ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

30.01.22 - "ಯಾವ ಪ್ರವಾದಿಯು ಸ್ವಗ್ರಾಮದಲ್ಲಿ ಸನ್ಮಾನಿತನಲ್ಲ"

ಮೊದಲನೇ ವಾಚನಯೆರೆಮೀಯ 1: 4-5, 17-19


ಸರ್ವೇಶ್ವರಸ್ವಾಮಿ  ವಾಣಿಯನ್ನು ನನಗೆ ದಯಪಾಲಿಸಿದರು: "ನಿನ್ನನ್ನು ತಾಯಿಯ  ಗರ್ಭದಲ್ಲಿ ರೂಪಿಸುವುದಕ್ಕೆ ಮುಂಚೆಯೇ ನಿನ್ನನ್ನು ನಾನು ತಿಳಿದಿದ್ದೆನೀನು ಉದರದಿಂದ ಹೊರ ಬರುವುದಕ್ಕೆ ಮೊದಲೇ ನಿನ್ನನ್ನು ಪವಿತ್ರೀಕರಿಸಿದ್ದೆನಿನ್ನನ್ನು ರಾಷ್ಟ್ರಗಳಿಗೆ ಪ್ರವಾದಿಯನ್ನಾಗಿ ನೇಮಿಸಿದ್ದೇನೆನೀನು ಎದ್ದು ನಡುಕಟ್ಟಿಕೊನಾನು ಆಜ್ಞಾಪಿಸುವುದನ್ನೆಲ್ಲ ಅವರಿಗೆ ತಿಳಿಸುಅವರಿಗೆ ಹೆದರಬೇಡಹೆದರಿದರೆ ನಾನೂ ನಿನ್ನನ್ನು ಅವರ ಮುಂದೆ ಹೆದರಿಸುವೆನುನಾನು ಹೇಳುವುದನ್ನು ಗಮನದಿಂದ ಕೇಳು ದಿನ ನಿನ್ನನ್ನು ಜುದೇಯದ ಅರಸರುಅಧಿಪತಿಗಳುಯಾಜಕರುಜನ ಸಾಮಾನ್ಯರುಹೀಗೆ ನಾಡಿನವರೆಲ್ಲರನ್ನು ಎದುರಿಸತಕ್ಕವನನ್ನಾಗಿ ಮಾಡಿದ್ದೇನೆಕೋಟೆ ಕೊತ್ತಲಗಳಿಂದ ಸುಸಜ್ಜಿತ ನಗವನ್ನಾಗಿಯೂ ಕಬ್ಬಿಣದ ಕಂಬವನ್ನಾಗಿಯೂ ತಾಮ್ರದ ಪೌಳಿಗೋಡೆಯನ್ನಾಗಿಯೂ ನಿನ್ನನ್ನು ಸ್ಥಾಪಿಸಿದ್ದೇನೆನಿನಗೆ ವಿರುದ್ಧವಾಗಿ ಅವರು ಯುದ್ಧಮಾಡುವರುಆದರೆ ನಿನ್ನನ್ನು ಸೋಲಿಸಲಾಗುವುದಿಲ್ಲನಿನ್ನನ್ನು ಕಾಪಾಡಲು ನಾನೇ ನಿನ್ನೊಂದಿಗಿರುವೆನುಇದು ಸರ್ವೇಶ್ವರನಾದ ನನ್ನ ನುಡಿ.

ಕೀರ್ತನೆ: 71:1-2, 3-4, 5-6, 15-17
ಶ್ಲೋಕವರ್ಣಿಸುವೆನು ದಿನವೆಲ್ಲ ನನ್ನ ನ್ಯಾಯನೀತಿಯನ್ನು.

ಎರಡನೇ ವಾಚನ: 1 ಕೊರಿಂಥಿಯರಿಗೆ 12:31-13:13

ಶ್ರೇಷ್ಠವಾದ ವರಗಳನ್ನು ನೀವು ಶ್ರದ್ಧಪೂರ್ವಕವಾಗಿ ಅಪೇಕ್ಷಿಸಿರಿನಾನು ನಿಮಗೆ ಇನ್ನೂ ಸರ್ವೋತ್ತಮವಾದ ಮಾರ್ಗವನ್ನು ತೋರಿಸುತ್ತೇನೆಸುರನರರ ನುಡಿಗಳ ನಾನಾಡಬಲ್ಲೆನಾದರೂ ಪರಮ ಪ್ರಿತಿಯೊಂದೆನಗಿಲ್ಲದಿರಲು ನಾ ಕೇವಲ ಗಣಗಣಿಸುವ ಘಂಟೆಝಣಝಣಿಸುವ ಜಾಗಟೆಪ್ರವಾದನೆಯ ವರವೆನಗಿರಬಹುದುಇರಬಹುದು ನಿಗೂಢ ರಹಸ್ಯಗಳರಿವು ಎಲ್ಲದರ ಪರಿಜ್ಞಾನಪರ್ವತವನ್ನೇ ಕದಲಿಸುವ ವಿಶ್ವಾಸ ಪ್ರೀತಿಯೊಂದಿಲ್ಲದಿರೆ ನಾ ಶೂನ್ಯ ಸಮಾನನನಗಿರುವುದೆಲ್ಲವನು ನಾ ದಾನಮಾಡೆದೇಹವನೇ ಸಜೀವ ದಹಿಸಲು ನೀಡೆನಾನಾಗಿರೆ ಪರಮ ಪೀತಿ ವಿಹೀನ ಏನದು ಜೀವನನನಗೇನದು ಪ್ರಯೋಜನಸಹನೆ ಸೈರಣೆದಯೆದಾಕ್ಷಿಣ್ಯ ಪ್ರೀತಿಯಲ್ಲಿವೆಎಡೆಯಿಲ್ಲ ಅದರಲಿ ಗರ್ವಕೆಮರ್ಮಕೆಮೆರತಕೆಸಿಡುಕಿಗೆಸೊಕ್ಕಿಗೆಸ್ವಾರ್ಥಕೆಸೇಡುಗಳೆಣಿಕೆಗೆನಲಿಯದು ಪ್ರೀತಿ ಅನೀತಿಯಲಿನಲಿಯದಿರದದು ಸತ್ಯದಜಯದಲಿನಂಬುವುದೆಲ್ಲವನುನಿರೀಕ್ಷಿಸುವುದೆಲ್ಲವನುಸಹಿಸಿಕೊಳ್ಳುವುದು ಸಮಸ್ತವನು ಪ್ರೀತಿಯದೆಂದೂ ಅರಿಯದು ಸೋಲನುಅಳಿದುಹೋಗುವುವು ಭವಿಷ್ಯವಾಣಿಗತಿಸಿಹೋಗುವುದು ಬಹುಭಾಷಾ ಶಕ್ತಿ ಹೋಗುವುವು ನಶಿಸಿ ಜ್ಞಾನಬುದ್ಧಿಆದರೆ ಅಮರವಾದುದು ಪರಮ ಪ್ರೀತಿಅಪೂರ್ವವಾದುದು ನಮ್ಮಾಅರಿವೆಲ್ಲಪೂರ್ಣವಾದುದಲ್ಲ ಪ್ರವಾದನವದೆಲ್ಲಪರಿಪೂರ್ಣತೆ ಪ್ರಾಪ್ತವಾಗಲು ಇಲ್ಲವಾಗುವುದು ಅಪೂರ್ಣತೆಯೆಲ್ಲಬಾಲಕ ನಾನಾಗಿರೆ ಆಡಿದೆಮಾತಾಡಿದೆಚಿಂತಿಸಿದೆಸುಖದುಃಖಗಳ ಸವಿದೆ ಬಾಲಕನಂತೆಬಲಿತು ಬೆಳೆದು ಮನುಜನಾದುದೆ ಬಾಲಿಶವಾದುದೆಲ್ಲವನು ಬದಿಗೊತ್ತಿದೆನಾವೀಗ ಕಾಂಬುದು ದರ್ಪಣದ ಬಿಂಬವನು ಮಾಸುಕಾಗಿ ತರುವಾಯ ಕಾಂಬೆವು ದೇವರನು ಮುಖಾಮುಖಿಯಾಗಿಈಗಿರುವುದೆನ್ನ ಅರಿವು ತುಂಡುತುಂಡಾಗಿ ನಂತರ ದೇವನೆನ್ನ ಅರಿತಂತೆ  ಮೂರಲಿ ನಾನರಿವೆನು ಅಖಂಡವಾಗಿನಿಲ್ಲುವುವು ನಂಬಿಕೆನಿರೀಕ್ಷೆಪ್ರೀತಿ ನೆಲೆಯಾಗಿ ಮೂರಲಿ ಪ್ರೀತಿಯೇ ಪರಮೋನ್ನತವೆಂಬುದ ನೀನರಿ.

ಶುಭಸಂದೇಶಲೂಕ 4:21-30

ಆಗ ಯೇಸು, "ನೀವು  ಪವಿತ್ರ ವಾಕ್ಯವನ್ನು ಕೇಳುತ್ತಿದ್ದ ಹಾಗೆಯೇ ಅದು ಇಂದು ನೆರವೇರಿತು," ಎಂದು ವಿವರಿಸಲಾರಂಭಿಸಿದರುಎಲ್ಲರೂ ಅವರನ್ನು ಬಹುವಾಗಿ ಮೆಚ್ಚಿಕೊಂಡರುಅವರ ಬಾಯಿಂದ ಬಂದ ಮಧುರ ಮಾತುಗಳನ್ನು ಕೇಳಿ ಅಚ್ಚರಿಗೊಂಡರು. "ಇವನು ಜೋಸೆಫನ ಮಗನಲ್ಲವೆ?" ಎಂದು ಮಾತನಾಡಿಕೊಂಡರುಆನಂತರ ಯೇಸು ಅವರಿಗೆ, "ವೈದ್ಯನೇಮೊದಲು ನಿನ್ನನ್ನು ನೀನು ಗುಣಪಡಿಸಿಕೊ",  ಎಂಬ ಗಾದೆಯನ್ನು ನೀವು ನಿಸ್ಸಂದೇಹವಾಗಿ  ನನಗೆ ಅನ್ವಯಿಸುವಿರಿಅಲ್ಲದೆ, "ಕಫೆರ್ನವುಮಿನಲ್ಲಿ ನೀನು ಎಂತೆಥ ಮಹತ್ಕಾರ್ಯಗಳನ್ನು ಮಾಡಿದೆ ಎಂದು ನಾವು ಕೇಳಿದ್ದೇವೆಅಂಥವುಗಳನ್ನು  ನಿನ್ನ ಸ್ವಂತ ಊರಿನಲ್ಲೂ ಮಾಡು," ಎಂದೂ ಹೇಳುವಿರಿಆದರೆ ಯಾವ ಪ್ರವಾದಿಯು ಸ್ವಗ್ರಾಮದಲ್ಲಿ ಸನ್ಮಾನಿತನಲ್ಲ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆಹಿಂದೆ ನಡೆದ ಒಂದು ಸಂಗತಿಯನ್ನು ಕೇಳಿಎಲೀಯನ ಕಾಲದಲ್ಲಿ ಮೂರು ವರ್ಷ ಆರು ತಿಂಗಳು ಮಳೆ ಬಾರದೆ ದೇಶದಲ್ಲೆಲ್ಲಾ ದೊಡ್ಡ ಕ್ಷಾಮ ಬಂದೊದಗಿತುಆಗ ಇಸ್ರಯೇಲ್ ನಾಡಿನಲ್ಲಿ ಎಷ್ಟೋ ಮಂದಿ ವಿಧವೆಯರಿದ್ದರುಅವರಾರ ಬಳಿಗೂ ದೇವರು ಎಲೀಯನನ್ನು ಕಳಿಸಲಿಲ್ಲಸಿದೋನ್ ದೇಶಕ್ಕೆ ಸೇರಿದ ಸರೆಪ್ತ ಊರಿನ ಒಬ್ಬ ವಿಧವೆಯ ಬಳಿಗೆ ಮಾತ್ರ ಕಳಿಸಿದರುಅಂತೆಯೇಎಲೀಷನೆಂಬ ಪ್ರವಾದಿಯ ಕಾಲದಲ್ಲಿ ಇಸ್ರಯೇಲ್ ನಾಡಿನಲ್ಲಿ ಅನೇಕ ಕುಷ್ಟರೋಗಿಗಳು ಇದ್ದರುಅವರಲ್ಲಿ ಸಿರಿಯ ದೇಶದ ನಾಮನನು ಬಿಟ್ಟು ಮಿಕ್ಕ ಯಾರೂ ಗುಣಮುಖರಾಗಲಿಲ್ಲ," ಎಂದು ಹೇಳಿದರುಇದನ್ನು ಕೇಳಿಪ್ರಾರ್ಥನಾಮಂದಿರದಲ್ಲಿ ಇದ್ದ ಎಲ್ಲರೂ ಕಡುಗೋಪಗೊಂಡರುಯೇಸುವನ್ನು  ಊರ ಹೊರಕ್ಕೆ ಎಳೆದುಕೊಂಡುತಮ್ಮ ಊರಿದ್ದ ಗುಡ್ಡದ ತುದಿಗೆ ಕೊಂಡೊಯ್ದುಅಲ್ಲಿಂದ ಅವರನ್ನು ಕೆಳಕ್ಕೆ ದಬ್ಬಬೇಕೆಂದಿದ್ದರುಯೇಸುವಾದರೋಅವರ ನಡುವೆಯೇ ನಡೆದುತಮ್ಮ ದಾರಿ ಹಿಡಿದುಹೋದರು.

ಮನಸ್ಸಿಗೊಂದಿಷ್ಟು : ಕ್ರಿಸ್ತನ ಬೋಧನೆಯನ್ನು ಕೇಳಿ , ಮೆಚ್ಚಿಕೊಂಡಿದ್ದ ಸ್ವಗ್ರಾಮದ ಜನರು , ದೈವ ಅನುಗ್ರಹವು ಅನ್ಯ ಜನರಿಗೂ ದೊರಕುತ್ತದೆ ಎಂಬ ಕ್ರಿಸ್ತನ ಮಾತಿಗೆ ಸಿಟ್ಟಾಗುತ್ತಾರೆ. ಯೇಸುವಿನ ಕಠಿಣ ಮಾತುಗಳು ಅವರಿಗೆ ರುಚಿಸದೆ   ಹೋಗುತ್ತದೆ. ನಮ್ಮ ಬಾಳಿನ ಕಥೆಯೂ . ನಾವು ಮಾತ್ರ ಒಳ್ಳೆಯವರು, ದೇವರ ಅನುಗ್ರಹ ನಮ್ಮ ಮೇಲೆ  ಹೆಚ್ಚು ಎಂಬ ಭಾವನೆ , ಸಣ್ಣ ಅಹಂಕಾರದಲ್ಲೇ ನಾವು ಬದುಕಿರುತ್ತಿದ್ದೇವೆ.  ಇದರ ನಡುವೆ ನಮ್ಮ ಅಂತರಂಗವನ್ನು ಪರಿವರ್ತಿಸಬಲ್ಲ ದೇವರ ಕಠಿಣ ಮಾತುಗಳಿಗೂ ನಾವು ಕಿವಿಯಾಗಬೇಕಾದುದು ಅಗತ್ಯ, ಅನಿವಾರ್ಯ. 

ಪ್ರಶ್ನೆ : ದೇವರ ಎಚ್ಚರಿಕೆಯ ಮಾತುಗಳು ನಮ್ಮನ್ನು ತಲುಪವಷ್ಟು ನಮ್ಮ ಕಿವಿ, ಹೃದಯವನ್ನು ನಾವು ಮುಕ್ತವಾಗಿಸಿಕೊಂಡಿದ್ದೇವೆಯೇ ? 

No comments:

Post a Comment