ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

24.01.2010 - ಎಲ್ಲರೂ ಅವರನ್ನು ಹೊಗಳುವವರೇ

ಸಂತ ಲೂಕನು ಬರೆದ ಶುಭಸಂದೇಶದಿಂದ ವಾಚನ -  1: 1-4, 4 : 4-21

“ನೀವು ಈ ಪವಿತ್ರ ವಾಕ್ಯವನ್ನು ಕೇಳುತ್ತಿದ್ದ ಹಾಗೆಯೇ ಅದು ಇಂದು ನೆರವೇರಿತು”

ಸನ್ಮಾನ್ಯ ಥೆಯೊಫಿಲನೇ, ನಮ್ಮ ಮಧ್ಯೆ ನೆರೆವೇರಿರುವ ಘಟನೆಗಳ ವರದಿಯನ್ನು ಬರೆದಿಡಲು ಹಲವರು ಪ್ರಯತ್ನಿಸಿದ್ದಾರೆ. ಪ್ರಾರಂಭದಿಂದ ಕಣ್ಣಾರೆ ಕಂಡು ಶುಭಸಂದೇಶವನ್ನು ಸಾರಿದವರಿಂದಲೇ ನಾವು ಕೇಳಿದ ಘಟನೆಗಳವು.ನಾನು ಆಮೂಲಾಗ್ರವಾಗಿ ವಿಚಾರಿಸಿದ ಅವೆಲ್ಲವನ್ನು ನಿನಗೋಸ್ಕರ ಕ್ರಮಬದ್ಧವಾಗಿ ಬರೆಯುವುದು ಉಚಿತವೆಂದು ನನಗೂ ತೋರಿತ್ತು. ನಿನಗೆ ಉಪದೇಶಿಸಲಾಗಿರುವ ವಿಷಯಗಳು ಸತ್ಯವಾದುವೆಂದು ಇದರಿಂದ ನಿನಗೆ ಉಪದೇಶಿಸಲಾಗಿರುವ ವಿಷಯಗಳು ಸತ್ಯವಾದುವೆಂದು ಇದರಿಂದ ನಿನಗೆ ಮನದಟ್ಟಾಗುವುದು. ಯೇಸುಸ್ವಾಮಿ ಪವಿತ್ರಾತ್ಮ ಶಕ್ತಿಯಿಂದ ಕೂಡಿ ಗಲಿಲೇಯಕ್ಕೆ ಮರಳಿಬಂದರು. ಅವರ ವಿಷಯ ಸುತ್ತಮುತ್ತೆಲ್ಲಾ ಹರಡಿತು. ಅಲ್ಲಿನ ಪ್ರಾರ್ಥನಾ ಮಂದಿರಗಳಲ್ಲಿ ಅವರು ಬೋಧಿಸುತ್ತಾ ಬಂದರು. ಎಲ್ಲರೂ ಅವರನ್ನು ಹೊಗಳುವವರೇ!


ಯೇಸುಸ್ವಾಮಿ ತಾವು ಬೆಳೆದ ಊರಾದ ನಜರೇತಿಗೆ ಬಂದರು. ವಾಡಿಕೆಯ ಪ್ರಕಾರ ಸಬ್ಬತ್‌ದಿನ ಪ್ರಾರ್ಥನಾಮಂದಿರಕ್ಕೆ ಹೋದರು. ಅಲ್ಲಿ ಪವಿತ್ರ ಗ್ರಂಥವನ್ನು ಓದುವುದಕ್ಕೆ ಅವರು ಎದ್ದು ನಿಂತಾಗ, ಪ್ರವಾದಿ ಯೆಶಾಯನ ಗ್ರಂಥದ ಸುರುಳಿಯನ್ನು ಅವರ ಕೈಗೆ ಕೊಟ್ಟರು. ಅದನ್ನು ಬಿಚ್ಚಿದಾಗ ಈ ಕೆಳಗಿನ ವಚನಗಳು ಯೇಸುವಿನ ಕಣ್ಣಿಗೆ ಬಿದ್ದವು: “ ದೇವರಾತ್ಮ ನನ್ನ ಮೇಲಿದೆ ದೀನದಲಿತರಿಗೆ ಶುಭಸಂದೇಶವನ್ನು ಬೋಧಿಸಲೆಂದು ಅವರೆನ್ನನು ಅಭಿಷೇಕಿಸಿದ್ದಾರೆ; ಬಂಧಿತರಿಗೆ ಬಿಡುಗಡೆಯನ್ನು, ಅಂಧರಿಗೆ ದೃಷ್ಟಿದಾನವನ್ನು ಪ್ರಕಟಿಸಲೂ ಶೋಷಿತರಿಗೆ ಸ್ವಾತಂತ್ರ್ಯ ನೀಡಲೂ ದೇವರು ತಮ್ಮ ಜನತೆಯನ್ನು ಉದ್ದರಿಸುವ ಕಾಲ ಬಂತೆಂದು ಸಾರಲೂ ಅವರು ನನ್ನನ್ನು ಕಳುಹಿಸಿದ್ದಾರೆ.”ಈ ವಾಕ್ಯವನ್ನು ಓದಿ, ಸುರುಳಿಯನ್ನು ಸುತ್ತಿ, ಪ್ರಾರ್ಥನಾಮಂದಿರದ ಸೇವಕನ ಕೈಗಿತ್ತು, ಯೇಸು ಕುಳಿತುಕೊಂಡರು. ಅಲ್ಲಿದ್ದ ಎಲ್ಲರ ಕಣ್ಣುಗಳು ಅವರ ಮೇಲೆಯೇ ನಾಟಿದ್ದವು. ಆಗ ಯೇಸು, “ನೀವು ಈ ಪವಿತ್ರ ವಾಕ್ಯವನ್ನು ಕೇಳುತ್ತಿದ್ದ ಹಾಗೆಯೇ ಅದು ಇಂದು ನೆರವೇರಿತು,” ಎಂದು ವಿವರಿಸಲಾರಂಭಿಸಿದರು.

ಚಿಂತನೆ:
“ದೇವರಾತ್ಮವು ನನ್ನಮೇಲಿದೆ, ದೀನದಲಿತರಿಗೆ ಶುಭಸಂದೇಶವನ್ನು ಭೋಧಿಸಲೆಂದು ಅವರೆನ್ನನು ಅಭಿಷೇಕಿಸಿದ್ದಾರೆ; ಬಂಧಿತರಿಗೆ ಬಿಡುಗಡೆಯನ್ನು, ಅಂದರಿಗೆ ದೃಷ್ಟಿದಾನವನ್ನು ಪ್ರಕಟಿಸಲೂ ದಬ್ಬಾಳಿಕೆಗೀಡಾದವರಿಗೆ ಸ್ವಾತಂತ್ರ್ಯ ನೀಡಲೂ ದೇವರು ತಮ್ಮ ಜನತೆಯನ್ನು ಉದ್ಧರಿಸವ ಕಾಲ ಬಂತೆಂದು ಸಾರಲೂ ಅವರು ನನ್ನನ್ನು ಕಳುಹಿಸಿದ್ದಾರೆ.” (ಲೂಕ 4:18-19). ಲೂಕನ ಶುಭಸಂದೇಶದಲ್ಲಿ ಬರುವ ಈ ವಾಚನದಲ್ಲಿ ಯೇಸುವು ಧರೆಗಿಳಿದು ಬಂದ ಉದ್ದೇಶವನ್ನು ನಮಗೆ ತಿಳಿಯ ಪಡಿಸುತ್ತದೆ. ಅವರ ಸೇವಾ ಜೀವನದ ಆರಂಭದಿಂದಲೇ ಪವಿತ್ರಾತ್ಮರಿಗೆ ಮತ್ತು ಪವಿತ್ರಗ್ರಂಥಕ್ಕೆ ಒತ್ತು ನೀಡಿರುವುದನ್ನು ಗಮನಿಸಬೇಕು. ಯೇಸುವಿನ ಈ ಎಲ್ಲಾ ಯೋಜನೆಗಳು ಮತ್ತು ಅವರ ಜೀವನದಲ್ಲಿ ನೆರವೇರಿಸಿದ ಎಲ್ಲಾ ಕಾರ್ಯಗಳು ಪವಿತ್ರಾತ್ಮರಿಂದ ಪ್ರೇರಿತವಾದವುಗಳು, ಅವರ ಭೋದನೆ, ರೋಗಿಗಳಿಗೆ ನೀಡಿದ ಉಪಶಮನ, ದೆವ್ವಗಳ ಉಚ್ಚಾಟನೆ ಇವೆಲ್ಲವೂ ಪವಿತ್ರಾತ್ಮರ ಶಕ್ತಿಯಿಂದಲೇ ಸಾಧ್ಯವಾಯಿತು. ಯೇಸು ಪ್ರಕಟಿಸಿದ ಬಿಡುಗಡೆ ಕೇವಲ ದೇವರಿಂದ ಆಯ್ಕೆಯಾದ ಒಂದು ಜನಾಂಗಕ್ಕೆ ಮಾತ್ರವಲ್ಲ ಬದಲಾಗಿ ಅದು ಇಡೀ ಮಾನವ ಜನಾಂಗಕ್ಕೆ(ಯೇಸು ವಿಶೇಷವಾಗಿ ಬಡವರ,ದೀನ ದಲಿತರ, ಶೋಷಿತವರ್ಗದವರನ್ನು ಸಂತೈಸಿದರು) ಪ್ರಕಟಿಸಿರುವ ಬಿಡುಗಡೆ ಎಂದು ಲೂಕನ ಶುಭಸಂದೇಶ ಸಾರುತ್ತದೆ.


ಇಂದಿನ ನಮ್ಮ ಸಮಾಜದಲ್ಲಿ ರಾಜಕೀಯ ಪುಡಾರಿಗಳು ಚುನಾವಣೆಯ ಸಂದರ್ಭದಗಳಲ್ಲಿ ತಮ್ಮ ಪ್ರಣಾಳಿಕೆಯನ್ನು ಜನತೆಯ ಮುಂದೆ ಪ್ರಕಟಿಸುವಾಗ,ಮತಗಳಿಕೆಯ ಉದ್ದೇಶವನ್ನು ಇರಿಸಿಕೊಂಡು ಜನರ ಮನಸ್ಸಿಗೆ ತಟ್ಟುವಂತಹ ಭಾಷೆಯಲ್ಲಿ ದೊಡ್ಡ ದೊಡ್ಡ ಅಶ್ವಾಸನೆಗಳನ್ನು ನೀಡುತ್ತಾರೆ.ಆದರೆ ಸರ್ವಜನರ ಸರ್ವತೋಮುಖ ವಿಮೋಚನೆಯ ಬಗ್ಗೆ ಕಾಳಜಿತೋರುವ ಯೋಜನೆಗಳು ಅಪರೂಪವಾಗಿಬಿಟ್ಟಿವೆ. ಚುನಾವಣೆಯ ನಂತರದಲ್ಲಿ ಬಡವನು ಬಡವನಾಗಿಯೇ ಉಳಿಯುತ್ತಾನೆ.ಶೋಷಣೆಗೆ ಒಳಗಾದವನು ಶೋಷಿತನಾಗಿಯೇ ಜೀವನ ಮುಂದುವರೆಸುತ್ತಾನೆ.ಯೇಸುವಿನ ಯೋಜನೆಯಲ್ಲಿ ಸರ್ವರ ಉದ್ದಾರದ ಭರವಸೆಗಳಿವೆ.ಜೀವವಿಲ್ಲದ ಬದುಕಿಗೆ ಜೀವ ತುಂಬುವ, ಜೀವವನ್ನು ನಾಶಮಾಡುವಂತಹ ಶಕ್ತಿಗಳನ್ನು ಧಮನಮಾಡುವಂತಹ ಉದ್ದೇಶಗಳು ಯೇಸುವಿನ ಕಾಯಕ ಯೋಜನೆಯಲ್ಲಿದೆ.


No comments:

Post a Comment