31.03.25 - ಪ್ರವಾದಿಗೆ ಸ್ವಗ್ರಾಮದಲ್ಲಿ ಮರ್ಯಾದೆ ಇಲ್ಲ

ಮೊದಲನೇ ವಾಚನಯೆಶಾಯ 65:17-21

"ನಾನು ಹೊಸ ಆಕಾಶವನ್ನೂ ಹೊಸ ಭೂಮಿಯನ್ನೂ ಸೃಷ್ಟಿಸುವೆನುಆಗಮೊದಲಿದ್ದುದ್ದು ಜ್ಞಾಪಕದಲ್ಲಿರದುಅದು ಯಾರ ನೆನಪಿಗೂ ಬಾರದುನಾನು ಮಾಡುವ ಸೃಷ್ಟಿಯಕಾರ್ಯದಲ್ಲೇ ಸಂತೋಷಿಸಿಎಂದೆಂದಿಗೂ ಆನಂದಿಸಿರಿಹೌದುನಾನು ಜೆರುಸಲೇಮನ್ನು ಉಲ್ಲಾಸದ ನಿವಾಸವನ್ನಾಗಿಸುವೆನುಅದರ ಜನರನ್ನು ಹರ್ಷಭರಿತನ್ನಾಗಿಸುವೆನುನಾನು ಕೂಡ ಜೆರುಸಲೇಮನ್ನು ನೋಡಿ ಆನಂದಿಸುವೆನುಅದರ ಜನರನ್ನು ದೃಷ್ಟಿಸಿ ಹರ್ಷಗೊಳ್ಳುವೆನುಇನ್ನು ಅಲ್ಲಿ ಅಳುವಾಗಲಿಆಕ್ರೋಶವಾಗಲಿ ಕೇಳಿಬರದುಕೆಲವೇ ದಿನ ಬದುಕುವ ಮಗುವಾಗಲಿಆಯುಸ್ಸು ಮುಗಿಯದ ಮುದುಕನಾಗಲಿ ಇನ್ನು ಅಲ್ಲಿರನುನೂರು ವರ್ಷ ಬಾಳುವವನ್ನು ಯುವಕ ಎನಿಸಿಕೊಳ್ಳುವನುನೂರರೊಳಗೆ ಸಾಯುವ ಪಾಪಿಯು "ಶಾಪಗ್ರಸ್ತಎನಿಸಿಕೊಳ್ಳುವನುಜನರು ಅಲ್ಲೇ ಮನೆಮಾಡಿ ನಿವಾಸ ಮಾಡುವರುತೋಟ ನೆಟ್ಟು ಅದರ ಫಲವನ್ನು ಅನುಭವಿಸುವರು.

ಕೀರ್ತನೆ30:2, 4, 5-6, 11-12, 13

ಶ್ಲೋಕನಿನಗೆನ್ನ ವಂದನೆ ಪ್ರಭೂನನ್ನನ್ನುದ್ಧರಿಸಿದೆ

ಶುಭಸಂದೇಶಯೊವಾನ್ನ 4:43-54
ಎರಡು ದಿನಗಳಾದ ಬಳಿಕ ಯೇಸುಸ್ವಾಮಿ ಸಮಾರಿಯಾದಿಂದ ಗಲಿಲೇಯಕ್ಕೆ ಹೊರಟರುಪ್ರವಾದಿಗೆ ಸ್ವಗ್ರಾಮದಲ್ಲಿ ಮರ್ಯಾದೆ ಇಲ್ಲ ಎಂದು ಅವರೇ ಸಾರಿದರುಗಲಿಲೇಯವನ್ನು ತಲುಪಿದೊಡನೆ ಜನರು ಅವರನ್ನು ಆದರದಿಂದ ಬರಮಾಡಿಕೊಂಡರುಏಕೆಂದರೆಹಬ್ಬಕ್ಕಾಗಿ ಆ ಜನರು ಜೆರುಸಲೇಮಿಗೆ ಹೋಗಿದ್ದಾಗ ಹಬ್ಬದ ಸಮಯದಲ್ಲಿ ಯೇಸು ಮಾಡಿದ್ಧನ್ನೆಲ್ಲಾ ನೋಡಿದ್ದರುಯೇಸು ಗಲಿಲೇಯದ ಕಾನಾ ಊರಿಗೆ ಮರಳಿ ಬಂದರುಅವರು ಹಿಂದೆ ನೀರನ್ನು ದ್ರಾಕ್ಷಾರಸವನ್ನಾಗಿ ಮಾಡಿದ್ದು ಅಲ್ಲಿಯೇಕಫೆರ್ನವುಮಿನಲ್ಲಿ ರಾಜಸೇವೆಯಲ್ಲಿದ್ದ ಒಬ್ಬ ಅಧಿಕಾರಿಯ ಮಗನಿಗೆ ಕಾಯಿಲೆಯಾಗಿತ್ತುಯೇಸು ಜುದೇಯದಿಂದ ಗಲಿಲೇಯಕ್ಕೆ ಬಂದಿರುವುದನ್ನು ಕೇಳಿದ ಆ ಅಧಿಕಾರಿಅವರ ಬಳಿಗೆ ಬಂದುಸಾವಿನ ದವಡೆಯಲ್ಲಿರುವ ತನ್ನ ಮಗನನ್ನು ಬಂದು ಬದುಕಿಸಬೇಕೆಂದು ಬೇಡಿಕೊಂಡನುಯೇಸು ಅವನಿಗೆ "ಸೂಚಕಕಾರ್ಯಗಳನ್ನು ಅದ್ಬುತಗಳನ್ನು ಕಂಡ ಹೊರತು ನೀವು ನಂಬುವುದಿಲ್ಲವಲ್ಲಾ," ಎಂದರುಆದರೂ ಆ ಅಧಿಕಾರಿ, "ನನ್ನ ಮಗನು ಪ್ರಾಣಬಿಡುವ ಮೊದಲೇ ಬನ್ನಿ ಸ್ವಾಮೀ," ಎಂದು ಅಂಗಲಾಚಿದನುಆಗ ಯೇಸು, "ಹೋಗು ನಿನ್ನ ಮಗನು ಬದುಕುತ್ತಾನೆ,"  ಎಂದು ಹೇಳಿದರುಆ ಅಧಿಕಾರಿ ಯೇಸುವಿನ ಮಾತನ್ನು ನಂಬಿ ಹೊರಟನು ಅವನು ಅರ್ಧ ದಾರಿಯಲ್ಲಿ ಇದ್ದಾಗಲೇ ಆಳುಗಳು ಅವನಿಗೆ ಎದುರಾಗಿ ಬಂದು, "ನಿಮ್ಮ ಮಗ ಬದುಕಿಕೊಂಡ," ಎಂದು ತಿಳಿಸಿದರುಎಷ್ಟು ಹೊತ್ತಿಗೆ ತನ್ನ ಮಗ ಚೇತರಿಸಿಕೊಂಡನೆಂದು ಆ ಅಧಿಕಾರಿ ವಿಚಾರಿಸಿದಾಗ, "ನಿನ್ನೆ ಮಧ್ಯಾಹ್ನ ಒಂದು ಗಂಟೆಗೆ ಅವನ ಜ್ವರ ಬಿಟ್ಟಿತು." ಎಂದು ಆಳುಗಳು ಉತ್ತರಕೊಟ್ಟರು. "ನಿನ್ನ ಮಗ ಬದುಕುತ್ತಾನೆಎಂದು ಯೇಸು ಹೇಳಿದ್ದ ಗಳಿಗೆಯಲ್ಲಿಯೇ ತನ್ನ ಮಗ ಬದುಕಿಕೊಂಡನೆಂದು ತಂದೆಗೆ ತಿಳಿಯಿತುಅವನೂ ಅವನ ಮನೆಯವರೆಲ್ಲರೂ ಯೇಸುವನ್ನು ವಿಶ್ವಾಸಿಸಿದರುಯೇಸು ಜುದೇಯದಿಂದ ಗಲಿಲೇಯಕ್ಕೆ ಬಂದುಮಾಡಿದ ಎರಡನೆಯ ಸೂಚಕ ಕಾರ್ಯ ಇದು.

ಮನಸಿಗೊಂದಿಷ್ಟು : ಉನ್ನತ ಹುದ್ದೆಯಲ್ಲಿದ್ದ ಅಧಿಕಾರಿ ತನ್ನ ಪ್ರತಿಷ್ಠೆ ಮರೆತು ಯೇಸುವಿನ ಬಳಿ ಬರುತ್ತಾನೆ.  ಯೇಸು ಅವನ ವಿಶ್ವಾಸವನ್ನು ಪರೀಕ್ಷಿಸಿದರೂ ಅದರಲ್ಲಿ ಗೆದ್ದು ತನ್ನ ಮಗನನ್ನು ಗುಣಪಡಿಸಿಕೊಳ್ಳುತ್ತಾನೆ. ಅದರಲ್ಲೂ ಮಗ ಬದುಕುತ್ತಾನೆ ಎಂಬ ಯೇಸುವಿನ ಮಾತಲ್ಲಿ ವಿಶ್ವಾಸವಿಟ್ಟು ಹೊರಡುತ್ತಾನೆ. ನಮ್ಮ ಪ್ರತಿಷ್ಠೆ, ಅಡಚಣೆಗಳನ್ನು ಬದಿಗೊತ್ತಿ ವಿಶ್ವಾಸವಿಟ್ಟಾಗ ಹಾಗೂ ಯೇಸುವಿನ ಮಾತಲ್ಲಿ ಅಚಲ ವಿಶ್ವಾಸವಿಟ್ಟಾಗ ನಮ್ಮಲ್ಲೂ ಅದ್ಭುತಗಳು ಆಗುತ್ತವೆ.

ಪ್ರಶ್ನೆ :  ನಮ್ಮ ಮನಸು  ಯೇಸುವಿನ ಸ್ವಗ್ರಾಮ. ಅಲ್ಲಿ ಅವರಿಗೆ ಸಂಪೂರ್ಣ ಗೌರವವಿದೆಯೇ?

No comments:

Post a Comment

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...