ಸಂತ ಲೂಕನು ಬರೆದ ಶುಭ ಸಂದೇಶದಿಂದ ವಾಚನ 1: 26-38
"ದೇವರಾಶೀರ್ವಾದ ಹೊಂದಿದವಳೇ, ನಿನಗೆ ಶುಭವಾಗಲಿ"
"ದೇವರಾಶೀರ್ವಾದ ಹೊಂದಿದವಳೇ, ನಿನಗೆ ಶುಭವಾಗಲಿ"
ಎಲಿಜಬೇತಳು ಆರು ತಿಂಗಳ ಗರ್ಭಿಣಿಯಾಗಿದ್ದಾಗ, ದೇವರು ತನ್ನ ದೂತನಾದ ಗಬ್ರಿಯೇಲನು ಗಲಿಲೇಯ ಪ್ರಾಂತ್ಯದ ನಜರೇತ್ ಎಂಬ ಊರಿನಲ್ಲಿ ವಾಸಿಸುತ್ತಿದ್ದ ಒಬ್ಬ ಕನ್ಯೆಯ ಬಳಿಗೆ ಕಳುಹಿಸಿದನು.ಆಕೆಗೆ ದಾವಿದನ ಮನೆತನದ ಯೋಸೆಫನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆಕೆಯ ಹೆಸರು ಮರಿಯಳು. ದೇವದೂತನು ಆಕೆಯ ಬಳಿಗೆ ಬಂದು "ದೇವರಾಶೀರ್ವಾದ ಹೊಂದಿದವಳೇ, ನಿನಗೆ ಶುಭವಾಗಲಿ! ಪ್ರಭು ನಿನ್ನೊಡನೆ ಇದ್ದಾನೆ" ಎಂದು ಹೇಳಿದನು.
ದೇವದೂತನ ಮಾತನ್ನು ಕೇಳಿ ಬಹು ಗಲಿಬಿಲಿಗೊಂಡ ಮರಿಯಳು "ಇದರ ಅರ್ಥವೇನಿರಬಹುದು" ಎಂದು ಆಶ್ಚರ್ಯಪಟ್ಟಳು. ದೇವದೂತನು ಆಕೆಗೆ " "ಮರಿಯಳೇ, ಭಯಪಡಬೇಡ ದೇವರು ನಿನ್ನನ್ನು ಬಹಳವಾಗಿ ಆಶೀರ್ವದಿಸಿದ್ದಾನೆ. ಕೇಳು! ನೀನು ಗರ್ಭಿಣಿಯಾಗಿ ಒಂದು ಗಂಡು ಮಗುವನ್ನು ಹೆರುವೆ.ಆತನಿಗೆ,"ಯೇಸು" ಎಂದು ಹೆಸರಿಡಬೇಕು ಆತನು ಮಹಾ ಪುರುಷನಾಗುವನು.ಜನರು ಆತನನ್ನು ಮಹೋನ್ನತನ ಮಗನೆಂದು ಕರೆಯುವರು. ಪ್ರಭುವಾದ ದೇವರು ಆತನಿಗೆ ಆತನ ಪೂರ್ವಿಕನಾದ ದಾವೀದನ ಅಧಿಕಾರವನ್ನು ಕೊಡುವನು. ಯೇಸುವು ಯಾಕೋಬನ ಜನರನ್ನು ಸದಾ ಕಾಲ ಆಳುವನು.ಆತನ ರಾಜ್ಯ ಎಂದಿಗೂ ಅಂತ್ಯವಾಗುವುದಿಲ್ಲ." ಎಂದು ಹೇಳಿದನು.
ಮರಿಯಳು ದೇವದೂತನಿಗೆ "ಇದು ಹೇಗೆ ಸಂಭವಿಸುವುದು? ನಾನು ಮದುವೆಯಾಗಿಲ್ಲವಲ್ಲ!" ಎಂದು ಹೇಳಿದನು. ದೇವದೂತನು ಮರಿಯಳಿಗೆ "ಪವಿತ್ರಾತ್ಮನು ನಿನ್ನ ಮೇಲೆ ಬರುವನು; ಮಹೋನ್ನತನ ಶಕ್ತಿಯು ನಿನ್ನನ್ನು ಆವರಿಸುವುದು.ಈ ಕಾರಣದಿಂದ ನಿನ್ನಲ್ಲಿ ಹುಟ್ಟುವ ಈ ಪವಿತ್ರ ಮಗುವು ’ದೇವರ ಮಗ’ನೆನಿಸಿಕೊಳ್ಳುವನು. ಇದ್ದಲ್ಲದೆ, ನಿನ್ನ ಬಂಧುವಾದ ಎಲಿಜಬೇತಳು ಗರ್ಭಿಣಿಯಾಗಿದ್ದಾಳೆ.ಆಕೆಯು ಮುಪ್ಪಿನವಳಾಗಿದ್ದರೂ ಆಕೆಗೊಬ್ಬ ಮಗ ಹುಟ್ಟುವನು.ಜನರಿಂದ ಬಂಜೆ ಎನಿಸಿಕೊಂಡಿದ್ದ ಆಕೆ ಈಗ ಆರು ತಿಂಗಳ ಗರ್ಭಿಣಿಯಾಗಿದ್ದಾಳೆ.ದೇವರಿಗೆ ಯಾವುದೂ ಆಸಾಧ್ಯವಲ್ಲ." ಎಂದು ಹೇಳಿದನು.
ಮರಿಯಳು" ನಾನು ಪ್ರಭುವಿನ ದಾಸಿ. ನೀನು ಹೇಳಿದಂತೆಯೇ ನನಗಾಗಲಿ!" ಆಂದಳು. ಬಳಿಕ ದೇವ ದೂತನು ಹೊರಟು ಹೋದನು.
No comments:
Post a Comment