ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

19.02.24 - "ನಾನು ಹಸಿದಿದ್ದೆ, ನನಗೆ ಆಹಾರ ಕೊಟ್ಟಿರಿ; ಬಾಯಾರಿದ್ದೆ, ಕುಡಿಯಲು ಕೊಟ್ಟಿರಿ"

ಮೊದಲನೇ ವಾಚನ: ಯಾಜಕಕಾಂಡ 19:1-2, 11-18

ಮೋಶೆಗೆ ಹೇಳಿದರು: “ನಿಮ್ಮ ದೇವರಾದ ಸರ್ವೇಶ್ವರನೆಂಬ ನಾನು ಪರಿಶುದ್ಧ ನಾಗಿರುವಂತೆ ನೀವು ಕೂಡ ಪರಿಶುದ್ಧರಾಗಿರಬೇಕು. ಕಳಬೇಡಹುಸಿಯನ್ನು ನುಡಿಯಲು ಬೇಡಒಬ್ಬರನ್ನೊಬ್ಬರು ಮೋಸಗೊಳಿಸುವುದು ಬೇಡ. ನನ್ನ ಹೆಸರಿನ ಮೇಲೆ ಸುಳ್ಳಾಣೆಯಿಟ್ಟು ನಿನ್ನ ದೇವರ ನಾಮಕ್ಕೆ ಅಪಕೀರ್ತಿ ತರಬೇಡನಾನೇ ಸರ್ವೇಶ್ವರ.ಮತ್ತೊಬ್ಬನನ್ನು ಬಲಾತ್ಕರಿಸಬೇಡಅವನ ಸೊತ್ತನ್ನು ಅಪಹರಿಸಬೇಡಕೂಲಿಯವನ ಕೂಲಿಯನ್ನು ಮರುದಿನದವರೆಗೆ ನಿನ್ನ ಬಳಿಯಲ್ಲೇ ಇಟ್ಟುಕೊಳ್ಳಬೇಡ. ಕಿವುಡರನ್ನು ದೂಷಿಸಬೇಡಕುರುಡರು ನಡೆಯುವ ದಾರಿಯಲ್ಲಿ ಎರಡು ಕಲ್ಲನ್ನು ಇಡಬೇಡನಿನ್ನ ದೇವರಲ್ಲಿ ಭಯಭಕ್ತಿಯಿರಲಿನಾನೇ ಸರ್ವೇಶ್ವರ. ವ್ಯಾಜ್ಯತೀರಿಸುವಾಗ ಅನ್ಯಾಯವಾದ ತೀರ್ಪನ್ನು ಕೊಡಬೇಡಬಡವನ ಬಡತನವನ್ನಾಗಲಿದೊಡ್ಡವನ ಘನತೆಯನ್ನಾಗಲಿ ಲಕ್ಷ್ಯಮಾಡದೆ ಪಕ್ಷಪಾತವಿಲ್ಲದ ತೀರ್ಪನ್ನು ಕೊಡು.ನಿನ್ನ ಜನರ ನಡುವೆ ಚಾಡಿಕೋರನಾಗಿ ತಿರುಗಾಡಬೇಡಮತ್ತೊಬ್ಬನಿಗೆ ಮರಣಶಿಕ್ಷೆ ಆಗಲೇಬೇಕೆಂದು ಛಲಹಿಡಿಯಬೇಡನಾನೇ ಸರ್ವೇಶ್ವರ.ಸಹೋದರನ ಬಗ್ಗೆ ಒಳಗೊಳಗೇ ಹಗೆ ಇಟ್ಟುಕೊಳ್ಳಬೇಡನೆರೆಯವನ ದೋಷಕ್ಕೆ ನೀನು ಒಳಗಾಗದಂತೆ ಅವನ ತಪ್ಪನ್ನು ಅವನಿಗೆ ಎತ್ತಿ ತೋರಿಸಲೇಬೇಕು. ನಿನ್ನ ಸ್ವಜನರಲ್ಲಿ ಯಾರಿಗೂ ಕೇಡಿಗೆ ಕೇಡು ಮಾಡಬೇಡಅವರಿಗೆ ವಿರುದ್ಧ ಮತ್ಸರ ಇಟ್ಟುಕೊಳ್ಳಬೇಡನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸುನಾನು ಸರ್ವೇಶ್ವರ.

ಕೀರ್ತನೆ : 19:8,9,10,15

ಶ್ಲೋಕ : ಸ್ವಾಮಿ ಸರ್ವೇಶ್ವರಾ, ನಿಮ್ಮ ಮಾತುಗಳೇ ಆತ್ಮ ಮತ್ತು ಜೀವವಾಗಿದೆ

ಶುಭಸಂದೇಶ : ಮತ್ತಾಯ  25:31-46 

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು : ನರಪುತ್ರನು ತನ್ನ ಮಹಿಮೆಯಲ್ಲಿ ಸಮಸ್ತ ದೇವದೂತರ ಸಮೇತ ಬರುವಾಗ ತನ್ನ ಮಹಿಮಾನ್ವಿತ ಸಿಂಹಾಸನದಲ್ಲಿ ಆಸೀನನಾಗಿರುವನು. ಸರ್ವಜನಾಂಗಗಳನ್ನು ಆತನ ಸಮ್ಮುಖದಲ್ಲಿ ಒಟ್ಟುಗೂಡಿಸಲಾಗುವುದುಕುರುಬನು ಕುರಿಗಳನ್ನು ಆಡುಗಳಿಂದ ಬೇರ್ಪಡಿಸುವಂತೆ ಆತನು ಅವರನ್ನು ಬೇರ್ಪಡಿಸುವನು. ಕುರಿಗಳನ್ನು ತನ್ನ ಬಲಗಡೆಯಲ್ಲೂ ಆಡುಗಳನ್ನು ತನ್ನ ಎಡಗಡೆಯಲ್ಲೂ ಇರಿಸುವನು. ಆಗ ಅರಸನು ತನ್ನ ಬಲಗಡೆಯಿರುವ ಜನರಿಗೆ, ‘ನನ್ನ ಪಿತನಿಂದ ಧನ್ಯರೆನಿಸಿಕೊಂಡವರೇಬನ್ನಿಲೋಕಾದಿಯಿಂದ ನಿಮಗಾಗಿ ಸಿದ್ಧಮಾಡಿದ ಸಾಮ್ರಾಜ್ಯವನ್ನು ಸ್ವಾಸ್ತ್ಯವಾಗಿ ಪಡೆಯಿರಿ. ಏಕೆಂದರೆನಾನು ಹಸಿದಿದ್ದೆನನಗೆ ಆಹಾರ ಕೊಟ್ಟಿರಿಬಾಯಾರಿದ್ದೆಕುಡಿಯಲು ಕೊಟ್ಟಿರಿಅಪರಿಚಿತನಾಗಿದ್ದೆನನಗೆ ಆಶ್ರಯ ಕೊಟ್ಟಿರಿ. ಬಟ್ಟೆಬರೆಯಿಲ್ಲದೆ ಇದ್ದೆನನಗೆ ಉಡಲು ಕೊಟ್ಟಿರಿರೋಗದಿಂದಿದ್ದೆನನ್ನನ್ನು ಆರೈಕೆಮಾಡಿದಿರಿಬಂಧಿಯಾಗಿದ್ದೆನೀವು ನನ್ನನ್ನು ಸಂಧಿಸಿದಿರಿ,’ ಎಂದು ಹೇಳುವನು. ಅದಕ್ಕೆ  ಸಜ್ಜನರು, ‘ಸ್ವಾಮೀತಾವು ಯಾವಾಗ ಹಸಿದಿದ್ದನ್ನು ಕಂಡು ನಾವು ಆಹಾರ ಕೊಟ್ಟೆವುಬಾಯಾರಿದ್ದನ್ನು ಕಂಡು ಕುಡಿಯಲು ಕೊಟ್ಟೆವುಯಾವಾಗ ತಾವು ಅಪರಿಚಿತರಾಗಿದ್ದನ್ನು ಕಂಡು ನಾವು ಆಶ್ರಯಕೊಟ್ಟೆವುಬಟ್ಟೆಬರೆಯಿಲ್ಲದ್ದನ್ನು ಕಂಡು ಉಡಲು ಕೊಟ್ಟೆವುತಾವು ರೋಗಿಯಾಗಿರುವುದನ್ನು ಅಥವಾ ಬಂಧಿಯಾಗಿರುವುದನ್ನು ಕಂಡು ನಾವು ಸಂಧಿಸಲು ಬಂದೆವು?’ ಎಂದು ಕೇಳುವರು. ಆಗ ಅರಸನು ಪ್ರತ್ಯುತ್ತರವಾಗಿ, ‘ ನನ್ನ ಸೋದರರಲ್ಲಿ ಒಬ್ಬನಿಗೆಅವನೆಷ್ಟೇ ಕನಿಷ್ಟನಾಗಿರಲಿನೀವು ಹೀಗೆ ಮಾಡಿದಾಗಲೆಲ್ಲಾ ಅದನ್ನು ನನಗೇ ಮಾಡಿದಿರಿಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ,’ ಎನ್ನುವನು.

ಅನಂತರ ಆತನು ತನ್ನ ಎಡಗಡೆ ಇರುವವರನ್ನು ನೋಡಿ, ‘ಶಾಪಗ್ರಸ್ತರೇನನ್ನಿಂದ ತೊಲಗಿರಿಪಿಶಾಚಿಗೂ ಅವನ ದೂತರಿಗೂ ಸಿದ್ಧಮಾಡಿರುವ ಆರದ ಬೆಂಕಿಗೆ ಬೀಳಿರಿ. ಏಕೆಂದರೆ ನಾನು ಹಸಿದಿದ್ದೆನೀವು ನನಗೆ ಆಹಾರಕೊಡಲಿಲ್ಲಬಾಯಾರಿದ್ದೆಕುಡಿಯಲು ಕೊಡಲಿಲ್ಲಅಪರಿಚಿತನಾಗಿದ್ದೆನನಗೆ ಆಶ್ರಯ ನೀಡಲಿಲ್ಲಬಟ್ಟೆಬರೆಯಿಲ್ಲದೆ ಇದ್ದೆನನಗೆ ಉಡಲು ಕೊಡಲಿಲ್ಲರೋಗಿಯಾಗಿದ್ದೆಬಂಧಿಯಾಗಿದ್ದೆನೀವು ನನ್ನನ್ನು ಸಂಧಿಸಲಿಲ್ಲ,’ ಎಂದು ಹೇಳುವನು. ಅದಕ್ಕೆ ಅವರು ಕೂಡ, ‘ಸ್ವಾಮೀತಾವು ಯಾವಾಗ ಹಸಿದಿದ್ದಿರಿಬಾಯಾರಿದ್ದಿರಿಅಪರಿಚಿತರಾಗಿದ್ದಿರಿಯಾವಾಗ ಬಟ್ಟೆಬರೆ ಇಲ್ಲದೆ ಇದ್ದಿರಿರೋಗಿಯಾಗಿದ್ದಿರಿಮತ್ತು ಬಂಧಿಯಾಗಿ ಇದ್ದಿರಿ ಮತ್ತು ನಾವು ಅವನ್ನು ಕಂಡು ನಿಮಗೆ ಉಪಚಾರಮಾಡದೆಹೋದೆವುಎಂದು ಪ್ರಶ್ನಿಸುವರು. ಅದಕ್ಕೆ ಪ್ರತ್ಯುತ್ತರವಾಗಿ ಅರಸನು, ‘ಇವರಲ್ಲಿ ಒಬ್ಬನಿಗೆಅವನೆಷ್ಟೇ ಕನಿಷ್ಠನಾಗಿರಲಿನೀವು ಹಾಗೆ ಮಾಡದೆಹೋದಾಗ ಅದನ್ನು ನನಗೇ ಮಾಡಲಿಲ್ಲ,’ ಎನ್ನುವರುಹೀಗೆ  ದುರ್ಜನರು ನಿತ್ಯ ಶಿಕ್ಷೆಗೂ ಸಜ್ಜನರು ನಿತ್ಯಜೀವಕ್ಕೂ ಹೋಗುವರು,” ಎಂದು ಹೇಳಿದರು ಸ್ವಾಮಿ.

ಮನಸ್ಸಿಗೊಂದಿಷ್ಟು : ಸಂತ ಮಾರ್ಟಿನ್ ಆಫ್ ಟೂರ್ಸ್ ಸೈನಿಕರಾಗಿದ್ದಾಗ ಚಳಿಯಲ್ಲಿ ಬಟ್ಟೆಯಿಲ್ಲದೆ ನಿಂತಿದ್ದ ಬಿಕ್ಷುಕನನ್ನು ನೋಡಿದರು. ಕೊಡಲು ಹಣವಿಲ್ಲದ್ದರಿಂದ ಹಾಕಿಕೊಂಡಿದ್ದ ತಮ್ಮ ಸೈನಿಕ ಬಟ್ಟೆಯನ್ನು ಅರ್ಧ ಕತ್ತರಿಸಿ ಕೊಡುತ್ತಾರೆ. ರಾತ್ರಿ ಮಾರ್ಟಿನ್ ಅವರಿಗೊಂದು ಕನಸು ಕಾಣುತ್ತದೆ. ಬಿಕ್ಷುಕನಿಗೆ ಕೊಟ್ಟ ಆ ಹರಿದ ಬಟ್ಟೆಯನ್ನು ಯೇಸುಸ್ವಾಮಿ ಸ್ವರ್ಗದಲ್ಲಿ ಹಾಕಿಕೊಂಡಿದ್ದಾರೆ. ಆಗ ದೇವದೂತರು ’ಸ್ವಾಮಿ ಇದೇನು ಯಾವುದೋ ಹಳೆಯ, ಹರಿದ ಬಟ್ಟೆ ಧರಿಸಿದ್ದೀರಾ? ಯಾರು ಕೊಟ್ಟಿದ್ದು ಎಂದು ಕೇಳಲು, ಯೇಸುಸ್ವಾಮಿ ’ನನ್ನ ಸೇವಕ ಮಾರ್ಟಿನ್ ಕೊಟ್ಟಿದು’ ಎನ್ನುತ್ತಾರೆ ಯೇಸು. ಮಾರ್ಟಿನ ನ ಜೀವನ ಅಲ್ಲಿಂದ ಬದಲಾಯಿತು

ಪ್ರಶ್ನೆ : ಹಸಿದ, ಬಾಯಾರಿದ , ಆಶ್ರಯ ಬೇಡಿದವರತ್ತ ನಮ್ಮ ಪ್ರತಿಕ್ರಿಯೆ ಏನು?

ಪ್ರಭುವೇ,
ಕಾಣಲಾರದಾಗಿದ್ದೇನೆ ಹಸಿದವರಲ್ಲಿ
ಬಾಯಾರಿದವರಲ್ಲಿ, ಅಪರಿಚಿತರಲ್ಲಿ ನಿನ್ನ
ಸದಾ ಕಾಣುತ್ತಲೇ ಇರುವಂತೆ ತೆರೆಯಿರಿ

 ಈ ನನ್ನ ಹೃದಯವ, ಅಂತರಂಗದ ಕಣ್ಣ

No comments:

Post a Comment