ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

15.12.09 - ಕೆಟ್ಟ ಜನರೆಂದು ನೀವು ಯೋಚಿಸುತ್ತಿರುವವರು ನಿಮಗಿಂತ ಮುಂಚೆಯೇ ದೇವರ ರಾಜ್ಯವನ್ನು ಪ್ರವೇಶಿಸುತ್ತಾರೆ.

ಸಂತ ಮತ್ತಾಯನು ಬರೆದ ಶುಭ ಸಂದೇಶದಿಂದ ವಾಚನ - 21 : 28-32

ಆದರೆ ಅವರು ನಿಮಗಿಂತ ಮುಂಚೆಯೇ ದೇವರ ರಾಜ್ಯವನ್ನು ಪ್ರವೇಶಿಸುತ್ತಾರೆ


ಒಬ್ಬ ಮನುಷ್ಯನಿಗೆ ಇಬ್ಬರು ಗಂಡು ಮಕ್ಕಳಿದರು.ಆ ಮನುಷ್ಯನು ಮೊದಲ ಮಗನ ಬಳಿಗೆ ಹೋಗಿ," ಮಗನೇ ಈ ದಿನ ನೀನು ಕೆಲಸಕ್ಕೆ ಹೋಗಿ, ನನ್ನ ದ್ರಾಕ್ಷಿ ತೋಟದಲ್ಲಿ ಕೆಲಸ ಮಾಡು" ಎಂದು ಹೇಳಿದನು. ಅದಕ್ಕೆ ಮಗನು "ನಾನು ಹೋಗುವುದಿಲ್ಲ" ಎಂದನು.ಆದರೆ ಆ ಬಳಿಕ ತನ್ನ ಮನಸ್ಸನು ಬದಲಾಯಿಸಿಕೊಂಡು ಕೆಲಸಕ್ಕೆ ಹೋದನು.

ತಂದೆಯು ಇನ್ನೊಬ್ಬ ಮಗನ ಬಳಿಗೆ ಹೋಗಿ," ಮಗನೇ ಈ ದಿನ ನೀನು ದ್ರಾಕ್ಷಿ ತೋಟಕ್ಕೆ ಹೋಗಿ ಕೆಲಸ ಮಾಡು’ ಎಂದನು. ಆಗಲಿಯಪ್ಪ ನಾನು ಹೋಗಿ ಕೆಲಸ ಮಾಡುತ್ತೇನೆ ಎಂದನು.ಆದರೆ ಆ ಮಗನು ಹೋಗಲೇ ಇಲ್ಲ."ಈ ಇಬ್ಬರು ಮಕ್ಕಳಲ್ಲಿ ತಂದೆಗೆ ಯಾರು ವಿಧೇಯರಾದರು?" ಆಗ ಯೊಹೂದ್ಯ ನಾಯಕರು "ಮೊದಲನೆಯ ಮಗ" ಎಂದು ಉತ್ತರಕೊಟ್ಟರು

ಯೇಸು ಅವರಿಗೆ ’ ನಿಮಗೆ ಸತ್ಯವಾಗಿ ಹೇಳುತ್ತೇನೆ. ಸುಂಕ ವಸೂಲಿಗಾರರನ್ನು ಮತ್ತು ವೇಶ್ಯೆಯರನ್ನು ಕೆಟ್ಟ ಜನರೆಂದು ನೀವು ಯೋಚಿಸುತ್ತೀರಿ.ಆದರೆ ಅವರು ನಿಮಗಿಂತ ಮುಂಚೆಯೇ ದೇವರ ರಾಜ್ಯವನ್ನು ಪ್ರವೇಶಿಸುತ್ತಾರೆ. ನೀವು ಜೀವಿಸತಕ್ಕ ಸರಿಯಾದ ಮಾರ್ಗವನ್ನು ತೋರಿಸಲು ಯೋಹಾನನ್ಉ ಬಂದನು.ನೀವು ಯೋಹಾನನ್ನು ನಂಬಲಿಲ್ಲ.ಆದರೆ ಸುಂಕ ವಸೂಲಿಗಾರರು ಮತ್ತು ವೇಶ್ಯೆಯರು ನಂಬಿದ್ದನ್ನು ನೀವು ನೋಡಿದ್ದೀರಿ.ಆದರೆ ನೀವಿನ್ನೂ ಬದಲಾವಣೆ ಹೊಂದಲು ಮತ್ತು ಅವನನ್ನು ನಂಬಲು ಇಷ್ಟಪಡುತ್ತಿಲ್ಲ.

No comments:

Post a Comment