ಮೊದಲನೇ ವಾಚನ: ಯೆರೆಮಿಯ 20:10-13
ಕೀರ್ತನೆ: 18:2-3, 3-4, 5-6, 7
ಶ್ಲೋಕ: ಇಂಥಾ ದುಸ್ಥಿತಿಯಲಿ ನಾ ಮೊರೆಯಿಟ್ಟೆ ಪ್ರಭುವಿಗೆ
ನನ್ನ ಪ್ರಾರ್ಥನೆ ಬಿದ್ದಿತು ಆತನ ಕಿವಿಯಲಿ
ಪ್ರಭುವೇ ನನ್ನ ಕಲ್ಲುಕೋಟೆ, ನನಗೆ ವಿಮೋಚಕ |
ಆತನೇ ನನ್ನ ದೇವ, ನನ್ನಾಶ್ರಯ ದುರ್ಗ |
ಆತನೆನಗೆ ಗುರಾಣಿ, ಗಿರಿ, ರಕ್ಷಣಾಶೃಂಗ ||
ಪ್ರಭು ಸ್ತುತ್ಯಾರ್ಹನು |
ಶತ್ರುಗಳಿಂದ ಕಾಪಾಡುವನು,
ನಾನವಗೆ ಮೊರೆಯಿಡಲು ||
ಪ್ರಭು ಸ್ತುತ್ಯಾರ್ಹನು |
ಶತ್ರುಗಳಿಂದ ಕಾಪಾಡುವನು,
ನಾನವಗೆ ಮೊರೆಯಿಡಲು ||
ನನಗೆ ಸುತ್ತಿಕೊಂಡವು ಮೃತ್ಯುಪಾಶಗಳು |
ನಡುಕ ಹುಟ್ಟಿಸಿದ್ದವು
ವಿನಾಶಪ್ರವಾಹಗಳು ||
ಆವರಿಸಿಕೊಂಡವು ಪಾತಾಳ ಪಾಶಗಳು|
ನನ್ನ ಕಣ್ಮುಂದಿದ್ದವು ಮರಣಕರ ಉರುಲುಗಳು||
ಇಂಥಾ ದುಸ್ಥಿತಿಯಲಿ ನಾ ಮೊರೆಯಿಟ್ಟೆ ಪ್ರಭುವಿಗೆ |
ಪ್ರಾರ್ಥನೆ ಮಾಡಿದೆ ಆ ನನ್ನ ದೇವನಲಿ |
ನನ್ನ ಪ್ರಾರ್ಥನೆ ಬಿದ್ದಿತು ಆತನ ಕಿವಿಯಲಿ ||
ಆಗ ಕಂಪಿಸಿತು ಭೂಮಿ ಗಡಗಡನೆ |
ಕದಲಿದವು ಬೆಟ್ಟದ ಬುಡಗಳು
ಮಿಲಮಿಲನೆ |
ಏಕೆನೆ, ಸಿಟ್ಟೇರಿತ್ತು ಆತನಿಗೆ ||
ಪ್ರಭುವೇ ನನ್ನ ಕಲ್ಲುಕೋಟೆ, ನನಗೆ ವಿಮೋಚಕ |
ಆತನೇ ನನ್ನ ದೇವ, ನನ್ನಾಶ್ರಯ ದುರ್ಗ |
ಆತನೆನಗೆ ಗುರಾಣಿ, ಗಿರಿ, ರಕ್ಷಣಾಶೃಂಗ ||
ಪ್ರಭು ಸ್ತುತ್ಯಾರ್ಹನು |
ಶತ್ರುಗಳಿಂದ ಕಾಪಾಡುವನು,
ನಾನವಗೆ ಮೊರೆಯಿಡಲು ||
ಪ್ರಭು ಸ್ತುತ್ಯಾರ್ಹನು |
ಶತ್ರುಗಳಿಂದ ಕಾಪಾಡುವನು,
ನಾನವಗೆ ಮೊರೆಯಿಡಲು ||
ನನಗೆ ಸುತ್ತಿಕೊಂಡವು ಮೃತ್ಯುಪಾಶಗಳು |
ನಡುಕ ಹುಟ್ಟಿಸಿದ್ದವು
ವಿನಾಶಪ್ರವಾಹಗಳು ||
ಆವರಿಸಿಕೊಂಡವು ಪಾತಾಳ ಪಾಶಗಳು|
ನನ್ನ ಕಣ್ಮುಂದಿದ್ದವು ಮರಣಕರ ಉರುಲುಗಳು||
ಇಂಥಾ ದುಸ್ಥಿತಿಯಲಿ ನಾ ಮೊರೆಯಿಟ್ಟೆ ಪ್ರಭುವಿಗೆ |
ಪ್ರಾರ್ಥನೆ ಮಾಡಿದೆ ಆ ನನ್ನ ದೇವನಲಿ |
ನನ್ನ ಪ್ರಾರ್ಥನೆ ಬಿದ್ದಿತು ಆತನ ಕಿವಿಯಲಿ ||
ಆಗ ಕಂಪಿಸಿತು ಭೂಮಿ ಗಡಗಡನೆ |
ಕದಲಿದವು ಬೆಟ್ಟದ ಬುಡಗಳು
ಮಿಲಮಿಲನೆ |
ಏಕೆನೆ, ಸಿಟ್ಟೇರಿತ್ತು ಆತನಿಗೆ ||
ಶುಭಸಂದೇಶ: ಯೊವಾನ್ನ 10:31-42
ಮನಸ್ಸಿಗೊಂದಿಷ್ಟು : ಇಂದಿನ ಶುಭಸಂದೇಶದದಲ್ಲಿನ ಯೆಹೂದ್ಯರ ತಿರಸ್ಕಾರ ನಿಜಕ್ಕೂ ದೌರ್ಭಾಗ್ಯಕರ . ' ತಾವು ದೇವರ ಪುತ್ರ' ಎಂದು ಯೇಸು ಸಾರಿ ಸಾರಿ ಹೇಳುತ್ತಿದ್ದರೂ ನಂಬದಂಥ ಕಲ್ಲು ಹೃದಯ ಅವರದಾಗಿತ್ತು. ನಮ್ಮ ಹೃದಯಗಳು ಪ್ರಭು ಕ್ರಿಸ್ತರನ್ನು ತಿರಸ್ಕರಿಸದಂತೆ ಎಚ್ಚರವಹಿಸೋಣ
ಪ್ರಶ್ನೆ : ನಮ್ಮ ಹೃದಯ ಯೇಸುವಿಗಾಗಿ ತೆರೆದಿದೆಯೇ?
No comments:
Post a Comment