04.12.23 - " ನೀವು ವಿಶ್ವದ ಎಲ್ಲೆಡೆಗಳಿಗೂ ಹೋಗಿ ಜಗತ್ತಿಗೆಲ್ಲಾ ಶುಭಸಂದೇಶವನ್ನು ಪ್ರಬೋಧಿಸಿರಿ. - ಸಂತ ಫ್ರಾನ್ಸಿಸ್ ಕ್ಸೇವಿಯರ್ (ಧರ್ಮಗುರು ಹಾಗೂ ಭಾರತದ ಪಾಲಕರು) ಮಹೋತ್ಸವ

ಮೊದಲನೇ ವಾಚನ: ಪ್ರವಾದಿ  ಯೆರೆಮೀಯನ  ಗ್ರಂಥದಿಂದ  ಇಂದಿನ  ಮೊದಲನೆಯ  ವಾಚನ 1:4


ಸರ್ವೇಶ್ವರಸ್ವಾಮಿ  ಈ  ವಾಣಿಯನ್ನು  ನನಗೆ  ದಯಪಾಲಿಸಿದರು:  "ನಿನ್ನನ್ನು  ತಾಯಿಯ  ಗರ್ಭದಲ್ಲಿ  ರೂಪಿಸುವುದಕ್ಕೆ  ಮುಂಚೆಯೇ  ನಿನ್ನನ್ನು  ನಾನು  ತಿಳಿದಿದ್ದೆ ; ನೀನು  ಉದರದಿಂದ  ಹೊರ  ಬರುವುದಕ್ಕೆ  ಮೊದಲೇ  ನಿನ್ನನ್ನು  ಪವಿತ್ರೀಕರಿಸಿದ್ದೆ ;  ನಿನ್ನನ್ನು  ರಾಷ್ಟ್ರಗಳಿಗೆ  ಪ್ರವಾದಿಯನ್ನಾಗಿ  ನೇಮಿಸಿದ್ದೇನೆ." ಅದಕ್ಕೆ  ನಾನು,  "ಅಯ್ಯೋ,  ಸ್ವಾಮಿ  ಸರ್ವೇಶ್ವರಾ,  ನಾನು  ಮಾತುಬಲ್ಲವನಲ್ಲ,  ಇನ್ನೂ  ತರುಣ, " ಎಂದು  ಬಿನ್ನವಿಸಿದೆ. ಆಗ  ಸರ್ವೇಶ್ವರ  ನನಗೆ,  "ನಾನೊಬ್ಬ  ತರುಣ  ಎನ್ನಬೇಡ ; ಯಾರ  ಬಳಿಗೆ  ನಿನ್ನನ್ನು  ಕಳಿಸುತ್ತೇನೋ,  ಅವರೆಲ್ಲರ  ಬಳಿಗೆ  ನೀನು  ಹೋಗಲೇಬೇಕು ;  ಅವರಿಗೆ  ಅಂಜಬೇಡ ; ನಿನ್ನನ್ನು  ಕಾಪಾಡಲು  ನಾನೇ  ನಿನ್ನೊಂದಿಗೆ  ಇರುತ್ತೇನೆ ;  ಇದು  ಸರ್ವೇಶ್ವರನಾದ  ನನ್ನ  ಮಾತು, "ಎಂದರು.

- ಪ್ರಭುವಿನ  ವಾಕ್ಯ

ಕೀರ್ತನೆ:   

ಶ್ಲೋಕ:  ನೀವು  ವಿಶ್ವದ  ಎಲ್ಲೆಡೆಗಳಿಗೂ  ಹೋಗಿ,  ಜಗತ್ತಿಗೆಲ್ಲಾ  ಶುಭಸಂದೇಶವನ್ನು  ಪ್ರಬೋಧಿಸಿರಿ |

1.  ಸ್ತುತಿ  ಮಾಡಿ  ಪ್ರಭುವನು  ಸಮಸ್ತ  ರಾಷ್ಟ್ರಗಳೇ|
ಆತನನು  ಹೊಗಳಿ  ಹಾಡಿ  ಸರ್ವಜನಾಂಗಗಳೇ||

ಶ್ಲೋಕ

2.  ನಮ್ಮ  ಮೇಲೆ  ಆತನಿಗಿರುವ  ಪ್ರೀತಿ  ಅಚಲ|
ಆತನ  ಸತ್ಯಪರತೆ  ಇರುವುದು  ಅನಂತ  ಕಾಲ||

ಶ್ಲೋಕ

ಘೋಷಣೆ

ಅಲ್ಲೆಲೂಯ, ಅಲ್ಲೆಲೂಯ!
ಹೋಗಿ, ಸಕಲ ದೇಶಗಳ  ಜನರನ್ನು ನನ್ನ ಶಿಷ್ಯರನ್ನಾಗಿ ಮಾಡಿರಿ | ಲೋಕಾಂತ್ಯದವರೆಗೂ ಸದಾ  ನಾನು ನಿಮ್ಮೊಡನೆ ಇರುತ್ತೇನೆ|| 
ಅಲ್ಲೆಲೂಯ!

ಶುಭಸಂದೇಶ: ಮಾರ್ಕನು  ಬರೆದ ಪವಿತ್ರ ಶುಭಸಂದೇಶದಿಂದ ವಾಚನ 16:15-20


ಯೇಸು  ಹನ್ನೆರಡು  ಮಂದಿ  ಶಿಷ್ಯರಿಗೆ  ಹೀಗೆಂದರು: " ನೀವು  ವಿಶ್ವದ  ಎಲ್ಲೆಡೆಗಳಿಗೂ  ಹೋಗಿ  ಜಗತ್ತಿಗೆಲ್ಲಾ  ಶುಭಸಂದೇಶವನ್ನು  ಪ್ರಬೋಧಿಸಿರಿ.  ವಿಶ್ವಾಸವಿಟ್ಟು  ದೀಕ್ಷಾಸ್ನಾನ  ಪಡೆಯುವವನು  ಜೀವೋದ್ಧಾರ  ಹೊಂದುವನು.   ವಿಶ್ವಾಸಿಸದೇ  ಇರುವವನು  ಖಂಡನೆಗೆ  ಗುರಿಯಾಗುವನು.  ವಿಶ್ವಾಸಿಸುವುದರಿಂದ  ಈ  ಅದ್ಭುತ  ಕಾರ್ಯಗಳು  ಆಗುವುವು.  ಅವರು  ನನ್ನ  ಹೆಸರಿನಲ್ಲಿ  ದೆವ್ವಗಳನ್ನು  ಬಿಡಿಸುವರು ;  ಹೊಸ  ಭಾಷೆಗಳಲ್ಲಿ  ಮಾತಾಡುವರು;  ಕೈಗಳಿಂದ  ಸರ್ಪಗಳನ್ನು  ಎತ್ತಿದರೂ  ವಿಷ  ಪದಾರ್ಥಗಳನ್ನೇನಾದರು  ಕುಡಿದರೂ  ಯಾವ  ಹಾನಿಯೂ  ಅವರಿಗಾಗದು.  ಅವರು  ರೋಗಿಗಳ  ಮೇಲೆ  ಕೈ  ಇಟ್ಟರೆ  ರೋಗಿಗಳು  ಗುಣಹೊಂದುವರು, " ಎಂದರು.  ಯೇಸುಸ್ವಾಮಿ  ಶಿಷ್ಯರೊಡನೆ  ಮಾತನಾಡಿದ  ಮೇಲೆ  ಸ್ವರ್ಗಾರೋಹಣವಾಗಿ  ದೇವರ  ಬಲಪಾರ್ಶ್ವದಲ್ಲಿ  ಆಸೀನರಾದರು.  ಇತ್ತ  ಶಿಷ್ಯರು  ಹೊರಟುಹೋಗಿ,  ಎಲ್ಲೆಡೆಗಳಲ್ಲಿಯೂ  ಶುಭಸಂದೇಶವನ್ನು  ಬೋಧಿಸತೊಡಗಿದರು.  ಪ್ರಭು  ಯೇಸು  ಅವರೊಂದಿಗೆ  ಕಾರ್ಯಸಾಧಿಸುತ್ತಾ,  ಮಹತ್ಕಾರ್ಯಗಳಿಂದ  ಶುಭಸಂದೇಶವನ್ನು  ಸಮರ್ಥಿಸುತ್ತಾ  ಇದ್ದರು.

ಪ್ರಭುಕ್ರಿಸ್ತರ  ಶುಭಸಂದೇಶ

No comments:

Post a Comment

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...