಿಧಿಗಳನ್ನು ತೊರೆದುಬಿಟ್ಟಿದ್ದೇವೆಅರಸರಿಗೆಒಡೆಯರಿಗೆಹಿರಿಯರಿಗೆ ಹಾಗು ಜನಸಾಮಾನ್ಯರಿಗೆ ನಿಮ್ಮ ದಾಸರಾದ ಪ್ರವಾದಿಗಳು ನಿಮ್ಮ ಹೆಸರಿನಲ್ಲಿ ನುಡಿದ ಮಾತುಗಳಿಗೆ ನಾವು ಕಿವಿಗೊಡಲೇ ಇಲ್ಲಸರ್ವೇಶ್ವರಾನೀವು ಸತ್ಯಸ್ವರೂಪಿನಾವೋ ಲಜ್ಜೆಗೆಟ್ಟವರುಹೌದುಯೆಹೂದ್ಯರು ಹಾಗು ಜೆರುಸಲೇಮಿನ ನಿವಾಸಿಗಳು ಈಗಾಗಲೆ ನಿಮಗೆ ವಿರುದ್ಧ ಮಾಡಿದ ದ್ರೋಹದ ನಿಮಿತ್ತ ನಿಮ್ಮಿಂದ ದೇಶವಿದೇಶಗಳಿಗೆ ತಳ್ಳಲ್ಪಟ್ಟಿದ್ದಾರೆದೂರದ ದೇಶಗಳಿಗೂ ಹತ್ತಿರದ ನಾಡುಗಳಿಗೂ ಚದರಿಹೋಗಿರುವ ಎಲ್ಲ ಇಸ್ರಯೇಲರು ನಾಚಿಕೆಗೆ ಈಡಾಗಿದ್ದಾರೆಸ್ವಾಮೀನಿಮಗೆ ವಿರುದ್ಧ ಪಾಪಮಾಡಿದ್ದರಿಂದ ನಾವೂ ನಮ್ಮ ಅರಸರೂ ಒಡೆಯರೂ ಹಿರಿಯರೂ ನಾಚಿಕೆಗೆ ಗುರಿಯಾಗಿದ್ದೇವೆನಮ್ಮ ದೇವರಾದ ಸರ್ವೇಶ್ವರನಮ್ಮನ್ನು ಕರುಣಿಸುವವರೂ ಕ್ಷಮಿಸುವವರೂ ಆಗಿದ್ದಾರೆಆದರೆ ನಾವು ಅವರಿಗೆ ವಿರುದ್ಧ ತಿರುಗಿಬಿದ್ದೆವುನಮ್ಮ ದೇವರಾದ ಸರ್ವೇಶ್ವರನ ಮಾತನ್ನು ಕೇಳಲಿಲ್ಲಅವರ ದಾಸರಾದ ಪ್ರವಾದಿಗಳ ಮುಖಾಂತರ ನಮಗೆ ಗೊತ್ತುಮಾಡಿದ ಸನ್ಮಾರ್ಗದಲ್ಲಿ ನಾವು ನಡೆಯಲಿಲ್ಲ.

ಶುಭಸಂದೇಶ : ಲೂಕ 6: 36-38 


ನಿಮ್ಮ ತಂದೆಯಾದ ದೇವರಂತೆ ನೀವೂ ದಯಾವಂತರಾಗಿರಿ. ನೀವು ಇತರರ ಬಗ್ಗೆ ತೀರ್ಪು ಕೊಡಬೇಡಿಆಗ ದೇವರು ನಿಮ್ಮ ಬಗ್ಗೆ ತೀರ್ಪು ಕೊಡುವುದಿಲ್ಲಪರರನ್ನು ದಂಡನೆಗೆ ಗುರಿ ಮಾಡಬೇಡಿದೇವರು ನಿಮ್ಮನ್ನೂ ದಂಡನೆಗೆ ಗುರಿ ಮಾಡುವುದಿಲ್ಲಪರರನ್ನು ಕ್ಷಮಿಸಿರಿದೇವರು ನಿಮ್ಮನ್ನೂ ಕ್ಷಮಿಸುವರುಪರರಿಗೆ ಕೊಡಿದೇವರು ನಿಮಗೂ ಕೊಡುವರುಅಳತೆಯಲ್ಲಿ ತುಂಬಿಕುಲುಕಿಅದುಮಿ ತುಳುಕುವಂತೆ ಅಳೆದು ನಿಮ್ಮ ಮಡಿಲಿಗೆ ಹಾಕುವರುನೀವು ಕೊಟ್ಟ ಅಳತೆಯಲ್ಲೇ ದೇವರು ನಿಮಗೂ ಅಳೆದು ಕೊಡುವರು,” ಎಂದರು.


ಮನಸ್ಸಿಗೊಂದಿಷ್ಟು : " ನೀವು ಕೊಟ್ಟ ಅಳತೆಯಲ್ಲೇ ನಿಮಗೂ ಕೊಡಲಾಗುತ್ತದೆ" ಎನ್ನುತ್ತಾರೆ ಯೇಸು . ಕ್ರೈಸ್ತರು  ಅಥವಾ ಕ್ರಿಸ್ತನ ಹಿಂಬಾಲಕರು  ಪಾಲಿಸಬೇಕಾದ ಮೌಲ್ಯಗಳು ಈ ಲೋಕದ ಅಳತೆಗೋಲಿನಲ್ಲಿ ಅಲ್ಲ , ಆದರೆ ದೇವರ ಅಳತೆಯಲ್ಲಿ. ನಮ್ಮ ಪ್ರೀತಿ, ಸಹನೆ, ಕ್ಷಮೆ ಎಲ್ಲವೂ ಮಾನವ ಅಳತೆಯನ್ನು ಮೀರಿ ದೈವತ್ವದ ಮಟ್ಟದಲ್ಲಿ ಇರಬೇಕೆನ್ನುವುದು ಕ್ರಿಸ್ತ ನಮ್ಮಿಂದ ಬಯಸುತ್ತಿದ್ದಾರೆ. "ಸಾಧ್ಯವೇ?" ಎನ್ನುವುದು ನಮ್ಮ ಪ್ರಶ್ನೆಯಾದರೆ, "ಎಲ್ಲವೂ  ಸಾಧ್ಯ" ಎನ್ನುವುದು ದೈವ ಪ್ರೀತಿಯನ್ನು ಅನುಭವಿಸಿರುವ ನಾವೇ ಕಂಡುಕೊಳ್ಳಬಹುದಾದ ಉತ್ತರ.    

ಆ ಅಳತೆಯ ಎತ್ತರಕ್ಕಾಗಿ ಹಾತೊರೆಯೋಣ.

No comments:

Post a Comment

25.02.2026 - ಈ ಪೀಳಿಗೆ ಕೆಟ್ಟ ಪೀಳಿಗೆ. ಇದು ಅದ್ಭುತಕಾರ್ಯವನ್ನು ಸಂಕೇತವಾಗಿ ಕೋರುತ್ತದೆ. ಪ್ರವಾದಿ ಯೋನನ ಸಂಕೇತವೇ ಹೊರತು ಬೇರೆ ಯಾವ ಸಂಕೇತವೂ ಇದಕ್ಕೆ ದೊರಕದು

  ಮೊದಲನೇ ವಾಚನ: ಯೋನ 3: 1-10 ಯೋನನಿಗೆ ಆ ಸ್ವಾಮಿಯ ವಾಣಿ ಪುನಃ ಕೇಳಿಸಿತು: “ಎದ್ದು ಮಹಾನಗರವಾದ ನಿನೆವೆಗೆ ಹೋಗು. ನಾನು ನಿನಗೆ ತಿಳಿಸಿದ ಸಂದೇಶವನ್ನು ಅಲ್ಲಿಯ ನಿವಾಸಿ...