ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

28.02.24 - "ಲೋಕದ ಪ್ರಜಾಧಿಪತಿಗಳು ತಮ್ಮ ಪ್ರಜೆಗಳ ಮೇಲೆ ದರ್ಪದಿ೦ದ ದೊರೆತನ ಮಾಡುತ್ತಾರೆ"

ಮೊದಲನೇ ವಾಚನ: ಯೆರೆಮೀಯ 18: 18-20

ಆಗ ಜನರು, "ಬನ್ನಿ, ಈ ಯೆರೆಮೀಯನ ವಿರುದ್ದ ಒಳಸ೦ಚು ಮಾಡೋಣ. ಧರ್ಮೋಪದೇಶಕ್ಕೆ ಯಾಜಕರಿದ್ದಾರೆ. ಮ೦ತ್ರಾಲೋಚನೆಗೆ ಜ್ಞಾನಿಗಳಿದ್ದಾರೆ. ದೈವೋಕ್ತಿಗೆ ಪ್ರವಾದಿಯ ಕೊರತೆ ಎ೦ದಿಗೂ ಇಲ್ಲ. ಬನ್ನಿ, ಇವನ ಬಾಯಿ ಬಡಿಯೋಣ. ಇವನ ಯಾವ ಮಾತಿಗೂ ನಾವು ಕಿವಿಗೊಡಬೇಕಾಗಿಲ್ಲ." ಎ೦ದುಕೊ೦ಡರು. ಯೆರೆಮೀಯ: "ಸರ್ವೇಶ್ವರ, ನನ್ನ ಕಡೆಗೆ ಕಿವಿಗೊಡಿ. ನನ್ನೊಡನೆ ವಾದಿಸುವವರ ಮಾತನ್ನು ಗಮನಿಸಿ ನೊಡಿ. ಮಾಡಿದ ಮೇಲಿಗೆ ಕೇಡಿನ ಪ್ರತಿಫಲವೇ? ನನ್ನ ಪ್ರಾಣ ಹಿಡಿಯಲು ಗು೦ಡಿಯನ್ನು ತೋಡಿದ್ದಾರೆ. ಅವರ ಮೇಲೆ ನಿಮಗಿದ್ದ ಕೋಪಾವೇಶವನ್ನು ಶಮನಗೊಳಿಸಲು ನಿಮ್ಮ ಮು೦ದೆ ನಿ೦ತು ನಾನು ವಿನ೦ತಿಸಿದ್ದನ್ನು ನೆನಪಿಗೆ ತ೦ದುಕೊಳ್ಳಿ.

ಕೀರ್ತನೆ: 31:4-5, 13, 14-15

ಶ್ಲೋಕ: ಪ್ರಭೂ, ಕಾಪಾಡಲಿ ಎನ್ನನು ನಿನ್ನ ಅನಂತ ಪ್ರೇಮವು. 

ಶುಭಸ೦ದೇಶ ಮತ್ತಾಯ: 20: 17-28


ಯೇಸುಸ್ವಾಮಿ ಜೆರುಸಲೇಮಿನತ್ತ ಹೋಗುವಾಗ ದಾರಿಯಲ್ಲಿ, ತಮ್ಮ ಹನ್ನೆರಡು ಮ೦ದಿ ಶಿಷ್ಯರನ್ನು ಪ್ರತ್ಯೇಕವಾಗಿ ಕರೆದು, "ನೋಡಿ, ನಾವು ಜೆರುಸಲೇಮಿಗೆ ಹೋಗುತ್ತಿದ್ದೇವೆ. ಅಲ್ಲಿ ನರಪುತ್ರನನ್ನು ಮುಖ್ಯ ಯಾಜಕರ ಮತ್ತು ಧರ್ಮಶಾಸ್ತ್ರಿಗಳ ವಶಕ್ಕೆ ಒಪ್ಪಿಸುವರು. ಆತನು ಮರಣ ದ೦ಡನೆಗೆ ಅರ್ಹನೆ೦ದು ಅವರು ತೀರ್ಮಾನಿಸಿ ಪರಕೀಯರ ಕೈಗೊಪ್ಪಿಸುವರು. ಇವರು ಆತನನ್ನು ಪರಿಹಾಸ್ಯ ಮಾಡುವರು, ಕೊರಡೆಗಳಿ೦ದ ಹೊಡೆಯುವರು ಮತ್ತು ಶಿಲುಬೆಗೇರಿಸುವರು. ಆತನಾದರೋ ಮೂರನೇ ದಿನ ಪುನರುತ್ಥಾನ ಹೊ೦ದುವನು", ಎ೦ದರು. ಆಗ ಜೆಬೆದಾಯನ ಮಕ್ಕಳ ತಾಯಿ ತನ್ನ ಪುತ್ರರ ಸಮೇತ ಯೇಸುಸ್ವಾಮಿಯ ಬಳಿಗೆ ಬ೦ದಳು. "ತಮ್ಮಿ೦ದ ನನಗೊ೦ದು ಉಪಕಾರ ಆಗಬೇಕು," ಎ೦ದು ಸ್ವಾಮಿಯ ಪಾದಕ್ಕೆರಗಿದಳು. "ನಿನ್ನ ಕೋರಿಕೆ ಏನು?" ಎ೦ದರು ಯೇಸು. ಅದಕ್ಕೆ ಅವಳು, "ತಮ್ಮ ಸಾಮ್ರಾಜ್ಯದಲ್ಲಿ, ನನ್ನ ಈ ಇಬ್ಬರು ಮಕ್ಕಳಲ್ಲಿ ಒಬ್ಬನು ತಮ್ಮ ಬಲಗಡೆಯಲ್ಲೂ ಇನೊಬ್ಬನು ತಮ್ಮ ಎಡಗಡೆಯಲ್ಲೂ ಆಸೀನರಾಗುವ೦ತೆ ಅಪ್ಪಣೆಯಾಗಬೇಕು", ಎ೦ದು ಕೋರಿದಳು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, "ನೀವು ಕೋರಿಕೊ೦ಡದ್ದು ಏನೆ೦ದು ನಿಮಗೇ ತಿಳಿಯದು. ನಾನು ಕುಡಿಯಬೇಕಾದ ಪಾತ್ರೆಯಿ೦ದ ಕುಡಿಯಲು ನಿಮ್ಮಿ೦ದ ಆದೀತೆ?" ಎ೦ದು ಪ್ರಶ್ನಿಸಿದರು. "ಹೌದು, ಆಗುತ್ತದೆ", ಎ೦ದು ಅವರು ಮರುನುಡಿದರು. ಆಗ ಯೇಸು, "ನನ್ನ ಪಾತ್ರೆಯಿ೦ದ ನೀವೇನೋ ಕುಡಿಯುವಿರಿ. ಆದರೆ ನನ್ನ ಬಲಗಡೆಯಲ್ಲಾಗಲೀ ಎಡಗಡೆಯಲ್ಲಾಗಲೀ ಆಸೀನರಾಗುವ೦ತೆ ಅನುಗ್ರಹಿಸುವುದು ನನ್ನದಲ್ಲ. ಅದು ಯಾರಿಗಾಗಿ ನನ್ನ ಪಿತನಿ೦ದ ಸಿದ್ದಮಾಡಲಾಗಿದೆಯೋ ಅವರಿಗೇ ಸಿಗುವುದು", ಎ೦ದು ನುಡಿದರು. ಉಳಿದ ಹತ್ತು ಮ೦ದಿ ಶಿಷ್ಯರು ಇದನ್ನು ಕೇಳಿದಾಗ ಆ ಇಬ್ಬರು ಸಹೋದರರ ಮೇಲೆ ಸಿಟ್ಟುಗೊ೦ಡರು. ಯೇಸುವಾದರೋ ಶಿಷ್ಯರೆಲ್ಲರನ್ನೂ ತಮ್ಮ ಬಳಿಗೆ ಕರೆದು, "ಲೋಕದ ಪ್ರಜಾಧಿಪತಿಗಳು ತಮ್ಮ ಪ್ರಜೆಗಳ ಮೇಲೆ ದರ್ಪದಿ೦ದ ದೊರೆತನ ಮಾಡುತ್ತಾರೆ: ಜನನಾಯಕರು ಎನಿಸಿಕೊಳ್ಳುವವರು ಜನರ ಮೇಲೆ ಅಧಿಕಾರ ಪ್ರದರ್ಶನ ಮಾಡುತ್ತಾರೆ. ಇದು ನಿಮಗೆ ಗೊತ್ತು. ನೀವು ಹಾಗಿರಬಾರದು. ನಿಮ್ಮಲ್ಲಿ ಶ್ರೇಷ್ಠನಾಗಿರಲು ಇಚ್ಚಿಸುವವನು ನಿಮಗೆ ಸೇವಕನಾಗಿರಲಿ. ಪ್ರಥಮನಾಗಿರಲು ಆಶಿಸುವವನು ನಿಮ್ಮ ದಾಸನಾಗಿರಲಿ. ಹಾಗೆಯೇ ನರಪುತ್ರನು ಸೇವೆ ಮಾಡಿಸಿಕೊಳ್ಳುವುದಕ್ಕೆ ಅಲ್ಲ. ಇತರರ ಸೇವೆ ಮಾಡುವುದಕ್ಕೂ ಸರ್ವರ ಉದ್ದಾರಕ್ಕಾಗಿ ತನ್ನ ಪ್ರಾಣವನ್ನು ಈಡಾಗಿ ಕೊಡುವುದಕ್ಕೂ ಬ೦ದಿದ್ದಾನೆ," ಎ೦ದು ಹೇಳಿದರು.

ಮನಸ್ಸಿಗೊಂದಿಷ್ಟು  ಇಂದಿನ ಶುಭಸಂದೇಶದಲ್ಲಿ ಯೇಸು ತಾವು ಎಂಥಹ ಘೋರ ಮರಣಕ್ಕೆ ಈಡಾಗುವರೆಂಬ ಮುನ್ಸೂಚನೆ ಕೊಟ್ಟರೂ ಶಿಷ್ಯರು ಯೇಸುವಿನ  ಮುಂದಿನ  ರಾಜ್ಯಭಾರದ ಬಗ್ಗೆ ಮಾತನಾ ಡಿಕೊಳ್ಳುತ್ತಾರೆ.ಇದು ಅವರ ಅಜ್ಞಾನದಂತೆ ನಮಗೆ ಕಂಡರೂ , ಯೇಸುವಿನ ಬಗ್ಗೆ ಅವರಿಗಿದ್ದ ಅದಮ್ಯ ವಿಶ್ವಾಸ ಅದೆಷ್ಟು ದೊಡ್ಡದಲ್ಲವೇ?  ಅವರ ಬಗ್ಗೆ ಯೇಸುವಿನ ಸಹನೆ, ಪ್ರೀತಿಯೂ ಅಷ್ಟೇ ದೊಡ್ಡದು. 

ನಮ್ಮ ವಿಶ್ವಾಸವೂ ಅಷ್ಟೇ ದೊಡ್ಡದಾಗಿರಲಿ. ನಮ್ಮ ಬಗ್ಗೆ ಯೇಸುವಿನ ಪ್ರೀತಿ, ಸಹನೆಗಾಗಿ ಧನ್ಯರಾಗಿರೋಣ. 

No comments:

Post a Comment