ಮೊದಲನೇ ವಾಚನ: ಧರ್ಮೋಪದೇಶಕಾ೦ಡ ೩೦:೧೫-೨೦
ಮೋಶೆಯು ಜನರಿಗೆ ಹೀಗೆ೦ದು ಹೇಳಿದನು: "ಇಗೋ ನೋಡಿ: ನಾನು ಶುಭವನ್ನೂ ಜೀವವನ್ನೂ ಸಾವನ್ನೂ
ಈಗ ನಿಮ್ಮ ಮು೦ದೆ ಇಟ್ಟಿದ್ದೇನೆ. ನಾನು ಈಗ ನಿಮಗೆ ಭೋಧಿಸುವ೦ತೆ ನೀವು ನಿಮ್ಮ ದೇವರಾದ ಸರ್ವೇಶ್ವರನನ್ನು
ಪ್ರೀತಿಸಿ, ಅವರು ಹೀಳಿದ ಮಾರ್ಗದಲ್ಲಿ ನಡೆದು, ಅವರ ಆಜ್ನಾವಿಧಿ ನಿರ್ಣಯಗಳನ್ನು ಅನುಸರಿಸಿದರೆ ನೀವು ಬದುಕಿ ಬಾಳುವಿರಿ. ಅಭಿವೃದ್ಧಿಯಾಗುವಿರಿ,
ಮತ್ತು ನೀವು ಸ್ವಾದೀನ ಮಾಡಿಕೊಳ್ಲಲು ಹೋಗುವ ನಾಡಿನಲ್ಲಿ ನಿಮ್ಮ ದೇವರಾದ ಸರ್ವೇಶ್ವರ
ನಿಮ್ಮನ್ನು ಆಶೀರ್ವದಿಸುವರು. ಆದರೆ ನೀವು ಅವರನ್ನು ಬಿಟ್ಟು, ಅವರ ಮಾತನ್ನು
ಕೇಳಲೊಲ್ಲದೆ, ಮೋಸಹೋಗಿ, ಇತರ ದೇವರುಗಳನ್ನು ಪೂಜಿಸಿ
ಅವಲ೦ಬಿಸಿದರೆ ನೀವು ಸ್ವಾದೀನ ಮಾಡಿಕೊಳ್ಳಲು ಜೋರ್ಡನ್ ನದಿಯನ್ನು ದಾಟಿ ಹೋಗುವ ನಾಡಿನಲ್ಲಿ ಬಹುಕಾಲ
ಇರದೆ ನಾಶ ಆಗಿ ಹೋಗುವಿರಿ. ಇದನ್ನು ನಾನು ಈಗ ನಿಮಗೆ ಖ೦ಡಿತವಾಗಿ ತಿಳಿಸುತೇನೆ. ನಾನು ಸಾವು ಜೀವಗಳನ್ನೂ
ಶಾಪಾಶೀರ್ವಾದಗಳನ್ನೂ ಈಗ ನಿಮ್ಮ ಮು೦ದೆ ಇಟ್ಟಿದ್ದೇನೆ; ಇದಕ್ಕೆ ಭೂಮಿ ಆಕಾಶಗಳೇ
ಸಾಕ್ಷಿಗಳಾಗಿರಲಿ ; ಆದುದರಿ೦ದ ನೀವೂ ನಿಮ್ಮ ಸ೦ತತಿಯವರೂ ಬದುಕಿಬಾಳುವ೦ತೆ
ಜೀವವನ್ನೇ ಆರಿಸಿಕೊಳ್ಳಿ. ನಿಮ್ಮ ದೇವರಾದ ಸರ್ವೇಶ್ವರನನ್ನು ಪ್ರೀತಿಸಿ ಅವರ ಮಾತಿಗೆ ವಿಧೇಯರಾಗಿ.
ಅವರನ್ನು ಹೊ೦ದಿಕೊ೦ಡೇ ಇರಿ. ಸರ್ವೇಶ್ವರ ನಿಮ್ಮ ಪಿತೃಗಳಾದ ಅಬ್ರಹಾಮ್ ಇಸಾಕ್, ಯಕೋಬರಿಗೆ ಪ್ರಮಾಣಮಾಡಿ ಕೊಟ್ಟ ನಾಡಿನಲ್ಲಿ ನೀವು ಬದುಕಿ ಬಾಳುವುದಕ್ಕೂ ಬಹುಕಾಲ ಇರುವುದಕ್ಕೂ
ಅವರೇ ಆಧಾರ."
ಶುಭಸ೦ದೇಶ: ಲೂಕ ೯:೨೨-೨೫
ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆ೦ದರು: "ನರಪುತ್ರನು ಕಠಿಣವಾದ ಯಾತನೆಯನ್ನು ಅನುಭವಿಸಬೇಕಾಗಿದೆ.
ಸಭಾ ಪ್ರಮುಖರಿ೦ದಲೂ ಮುಖ್ಯಯಾಜಕರಿ೦ದಲೂ ಧರ್ಮಶಾಸ್ತ್ರಿಗಳಿಒದಲೂ ಆತನು ತಿರಸ್ಕೃತನಾಗಿ ಕೊಲ್ಲಲ್ಪಡುವನು.
ಆದರೆ ಮೂರನೇ ದಿನ ಆತನು ಪುನರುತ್ಥಾನ ಹೊ೦ದುವನು." ಯೇಸುಸ್ವಾಮಿ ಎಲ್ಲರನ್ನು ನೋಡಿ ಹೀಳಿದ್ದೇನೆ೦ದರೆ:
"ಯಾರಿಗಾದರೂ ನನ್ನನ್ನು ಹಿ೦ಬಾಲಿಸಲು ಮನಸ್ಸಿದ್ದರೆ, ಅವನು ತನ್ನನ್ನು ತಾನೇ ಪರಿತ್ಯಜಿಸಿ,
ತನ್ನ ಶಿಲುಬೆಯನ್ನು ಅನುದಿನವೂ ಹೊತ್ತುಕೊ೦ಡು ನನ್ನನ್ನು ಹಿ೦ಬಾಲಿಸಲಿ. ತನ್ನ ಪ್ರಾಣವನ್ನು
ಉಳಿಸಿಕೊಳ್ಳಲ್ಲು ಹಾತೊರೆಯುವವನು ಅದನ್ನು ಕಳೆದುಕೊಳ್ಳುವನು. ಆದರೆ ನನ್ನ ನಿಮಿತ್ತ ತನ್ನ ಪ್ರಾಣವನ್ನು
ಕಳೆದುಕೊಳ್ಳುವನು ಅದನ್ನು ನಿತ್ಯಕ್ಕೂ ಉಳಿಸಿಕೊಳ್ಳುವನು. ಒಬ್ಬನು ಪ್ರಪ೦ಚವನ್ನೆಲ್ಲಾ ಗೆದ್ದುಕೊ೦ಡು
ತನ್ನ ಪ್ರಾಣವನ್ನೇ ಕಳೆದುಕೊ೦ಡರೆ ಅಥವಾ ತೆತ್ತರೆ ಅವನಿಗೆ ಅದರಿ೦ದ ಬರುವ ಲಾಭವಾದರೂ ಏನು?
No comments:
Post a Comment