ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

03.09.21 - " ಹಳೆಯ ಅಂಗಿಗೆ ತೇಪೆ ಹಾಕಲು ಹೊಸ ಅಂಗಿಯಿಂದ ತುಂಡನ್ನು ಯಾರೂ ಹರಿಯುವುದಿಲ್ಲ"

ಮೊದಲನೆಯ ವಾಚನ: ಕೊಲೊಸ್ಸೆಯರಿಗೆ  ಬರೆದ  ಪತ್ರದಿಂದ  1:15-20


ಸಹೋದರರೇ,  ಅದೃಶ್ಯದೇವನ  ಸದೃಶ್ಯರೂಪನ  ಕ್ರಿಸ್ತ,  ಸೃಷ್ಟಿಗೆಲ್ಲ  ಜೇಷ್ಠಪುತ್ರನಾತ.   
ಇರಲಿ  ಇಹದಲಿ,  ಇರಲಿ  ಪರದಲಿ
ಅಶರೀರ  ಒಡೆಯರಾಗಲಿ,  ಒಡೆತನವಾಗಲಿ,  ಅಧಿಕಾರಿಗಳಾಗಲಿ,  ಆಧಿಪತ್ಯವಾಗಿರಲಿ  ಆದುದೆಲ್ಲವೂ  ಆತನಲಿ,  ಆತನಿಂದ,  ಆತನಿಗಾಗಿ. ಎಲ್ಲಕ್ಕೂ  ಮೊದಲೇ  ಇರುವನಾತ,  ಸಮಸ್ತಕ್ಕೂ  ಆಧಾರಭೂತ ಸಭೆಯೆಂಬ  ಶರೀರಕ್ಕೆ  ಶಿರಸ್ಸಾತ,  ಆದಿಸಂಭೂತ,  ಆಗಲೆಲ್ಲದರಲೂ  ಅಗ್ರಸ್ಥ  ಸತ್ತವರಿಂದ  ಮೊದಲೆದ್ದು  ಬಂದನಾತ. ಆ  ಸುತನಲ್ಲೇ  ಇರಿಸಲು  ನಿರ್ಧರಿಸಿದನು  ಪಿತದೇವ,  ತನ್ನ  ಸರ್ವಸಂಪೂರ್ಣತೆಯನು,  ಶಿಲುಬೆಯಿಂದಾತ  ಹರಿಸಿದ  ರಕುತದಿಂದ  ಆಗುತಲಿದೆ  ಶಾಂತಿಸಮಾಧಾನ
ನಡೆದಿದೆ  ದೇವರೊಡನೆ  ಸಂಧಾನ,  ಇಹಪರಗಳೆಲ್ಲಕೂ  ಆತನ  ಮುಖೇನ.

ಕೀರ್ತನೆ 100:2-5
ಶ್ಲೋಕ: ಹಾಡುತ,  ಪಾಡುತ,  ಬನ್ನಿ  ಪ್ರಭುವಿನ  ಸನ್ನಿಧಿಗೆ

ಅತಿ  ಸಂತೋಷದಿಂದ  ಸೇವೆಮಾಡಿ  ಆತನಿಗೆ |
ಹಾಡುತ,  ಪಾಡುತ,  ಬನ್ನಿ  ಆತನ  ಸನ್ನಿಧಿಗೆ||
ಪ್ರಭುವೇ  ದೇವರೆಂಬುದನು  ಮರೆತುಬಿಡಬೇಡಿ  ನೀವು|
ನಮ್ಮ  ಸೃಷ್ಟಿಕರ್ತ  ಆತನು,  ಆತನವರು  ನಾವು|
ಆತನ  ಜನ,  ಆತನೇ  ಮೇಯಿಸುವ  ಕುರಿಗಳು||

ಆತನ  ಗೃಹದ್ವಾರವನು  ಪ್ರವೇಶಿಸಿ  ಧನ್ಯವಾದಗಳೊಂದಿಗೆ|
ಆತನ  ಆವರಣದಲಿ  ನಿಲ್ಲಿರಿ  ಸ್ತುತಿಸ್ತೋತ್ರಗಳೊಂದಿಗೆ|
ಆತನ  ನಾಮವನು  ಕೊಂಡಾಡಿ  ಉಪಕಾರಸ್ಮರಣೆಯೊಂದಿಗೆ||

ಹೌದು,  ಪ್ರಭುವೆನಿತೋ  ಒಳ್ಳೆಯವನು|
ಇರುವುದಾತನ  ಪ್ರೀತಿ  ಯುಗಯುಗಕು|
ಆತನ  ಸತ್ಯತೆ  ತಲತಲಾಂತರಕು||

ಶುಭಸಂದೇಶ: ಲೂಕ 5:33-39



ಆ  ಕಾಲದಲ್ಲಿ  ಕೆಲವರು  ಯೇಸುವಿನ  ಬಳಿಗೆ  ಬಂದು,  " ಯೊವಾನ್ನನ  ಶಿಷ್ಯರು  ಪದೇ  ಪದೇ  ಉಪವಾಸವಿದ್ದು  ಪ್ರಾರ್ಥನೆ  ಮಾಡುತ್ತಾರೆ.  ಅದರಂತೆಯೇ,  ಫರಿಸಾಯರ  ಶಿಷ್ಯರೂ  ಮಾಡುತ್ತಾರೆ.  ನಿನ್ನ  ಶಿಷ್ಯರಾದರೋ  ತಿಂದು  ಕುಡಿಯುವುದರಲ್ಲಿಯೇ  ಇದ್ದಾರೆ, " ಎಂದು  ಅವರನ್ನು  ಮೂದಲಿಸಿದರು.  ಅದಕ್ಕೆ  ಯೇಸು,  " ಮದುವಣಿಗನು  ಜೊತೆಯಲ್ಲಿರುವಾಗ  ಮದುವೆಯ  ಅತಿಥಿಗಳನ್ನು  ಉಪವಾಸವಿರಿಸಲಾದೀತೆ ?   ಮದುವಣಿಗನು  ಅವರಿಂದ  ಅಗಲಬೇಕಾಗುವ  ಕಾಲವು  ಬರುವುದು.   ಆ  ದಿನಗಳು  ಬಂದಾಗ  ಅವರು  ಉಪವಾಸಮಾಡುವರು, " ಎಂದು  ಉತ್ತರ  ಕೊಟ್ಟರು.   ಮತ್ತೆ  ಅವರಿಗೆ  ಯೇಸು  ಈ  ಸಾಮತಿಯನ್ನು  ಹೇಳಿದರು:
" ಹಳೆಯ  ಅಂಗಿಗೆ  ತೇಪೆ  ಹಾಕಲು  ಹೊಸ  ಅಂಗಿಯಿಂದ  ತುಂಡನ್ನು  ಯಾರೂ  ಹರಿಯುವುದಿಲ್ಲ.   ಹಾಗೆ  ಮಾಡಿದ್ದೇ  ಆದರೆ  ಹೊಸದು  ಹರುಕಲಾಗಿ,  ಹಳೆಯದೂ  ಹೊಸ  ತೇಪೆಗೆ  ಹೊಂದಿಕೆಯಾಗದೆ  ಹೋಗುತ್ತದೆ.   ಅಂತೆಯೇ,  ಹಳೆಯ  ಬುದ್ದಲಿಗಳಲ್ಲಿ  ಹೊಸ  ಮದ್ಯವನ್ನು  ಯಾರೂ  ತುಂಬಿಡುವುದಿಲ್ಲ.   ತುಂಬಿಟ್ಟರೆ,  ಹೊಸ  ಮದ್ಯವು  ಬುದ್ದಲಿಗಳನ್ನು  ಬಿರಿಯುತ್ತದೆ,  ಮದ್ಯ  ಚೆಲ್ಲಿ  ಹೋಗುತ್ತದೆ,  ಬುದ್ದಲಿಗಳೂ  ಹಾಳಾಗುತ್ತವೆ.   ಆದುದರಿಂದ  ಹೊಸ  ಮದ್ಯವನ್ನು  ಹೊಸ  ಬುದ್ದಲಿಗಳಲ್ಲೇ  ತುಂಬಿಡಬೇಕು.   ಹಳೇ  ಮದ್ಯ  ಕುಡಿದವನಿಗೆ  ಹೊಸದು  ರುಚಿಸುವುದಿಲ್ಲ.   ಅವನು  ಹಳೆಯದೇ  ಶ್ರೇಷ್ಠವೆನ್ನುತ್ತಾನೆ, " ಎಂದರು.

No comments:

Post a Comment