ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

19.08.2024 - ನಿನ್ನ ಆಸ್ತಿಯನ್ನೆಲ್ಲಾ ಮಾರಿ ಬಡಬಗ್ಗರಿಗೆ ದಾನಮಾಡು; ಸ್ವರ್ಗದಲ್ಲಿ ನಿನಗೆ ಸಂಪತ್ತು ಇರುತ್ತದೆ.

 ಮೊದಲನೆಯ ವಾಚನ:  ಪ್ರವಾದಿ  ಯೆಜೆಕಿಯೇಲನ ಗ್ರಂಥದಿಂದ ಇಂದಿನ ವಾಚನ 24:15-23

 

ಸರ್ವೇಶ್ವರ  ಇನ್ನೊಂದು  ವಾಣಿಯನ್ನು  ನನಗೆ  ದಯಪಾಲಿಸಿದರು;  "ನರಪುತ್ರನೇ,  ಇಗೋ,  ಓಂದೇ  ಏಟಿನಿಂದ  ನಾನು  ನಿನಗೆ  ನೇತ್ರಾನಂದವಾಗಿರುವವಳನ್ನು  ನಿನ್ನಿಂದ  ತೆಗೆದುಬಿಡುವನು.  ಆದರೂ  ನೀನು  ಗೋಳಾಡಬೇಡ,  ಅಳಬೇಡ,  ಕಣ್ಣೀರು  ಸುರಿಸಬೇಡ.  ಸದ್ದಿಲ್ಲದೆ  ಮೊರೆಯಿಡು,  ವಿಯೋಗದು:  ತೋರಿಸಬೇಡ.  ರುಮಾಲನ್ನು  ಸುತ್ತಿಕೊಂಡಿರು,  ಕೆರಗಳನ್ನು  ಮೆಟ್ಟಿಕೊಂಡಿರು,  ಬಾಯನ್ನು  ಬಟ್ಟೆಯಿಂದ  ಮುಚ್ಚಿಕೊಳ್ಳಬೇಡ,  ಗಾರಿಗೆಯನ್ನು  ತಿನ್ನಬೇಡ.  "ಹೀಗೆ  ಆಜ್ಞೆಯಾಗಲು,  ನಾನು  ಪ್ರಾತಃಕಾಲದಲ್ಲಿ  ಜನರಿಗೆ  ಪ್ರವಾದಿಸಿದೆನು;  ಸಾಯಂಕಾಲಕ್ಕೆ  ನನ್ನ  ಪತ್ನಿ  ತೀರಿಹೋದಳು;  ಮಾರನೆಯ  ಬೆಳಿಗ್ಗೆ  ನನಗೆ  ಅಪ್ಪಣೆಯಾದಂತೆ  ನಡೆದುಕೊಂಡೆನು.  ಜನರು,  "ನೀನು  ಹೀಗೆ  ಮಾಡುವುದರಿಂದ  ನಾವು  ತಿಳಿಯತಕ್ಕದ್ದೇನು?  ತಿಳಿಸುವುದಿಲ್ಲವೋ? "ಎಂದು  ನನ್ನನ್ನು  ಕೇಳಿದರು.  ಅದಕ್ಕೆ  ನಾನು  ಹೀಗೆ  ಹೇಳಿದೆ:   "ಸರ್ವೇಶ್ವರ    ವಾಣಿಯನ್ನು  ನನಗೆ  ದಯಪಾಲಿಸಿದ್ದಾರೆ - ಇಸ್ರಯೇಲ್   ವಂಶದವರಿಗೆ  ಹೀಗೆ  ಸಾರು - ಹಾ,  ನಿಮಗೆ  ಮುಖ್ಯಬಲ,  ನೇತ್ರಾನಂದ  ಹಾಗು  ಪ್ರಾಣಪ್ರಿಯ  ಆದ  ನನ್ನ  ಪವಿತ್ರಾಲಯವನ್ನು  ನಾನು  ಅಪವಿತ್ರಮಾಡಿಸುವೆನು;  ನೀವು  ಬಿಟ್ಟುಬಂದಿರುವ  ನಿಮ್ಮ  ಗಂಡು  ಹೆಣ್ಣು  ಮಕ್ಕಳು  ಖಡ್ಗಕ್ಕೆ  ತುತ್ತಾಗುವರು,  ಎಂಬುದಾಗಿ  ಸರ್ವೇಶ್ವರನಾದ  ದೇವರು  ನುಡಿದಿದ್ದಾರೆ.  ನಾನು  ಮಾಡಿದಂತೆ  ಆಗ  ನೀವೂ  ಮಾಡುವಿರಿ,  ಅಂದರೆ  ಬಟ್ಟೆಯಿಂದ   ಬಾಯನ್ನು  ಮುಚ್ಚಿಕೊಳ್ಳದೆ,  ಗಾರಿಗೆಯನ್ನು  ತಿನ್ನದೆ,  ರುಮಾಲನ್ನು  ಸುತ್ತಿಕೊಂಡು,  ಕೆರಗಳನ್ನು  ಮೆಟ್ಟಿಕೊಂಡು  ಇರುವಿರಿ;  ನೀವು  ಗೋಳಾಡುವುದಿಲ್ಲ,  ಅಳುವುದಿಲ್ಲ,  ಆದರೆ  ನಿಮ್ಮ  ಅಧರ್ಮದಿಂದ  ಕ್ಷೀಣವಾಗಿ  ನರಳುವಿರಿ.  ಒಬ್ಬರೆದುರಿಗೆ  ನರಳುವಿರಿ.    ವಿಷಯದಲ್ಲಿ  ಯೆಜೆಕಿಯೇಲನು  ನಿಮಗೆ  ಮುಂಗುರುತಾಗಿರುವನು.  ಅವನು  ಮಾಡಿದಂತೆಯೇ  ಎಲ್ಲವನ್ನು  ಮಾಡುವಿರಿ;  ಇದು  ಸಭವಿಸುವಾಗ  ನಾನೇ  ಸರ್ವೇಶ್ವರನಾದ  ದೇವರು  ಎಂದು  ನಿಮಗೆ  ಗೊತ್ತಾಗುವುದು." 

- ಪ್ರಭುವಿನ ವಾಕ್ಯ

ಕೀರ್ತನೆಧರ್ಮೋ 32:18-19,20,21 V.18

ಶ್ಲೋಕಸ್ಮರಿಸಲಿಲ್ಲ  ನೀವುಹೆತ್ತ  ತಾಯಂತಿದ್ದಾ  ದೇವರನು.

1.  ಎಲೈ ಇಸ್ರಯೇಲರೇ, ಮರೆತಿರಾ ಜನ್ಮವಿತ್ತ ಪೊರೆಬಂಡೆಯನು|

ಸ್ಮರಿಸಲಿಲ್ಲ ನೀವು, ಹೆತ್ತ ತಾಯಂತಿದ್ದಾ ದೇವರನು||

ಇದಕಂಡ ಸರ್ವೇಶ್ವರ ಬೇಸರಗೊಂಡ|

ತನ್ನಾ ಕುವರಕುವರಿಯರ ನಡತೆಯ ನೋಡಿ ನೊಂದುಕೊಂಡ||

ಶ್ಲೋಕ

 

2.  ಎಂದೇ ಇಂತೆಂದುಕೊಂಡೆನು: ಇವರಿಗೆ ವಿಮುಖನಾಗುವೆನು|

ಇವರಿಗೊದಗಲಿರುವ ಗತಿಯನು ನೋಡುವೆನು||

ಸತ್ಯವರಿತೂ ಅನುಸರಿಸದೆ ಹೋದರು|

ವಿದ್ರೋಹ ಮಕ್ಕಳಂಥವರು||

ಶ್ಲೋಕ

 

3.  ರೇಗಿಸಿದರೆನ್ನನು ದೇವರಿಲ್ಲದವುಗಳ ಮೂಲಕ|

ಸಿಟ್ಟೇರಿಸಿದರು ಅಚೇತ ವಿಗ್ರಗಳ ಮೂಲಕ||

ನಾನವರಲಿ ಅಸೂಯೆ ಹುಟ್ಟಿಸುವೆನು ಜನಾಂಗವಲ್ಲದವರ ಮುಖಾಂತರ|

ನಾನವರನು ಸಿಟ್ಟಿಗೆಬ್ಬಿಸುವೆನು ಸಭ್ಯರಲ್ಲದಾ ಜನರ ಮುಖಾಂತರ||

ಘೋಷಣೆ : 

ಅಲ್ಲೆಲೂಯ, ಅಲ್ಲೆಲೂಯ!
ಸರ್ವೇಶ್ವರಾ,  ಅಪ್ಪಣೆಯಾಗಲಿ  ತಮ್ಮ  ದಾಸ  ಕಾದಿದ್ದಾನೆ |
ನಿತ್ಯ  ಜೀವವನ್ನು  ಈಯುವ  ನುಡಿ  ಇರುವುದು  ತಮ್ಮಲ್ಲೇ ||
ಅಲ್ಲೆಲೂಯ!

 ಶುಭಸಂದೇಶ :  ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 19:16-22


  ಕಾಲದಲ್ಲಿ  ಒಮ್ಮೆ  ಯೇಸುವಿನ  ಬಳಿಗೆ  ಒಬ್ಬ  ಯುವಕನು  ಬಂದು,  "ಗುರುದೇವಾಅಮರ  ಜೀವವನ್ನು  ಪಡೆಯಲು  ನಾನು  ಒಳ್ಳೆಯದೇನನ್ನು  ಮಾಡಬೇಕು? " ಎಂದು  ಕೇಳಿದನುಅದಕ್ಕೆ  ಅವರು,  "ಒಳ್ಳೆಯದನ್ನು  ಕುರಿತು  ನೀನು  ನನ್ನನ್ನು  ವಿಚಾರಿಸುವುದು  ಏಕೆಒಳ್ಳೆಯವರು  ಒಬ್ಬರೇನೀನು    ಜೀವಕ್ಕೆ  ಪ್ರವೇಶಿಸಿ ಬೇಕಾದರೆ  ದೈವಾಜ್ಞೆಗಳನ್ನು  ಅನುಸರಿಸು, "ಎಂದರು.  "ಅವು  ಯಾವುವು?  "ಎಂದು  ಮರುಪ್ರಶ್ನೆ  ಹಾಕಿದ  ಅವನಿಗೆ  ಯೇಸು,  "ನರಹತ್ಯೆಮಾಡಬಾರದುವ್ಯಭಿಚಾರಮಾಡಬಾರದುಕದಿಯಬಾರದುಸುಳ್ಳುಸಾಕ್ಷಿ  ಹೇಳಬಾರದುನಿನ್ನ  ತಂದೆ  ತಾಯಿಗಳನ್ನು  ಗೌರವಿಸಬೇಕು  ಮತ್ತು  ನಿನ್ನನ್ನು  ನೀನೇ  ಪ್ರೀತಿಸಿಕೊಳ್ಳುವಂತೆ  ನಿನ್ನ  ನೆರೆಯವನನ್ನೂ  ಪ್ರೀತಿಸಬೇಕು, "ಎಂದರುಅದಕ್ಕೆ    ಯುವಕ,  "ಇವೆಲ್ಲವನ್ನೂ  ಅನುಸರಿಕೊಂಡು  ಬಂದಿದ್ದೇನೆನನ್ನಲ್ಲಿ  ಇನ್ನೇನು  ಕೊರತೆ  ಇದೆ? " ಎಂದು  ಮತ್ತೆ  ಕೇಳಿದಆಗ  ಯೇಸು,  "ನೀನು  ಸಂಪೂರ್ಣನಾಗಬೇಕು  ಎಂದಿದ್ದರೆ  ಹೋಗುನಿನ್ನ  ಆಸ್ತಿಯನ್ನೆಲ್ಲಾ  ಮಾರಿ  ಬಡಬಗ್ಗರಿಗೆ  ದಾನಮಾಡುಸ್ವರ್ಗದಲ್ಲಿ  ನಿನಗೆ  ಸಂಪತ್ತು  ಇರುತ್ತದೆನೀನು  ಬಂದು  ನನ್ನನ್ನು  ಹಿಂಬಾಲಿಸು, "ಎಂದರುಇದನ್ನು  ಕೇಳಿದ್ದೇ    ಯುವಕ  ಖಿನ್ನಮನಸ್ಕನಾಗಿ  ಅಲ್ಲಿಂದ  ಹೊರಟೇ  ಹೋದಏಕೆಂದರೆ  ಅವನಿಗೆ  ಅಪಾರ  ಆಸ್ತಿಪಾಸ್ತಿಯಿತ್ತು.

ಪ್ರಭುಕ್ರಿಸ್ತರ ಶುಭಸಂದೇಶ

No comments:

Post a Comment