ಸಂತ ಮತ್ತಾಯನು ಬರೆದ ಶುಭ ಸಂದೇಶದಿಂದ ವಾಚನ - 11: 16-19
ಜ್ಞಾನವು ತನ್ನ ಕ್ರಿಯೆಗಳಿಂದಲೇ ತನ್ನ ಯೋಗ್ಯತೆಯನ್ನು ತೋರ್ಪಡಿಸುತ್ತದೆ
ಈ ಕಾಲದ ಜನರ ಕುರಿತು ನಾನು ಏನು ಹೇಳಲಿ? ಅವರು ಯಾವ ರೀತಿ ಇದ್ದಾರೆ? ಈ ಕಾಲದ ಜನರು ಮಾರುಕಟ್ಟೆಯಲ್ಲಿ ಕುಳಿತುಕೊಂಡಿರುವ ಮಕ್ಕಳಂತಿದ್ದಾರೆ. ಒಂದು ಗುಂಪಿನ ಮಕ್ಕಳು ಇನ್ನೂಂದು ಗುಂಪಿನ ಮಕ್ಕಳಿಗೆ ಹೀಗೆನ್ನುತ್ತಾರೆ: "ನಾವು ನಿಮ್ಮಗೋಸ್ಕರ ವಾದ್ಯ ಬಾರಿಸಿದೆವು, ನೀವು ಕುಣಿಯಲಿಲ್ಲ, ನಾವು ಶೋಕ ಗೀತೆ ಹಾಡಿದೆವು ನೀವು ದು:ಖಿಸಲಿಲ್ಲ".
ಇಂದಿನ ಜನರು ಈ ಮಕ್ಕಳಂತಿದ್ದಾರೆ ಎಂದು ನಾನು ಹೇಳಿದ್ದೇಕೆ? ಏಕೆಂದರೆ ಯೋಹಾನನು ಬಂದನು.ಆದರೆ ಅವನು ಬೇರೆ ಜನರಂತೆ ಊಟ ಮಾಡಲಿಲ್ಲ; ದ್ರಾಕ್ಷಾರಸವನ್ನು ಕುಡಿಯಲಿಲ್ಲ. ಆದರೆ ಜನರು ’ಅವನಿಗೆ ದೆವ್ವ ಹಿಡಿದಿದೆ’ ಎಂದು ಹೇಳುತ್ತಾರೆ. ಮನುಷ್ಯ ಕುಮಾರನು ಬಂದನು, ಆತ ಬೇರೆ ಜನರಂತೆ ಊಟ ಮಾಡುತ್ತಾನೆ: ದ್ರಾಕ್ಷಾರಸವನ್ನು ಕುಡಿಯುತ್ತಾನೆ. ಆದರೆ ಜನರು ’ನೋಡಿರಿ! ಅವನು ಹೊಟ್ಟೆಬಾಕ, ಅವನು ಕುಡುಕ.ಸುಂಕ ವಸೂಲಿ ಮಾಡುವವರು ಮತ್ತು ಇತರ ಕೆಟ್ಟ ಜನರೇ ಅವನ ಸ್ನೇಹಿತರು’ ಎಂದು ಹೇಳುತ್ತಾರೆ.
ಆದರೆ ಜ್ಞಾನವು ತನ್ನ ಕ್ರಿಯೆಗಳಿಂದಲೇ ತನ್ನ ಯೋಗ್ಯತೆಯನ್ನು ತೋರ್ಪಡಿಸುತ್ತದೆ."
No comments:
Post a Comment